20.6 C
Karnataka
Sunday, September 22, 2024

    ಕಲಾ ಚತುರೆ ರಕ್ಷಾ.ಆರ್.ಪೂಜಾರಿ

    Must read

    ಬಳಕೂರು ವಿ ಎಸ್ ನಾಯಕ

    ಇವರಿಗೆ ಚಿಕ್ಕಂದಿನಿಂದಲೇ ಕಲೆಯ ಸೆಳೆತ. ನನ್ನ ಬಾಲ್ಯದಲ್ಲಿ ಕಂಡಿದ್ದನ್ನು ಅನುಭವಿಸಿದ್ದನ್ನು ಮನಸ್ಸಿನ ಪುಟದಲ್ಲಿ ಗುಪ್ತವಾಗಿ ಇಟ್ಟುಕೊಂಡಿದ್ದರು. ಇದರ ಅಭಿವೃದ್ಧಿಗೆ ಸಾಕಾರವಾಯಿತು ಕಲೆ. ಕಲೆಯೆಂಬ ಬಲೆಯಲ್ಲಿ ಸಿಲುಕಿದ ಇವರು ವಿಭಿನ್ನ ರೀತಿಯಲ್ಲಿ ವಿಶಿಷ್ಟವಾದ ಕಲಾ ಯಾತ್ರೆಯನ್ನು ಆರಂಭಿಸಿದರು. ಹೀಗೆ ಹಲವಾರು ರೀತಿಯ ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆ ಪಡೆದವರು ರಕ್ಷಾ ಆರ್ ಪೂಜಾರಿ.

    ಉಡುಪಿ ಜಿಲ್ಲೆಯ ಕಾಪು ಇವರ ಜನ್ಮಸ್ಥಳ. ಬಾಲ್ಯದಲ್ಲಿಯೆ ಹಲವಾರು ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರಿಗೆ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸಬೇಕು ಎಂಬ ಆಶಯ ಮೂಡಿತು. ಇವರು ಕೆಲವೊಂದು ದಿನ ಆಸ್ಪತ್ರೆಯಲ್ಲಿ ಸ್ವಾಗತಕಾರರ ಆಗಿ ಕಾರ್ಯ ಮಾಡುತ್ತಿದ್ದಾಗ ಅಲ್ಲಿ ಬಿಡುವಾದಾಗ ಸಮಯ ವ್ಯರ್ಥ ಮಾಡದೇ ಹಲವಾರು ರೀತಿಯ ವಿಶಿಷ್ಟವಾದ ಕಲಾಕೃತಿಗಳನ್ನು ಪೆನ್ಸಿಲ್ ಸ್ಕೆಚ್ ನಲ್ಲಿ ಆರಂಭಿಸಿದರು. ಇವರು ರಚಿಸಿದ ಹಲವಾರು ಕಲಾಕೃತಿಗಳು ಎಲ್ಲರಿಗೂ ಮೆಚ್ಚುಗೆಯಾದವು. ಅಭಿನಂದನೆಗಳ ಮಹಾಪೂರ ಹರಿದು ಬಂತು. ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿ ಮೂಡಿತು.

    ಅಂದು ಆರಂಭವಾದ ಕಲಾ ಯಾತ್ರೆ ಮುಂದುವರೆಯಿತು. ಇದಕ್ಕೆ ಇವರ ತಂದೆ-ತಾಯಿಯ ಪ್ರೋತ್ಸಾಹ ಬಹಳ ಸಿಕ್ಕಿತು. ಇವರು ಮಧುಬನಿ ಶೈಲಿ, ಆಕ್ರಿಲಿಕ್. ಜಲವರ್ಣ ಮಾಧ್ಯಮ. ಪೋರ್ಟ್ರೇಟ್ ಹೀಗೆ ವಿಭಿನ್ನ ರೀತಿಯ ಕಲರ್ ಕೃತಿಗಳನ್ನು ರಚಿಸಿದ ಹಿರಿಮೆ ಇವರದು. ಇವರು ರಚಿಸಿದ ಮುಖ್ಯ ಕಲಾಕೃತಿಗಳು ಎಂದರೆ ಕೃಷ್ಣ ರಾಧೆ. ಯಕ್ಷಗಾನ, ಕೋಳಿಅಂಕ ಕಂಬಳ ಗಣಪತಿ ಮತ್ತು ಅಮೂರ್ತ ಶೈಲಿಯ ಕಲಾಕೃತಿಗಳು ಸೇರಿದಂತೆ ಒಟ್ಟು 800 ಕಲಾಕೃತಿಗಳನ್ನು ರಚಿಸಿದ್ದಾರೆ.

    ಪ್ರಸ್ತುತ ಇವರು ಮೂಡಬಿದ್ರೆಯ ಆಳ್ವಾಸ್ ನಲ್ಲಿ ಬಿ ವಿ ಎ ಅಧ್ಯಯನ ಮಾಡುತ್ತಿದ್ದಾರೆ. ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಲರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರಿಗೆ ರಾಜ್ಯಮಟ್ಟದ ಕಲಾ ಸ್ಪರ್ಧೆ ಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ಮಣಿಪಾಲ್ ಶಿರ್ವ ಮಲ್ಪೆ ಹಲವಾರು ಕಡೆ ಏಕವ್ಯಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ರಕ್ಷಾ ಪೂಜಾರಿ ಹೇಳುವ ಹಾಗೆ ಕಲೆಯು ಎಂಥವರನ್ನಾದರೂ ಕೂಡ ಬದಲಾಯಿಸುತ್ತದೆ ಇಂತಹ ಅದ್ಭುತ ಶಕ್ತಿ
    ಕಲೆಯಲ್ಲಿದೆ.

    ತನ್ನ ಬಿಡುವಿನ ಸಮಯದಲ್ಲಿ ಕಲಾಸಕ್ತರಿಗೆ ಕಲೆಯನ್ನು ಹೇಳು ಕೊಡುವುದರ ಮೂಲಕ ಸೇವೆಯನ್ನು ಸಲ್ಲಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳುತ್ತಾರೆ ಗುರುವಿಲ್ಲದೆ ಗರಿ ಮೂಡಿಸಿಕೊಂಡ ಕಲಾವಿದರಾದ ರಕ್ಷ ಶೆಟ್ಟಿ ಅವರನ್ನು ಅಭಿನಂದಿಸೋಣ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!