23 C
Karnataka
Saturday, September 21, 2024

    ನವೆಂಬರ್ ೧ ರ ಮಹತ್ವ; ಹಂಚಿಹೋಗಿದ್ದ ಕರುನಾಡು ಒಂದು ಗೂಡಿದ ದಿನ

    Must read

    ತ್ನಾ ಶ್ರೀನಿವಾಸ್

    ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವ ವನ್ನು ಪ್ರತಿವರ್ಷ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಈ ದಿನವನ್ನು ಭೌಗೋಳಿಕ ವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರಿಗೆ ಭಾಷೆಯ ಆಧಾರದ ಮೇಲೆ ತಮ್ಮ ಅಸ್ಮಿತೆಯನ್ನು ಪ್ರತಿಪಾದಿಸಿದ ದಿನವನ್ನಾಗಿ ಕನ್ನಡಿಗರು ಆಚರಿಸುತ್ತಾರೆ.

    ಕನ್ನಡದ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ದಿನವಾಗಿ ಆಚರಿಸುವ ಈ ದಿನಕ್ಕೆ ತನ್ನದೇ ಆದಂತಹ ಮಹತ್ವವಿದೆ. ಐತಿಹಾಸಿಕ ಹಿನ್ನೆಲೆ ಮೂಲಕ ಈ ದಿನವನ್ನು ನೋಡಿದಾಗ ಇದರ ಮಹತ್ವ ತಿಳಿಯುತ್ತದೆ.

    ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯುವ ಹೋರಾಟವೊಂದೆಡೆ ಆದರೆ ಇನ್ನೊಂದೆಡೆ ಪ್ರದೇಶಾವಾರು ಹಂಚಿ ಹೋಗಿದ್ದ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಭೌಗೋಳಿಕ ನೆಲೆಯನ್ನು ಕಂಡುಕೊಳ್ಳುವದಾಗಿತ್ತು. ಆಗ ಕನ್ನಡದ ಪ್ರದೇಶಗಳು ಮೈಸೂರು, ಮದ್ರಾಸ್, ಮುಂಬಯಿ ಪ್ರಾಂತ್ಯ ಗಳಲ್ಲಿ ಹಚಿಹೋಗಿದ್ದವು.
    ಸ್ವಾತಂತ್ರ ಹೋರಾಟದ ಮೂಲಕ ಭಾರತೀಯರ ಏಕತೆಯ ಮಹತ್ವ ವನ್ನು ಅರಿತಿದ್ದ ಆಲೂರು ವೆಂಕಟ ರಾವ್, ಹುಯಿಲಗೋಲ ನಾರಾಯಣರಾವ್,ಸಿದ್ದಪ್ಪ ಕಂಬಳಿಯಂತಹ ಕನ್ನಡ ಪರ ಹೋರಾಟಗಾರರು ಕನ್ನಡದ ಸಾರ್ವಭೌಮತೆಯ ವಿಚಾರವಾಗಿ ಧ್ವನಿ ಎತ್ತಿದರು.

    ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟ ರಾಯರು ಕರ್ನಾಟಕ ಏಕೀಕರಣ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ಭಾರತವು ಗಣರಾಜ್ಯ ವಾದ ನಂತರ ಭಾರತದ ವಿವಿಧ ಪ್ರಾಂತ್ಯ ಗಳು ಭಾಷೆಗಳ ಆಧಾರದ ಮೇಲೆ ರಾಜ್ಯ ಗಳಾಗಿ ರೂಪುಗೊಂಡ ವು. ಈ ಹಿಂದೆ ರಾಜರ ಆಳ್ವಿಕೆಯ ಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು.

    ೧೯೫೬ ರ ನವೆಂಬರ್ ೧ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು.ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೂಂಡ ರಾಜ್ಯದ ಆರಂಭದಲ್ಲಿ ಹೊಸಘಟಕದ ಕೋರ್ಟ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲಿ ಎಂದು “ಮೈಸೂರು ” ಹೆಸರನ್ನು ಉಳಿಸಿಕೊಂಡರು. ಮುಂದೆ ನವೆಂಬರ್ ೧ , ೧೯೭೩ ರಂದು “ಕರ್ನಾಟಕ ” ಎಂದು ಬದಲಾಯಿತು.ಈ ಸಮಯದಲ್ಲಿ ದೇವರಾಜ ಅರಸ್ ಅವರು ಮುಖ್ಯ ಮಂತ್ರಿಗಳಾಗಿದ್ದರು.
    ಕರ್ನಾಟಕ ಏಕೀಕರಣ ದ ಮನ್ನಣೆ ಎ.ಎನ್.ಕೃಷ್ಣ ರಾವ್, ಬಿ.ಎಂ.ಶ್ರೀ., ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಅ.ನ.ಕೃಷ್ಣರಾಯರು, ಶಿವರಾಮ ಕಾರಂತರಿಗೆ ಸಲ್ಲುತ್ತದೆ.

    ಕನ್ನಡ ಬಾವುಟ

    ಕನ್ನಡಕ್ಕೊಂದು ಬಾವುಟದ ಅವಶ್ಯಕತೆಯನ್ನು ಅರಿತ ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿಗಳುಹಳದಿ ಮತ್ತು ಕೆಂಪು ಬಣ್ಣವನ್ನು ಬಳಸಿ ಬಾವುಟವನ್ನು ಸಿದ್ಧ ಪಡಿಸಿದರು.ಈ ಧ್ವಜವನ್ನುಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ.ಮೇಲಿನ ಭಾಗ ಹಳದಿ, ಕೆಳಗಿನ ಭಾಗ ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣಶಾಂತಿಯನ್ನು ಕೆಂಪು ಬಣ್ಣ ಧೈರ್ಯ ವನ್ನು ಪ್ರತಿನಿಧಿಸುತ್ತದೆ. ಈ ಬಣ್ಣ ಕನ್ನಡ ನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತಿಕವೂ ಆಗಿದೆ. ಕೆಂಪು ಬಣ್ಣ ಅಭಿವೃದ್ಧಿ ಯ ಸಂಕೇತವಾದರೆ ಅರಿಶಿಣಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.

    ಈ ಧ್ವಜವನ್ನು ನವಂಬರ್ ೧ನೇ ತಾರೀಕಿನಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಸಾರ್ವಜನಿಕ ಸಂಸ್ಥೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ ಕರ್ನಾಟಕ ನಾಡಗೀತೆಯಾದ”ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಗೀತೆ(ಹಾಡು) ಯನ್ನು ಹಾಡಲಾಗುತ್ತದೆ.

    ರಾಜ್ಯೋತ್ಸವ ಆಚರಣೆಯಲ್ಲಿ ನಮ್ಮೆಲ್ಲರ ಪಾ ತ್ರ ಹೆಚ್ಚು ಮಹತ್ವದ್ದಾಗಿದೆ. ನಾಡು, ನುಡಿ, ಸಂಸ್ಕೃತಿ, ಸಂಪತ್ತನ್ನು ಕಾಪಾಡಿ ಅದನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಎಲ್ಲಾ ಕನ್ನಡಿಗರ ಜವಾಬ್ದಾರಿ ಯಾಗಿದೆ.

    ಜೈ ಕರ್ನಾಟಕ ಮಾತೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!