19.9 C
Karnataka
Sunday, September 22, 2024

    ಬೊಮ್ಮಾಯಿ ತಾವು ರಬ್ಬರ್ ಸ್ಟ್ಯಾಂಪ್ ಸಿಎಂ ಅಲ್ಲ ಎಂದು ಪದೇ ಪದೇ ಹೇಳೋದು ಯಾಕೆ?- ಸಿದ್ದರಾಮಯ್ಯ ಪ್ರಶ್ನೆ

    Must read

    HUBBALLI JULY 30

    ಕೊರೊನಾ, ಪ್ರವಾಹದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ, ಅವರ ಸಮಸ್ಯೆಗಳನ್ನು ಆಲಿಸಿ, ಕಷ್ಟಕಾಲದಲ್ಲಿ ಅವರ ಜೊತೆ ನಿಲ್ಲಬೇಕಿದ್ದ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ದೆಹಲಿಗೆ ಹೋಗಿ ಕೂತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ,ಕಾಟಾಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಗೆ ಭೇಟಿನೀಡಿದರು. ಬಾಗಲಕೋಟೆ, ಬೆಳಗಾವಿ, ಕೊಡುಗು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಬೊಮ್ಮಾಯಿ ಅವರು ಬರೀ ಉತ್ತರ ಕನ್ನಡಕ್ಕೆ ಹೋಗಿ ಪರಿಹಾರ ಕಾರ್ಯಕ್ಕೆ ಹಣ ಕೊಡ್ತೀನಿ ಅಂತ ಹೇಳಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ.
    ರಾಜ್ಯದಲ್ಲಿ ಸಚಿವ ಸಂಪುಟವೂ ಇಲ್ಲದಿರುವಾಗ ಜನರ ಕಷ್ಟಗಳನ್ನು ಕೇಳಿ, ಸ್ಪಂದಿಸುವ ಕೆಲಸ ಮಾಡಬೇಕಿದ್ದ ಶಾಸಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿಯ ಲಾಬಿಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.

    ಮುಖ್ಯಮಂತ್ರಿ ಬೊಮ್ಮಾಯಿಯವರು ತಾವು ರಬ್ಬರ್ ಸ್ಟ್ಯಾಂಪ್ ಸಿಎಂ ಅಲ್ಲ ಎಂದು ಪದೇ ಪದೇ ಹೇಳೋದು ಯಾಕೆ? ಅವರು ರಬ್ಬರ್ ಸ್ಟ್ಯಾಂಪ್ ಎಂದು ನಾವೇನಾದರೂ ಹೇಳಿದ್ವಾ? ಇದರರ್ಥ ಅವರು ರಬ್ಬರ್ ಸ್ಟ್ಯಾಂಪ್ ನಂತೆ ಅನ್ನೋದನ್ನು ಒಪ್ಪಿಕೊಂಡ ಹಾಗೆ ಅಲ್ವಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ರಾಜ್ಯದಲ್ಲಿ ಬದಲಾವಣೆಯಾಗಿರುವುದು ಮುಖ್ಯಮಂತ್ರಿಯೇ ಹೊರತು ಆಡಳಿತ ಪಕ್ಷವಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೊಮ್ಮಾಯಿ ಅವರು ಸಚಿವರಾಗಿದ್ದರು, ಅಂದರೆ ಭ್ರಷ್ಟ ಸರ್ಕಾರದಲ್ಲಿ ಇವರೂ ಕೆಲಸ ಮಾಡಿದ್ದರು. ಹೀಗಿರುವಾಗ ಈ ಸರ್ಕಾರದಲ್ಲಿ ಪಾರದರ್ಶಕತೆ ಬರಲು ಸಾಧ್ಯವೇ?

    ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ, ವೃದ್ಧಾಪ್ಯ ವೇತನ ಹೆಚ್ಚು ಮಾಡ್ತೀವಿ ಎಂದು ಬೊಮ್ಮಾಯಿಯವರು ಹೇಳಿದರು, ಇವುಗಳಿಗೆ ಅನುದಾನ ನೀಡಲು ಸರ್ಕಾರದ ಬಳಿ ದುಡ್ಡೆಲ್ಲಿದೆ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ನ್ಯಾಯಯುತ ತೆರಿಗೆ ಪಾಲು, ಅನುದಾನಗಳು ಬಂದಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಬೊಮ್ಮಾಯಿಯವರಿಗೆ ಇದನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗಲಿದೆ.

    ಸಿದ್ದರಾಮಯ್ಯನವರಿಗೆ ಸಂಯಮ ಕಡಿಮೆಯಾಗಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಉತ್ತರಿಸಿದ ಅವರು “ನನಗೆ ಯಡಿಯೂರಪ್ಪನವರಷ್ಟು ವಯಸ್ಸಾಗದೇ ಇದ್ದರೂ ಶಾಂತವಾಗಿ, ಸಹನೆಯಿಂದ, ಸಂಯಮದಿಂದ ಇದ್ದೀನಿ” ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!