19.9 C
Karnataka
Sunday, September 22, 2024

    ಆತ್ಮನಿರ್ಭರ ಭಾರತದ ಹೊಸ ಸಂಸತ್ ಭವನ

    Must read

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು. ಹೊಸ ಸಂಪತ್ತು ಭವನದ ಬಗ್ಗೆ ಒಂದಿಷ್ಟು ಅರಿಯೋಣ.

    ಹೊಸ ಸಂಸತ್ ಭವನ ಎಷ್ಟು ದೊಡ್ಡದು.

    ಹೊಸ ಭವನ ಸುಮಾರು 64 500 ಚದುರ ಮೀಟರ್ ಪ್ರದೇಶದಲ್ಲಿ ತಲೆ ಎತ್ತಲಿದೆ. ಈಗಿನ ಸಂಸತ್ ಭವನದ ಎದುರೇ ಇದು ನಿರ್ಮಾಣವಾಗಲಿದೆ. ಹೊಸ ಕಟ್ಟಡದಲ್ಲಿ ಲೋಕಸಭೆಯಲ್ಲಿ 888 ಸದಸ್ಯರು,ರಾಜ್ಯ ಸಭೆಯಲ್ಲಿ 384 ಸದಸ್ಯರು ಕಳಿತುಕೊಳ್ಳುವಷ್ಟು ಸ್ಥಳಾವಕಾಶ ಕಲ್ಪಿಸಲಾಗುವುದು. ಈಗಿನ ಕಟ್ಟಡದಲ್ಲಿ 543 ಲೋಕ ಸಭಾ ಸದಸ್ಯರು ಮತ್ತು 245 ರಾಜ್ಯ ಸಭೆ ಸದಸ್ಯರಿಗೆ ಮಾತ್ರ ಅವಕಾಶ ಇದೆ. ಮುಂದೆ ಸದಸ್ಯರ ಸಂಖ್ಯೆ ಹೆಚ್ಚಾಗುವ ದೃಷ್ಟಿಯಿಂದ ಹೊಸ ಕಟ್ಟಡದಲ್ಲಿ ಹೆಚ್ಚು ಸದಸ್ಯರು ಕೂಡಲು ಅವಕಾಶ ಕಲ್ಪಿಸಲಾಗಿದೆ.

    ಹೊಸ ಕಟ್ಟದಲ್ಲಿ ಮತ್ತೇನು ಇರಲಿದೆ

    ಹಳೆಯ ಕಟ್ಟದಲ್ಲಿರುವ ಸೆಂಟ್ರಲ್ ಹಾಲ್ ಇಲ್ಲಿ ಇರುವುದಿಲ್ಲ. ನಮ್ಮ ಜನ ತಂತ್ರ ವ್ಯವಸ್ಥೆಯ ಹಿರಿಮೆಯನ್ನು ಸಾರುವ ಚಿತ್ರ ಪಟಗಳು, ಸದಸ್ಯರಿಗಾಗಿ ವಿಶೇಷ ಕೊಠಡಿಗಳು, ವಿಶಾಲವಾದ ಹಾಲ್, ನಾನಾ ಕಮಿಟಿ ರೂಮುಗಳು , ಭೋಜನಾಲಯ ಇರಲಿದೆ.

    ಆಧುನಿಕ ತಂತ್ರಜ್ಞಾನದ ಬಳಕೆ

    ಲೋಕಸಭೆ ಮತ್ತು ರಾಜ್ಯ ಸಭೆ ಎರಡಲ್ಲೂ ಆಧುನಿಕ ತಂತ್ರಜ್ಞಾನ ಆಧಾರಿತ ಧ್ವನಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು. ಕಮಿಟಿ ರೂಮಗಳು ಕೂಡ ವೈಫೈ ಸಂಪರ್ಕಕದೊಂದಿಗೆ ಸಜ್ಜಾಗಲಿವೆ.

    ಭದ್ರತಾ ವ್ಯವಸ್ಥೆ

    ಹಿಂದೆ ಲೋಕಸಭೆ ಕಟ್ಟದ ಮೇಲೆ ಭಯೋತ್ಪಾದಕರ ದಾಳಿ ಆಗಿದ್ದರ ಹಿನ್ನೆಲೆಯಲ್ಲಿ ಆತ್ಯಾಧುನಿಕ ರಕ್ಷಣಾ ವವ್ಯವಸ್ಥೆಯನ್ನು ಈ ಕಟ್ಟಡ ಹೊಂದಲಿದೆ. ಜೊತೆಗೆ ಭೂಕಂಪ ನಿರೋಧಕ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಿಸಲಾಗುವುದು.

    ಕಟ್ಟಡ ನಿರ್ಮಾಣ ಗುತ್ತಿಗೆ ಯಾರಿಗೆ ಸಿಕ್ಕಿದೆ

    ಕಳೆದ ಸೆಪ್ಟೆಂಬರ್ ನಲ್ಲಿ ಟಾಟಾ ಪ್ರಾಜೆಕ್ಟ್ಸ್ 861.90 ಕೋಟಿ ರೂಪಾಯಿಗಳಿಗೆ ಇದರ ಬಿಡ್ ಅನ್ನು ಪಡೆದುಕೊಂಡಿದೆ. ಅಂದಾಜು 2000 ಜನ ನೇರವಾಗಿ 9000 ಜನ ಪರೋಕ್ಷವಾಗಿ ಇದರ ನಿರ್ಮಾಣದಲ್ಲಿ ಭಾಗಿಯಾಗಲಿದ್ದಾರೆ.

    ಹಳೆ ಕಟ್ಟಡ ಏನಾಗುವುದು

    ಹಳೇ ಕಟ್ಟಡವನ್ನು ಹಾಗೆ ಉಳಿಸಿ ರಕ್ಷಿಸಲಾಗುವುದು. ಪಾರ್ಲಿಮೆಂಟಿನ ವಿವಿಧ ಕೆಲಸಗಳಿಗೆ ಬಳಸಲಾಗುವುದು.

    ಈಗಿನ ಕಟ್ಟಡ ಯಾವಾಗ ನಿರ್ಮಾಣವಾಗಿದ್ದು

    ಈಗಿನ ಸಂಸತ್ತು ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದು1921, ಫೆಬ್ರವರಿ 12. ನಿರ್ಮಿಸಲು ಆರು ವರ್ಷ ಹಿಡಿಯಿತು. ಆಗ 83 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಆಗಿನ ಗವರ್ನರ್ ಜನರಲ್ ಲಾರ್ಡ್ ಇರ್ವಿನ್ 1927 ರ ಜನವರಿ 18ರಂದು ಈ ಕಟ್ಟಡವನ್ನು ಉದ್ಘಾಟಿಸಿದ್ದರು. ನವದೆಹಲಿಯ ಯೋಜನೆ ಮತ್ತು ನಿರ್ಮಾಣದ ಹೊಣೆ ಹೊತ್ತಿದ್ದ ಎಡ್ವಿನ್ ಲೋಚೆನಸ್ ಮತ್ತು ಹರ್ಬರ್ಟ್ ಬೇಕರ್ ಅವರೇ ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು.

    ಹೊಸ ಕಟ್ಟಡ ಯಾವವಾಗ ಸಿದ್ಧವಾಗಬಹುದು.

    2022 ರ ಚಳಿಗಾಲದ ಅಧಿವೇಶನದ ವೇಳೆ ಕಟ್ಟಡ ಸಿದ್ಧವಾಗುವ ನಿರೀಕ್ಷೆ ಇದೆ.

    ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸಿದ ಮೋದಿ

    ಹೊಸ ಕಟ್ಟದ ಭೂಮಿ ಪೂಜೆಯ ಸಂದರ್ಭದಲ್ಲಿ ನಮ್ಮ ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸಿದ ಪ್ರಧಾನಿ ಮೋದಿ ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲೇ ಜನತಂತ್ರ ವ್ಯವಸ್ಥೆಯನ್ನು ಬಸವೇಶ್ವರರು ಜಾರಿಗೆ ತಂದಿದ್ದರು ಎಂದರು. ಜೊತಗೆ ಬಸವಣ್ಣನವರ ವಚನವನ್ನು ಕನ್ನಡದಲ್ಲಿಯೇ ಉದಾಹರಿಸಿದರು.

    ಹೊಸ ಕಟ್ಟಡ ಹೇಗಿರಲಿದೆ

    ಧರ್ಮೇಂದ್ರ ಪ್ರಧಾನ್ ಮಾಡಿರುವ ಈ ಟ್ವೀಟ್ ನೋಡಿ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!