19.9 C
Karnataka
Sunday, September 22, 2024

    ಜಗವೆಲ್ಲಾ ಮಲಗಿರಲು ಯಾರಿಗೂ ತಿಳಿಯದಂತೆ ಅರಮನೆಯಿಂದ ಹೊರಟೇ ಬಿಟ್ಟ

    Must read

    ರತ್ನಾ ಶ್ರೀನಿವಾಸ

    ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಮಾಸದ ಹುಣ್ಣಿಮೆ. ಈಗಿನ ನೇಪಾಳದಲ್ಲಿರುವ  ಲುಂಬಿನಿ ಗ್ರಾಮದಲ್ಲಿ ಶುದ್ಧೋಧನ, ಮಾಯಾದೇವಿಯರ ಮಗನಾಗಿ ಜನಿಸಿದನು. ಈತ ಜನುಮತಹ ಕ್ಷತ್ರಿಯ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ ಗೌತಮಿಯ ಆರೈಕೆಯಲ್ಲಿ ಬೆಳೆಯುತ್ತಾನೆ. ಆದುದರಿಂದ ಸಿದ್ದಾರ್ಥ ಗೌತಮ  ಎಂದು ಕರೆಯಲ್ಪಡುತ್ತಾನೆ.

    ತಂದೆಗೆ ಮಗ ಚಕ್ರವರ್ತಿ ಆಗಬೇಕು ಎಂಬ ಮಹದಾಸೆ. ಹಾಗಾಗಿ ಮಗ ರಾಜಭೋಗವಿಲಾಸ ಗಳಲ್ಲಿ ಸದಾ ಓಲಾಡುತ್ತಿರುವಂತೆ ವ್ಯವಸ್ಥೆ ಮಾಡಿದರು.ಸಿದ್ಧಾರ್ಥನ  ವಿದ್ಯಾಭ್ಯಾಸದ  ನಂತರ, ಪ್ರಾಪ್ತ ವಯಸ್ಕರಾದಾಗ  ಸುಂದರಿ ರಾಜಕುಮಾರಿ ಯಶೋಧರೆಯೊಂದಿಗೆ ವಿವಾಹವಾಗುತ್ತದೆ. ರಾಹುಲನೆಂಬ ಮುದ್ದು ಮಗನೂ ಜನಿಸುತ್ತಾನೆ.

    ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದರೂ ಮನುಕುಲವನ್ನು ಸತತವಾಗಿ ಬಾಧಿಸುತ್ತಿರುವ ವೇದನೆ  ಸಿದ್ದಾರ್ಥನ ಮನವನ್ನು ಆವರಿಸಿ ಅದರ  ನಿವಾರಣೆಯ ಮಾರ್ಗ ಶೋಧಿಸಲು ಮನಸ್ಸು ಕಾತರಿಸುತ್ತಿತ್ತು. ಸಂಸಾರ ಬಂಧನದಲ್ಲಿದ್ದರೆ ಕಾರ್ಯಸಾಧನೆ ಅಸಾಧ್ಯ ಎಂದು ಮನಗೊಂಡು  ಆ ಸಂಕೋ ಲೆಯನ್ನು ಕಡಿದೊಗೆಯಲು ನಿರ್ಧರಿಸಿದ .

    ಹುಣ್ಣಿಮೆಯ ಮಧ್ಯರಾತ್ರಿ ಚೆಲುವೆ ಮಡದಿ, ಮುದ್ದುಮಗ, ತಂದೆ,ತಾಯಿ,ಪ್ರಜೆಗಳು ಎಲ್ಲರನ್ನೂ,ಎಲ್ಲವನ್ನೂ ಅಗಲಿ ಜಗವೆಲ್ಲಾ ಮಲಗಿರಲು ಯಾರಿಗೂ ತಿಳಿಯದಂತೆ ಅರಮನೆಯಿಂದ ಹೊರಟೇ ಬಿಟ್ಟ.

    ಜ್ಞಾನೋದಯದ ಮೊದಲ ಹಂತ ಅಜ್ಞಾನದ ನಿವಾರಣೆ.
    ಜ್ಞಾನಾರ್ಜನೆಯ ಉದ್ದೇಶದಿಂದ ಸಿದ್ದಾರ್ಥ ಊರೂರು ಅಲೆದಾಡಿ ಪಂಡಿತರೊಂದಿಗೆ ಒಡನಾಡಿ,ಅಧ್ಯಯನ,ತರ್ಕ-ವಿಮರ್ಶೆ,ವಿಚಾರ ವಿನಿಮಯಗಳ  ಮೂಲಕ ಅಗಾಧ ಜ್ಞಾನ ಸಂಪಾದಿಸಿದ.

    ಯಾವಾಗ ಜನನ,ಮರಣ, ರೋಗ  ರುಜಿನ,ವೃದ್ಧಾಪ್ಯ  ಇತ್ಯಾದಿ ಕೊನೆಯೆ ಇಲ್ಲದ ಪೀಡೆಗಳಿಗೆ ಒಳಪಟ್ಟಿರುವುದರ ಹಿಂದೆ ಪರದಾಡುವುದು ವ್ಯರ್ಥ ಎಂದು ಮನವರಿಕೆ ಆದಮೇಲೆ ಅವುಗಳಿಂದ ಮುಕ್ತಿ ಹೊಂದುವ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದ. ಶಾಂತಿ  ಶೋಧನೆಗಾಗಿ ಪರಮಾನಂದ ಪಡೆಯಲು ಲೋಕ ಸಂಚಾರಿ ಸನ್ಯಾಸಿಯಾಗಿ ಅಲೆದಾಡಿದ . ಸಿದ್ದಾರ್ಥ ಬಾಹ್ಯಪ್ರಪಂಚವನ್ನು ಪೂರ್ಣ ಮರೆತು ಅಂತರ್ಮುಖಿಯಾಗಿ,ಸುದೀರ್ಘ  ಚಿಂತನೆಯಲ್ಲಿ ತಲ್ಲೀನನಾದ. ಸರ್ವರೀತಿಯ ಬಯಕೆ,ಕಾಮನೆ, ಆಶೋತ್ತರಗಳನ್ನು ಮನಸ್ಸಿನ ಅಂತರಾಳದಿಂದ ದೂರಮಾಡಿ  ದೃಢಚಿತ್ತನಾದ. ಎಲ್ಲ ರೀತಿಯ ಭಯ, ಭ್ರಾಂತಿ, ಮಾಯೆ, ಗಳಿoದ ಮನಸ್ಸನ್ನು ಮುಕ್ತಗೊಳಿಸಿದ. ಕೇವಲ  ಮೈತ್ರಿ ,ಸೌಹಾರ್ದತೆ,  ಸಕಲ ಜೀವ ರಾಶಿಗಳಲ್ಲು ಕರುಣೆ,ದಯೆ, ಅನುಕಂಪ,ಉದಾತ್ತ ಧ್ಯೇಯಗಳು  ಆವರಿಸಿ ಬುದ್ಧಿ ಸುಜ್ಞಾನದ ಬೆಳಕಿನಲ್ಲಿ ಶೋಭಾಯಮಾನ ವಾಯಿತು. ಅಲೌಕಿಕ ಶಾಂತಿ, ಸಚಿತ್ ಆನಂದದ ಅನುಭವವಾಗಿ ಜ್ಞಾನದ ದಿವ್ಯಜ್ಯೊತಿಯಿಂದ ಮುಖಮಂಡಲ ತೇಜೋಮಯವಾಯಿತು. ರಾಜಕುಮಾರ ಸಿದ್ದಾರ್ಥ ಬುದ್ಧನಾಗಿ ಪರಿವರ್ತನೆಗೊಂಡನು.

    ತನ್ನ ಸ್ವ ಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ  ಪಡೆದು ಜಗತ್ತಿಗೆ  ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಅಷ್ಟಾಂಗ ಮಾರ್ಗವನ್ನು ತೋರಿಸಿಕೊಟ್ಟರು.ಜಗಜ್ಯೋತಿ ಬುದ್ಧನಾದ. ಜನರಲ್ಲಿ ಸಮಾನತೆ,ಸಮತಾಭಾವನೆಗಳನ್ನು ಪ್ರಚೋದಿಸಿ, ಎಲ್ಲಾ ವರ್ಗದ ಜನರನ್ನು ತನ್ನೆಡೆ  ಆಕರ್ಷಿಸಿ ಅವರಿಗೆ ನೀತಿ,ಬೋಧಙನೆಗಳನ್ನಿತ್ತು ಮನು ಕುಲವನ್ನು ಉದ್ಧರಿಸಿದ ಮಹಾಪುರುಷ ಬುದ್ಧ.

    ಬೌದ್ಧ  ಧರ್ಮದ ಸಂಸ್ಥಾಪಕ ಗೌತಮ ಬುದ್ಧನ  ಜನ್ಮ ದಿನವನ್ನು ಬುದ್ಧ ಪೂರ್ಣಿಮ, ಅಥವಾ  ಬುದ್ಧಜಯಂತಿ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಈ ದಿನ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಕುರಿತು ಎಲ್ಲೆಡೆ ಪ್ರವಚನ ನಡೆಯುತ್ತದೆ.ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಪೂರ್ಣಿಮ. ಜ್ಞಾನೋದಯ ಪಡೆದಿದ್ದೂ, ಆತನ ಕೊನೆಯ ನಿರ್ವಾಣವೂ ವೈಶಾಖ ಶುದ್ಧ ಪೂರ್ಣಿಮವೇ ಆಗಿದೆ.


    ಬುದ್ಧಂ  ಶರಣಂ ಗಚ್ಛಾಮಿ
    ದ ಮ್ಮo  ಶರಣಂ  ಗಚ್ಛಾಮಿ
    ಸಂ ಘಂ  ಶರಣಂ ಗಚ್ಛಾಮಿ

    ಚಿತ್ರಗಳು : ಕಲಾವಿದ ಕೃಷ್ಣ ನಾಯಕ್ ಅವರ ಶಿಲ್ಪ ಕಲೆ

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    11 COMMENTS

    1. 👌👌ಧನ್ಯವಾದಗಳು ಮನ ಮುಟ್ಟುವಂತಿದೆ 🙏

    2. ಓದಿದೆ. ಬುದ್ಧಪೂರ್ಣಿಮೆಗೆ ಪ್ರಸ್ತುತವಾದ ಬರಹ. ಅಭಿನಂದನೆಗಳು

    3. ಓದಿದೆ. ಬುದ್ಧಪೂರ್ಣಿಮೆಗೆ ಪ್ರಸ್ತುತವಾದ ಬರಹ. ಅಭಿನಂದನೆಗಳು

    4. ಪ್ರತಿಕ್ರಿಯಿಸಿ ಸಲಹೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಲ್ಲರಿಗೂ ಧನ್ಯವಾದಗಳು.🙏🙏👏👏

    LEAVE A REPLY

    Please enter your comment!
    Please enter your name here

    Latest article

    error: Content is protected !!