29.3 C
Karnataka
Sunday, September 22, 2024

    ಹರಿದ್ರಾವತಿಗೆ ಹಸಿರಿನ ಮೆರಗು;ಕೆರೆ ಉಳಿಸುವತ್ತ ಮತ್ತೊಂದು ಹೆಜ್ಜೆ

    Must read

    ಸೂಳೆಕೆರೆಗೆ ಪ್ರಮುಖ ಜಲಮೂಲ ಹರಿದ್ರಾವತಿಹಳ್ಳ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ಇದರ ಉಗಮ. ಸುಮಾರು 40 ರಿಂದ 50 ಕಿ.ಮೀ. ಹಳ್ಳದ ಪಾತ್ರದಲ್ಲಿ ಅನೇಕ ಕಿರು ಹಳ್ಳಗಳಿಂದ ನೀರನ್ನು ಸಂಗ್ರಹಿಸಿ ಬೃಹತ್ ಹಳ್ಳ ಸೂಳೆಕೆರೆ ತುಂಬಿಸುತ್ತದೆ. ಈಚೆಗೆ ರೂ.2ಕೋಟಿ ವೆಚ್ಚದಲ್ಲಿ ಭೂ ಸೇನಾ ನಿಗಮದ ಉಸ್ತುವಾರಿಯಲ್ಲಿ ಹೂಳು, ಹಳ್ಳದ ದಿಣ್ಣೆ ಅಭಿವೃದ್ಧಿ ಪಡಿಸಲಾಗಿದೆ.

    ಇದರಿಂದ ರೈತರ ತೋಟಗಳಿಗೆ ಅಂತರ್ಜಲ ಹೆಚ್ಚಲಿದೆ. ಹಳ್ಳದ ದಡದ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಲು ಖಡ್ಗ ಸಂಘ ಈಚೆಗೆ ಸಮಾರೋಪಾದಿಯಲ್ಲಿ ‘ವನ ಮಹೋತ್ಸವ; ಕೈಗೊಂಡಿತು. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಮಾರು 400 ವಿವಿಧ ಕಾಡು ಸಸಿಗಳನ್ನು ಬದುವಿನಲ್ಲಿ ನೆಡಲಾಯಿತು. ದಡ ಕುಸಿಯದಂತೆ ತಡೆಯಲು ಮರದ ಬೇರುಗಳ ಸಹಕಾರಿ. ಒತ್ತುವರಿ ತಡೆಯಲು ಸೂಕ್ತ ಪರಿಹಾರ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ತಿಳಿಸಿದರು.

    ಸುಮಾರು 50 ಸ್ವಯಂ ಸೇವಕರು ರಾಜ್ಯದ ವಿವಿಧ ಕಡೆಯಿಂದ ಬಂದು ಗಿಡ ನೆಡುವ ಕಾರ್ಯದಲ್ಲಿ ತೊಡಗಿಕೊಂಡರು. ಸ್ಥಳಕ್ಕೆ ಆಗಮಿಸಿದ ಪಾಂಡೊಮಟ್ಟಿ ವಿರಕ್ತ ಮಠದ ಸ್ವಾಮೀಜಿ ಗಿಡ ನೆಡುವುದಷ್ಟೇ ಅಲ್ಲ… ಅವುಗಳ ಸಂರಕ್ಷಣೆಯ ಜವಾಬ್ದಾರಿ ಸಾರ್ವಜನಿಕರಲ್ಲಿ ಬರಬೇಕು ಎಂದರು.

    ಉಪ ವಿಭಾಗಧಿಕಾರಿ ಮಮತಾ ಹಿರೇಗೌಡರ್ ಕೆರೆ, ಹಳ್ಳಗಳ ಒತ್ತುವರಿ ತೆರವಿಗೆ ಎಲ್ಲರ ಸಹಕಾರ ಅಗತ್ಯ. ಪ್ರಕೃತಿ ಅಸಮೋತಲನದಿಂದ ಹಲವು ಪ್ರಾಕೃತಿಕ ದುರ್ಘಟನೆಗಳು ಸಂಭವಿಸುತ್ತಿವೆ. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಜಲಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಇದನ್ನೂ ಓದಿ:ಏಷ್ಯಾಖಂಡದ ಎರಡನೇ ಬೃಹತ್ ಕೆರೆ ಸಂರಕ್ಷಣೆಗೆ ಟೆಕ್ಕಿಗಳ ಹೋರಾಟhttps://kannadapress.com/2020/05/22/techies-fight-to-protect-asias-second-largest-lake-sulekere/

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    1 COMMENT

    1. ಹರಿದ್ರೆಯ ಹಸಿರ ಉಸಿರು ಉಳಿಸಲು ಮಾಡುತ್ತಿರುವ ಕಾರ್ಯ ಶ್ಲಾಘನೀಯ….

    LEAVE A REPLY

    Please enter your comment!
    Please enter your name here

    Latest article

    error: Content is protected !!