26.8 C
Karnataka
Sunday, September 22, 2024

    ಕಲಾ ಚತುರೆ ಗಾಯಿತ್ರಿ ನಾಯಕ

    Must read

    ಬಳಕೂರು ವಿ.ಎಸ್ ನಾಯಕ

    ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲವನ್ನು ರಕ್ಷಿಸಿ ಎಂದು ಸಂದೇಶ ಸಾರುವ ಶಿಲ್ಪ, ನೀರನ್ನು ಕಲುಷಿತ ಮಾಡದೆ ಉಳಿಸಿ ಎಂಬ ಸಂದೇಶವನ್ನು ಬಿಂಬಿಸುವ ಶಿಲ್ಪ, ಕುಟುಂಬ ವ್ಯವಸ್ಥೆಯ ಮಹತ್ವವನ್ನು ಅರಿವು ಮೂಡಿಸುವ ಶಿಲ್ಪ, ಮನೆ, ಮಕ್ಕಳು, ತಾಯಿ, ಹುಡುಗಿ ಹೀಗೆ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ಶಿಲ್ಪ, ಜಗತ್ತಿಗೆ ಶಾಂತಿಯ ಮಂತ್ರ ಸಾರಿದ ಬುದ್ಧನ ಶಿಲ್ಪ….. ಹೀಗೆ ಒಂದೇ ಎರಡೆ ಕಲಾವಿದನ ಕೈಚಳಕದಲ್ಲಿ ಜೀವ ತುಂಬಿ ಕಲಾಸಕ್ತರ ಮಡಿಲಿಗೆ ಅರ್ಪಿಸಿ ಜನ ಮೆಚ್ಚುಗೆ ಪಡೆದವರು ಉಡುಪಿಯ ಕಟಪಾಡಿಯ ಕಲಾವಿದೆ ಶ್ರೀಮತಿ ಗಾಯಿತ್ರಿ ಜಗದೀಶ್‌ನಾಯಕ.

    ಇವರು ಬಿ.ಕಾಂ ಪದವಿಧರೆ. ಗೃಹಿಣಿ . ಆದರೆ ಚಿಕ್ಕವಯಸ್ಸಿನಲ್ಲಿಯೇ ಕಲಾಸಕ್ತಿ ಬೆಳೆಸಿಕೊಂಡವರು. ಮೊದಲು ಇವರು ಕಲಾವಿದ ರಮೇಶ್‌ರಾವ್‌ರವರ ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್‌ನಲ್ಲಿ ಸುಮಾರು ೫ ವರ್ಷಗಳ ವಿಭಿನ್ನ ಕಲಾ ಕೃತಿಗಳನ್ನು ರಚಿಸುವ ತರಬೇತಿಯನ್ನು ಪಡೆದರು. ನಂತರ ಕಲಾವಿದ ಶೈಲೇಶ್ ಕೊಟ್ಯಾನ್‌ರವರ ಮಾರ್ಗದರ್ಶನದಲ್ಲಿ ಕಲೆಯನ್ನು ಅಧ್ಯಯನ ಮಾಡಿ ಇಂದು ಒಬ್ಬ ಅದ್ಭುತ ಕಲಾ ಪ್ರತಿಭೆಯಾಗಿ ಹೊರ ಹೊಮ್ಮಿದ್ದಾರೆ.

    ಇವರಿಗೆ ಕಲಾಸಕ್ತಿ ಮೂಡಲು ಕಾರಣ ಮುಖ್ಯವಾಗಿ ನಿಸರ್ಗ .ಇದು ಒಂದು ಇದ್ದ ಹಾಗೆ ಇನ್ನೊಂದು ದಿನ ಕಾಣುವುದಿಲ್ಲ. ಆದ್ದರಿಂದ ಕಲಾವಿದರಾದ ಇವರು ನಿಸರ್ಗದಲ್ಲಿ ಇರುವ ಬದಲಾವಣೆಯನ್ನು ಗಮನಿಸಿ ತಮ್ಮದೇ ರೀತಿಯಲ್ಲಿ ಕಲಾಕೃತಿಗಳನ್ನು ಶಿಲ್ಪಗಳನ್ನು ಮಾಡಬೇಕೆಂಬ ಆಸಕ್ತಿ ಮೂಡಿಸಿಕೊಂಡರು ನಂತರದ ದಿನಗಳಲ್ಲಿ ಇವರ ಕಲಾ ಶಕ್ತಿ ನೀಡಿದವರು ಪ್ರಸಿದ್ಧ ಕಲಾವಿದರಾದ ವೆಂಕಿಪಲಿಮಾರ್‌.ಇವರು ಹಲವಾರು ಆವೆ ಮಣ್ಣಿನ ಕಲಾಕೃತಿಗಳನ್ನು ಮಾಡಿ ಜನಮಾನಸದಲ್ಲಿ ಇರುವ ಕೆಲಸವನ್ನು ಮಾಡಿದ್ದಾರೆ.

    ಮರಗಳನ್ನು ರಕ್ಷಿಸಿ, ನಿಸರ್ಗವನ್ನು ರಕ್ಷಿಸಿ, ಪಕ್ಷಿಗಳನ್ನು ರಕ್ಷಿಸಿ ಇದರ ಜೊತೆಗೆ ಮುಖದಲ್ಲಿ ಭಾವನಾತ್ಮಕ ಸಂದೇಶ ನೀಡುವ ವಿಭಿನ್ನ ಶಿಲ್ಪಗಳು ಕಲಾಸಕ್ತರನ್ನ ಆಕರ್ಷಿಸಿಸಿದೆ. ಆವೆ ಮಣ್ಣಿನ ಕಲಾಕೃತಿಗಳನ್ನು ಮಾಡಲು ಕರಾವಳಿಯಲ್ಲಿ ಸಿಗುವ ಆವೆ ಮಣ್ಣನ್ನು ತಂದು ಅದರಲ್ಲಿರುವ ಕಲ್ಲು ಮತ್ತು ಮಣ್ಣನ್ನು ಬೇರ್ಪಡಿಸಿ ಅದನ್ನು ನೀರು ಹಾಕಿ ಹದಮಾಡಿಕೊಂಡು ನಂತರ ಈ ಮಣ್ಣಿನಿಂದ ಹಲವಾರು ವಿಭಿನ್ನ ಶಿಲ್ಪಗಳನ್ನು
    ರಚಿಸಬಹುದು.

    ಕಲಾವಿದ ವೆಂಕಿಪಲಿಮಾರ್‌ರವರ ಕಲಾ ಗ್ಯಾಲರಿ ಚಿತ್ರಾಲಯದಲ್ಲಿ ಇದ್ದು, ಅವರಲ್ಲಿ ಗಾಯಿತ್ರಿ ನಾಯಕರು ತರಬೇತಿ ಪಡೆದು ವಿಭಿನ್ನ ಶಿಲ್ಪಗಳನ್ನು ರಚಿಸಿದ್ದಾರೆ. ಕಲಾಕೃತಿಗಳಲ್ಲಿ ನೈಜತೆ ತುಂಬಲು ಮುಖ್ಯವಾಗಿ ಬೇಕಾಗಿದ್ದು, ಗ್ರಹಿಕೆ ಆಲೋಚನೆ ಅಭಿವ್ಯಕ್ತಿತ್ವ .ಇವರು ಪ್ರಕೃತಿಯಲ್ಲಿ ಏನನ್ನಾದರು ನೋಡಿದಾಗ ಯಾವುದರಲ್ಲಿ ಆಕರ್ಷಿತರಾಗುತ್ತಾರೋ ಅದನ್ನೇ ಕಲಾವಸ್ತುವನ್ನಾಗಿ ಬಿಂಬಿಸಿದ್ದಾರೆ. ಇವರ ಕಲಾಕೃತಿಗಳು ಪ್ರಕೃತಿಯ ಅಳಿವು ಹೇಗೆ ಆಗುತ್ತದೆ. ಅದನ್ನು ಹೇಗೆ ಉಳಿಸಬಹುದು ಎಂಬುದನ್ನು ತಮ್ಮ ಶಿಲ್ಪಗಳಲ್ಲಿ ಬಿಂಬಿಸಿದ್ದಾರೆ.

    ಶ್ರೀಮತಿ ಗಾಯಿತ್ರಿ ನಾಯಕರವರು ಹೇಳುವ ಪ್ರಕಾರ ನಮ್ಮಿಂದ ಪ್ರಕೃತಿನಾಶ ಬೇರೆ ಬೇರೆ ರೀತಿಯಲ್ಲಿ ಆಗುತ್ತದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ ತಾವು ಪ್ರಕೃತಿಯ ಅಳಿವನ್ನು ತಮ್ಮ ಕಲಾಕೃತಿಗಳ ಮೂಲಕವಾಗಿ ಅದರಲ್ಲೂ ಶಿಲ್ಪಗಳಲ್ಲಿ ಬಿಂಬಿಸಿದರೆ. ಜನ ಮಾನಸವನ್ನು ತಲುಪಬಹುದು ಜನರಲ್ಲಿ ಒಂದು ರೀತಿಯ ಅರಿವು ಮೂಡಿಸಬಹುದು. ಹೀಗೆ ಶಿಲ್ಪಗಳು ಜನರನ್ನು ಸೆಳೆಯುವುದಲ್ಲದೇ ಪರೋಕ್ಷವಾಗಿ ಪ್ರಕೃತಿಯ ಉಳಿವನ್ನು ಬಿಂಬಿಸುತ್ತದೆ. ಅದಕ್ಕಾಗಿ ಈ ಮಾಧ್ಯಮದಲ್ಲಿಯೇ ಹಲವಾರು ಕಲಾಕೃತಿಗಳನ್ನು ಮಾಡಿದ್ದೇನೆ ಎನ್ನುತ್ತಾರೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    2 COMMENTS

    1. ಬಹುಮುಖ ಪ್ರತಿಭೆಯ ಕಲಾವಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    2. Prakruti ನಾಶದ ಅರಿವಿರುವ, ಕಾಳಜಿ ಇರುವಕಲಾವಿದೆ ಅದನ್ನು ತಮ್ಮ ಕಲಾಕುಂಚ ದಾ ಮೂಲಕ ಜನತೆಗೆ ಎಚ್ಚರಿಸುತ್ತಿರುವುದು ಸ್ತು ತ್ಯಾರ್ಹ. ಇಂತಹಕಲಾಕಾರರನ್ನು ಪರಿಚಯಿಸಿರುವುದಕ್ಕೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!