26.8 C
Karnataka
Sunday, September 22, 2024

    ಮನಸ್ಥಿತಿಗಳ ಬಿರುಕಿನ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು

    Must read

    ಮಮತಾ ಕುಲಕರ್ಣಿ

    ಭೂಮಿ ಅನ್ನೊ ಪುಟ್ಟ ಸಂಸಾರದಲ್ಲಿ ಎಲ್ಲಾ ಜೀವಿಗಳು ಒಂದಲ್ಲಾ ಒಂದು ಸಂಬಂಧದ ಸರಪಳಿಯಲ್ಲಿ ಸೇರಿಹೊಗಿರುತ್ತವೆ. ಅದರಲ್ಲಿ ಮನಸ್ಥಿತಿಗಳ ಆಧಾರದ ಮೇಲೆ ಒಳ್ಳೆ ಸಂಬಂಧ, ಕೆಟ್ಟ ಸಂಬಂಧ, ಕಾಟಾಚಾರದ ಸಂಬಂಧ ಹೀಗೆ ನಾನಾ ವಿಂಗಡನೆ ಆಗುತ್ತಾ ಹೋಗುತ್ತವೆ.

    ಎಂಜಿನಿಯರಿಂಗ್ ಎಂಬ ವಿಭಾಗದಲ್ಲಿ ಹೇಗೆ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ ಹೀಗೆ ನಾನಾ ರೀತಿಯ ವಿಭಾಗಗಳಿವೆಯೊ, ಹಾಗೆ ಮನುಷ್ಯ ತನ್ನದೆ ಆದ ಪುಟ್ಟ ಪ್ರಪಂಚದಲ್ಲಿ ತಂದೆ,ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ,ಗಂಡ, ಹೆಂಡತಿ,ಮಕ್ಕಳು, ಅಜ್ಜ,ಅಜ್ಜಿ ಹೀಗೆ ನಾನಾ ರೀತಿಯ ರೆಂಬೆ ಕೊಂಬೆಗಳನ್ನ ತನ್ನ ಜೀವನದ ವೃಕ್ಷಕ್ಕೆ ಅಂಟಿಸಿರುತ್ತಾನೆ. ಅವುಗಳ ಜೊತೆ ಸಮಯಕ್ಕೆ ತಕ್ಕಂತೆ ಬೆರೆತು ಹೋಗುತ್ತಾನೆ. ಸುಖ ದುಃಖಗಳಲ್ಲಿ  ಆ ರೆಂಬೆ ಕೊಂಬೆಗಳ ಸಾಂತ್ವನ ಹಾಗೂ ಸೌಹಾರ್ಧದ ಬಲದಿಂದ ತನ್ನ ಜೀವನದ ಕಟ್ಟಡವನ್ನು ಕಟ್ಟುತ್ತಾ ಹೋಗುತ್ತಾನೆ. ಹೀಗಿರುವಾಗ  ಸಂಬಂಧಗಳ ಬಾಂಧವ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸುವ ಶಕ್ತಿ ಹಾಗೂ ಯುಕ್ತಿಗಳನ್ನು ಕಳೆದುಕೊಳ್ಳುತ್ತಾನೆ. ಮನಸ್ಥಿತಿಗಳ ಬಿರುಕಿನ ಅಥವಾ ಬದಲಾವಣೆಯ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು. ಇದು ಕೇವಲ ದೊಡ್ಡವರಿಗೆ ಅಥವಾ ಸಣ್ಣವರಿಗೆ ಇಲ್ಲಿ ಅನ್ವಯವಾಗುವ ಹಾಗೆ ಇಲ್ಲ.

    ಭೂಮಿಯ ಮೇಲೆ ಜನಿಸಿದ ಕ್ಷಣದಿಂದ ಪ್ರತಿನಿತ್ಯ ಬದಲಾವಣೆಗಳ ರೂಪವನ್ನು ಹೊಂದುವ ಮಗುವಿನಿಂದ ಹಿರಿಯ ಜೀವಿಗಳವರೆಗೂ ಅನ್ವಯವಾಗುತ್ತದೆ. ಒಂದು ಪುಟ್ಟ ಮಗು ಕೂಡ ತನ್ನ ಇಚ್ಛೆಯಂತೆ ತಿನ್ನಲು ಕುಡಿಯಲು ಬಯಸುತ್ತದೆ. ಬೆಳೆಯುವ ಮಕ್ಕಳು ತಮಗೆ ಇಷ್ಟವಾದ ವಿಷಯವನ್ನು ಮನಸ್ಸಿನಿಂದ ವಿಷಯವನ್ನು ಮನಸ್ಸಿನಿಂದ ಮಾಡುತ್ತಾರೆ. ಆಟವೇ ಆಗಿರಲಿ ಬೇರೆ ಬೇರೆ ವಿಷಯಗಳೇ ಆಗಿರಲಿ.

    ಮದುವೆಯಾದ ಮೇಲೆ ಎಲ್ಲ ಸಂಬಂಧಗಳನ್ನ ತೊರೆದು ಕೇವಲ ತನ್ನ ಹೆಂಡತಿ ತನ್ನ ಗಂಡ ಅಂತ ಬದುಕಿದರೆ ಸಾಕೇ? ಸಂಸಾರದ ಜವಾಬ್ದಾರಿಯತ್ತ ತಮ್ಮ ಕನಸುಗಳನ್ನು, ಕ್ಷಮತೆಯನ್ನು ಗಂಟು ಕಟ್ಟಬೇಕೇ? ವಯಸ್ಸಾದ ಮೇಲೆ ಅವರ ವಿಚಾರಗಳಿಗೆ, ಆಸೆಗಳಿಗೆ ರೆಕ್ಕೆಪುಕ್ಕ ಬೇಡವೇ?

    ಹೀಗೆಲ್ಲ ಯೋಚನೆ ಮಾಡುತ್ತಾ ಹೋದಂತೆ ಭಾಸವಾಗುವುದು ಒಂದು ವಿಚಾರ. ಅದು ಸಂಬಂಧಗಳಲ್ಲಿ ಸ್ವಾತಂತ್ರ್ಯದ ತುಣುಕು. ಅಂದರೆ ಉದಾಹರಣೆಗೆ, ಮಕ್ಕಳೊಂದಿಗೆ ಹೊರಗಡೆ ಹೋದಾಗ ಅವರಿಗೆ ಸ್ವತಂತ್ರವಾಗಿ ತಮಗೆ ಬೇಕಾಗುವ ಹಣ್ಣುಗಳನ್ನು ಆಯ್ಕೆ ಮಾಡಲು ಬಿಡಿ. ಅವರ ಆಯ್ಕೆ ತಪ್ಪಿದ್ದಲ್ಲಿ ತಿದ್ದಿ ಹೇಳುವುದು ನಮ್ಮ ಕೈಯಲ್ಲಿ ಇರುತ್ತೆ. ಆದರೆ ಅವರ ವಯಸ್ಸಿಗೆ ತಕ್ಕಂತೆ ಒಳ್ಳೆಯದು-ಕೆಟ್ಟದ್ದು ಯೋಚನೆ ಮಾಡುವ ಶಕ್ತಿ ಅವರಲ್ಲಿ ಬೆಳೆಯಲು ಸಹಕರಿಸುವುದೇ ಸ್ವಾತಂತ್ರ್ಯದ ಮಾನ್ಯತೆ ಇಲ್ಲಿ. ಯೋಚನಾಶಕ್ತಿ ಜೊತೆ ಸರಿ-ತಪ್ಪುಗಳ ತಿಳಿವಳಿಕೆಯನ್ನು ಗ್ರಹಿಸುವಿಕೆಯೇ ಸ್ವಾತಂತ್ರ್ಯ.

    ಅದೇರೀತಿ ಮದುವೆಯಾದ ಮೇಲೆ ಗಂಡ ಹೆಂಡತಿ ಅವರವರ ಇಷ್ಟ ಕಷ್ಟಗಳಿಗೆ ಮಾನ್ಯತೆ ನೀಡಬೇಕು. ಸ್ವಲ್ಪ ಸಮಯ ತಮ್ಮ ಸಂಬಂಧದ ಜೊತೆ ಅವರ ಸ್ವಂತ ವಿಚಾರ ಹಾಗೂ ಕೆಲಸಗಳನ್ನು, ಹವ್ಯಾಸಗಳನ್ನು ಮಾಡಲು, ಜೊತೆಗಾರರನ್ನು ಭೇಟಿಯಾಗಲು ಸಮಯ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಭರದಲ್ಲಿ ಕಾಲ ಕಳೆದಂತೆ ಬೇಸರದ ಸ್ವರೂಪದಲ್ಲಿ ಕೂಪಮಂಡೂಕದ ತರಹ ಆಗಿ ಹೋಗುವುದು.

    ಹೀಗೆ ಯಾವುದೇ ಸಂಬಂಧಗಳಲ್ಲಿ ಆಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ವತಂತ್ರ ವಿಚಾರ ಜೀವನಶೈಲಿಗೆ ಜಾಗ ಬಿಡಲೇಬೇಕು. ಅದರಿಂದ ಕೌಶಲ್ಯದ ಅಭಿವೃದ್ಧಿ ಆಗುವುದಲ್ಲದೆ, ಮಾನಸಿಕವಾಗಿ, ಭಾವನಾತ್ಮಕವಾಗಿ ಮನುಷ್ಯ ಹೆಚ್ಚು ದೃಢವಾಗುತ್ತಾನೆ. ಆದರೆ ಸ್ವಾತಂತ್ರ್ಯದ ದುರುಪಯೋಗ ಮಾತ್ರ ಸಲ್ಲದು.

    Photo by JOSHUA COLEMAN on Unsplash

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    spot_img

    More articles

    4 COMMENTS

    1. Good article by Ms.Mamatha Kulkarni where gist of all self help concept and to keep oneself sane and comfortable all time in this world full of contradictions and balance the relationship with inner feelings intact without undue influence of external forces. Very precise and well written practical thoughts

    LEAVE A REPLY

    Please enter your comment!
    Please enter your name here

    Latest article

    error: Content is protected !!