19.9 C
Karnataka
Sunday, September 22, 2024

    MYSURU DASARA ಟೂರಿಸಂ ಪ್ಯಾಕೇಜ್ ಸಲಹೆ ಕೊಟ್ಟ ಕೃಷ್ಣ

    Must read

    MYSURU OCT 7

    ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂಗೋಸ್ಕರ ಸಿದ್ಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ-S M KRISHNA _ ಅವರು ರಾಜ್ಯ ಸರಕಾರಕ್ಕೆ ಮಾಡಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನ _MYSURU- ಚಾಮುಂಡಿ ಬೆಟ್ಟದಲ್ಲಿ ನೆಲೆ ನಿಂತಿರುವ  ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಗೈದು, ದೀಪಬೆಳಗಿಸುವ ಮೂಲಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾಕ್ಕೆ ಎಸ್.ಎಂ.ಕೃಷ್ಣ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಿ, ಅವರು ಮಾತನಾಡಿದರು.

    ಮುಂದಿನ ವರ್ಷಕ್ಕೆ ಒಂದು ಪ್ಯಾಕೇಜ್ ಟೂರ್ಸ್ ಮಾಡುವ ಮೂಲಕ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಸಿದ್ಧಗೊಳಿಸಿ ನಿರ್ಮಿಸಿದರೆ ಬಹುಶಃ ದಸರಾದಿಂದ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯವಿದೆ ಎಂದವರು ಹೇಳಿದರು.

    ಕರ್ನಾಟಕ ರಾಜ್ಯಕ್ಕೆ ಸಹಸ್ರಾರು ಮಂದಿ ಬರುತ್ತಾರೆ. ವಿಜಯಪುರ, ಐಹೊಳೆ ಪಟ್ಟದಕಲ್ಲು ಹಂಪಿ ಇವುಗಳನ್ನು ನೋಡಿ ಹೋಗಲು ಅವಕಾಶ ಮಾಡಿದಲ್ಲಿ ಪ್ರವಾಸೋದ್ಯಕ್ಕೆ ಸಂಪನ್ಮೂಲ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ ಸಿಂಗಾಪುರ ಮೈಸೂರಿಗಿಂತ ಸಣ್ಣದು ಮೂಲಭೂತವಾದ ಬಂಡವಾಳದಿಂದಲೇ ಲಕ್ಷಾಂತರ ಜನ ನೋಡಲು ಬರುತ್ತಾರೆ. ಸ್ವಚ್ಛವಾಗಿ ಆ ಪಟ್ಟಣವನ್ನು ರಕ್ಷಣೆ ಮಾಡಿದ್ದಾರೆ ಎಂದರು.

    ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮನುಕುಲಕ್ಕೆ ಬಂದಿರತಕ್ಕಂತಹ ಬಹಳ ದೊಡ್ಡ ಗಂಡಾಂತರ ಈ ಕೊರೊನಾ ಪಿಡುಗಿನಿಂದ ಮನುಕುಲವನ್ನು ರಕ್ಷಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

    ಮೈಸೂರು ನೆನಪು

    ನನ್ನ ತಂದೆ ಹತ್ತು ಹನ್ನೆರಡು ವರ್ಷಗಳ ಪ್ರಾಯದಲ್ಲಿ ಮೈಸೂರಿಗೆ ಓದಲು ಕಳಿಸಿದರು. ಒಂಟಿಕೊಪ್ಪಲ್ ಮಿಡ್ಲ್ ಸ್ಕೂಲ್ ನಲ್ಲಿ ಕಲಿತೆ, ಆ ನಂತರ ಮಹಾರಾಜ ಹೈಸ್ಕೂಲ್ʼನಲ್ಲಿ ಮೂರು ವರ್ಷ ಕಳೆದೆ. ಆ ನಂತರ ಯುವರಾಜ ಕಾಲೇಜು, ಆ ನಂತರ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ನಡೆಯಿತು.  ನನ್ನ ವ್ಯಕ್ತಿತ್ವ ವಿಕಸನ ಮೈಸೂರಿಗೆ ಹೊಂದಿಕೊಂಡಂತೆ ನಡೆದಿದೆ. ಪ್ರತಿದಿನ ಚಾಮುಂಡಿಬೆಟ್ಟ ನೋಡುವುದು, ಕೈಮುಗಿದು ಹೋಗುವುದು, ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ದಸರಾ ಮಹಾ ಸಡಗರದಿಂದ ನಡೆಯುತ್ತದ್ದ ಕಾಲ, ಆಗ ಈ ರೀತಿಯ ಪಿಡುಗಿರಲಿಲ್ಲ.  ವಿಜಯದಶಮಿಯ ದಿನ ರಾಜ್ಯದ, ದೇಶದ ವಿದೇಶಗಳಿಂದ ಸಹಸ್ರಾರು ಮಂದಿ ಮೈಸೂರಿಗೆ ಬಂದು ಈ ದಸರಾ ಹಬ್ಬದ ಸೊಗಡನ್ನು ಅನುಭವಿಸಿದ್ದಾರೆ ಎಂದು ಎಸ್. ಎಂ. ಕೃಷ್ಣ ತಿಳಿಸಿದರು.

    ಪ್ರಜಾಪ್ರತಿನಿಧಿ ಸಭೆ ಜಗನ್ ಮೋಹನ ಅರಮನೆಯಲ್ಲಿ  ನಡೆಯುತ್ತಿತ್ತು. ಮರಿಮಲ್ಲಪ್ಪದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದರು. ಪ್ರಾತಃ ಸ್ಮರಣಿಯ ಪಿಟೀಲು ಚೌಡಯ್ಯ ಸೇರಿದಂತೆ ಹಲವರು ಪ್ರತಿರಾತ್ರಿ ಸಂಗೀತ ಕಛೇರಿ ಏರ್ಪಾಡು  ಮಾಡುತ್ತಿದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಪಟ್ಟಣವಾಗಿತ್ತು. ಸಾಹುಕಾರ್ ಚನ್ನಯ್ಯನಂತವರು ಕುಸ್ತಿಗೆ ವಿಶೇಷ ಸೌಲತ್ತು ಒದಗಿಸುತ್ತಿದ್ದರು. ದಸರಾದಷ್ಟೇ  ಖ್ಯಾತವಾಗಿದ್ದ ವಸ್ತುಪ್ರದರ್ಶನ ನೋಡಲು ಸಹಸ್ರಾರು ಮಂದಿ ಬರುತ್ತಿದ್ದರು. ಅದನ್ನು ಅನುಭವಿಸುತ್ತಿದ್ದರು. ಇಂತಹ ಅತ್ಯಂತ ರೋಚಕವಾದಂತಹ ಮತ್ತು ನಮ್ಮನ್ನು ಪುಳಕಿತಗೊಳಿಸತಕ್ಕಂತಹ ಹಲವಾರು ಘಟನೆಗಳು ನಡೆಯುತ್ತಿತ್ತು ಎಂದು ಎಸ್. ಎಂ.ಕೃಷ್ಣ ಅವರು ಗತ ವೈಭವದ ಮೆಲುಕು ಹಾಕಿದರು.

    ಯದುಕುಲದ ಅರಸರು ದಸರಾವನ್ನು ನಾಡಹಬ್ಬವನ್ನಾಗಿ ಪರಿವರ್ತಿಸಲು ಶ್ರಮಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಆ ನಂತರ ಬಂದಂತಹ ಅನುವಂಶಿಕರು ದಸರಾ ಉತ್ಸವಕ್ಕೆ ಸಾಕಷ್ಟು ಮೆರಗನ್ನು ತಂದುಕೊಟ್ಟಿದ್ದಾರೆಂದು ಸ್ಮರಿಸಿದರು.

    ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ದಸರಾ ಮಹೋತ್ಸವಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಟ್ಟವರು. ರಾಮಕೃಷ್ಣಾಶ್ರಮದಿಂದ ಪ್ರತಿ ತಿಂಗಳು ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆವು ಅಲ್ಲಿ ತಾಯಿಗೆ ನಮಸ್ಕಾರ ಸಲ್ಲಿಸುತ್ತಿದ್ದೆವು. ಇವೆಲ್ಲವನ್ನು ಸ್ಮರಿಸಿದಾಗ ಓ ದೇವರೇ! ಮತ್ತೆ ಆ ಗಳಿಗೆ ಬಂದೀತೆ ಎಂಬ ಉದ್ಘಾರ ಹೊರಡುತ್ತೆ ಎಂದು ಎಸ್. ಎಂ. ಕೃಷ್ಣ ಉದ್ಘರಿಸಿದರು.

    800 ವರ್ಷಗಳ ಇತಿಹಾಸ

    ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ಶಕ್ತಿ ಪ್ರದರ್ಶನಕ್ಕೆ ದಿಗ್ವಿಜಯಕ್ಕೆ ಹೋಗಲು ಉಪಯೋಗಿಸಿಕೊಳ್ಳುತ್ತಿದ್ದರು. ವಿಜಯನಗರ ಅರಸ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಮಹಾನವಿಮ ದಿಬ್ಬ ನಿರ್ಮಿಸಲಾಗಿತ್ತು. ಕ್ರೀಡೆ, ಸಾಹಸಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿತ್ತು. ವಿಜಯ ನಗರ ಸಾಮ್ರಾಜ್ಯದ ದಸರಾ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದವರು ಮೈಸೂರು ಒಡೆಯರ ಸಂತತಿಯವರು. 1610 ಮೈಸೂರು ಒಡೆಯರ್  ಶ್ರೀರಂಗಪಟ್ಟಣದಲ್ಲಿ ದಸರಾ ಪ್ರಾರಂಭಿಸಿದರು. ಅಂಬಾರಿ ಕೂಡ ವಿಜಯ ನಗರದವರಿಂದಲೇ ಪಡೆದಿದ್ದರು. ಮಹಾರಾಷ್ಟ್ರದ ದೇವಿಗಿರಿಯಿಂದ ವಿಜಯನಗರದವರೆಗೂ ಬಂದಿತ್ತು. ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. 750 ಕೆಜಿ ತೂಕವಿರುವ ಸ್ವರ್ಣ ಅಂಬಾರಿಯಲ್ಲೇ ವಿಜಯ ದಸರಾ ಮೆರವಣಿಗೆ ಹೋಗುತ್ತಿದೆ ಎಂದು ಸ್ಮರಿಸಿದರು.

    ಕೆಆರ್ ಎಸ್ ಆಣೆಕಟ್ಟಿನಿಂದ ಮಂಡ್ಯ ಅಭಿವೃದ್ಧಿ ಜಿಲ್ಲೆಯಾಗಿದೆ.  ಅಣೆಕಟ್ಟು ಕಟ್ಟಲು ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಿದರು. ಹಿಂದಿನದನ್ನು ನೆನೆಯದೇ ಮುಂದೆ ನಡೆಯಲು ಸಾಧ್ಯವಿಲ್ಲ, ಹಿಂದಿನದನ್ನು ನೆನೆದಾಗ ಮುಂದಿನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ದಸರಾ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.

    ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಿದೆ. ಚೀನಾ, ಭಾರತದ ಜೊತೆ ಅಭಿವೃದ್ಧಿಯಲ್ಲಿ ಪೈಪೋಟಿ ನಡೆಯುತ್ತಿದೆ. ಮತ್ಸರ ಇಲ್ಲದಿದ್ದಲ್ಲಿ ಸ್ವಾಗತಿಸುವ ಬೆಳವಣಿಗೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು,  ಬಹಳ ದೊಡ್ಡ ದೊಡ್ಡ ಕನಸುಗಳನ್ನ ಪ್ರಧಾನ ಮಂತ್ರಿ ಕಂಡಿದ್ದು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಅವರ ಕನಸು ನನಸಾಗಲಿ. ತಾಯಿ ಚಾಮುಂಡೇಶ್ವರಿ ಆ ಶಕ್ತಿಯನ್ನು ಅವರಿಗೆ ನೀಡಲಿ.  ಸ್ಮೃತಿಪಟದಲ್ಲಿ ಇಷ್ಟು ಕಟ್ಟಪಟ್ಟು ದೇಶದ ಬಗ್ಗೆ ಇಷ್ಟು ಚಿಂತನೆಗಳನ್ನು ಕೈಗೊಂಡು ರೂಪಿಸಲು ಶ್ರಮಿಸಿದವರನ್ನು ನೋಡಿಲ್ಲ, ಅವರಿಗೆ ನಮ್ಮ ಬೆಂಬಲವಿದೆ. ಯುವ ಜನಾಂಗ ದೇಶದ ಆಸ್ತಿ, ಒಂದು ನಿರ್ದಿಷ್ಟವಾದ

    ಕೃತಿದತ್ತವಾಗಿರುವ ಅವಕಾಶವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ದಸರಾ ಸುಲಲಿತವಾಗಿ ನಡೆಯಲಿ. ಈ ಸುಂದರ ದಸರಾವನ್ನು ಉಲ್ಲಾಸ ಶ್ರದ್ಧೆ ಭಕ್ತಿಯಿಂದ ಆಚರಿಸೋಣ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಾಜಿ ಸಿಎಂ ಎಸ್.ಎಂ ಕೃಷ್ಣ, ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ಪತ್ನಿ ಚನ್ನಮ್ಮ  ಅವರಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ. ಟಿ. ದೇವೇಗೌಡ ವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!