21.2 C
Karnataka
Sunday, September 22, 2024

    ಸೋಸಲೆ ವ್ಯಾಸರಾಜ ಮಠದಿಂದ ನೆರವಿನ ಹಸ್ತ

    Must read

    ಕೋವಿಡ್‍ನ ಈ ವಿಷಮ ಪರಿಸ್ಥಿತಿ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ಹರಡಿದೆ. ಲಾಕ್‍ಡೌನ್ ಜಾರಿಗೊಂಡ ನಂತರ ಟಿ ನರಸೀಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ದಲಿತರು, ಬಡವರು, ಅರ್ಚಕರು, ದೋಣಿ ಹಾಯಿಸುವವರು, ತರಕಾರಿ ಮಾರುವವರು ತೀವ್ರ ಸಂಕಷ್ಚಕ್ಕೆ ಒಳಗಾಗಿದ್ದಾರೆ. ಇವರುಗಳ ಕಷ್ಟಕ್ಕೆ ತಿರುಮಕೂಡಲಿನ ಸೋಸಲೆ ಶ್ರೀ ವ್ಯಾಸರಾಜ ಮಠದವತಿಯಿಂದ ಸುಮಾರು 1000 ಜನರಿಗೆ 10ಕೆಜಿ ಅಕ್ಕಿ, ಬೇಳೆ 2ಕೆಜಿ, ಗೋಧಿಹಿಟ್ಟು 1ಕೆಜಿ ರಾಗಿಹಿಟ್ಟು1ಕೆಜಿ, ಬೆಲ್ಲ 1ಕೆಜಿ, ಸಕ್ಕರೆ 1ಕೆಜಿ, ರವೆ 1ಕೆಜಿ, ಆಲೂಗೆಡ್ಡೆ 1ಕಜಿ, ಎಣ್ಣೆ 1ಲೀ, ಸಾಂಬಾರ್ ಪುಡಿ 250ಗ್ರಾಂ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಚೀಲಗಳನ್ನು ನೀಡುವುದರ ಮೂಲಕ ಸ್ಫಂದಿಸಿದೆ.

    ತಿರುಮಕೂಡಲು ವ್ಯಾಸರಾಜ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೋಸಲೆ ಶ್ರೀವ್ಯಾಸರಾಜ ಮಠದ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಪೌರಕಾರ್ಮಿಕರಿಗೆ ಆಹಾರಪದಾರ್ಥಗಳಿರುವ ಕಿಟ್‍ನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯ ಶ್ರೀಪಾದಂಗಳವರು ಕರೋನ ರೋಗ ದೇಶದಲ್ಲಿ ತೀವ್ರ ಹಾನಿಯನ್ನು ಉಂಟುಮಾಡಿದ್ದು, ನಗರದಲ್ಲಿದ್ದರೋಗ ಈಗ ಗ್ರಾಮ ಪ್ರದೇಶಗಳಿಗೆ ಹರಡುತ್ತಿದೆ. ಬಹಳ ಜನ ಕಷ್ಟಪಡುತ್ತಿದ್ದಾರೆ. ಲಾಕ್‍ಡೌನ್‍ನಂತಹ ಸಂದರ್ಭದಲ್ಲಿ ಪ್ರತಿ ನಿತ್ಯದ ಕಾರ್ಯವನ್ನು ಮಾಡಲಾಗದಿರುವುದರಿಂದ ನಮ್ಮ ಶ್ರೀಮಠದವತಿಯಿಂದ ಸಮಾಜಕ್ಕೆ ಅಲ್ಪ ಸೇವೆಯನ್ನು ಮಾಡುತ್ತಿದೆ. ಅನೇಕ ದಾನಿಗಳು ನಮಗೆ ನೆರವಾಗಿದ್ದಾರೆ. ನಾವು ಕೊಡುವ ಕೃಷ್ಣಪ್ರಸಾದ ಕೆಲವು ದಿನಗಳು ಮಾತ್ರ ಉಪಯೋಗವಾಗಬಹುದು, ನಾವು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಮೈಸೂರಿನ ಆಶಾ ಕಿರಣ ಆಸ್ಪತ್ರೆಯೊಂದಿಗೆ ಸೇರಿ ನರಸೀಪುರದ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ. ಡಿ.ಪಿ ಮಧುಸೂದನ ಚಾರ್, ಶಿರಸ್ತೆದಾರ್ ಪ್ರಭು, ಟಿ ನರಸೀಪುರದ ಇನ್‍ಸ್ಪೆಕ್ಟರ್ ಕೃಷ್ಣಪ್ಪ, ಶ್ರೀಮಠದ ಮುಖ್ಯಸ್ತರಾದ ಆಶಾಕಿರಣ ಗುರುರಾಜ್, ಮುರಳಿಧರ್, ರಾಯರ ಹುಂಡಿ ಆನಂದ, ಶ್ರೀಗಳವರ ಆಪ್ತ ಸಹಾಯಕರಾದ ಅಭಿಜಿತ್ ಎಸ್ ರಾವ್ ತಿರುಮಕೂಡಲು ಮಠದ ವ್ಯವಸ್ಥಾಪಕರಾದ ಜಿ.ಶ್ರೀಧರ್, ಕೆ.ಪಿ ಮಧುಸೂದನ, ಮೈಸೂರು ಮಠದ ವ್ಯವಸ್ಥಾಪಕರಾದ ವಾಸುರವರು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!