26.8 C
Karnataka
Sunday, September 22, 2024

    ವೈಕುಂಠ ಏಕಾದಶಿ; ಗೋವಿಂದನ ದರ್ಶನಕ್ಕೆ ದೇವಾಲಯಗಲ್ಲಿ ವಿಶೇಷ ವ್ಯವಸ್ಥೆ

    Must read

    ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ. ಮುಂಜಾನೆಯಿಂದಲೇ ಭಕ್ತರು ದೇವಾಲಯಗಳಿಗೆ ಆಗಮಿಸಿ ಗೋವಿಂದನ ದರ್ಶನ ಪಡೆಯುತ್ತಿದ್ದಾರೆ. ಎಲ್ಲಾ ದೇವಾಲಯಗಳಲ್ಲೂ ವೈಕುಂಠ ದ್ವಾರಗಳನ್ನು ನಿರ್ಮಿಸಲಾಗಿದೆ.

    ಈ ಬಾರಿ ಕೋವಿಡ್ ಕಾರಣದಿಂದ ಎಲ್ಲೆಡೆಯೂ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕೆಲವೆಡೆ ಉಚಿತ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.ದೇಹದ ಉಷ್ಣತೆಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

    ಬೆಂಗಳೂರಿನ ಹೇಮಚಂದ್ರ ಸಾಗರ ಕಲ್ಯಾಣ ಮಂಟಪದ ಆವರಣದಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಬೆಳಿಗಿನ ಜಾವ 5 ಗಂಟೆಯಿಂದಲೆ ಭಕ್ತಾದಿಗಳು ಸಾಲು ಗಟ್ಟಿ ನಿಂತು ಭಗವಂತನ ದರ್ಶನ ಪಡೆದರು. ಕಳೆದ 40 ವರ್ಷಗಳಿಂದ ಈ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಧಾನ ಅರ್ಚಕ ವಾಸುದೇವ ಭಟ್ಟರ್ ಮತ್ತು ಅವರ ಪುತ್ರ ಕೃಷ್ಣ ಸೇರಿದಂತೆ ಇಡೀ ಕುಟುಂಬ ಈ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಇಲ್ಲಿನ ವೈಕುಂಠ ಏಕಾದಶಿಯ ಫೋಟೋ ಆಲ್ಬಂ ಇಲ್ಲಿದೆ.

    ಈ ವರ್ಷ ವೈಕುಂಠ ಏಕಾದಶಿಯ ದಿನವೆ ಕ್ರಿಸ್ ಮಸ್ ಕೂಡ ಬಂದಿದೆ. ಅಂದ ಹಾಗೆ 2020 ಎರಡು ವೈಕುಂಠ ಏಕಾದಶಿಗಳಿಗೆ ಸಾಕ್ಷಿ ಆಗಿದೆ. ಈ ವರುಷದ ಆರಂಭದಲ್ಲಿ ಅಂದರೆ ಜನವರಿ 5ರಂದು ವೈಕುಂಠ ಏಕಾದಶಿ ಆಚರಿಸಲಾಗಿತ್ತು.

    ವಿನಯ್ ರಾವ್
    ವಿನಯ್ ರಾವ್
    ಬ್ರಾಂಡ್ ತಜ್ಞ. ಬಹು ರಾಷ್ಟ್ರೀಯ ಕಂಪೆನಿ ಉದ್ಯೋಗಿ. ಬರಹದಲ್ಲಿ ಆಸಕ್ತಿ
    spot_img

    More articles

    4 COMMENTS

    1. ಮನೆಯಲ್ಲಿ ಕುಳಿತ ನಮಗೆ ಗೋವಿಂದನ ದರ್ಶನ ಮಾಡಿಸಿದ ಲೇಖಕರಿಗೆ ಧನ್ಯವಾದಗಳು .

    LEAVE A REPLY

    Please enter your comment!
    Please enter your name here

    Latest article

    error: Content is protected !!