23 C
Karnataka
Saturday, September 21, 2024

    ತಾವೂ ಬದುಕಿ ಇತರರನ್ನು ಬದುಕಗೊಡಬೇಕು

    Must read


     ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ


    ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್–  ‘ಕವಿರಾಜಮಾರ್ಗ’ದಲ್ಲಿ ಉಲ್ಲೇಖವಾಗಿರುವ ಮಾತಿದು. “ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್” ಕುದಿಯುವ ಹಾಲಿಗೆ  ಅಳೆಯ ಅಂದರೆ ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ ಎಂದು .  ಇರುವ ಸುಂದರ,ವಾತಾವರಣ, ಸಂಸಾರ ಹಾಳು ಮಾಡುವ ಜನರನ್ನು ಕುರಿತು ಈ ಮಾತನ್ನು ಹೇಳಲಾಗಿದೆ.

    ನಮ್ಮ ಸಮಾಜದಲ್ಲಿ ಇಂಥ ಕುಹಕಿಗಳು ಅದೆಷ್ಟೋ ಜನರು ಸಿಗುತ್ತಾರೆ.  “ಹಾಲಿನಂಥ ಸಂಸಾರಕ್ಕೆ ಹುಳಿ ಹಿಂಡಿದರು” ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.   ಜೀವನ  ಎಂಬ ಬಂಡಿ ಅಂದರೆ  ಈ ಬದುಕು ನಂಬಿಕೆ ಮತ್ತು ವಿಶ್ವಾಸ ಎಂಬ ಹಳಿಗಳ ಮೇಲೆ ನಡೆಯುವುದು. ಇಂಥ ಬಂಡಿಗಳ ಪ್ರಯಾಣಿಕರ ಮನಸ್ಸುಗಳನ್ನು ಯಾರೋ ಹೇಳುವ ಎರಡು ಚಾಡಿ ಮಾತುಗಳು, ವ್ಯಂಗ್ಯದ ಮಾತುಗಳು ಒಡೆದು ಛಿದ್ರ ಮಾಡುತ್ತವೆ ಎಂದರೆ ಏನರ್ಥ ಅಲ್ವೆ! ಇದು  ವಿಕೃತ ಸಂತೋಷಕ್ಕೊಂದು ಉದಾಹರಣೆ. ಜೊತೆಗೆ ನಮ್ಮ ಸಮಾಜದ ಅಘೋಷಿತ ಮನಸ್ಥಿತಿಯೂ  ಹೌದು. 

    “ಉಪಕಾರ ಮಾಡುವ ಬದಲು ಅಪಕಾರ ಮಾಡುವ” , “ಹಣ್ಣು ಕೊಟ್ಟರೆ ಕಣ್ಣು ಕೀಳುವ ಮನಸ್ಥಿತಿ” ಇರುವವರನ್ನು ಕುರಿತು ಈ ಮಾತನ್ನು ಹೇಳಬಹುದು. ತಮಗೆ ಇಲ್ಲದ ಸಂತೋಷ . ನೆಮ್ಮದಿ, ಬದುಕು, ಸವಲತ್ತುಗಳು ಇತರರಿಗೆ  ಇವೆ ಎಂದು ತಿಳಿದಾಗ ಅದನ್ನು ಕೆಡಿಸಿ ಹೊಲಸೆಬ್ಬಿಸುವ ಜನರು ಅನೇಕರಿರುತ್ತಾರೆ.

    ಇತರರಿಗೆ “ನಮ್ಮಿಂದ  ಸಹಾಯ  ಆಗದೆ ಇದ್ದರೂ ಸಾಯೋಹಾಗೆ ಮಾಡಬಾರದು!” ಎನ್ನುವಂತೆ  ತಮ್ಮ ಜೀವನದಲ್ಲಿ ಸುಧಾರಣೆಗಳನ್ನು ತಂದುಕೊಳ್ಳುವತ್ತ ಗಮನಬಹರಿಸಬೇಕೇ  ವಿನಃ ಇತರರ ಸ್ವಚ್ಛಂದ ಬಾಳನ್ನು ನಷ್ಟಮಾಡುವುದರಲ್ಲಿ ಅರ್ಥವಿಲ್ಲ. ಚಿತ್ತ ಸಮಾಧಾನದಿಂದ  ಇರಬೇಕು . “ತಾವೂ ಬದುಕಿ ಇತರರನ್ನು ಬದುಕಗೊಡಬೇಕು” ಎಂಬ ಯೂನಿವರ್ಸಲ್ ಸತ್ಯಕ್ಕೆ  ಪೂರಕವಾಗಿ ಇರಬೇಕು.

    “ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್” ಎಂಬ ಮಾತು   ಬದುಕಿನಲ್ಲಿ ಆಗಬಹುದಾದ ದುರಂತದ ಎಚ್ಚರಿಕೆಯನ್ನು ಕೊಡುತ್ತದೆ.   ಅನವಶ್ಯಕವಾದುದ್ದನ್ನು ಎಳೆದು ತರುವುದಕ್ಕಿಂತ  ಅವಶ್ಯವಾದುದ್ದನ್ನು  ಉಳಿಸಿಕೊಂಡು ಹೋಗುವುದು  ಮುಖ್ಯ  ಅಲ್ಲವೆ! ಚಂದದ ಹೂವನ್ನು ಹಾಗೆ ನೋಡಿ ಸಂತೋಷಿಸು  ಸೌಧರ್ಮಿಕೆ ಅತ್ಯಂತ ಮುಖ್ಯ ಅನ್ನಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    spot_img

    More articles

    4 COMMENTS

    1. ನಮ್ಮಿಂದ ಉಪಕಾರ ಮಾಡಲು ಆಗದಿದ್ದರೂ ಮತ್ತೊಬ್ಬರಿಗೆ ಅಪಕಾರ ಮಾಡಬಾರ ದು ಎಂಬುದನ್ನುಸುಮ ವೀಣಾ ಅವರು ಚೆನ್ನಾಗಿ ವಿವರಿಸಿದ್ದಾರೆ.👌

    LEAVE A REPLY

    Please enter your comment!
    Please enter your name here

    Latest article

    error: Content is protected !!