23 C
Karnataka
Saturday, September 21, 2024

    ದೃಶ್ಯಕಲೆ ವಿಪುಲ ಅವಕಾಶಗಳ ಆಗರ

    Must read

    ಬಳಕೂರು ವಿ ಎಸ್ ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯವು ಕಲಾಲೋಕಕ್ಕೆ ನೀಡಿದ ಸೇವೆ ಅನನ್ಯವಾದದ್ದು. ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಕಲಾವಿದರನ್ನು ಕಲಾ ಜಗತ್ತಿಗೆ ನೀಡಿದ ಹೆಮ್ಮೆ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸೇರಬೇಕು. ದೃಶ್ಯ ಕಲೆಯ ಮೂಲಕ ಉತ್ತಮ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಸೇವೆ ಅನನ್ಯವಾದದ್ದು.

    ನಮ್ಮ ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಕಲೆ ಹಾಸು ಹೊಕ್ಕಾಗಿರುವುದರಿಂದ ಪುಸ್ತಕ ವಿನ್ಯಾಸ ವಸ್ತ್ರವಿನ್ಯಾಸ ತಂತ್ರಜ್ಞಾನದಲ್ಲಿ ಯಂತ್ರಗಳ ವಿನ್ಯಾಸ ದಲ್ಲಿ ಕಲಾವಿದ ಪ್ರಮುಖ ರೂವಾರಿಯಾಗಿದ್ದಾನೆ. ಕಲಾಕ್ಷೇತ್ರದ ದೃಶ್ಯಕಲೆಯಲ್ಲಿ ಬಹ ಳಷ್ಟು ಅವಕಾಶಗಳಿದ್ದು ನಮಗೆ ಅರಿವಿಲ್ಲದ ಹಲವು ವಿಷಯಗಳನ್ನು ತಿಳಿಯಬಹುದು.

    ಬೆಂಗಳೂರಿನ ಪ್ರತಿಷ್ಠಿತ ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದೃಶ್ಯಕಲೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಕುಮಾರಕೃಪ ರಸ್ತೆಯಲ್ಲಿದ್ದ ಚಿತ್ರಕಲಾ ಮಹಾವಿದ್ಯಾಲಯದ ಹೊಸ ಕ್ಯಾಂಪಸ್ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀನಿವಾಸಪುರದಲ್ಲಿ ಸುಂದರವಾದ ವಿಶಾಲವಾದ ಪ್ರಕೃತಿಯ ಮಡಿಲಲ್ಲಿ ತಲೆ ಎತ್ತಿದೆ. ಈಗ ಕಾಲೇಜು ಕಲಾವಿದರಿಗೆ ಸ್ಪೂರ್ತಿನೀಡುವ ಶಾಂತವಾದ ಪರಿಸರದ ನಡುವೆ ನಿರ್ಮಾಣವಾಗಿದೆ.

    ಚಿತ್ರಕಲೆಯಲ್ಲಿ ಅಧ್ಯಯನ ಮಾಡಬೇಕೆಂದರೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಆಗಿರಬೇಕು. ಇಲ್ಲಿ ಶಿಲ್ಪಕಲೆ ,ಅನ್ವಯ ಕಲೆ ,ಗ್ರಾಫಿಕ್ ಚಿತ್ರ ಕಲೆ, ಕಲಾ ಇತಿಹಾಸ ,ಸೆರಾಮಿಕ್ ಆರ್ಟ್ ಮತ್ತು ಅನಿಮೇಷನ್ ವಿಭಾಗದಲ್ಲಿ ಅಧ್ಯಯನ ಮಾಡುವ ಅವಕಾಶ ಸಿಗಲಿದೆ.

    ಬಿವಿಎ ದೃಶ್ಯಕಲೆಯಲ್ಲಿ ಪದವಿ ನಾಲ್ಕು ವರ್ಷಗಳು ಮತ್ತು ಎಂವಿಎ ಎರಡು ವರ್ಷದ ಅವಧಿ ಓದುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಈ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗದಲ್ಲಿ ವಿಪುಲ ಅವಕಾಶಗಳು ಸಿಗುವುದರಲ್ಲಿ ಸಂದೇಹವಿಲ್ಲ. ದೃಶ್ಯಕಲೆಯಲ್ಲಿ ಅಧ್ಯಯನ ಮಾಡಿದವರಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಬಹುದು. ಬೇರೆಬೇರೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗುತ್ತದೆ. ಫ್ರೀಲ್ಯಾನ್ಸ್ ಕಲಾವಿದರಾಗಿಯೂ ಕೂಡ ಕಾರ್ಯನಿರ್ವಹಿಸಬಹುದು. ಕಲಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಬಹುದು. ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.

    ಸಾಮಾನ್ಯವಾಗಿ ಜನಸಾಮಾನ್ಯರಿಗೆ ದೃಶ್ಯಕಲೆಯಲ್ಲಿ ಅಧ್ಯಯನ ಮಾಡಿದರೆ ಭವಿಷ್ಯವಿಲ್ಲ ಎಂಬ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸುಗಳಿಗೆ ಸೇರಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಇರಬಹುದು. ಆದರೆ ದೃಶ್ಯಕಲೆಯಲ್ಲಿ ಮಾಡುವುದರಿಂದ ನಾವು ಎಂದೂ ಕಂಡರಿಯದ ಉತ್ತಮವಾದ ಕೆಲಸವನ್ನು ಕಂಡು ಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಇಲ್ಲಿನ ಹಳೆಯ ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.

    ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮತ್ತು ಆರು ತಿಂಗಳ ಕಾಲ ಕೋರ್ಸನ್ನು ಸಂಜೆ ಮತ್ತು ವಾರಾಂತ್ಯದಲ್ಲಿ ನಡೆಸಲಾಗುತ್ತದೆ ಈ ಕಲಾ ಕೋರ್ಸುಗಳಿಗೆ ಸಾಮಾನ್ಯವಾಗಿ ಎಂಜಿನಿಯರ್ಗರ್ ಗಳು, ಗೃಹಿಣಿಯರು ಬಂದು ಕಲಾ ತರಬೇತಿ ಪಡೆಯುತ್ತಿರುವುದು ಬಹಳ ವಿಶೇಷ. ಇದರಿಂದ ಇವರಿಗೆ ಒಳ್ಳೆಯ ಕೆಲಸವು ಕೂಡ ಸಿಕ್ಕಿದೆ. ಸರ್ಟಿಫಿಕೇಟ್ ಕೋರ್ಸ್ ಮಾಡಿದೆ ಕಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಕೂಡ ನೀಡಿ ಗೌರವಿಸಲಾಗುತ್ತದೆ.

    ಬೆಂಗಳೂರು ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರ ದಲ್ಲಿ ವಿಶಾಲವಾದ ಜಾಗದಲ್ಲಿ ಚಿತ್ರಕಲಾ ಮಹಾವಿದ್ಯಾಲಯವು ನಿರ್ಮಾಣವಾಗಿರುವುದು ಕಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ತಾಣವಾಗಿ ದೆ. ಇಲ್ಲಿ ಹೊಸದಾಗಿ ಪಿಎಚ್. ಡಿ ಸಂಶೋಧನಾ ಕೇಂದ್ರವು ಆರಂಭವಾಗಿದ್ದು ಹಲವಾರು ಕಲಾ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಶಿಕ್ಷಕರು ಕಲಾ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಲ್ಲಿ ವಿಶಿಷ್ಟ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಪ್ರಮುಖ ಕಲಾ ಸಂಸ್ಥೆಗೆ ಬಂದು ಅಧ್ಯಯನ ಮಾಡಿದರೆ ನಿಮ್ಮ ಜೀವನದಲ್ಲಿ ಉತ್ತಮ ಕಲಾವಿದರಾಗಿ ಹೊರಹೊಮ್ಮಬಹುದು.


    ವಿಳಾಸ :ಚಿತ್ರಕಲಾ ಮಹಾವಿದ್ಯಾಲಯ, ಶ್ರೀನಿವಾಸ ಪುರ ,ಉತ್ತರ ಹಳ್ಳಿ ಮುಖ್ಯ ರಸ್ತೆ, ಬೆಂಗಳೂರು.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!