21.2 C
Karnataka
Sunday, September 22, 2024

    ಜೋಗದ ಅಭಿವೃದ್ಧಿಗೆ 120 ಕೋಟಿ ರೂ ಮಂಜೂರು

    Must read

    ಶಿವಮೊಗ್ಗ ಜಿಲ್ಲೆ ಪ್ರಾಕೃತಿಕ ಸೊಬಗಿನ ತಾಣ. ಇಲ್ಲಿ ಪ್ರವಾಸೋದ್ಯಮಕ್ಕೆ ತೆರೆದ ಅವಕಾಶಗಳಿವೆ.ಕೋಟೆ,ಕೊತ್ತಲಗಳುಶಿಲ್ಪಕಲಾ
    ದೇಗುಲಗಳು,ರಮಣೀಯ ನಿಸರ್ಗಕ್ಕೆ ಹೆಸರುವಾಸಿ.

    ಜಗತ್ಪ್ರಸಿದ್ಧ ಜೋಗ ಜಲಪಾತ ಹೃನ್ಮನಗಳನ್ನ ತಣಿಸುವ ಸಮೃದ್ಧ ಪರಿಸರ.
    ಜೋಗದ ಅಭಿವೃದ್ಧಿ ಬಗ್ಗೆ ಪ್ರಾಧಿಕಾರ
    ಕಾರ್ಯಶೀಲವಾಗಿದೆ. ಜೋಗ,ಇಷ್ಟೂ ಕಾಲ ಪ್ರವಾಸೀ ಆಕರ್ಷಣೆ ಹೊಂದಲು ಕಾಯುತ್ತಿತ್ತು. ಅನೇಕ ಯೋಜನೆಗಳು ಅಗತ್ಯವಿದ್ದವು. ಅಂತಹ ಹಲವು ಯೋಜನೆಗಳನ್ನ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು ರೂಪಿಸಿದ್ದರು.ಅವರ ಕನಸನ್ನ ನನಸು ಮಾಡುವಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ
    ಬಿ.ವೈ.ರಾಘವೇಂದ್ರ ಅವರುಕ್ರಿಯಾಶೀಲರಾದರು. ಯೋಜನೆಗಳ ಮಂಜೂರಾತಿಗೆ ರಾಜ್ಯ ಮತ್ತು ಕೇಂದ್ರದ ನಡುವೆ ಸಮರ್ಥವಾಗಿ ಸಮನ್ವಯತೆ ಸಾಧಿಸಿದರು.ಅದರ ಫಲವಾಗಿ ಈಗ ಜೋಗವನ್ನು ಆಕರ್ಷಣೀಯಗೊಳಿಸಲು 120 ಕೋಟಿ ರೂ ಗಳ ಯೋಜನೆಗೆ ಮಂಜೂರಾತಿ ದೊರೆತಿದೆ.

    ಸಂಸದ ರಾಘವೇಂದ್ರ

    ಸಂಸದರ ಪ್ರಯತ್ನದ ಫಲವಾಗಿ ಜೋಗ ಸರ್ವಋತು ಜಲಪಾತವಾಗಲಿದೆ. ದೀಪಾಲಂಕಾರ
    ಸೌಲಭ್ಯ ಸಹಿತ ಅನುಪಮ ಪ್ರೇಕ್ಷಣೀಯ ಸ್ಥಳವಾಗಲಿದೆ.ವಿಶೇಷವೆಂದರೆ ಬೇಸಿಗೆಯಲ್ಲೂ ಶನಿವಾರ- ಭಾನುವಾರ ಜಲಪಾತದಲ್ಲಿ ನೀರು ಧುಮ್ಮಿಕ್ಕಲಿದೆ.ಕೆಪಿಸಿ ಅವರ ಸಹಭಾಗಿತ್ವದಿಂದ ಇದು ಸಾಧ್ಯವಾಗಿದೆ.
    ಅಷ್ಟೇ ಅಲ್ಲ ಜಿಪ್ ಲೈನ್ ಅಳವಡಿಕೆಯಿಂದಾಗಿ
    ಜೋಗ ಸಾಹಸಿ ತಾಣವಾಗಿ ಕಂಗೊಳಿಸಲಿದೆ. ಸುಸಜ್ಜಿತ ವಾಹನ ನಿಲ್ದಾಣ,ನೋಡುಗರಿಗೆ ವೀಕ್ಷಣಾ ಗೋಪುರ,ಅತ್ಯಾಧುನಿಕ
    ಹೋಟೆಲ್,ಹೂದೋಟ,ಸೂಕ್ತವಾಗಿ ವಾಹನಗಳ ಪಾರ್ಕಿಂಗ್,ಜಲಸಾಹಸ,ದೋಣಿ ವಿಹಾರಗಳಿಗೆ ಜಲಮೂಲಗಳ ರಕ್ಷಣೆ,ಈಜುಕೊಳ,ಪ್ರವಾಸಿಗಳಿಗೆ
    ತಂಗುವುದಕ್ಕೆ ಕಾಟೇಜುಗಳು, ಇತ್ಯಾದಿ ಉತ್ತಮ ವಸತಿ ಸೌಕರ್ಯಗಳ ಬಗ್ಗೆ ಮಂಜೂರಾತಿ
    ದೊರೆತಿದೆ.ಪ್ರವಾಸಿಗಳಿಗೆ ಎಬಿ ಸೈಟ್ ವೀಕ್ಷಣೆ ಮಾಡಲು ರೋಪ್ ಲೈನ್ ವಿಶಾಲ ರಸ್ತೆಗಳು ನಿರ್ಮಾಣವಾಗಲಿವೆ.

    ಅಭಿನಂದನೆ : ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ಸದಸ್ಯ ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ನಮ್ಮ
    ಕನಸಿನ ಶಿವಮೊಗ್ಗದ ಶ್ರೀಗೋಪೀನಾಥ್ ಮತ್ತು ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ಶಂಕರಪ್ಪ,
    ಸಹ ಕಾರ್ಯದರ್ಶಿ ಅ.ನಾ.ವಿಜಯೇಂದ್ರ,
    ನಿರ್ದೇಶಕರಾದ ಡಾ.ಸುಧೀಂದ್ರ, ಕೆ.ಜಿ.ಮಂಜುನಾಥ ಶರ್ಮ, ಸುಕುಮಾರ್, ಶ್ರೀಮತಿ ನಿರ್ಮಲಾ ಕಾಶಿ ಹಾಗೂ ಸದಸ್ಯರು,
    ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!