26.8 C
Karnataka
Saturday, September 21, 2024

    Makara Sankranti :ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಿಹಿ ಮಾತಿನ ಹಬ್ಬ

    Must read

    ರತ್ನಾ ಶ್ರೀನಿವಾಸ್

    ಜಗಚ್ಚಕ್ಷುವಾಗಿರುವ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲವೇ ಸಂಕ್ರಮಣ ಅಥವ ಸಂಕ್ರಾಂತಿ.

    ಸೂರ್ಯ ದೇವನು ವಿಶ್ವದ ಆತ್ಮ. ಜಗತ್ತಿನ ಕಣ್ಣು. ಮಳೆ ಬೀಳಲು, ಬೆಳೆ ಬೆಳಗಲು, ಎಳೆ ಬೆಳಗು ಸೂರ್ಯನು ಕಾರಣ.ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ, ಬುದ್ಧಿ, ಸಮೃದ್ದಿಗಳನ್ನು ನೀಡುತ್ತದೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯನ ಆರಾಧನೆಯೇ.

    ಪುಷ್ಯ ಮಾಸದಲ್ಲಿ ಬರುವ (ಜನವರಿ 14 ಅಥವಾ 15ರಂದು) ಮಕರ ಸಂಕ್ರಾಂತಿ ಯನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ.
    ಸಂಕ್ರಾಂತಿಯಲ್ಲಿ ಎಳ್ಳು ಬೀರುವ ಸಂಪ್ರದಾಯವಿದೆ. ಇದಕ್ಕೆ ಪುರಾಣ ಕಾಲದ ಕಥೆಯೊಂದಿದೆ.

    ಶಿಲಾಸುರನೆಂಬ ರಕ್ಕಸ ಬ್ರಹ್ಮ ದೇವರಿಂದ ವರ ಪಡೆದುಕೊಂಡು ಅಹಂಕಾರದಿಂದ ಮೆರೆಯುತ್ತಾ ಲೋಕಪೀಡಕನಾಗಿರುತ್ತಾನೆ. ಆಗ ಸೂರ್ಯ ದೇವನು ಮಕರ ಮತ್ತು ಕರ್ಕ ರ ಸಹಾಯ ಪಡೆದುಕೊಂಡು ಶಿಲಾಸುರನನ್ನು ಸಂಹರಿಸುತ್ತಾನೆ. ಮಕರ ಶಿಲಾಸುರನನ್ನು ಹೊಟ್ಟೆ ಬಗಿದಾಗ ಭೂಮಿಗೆ ಎಳ್ಳು ಪ್ರವೇಶವಾಗುತ್ತದೆ. ಈತನ ಸಾಹಸಕ್ಕೆ ಮೆಚ್ಚಿದ ಸೂರ್ಯ ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳ್ಳೆಯದಾಗಲಿ ಎಂದು ಹರಸಿದರಂತೆ. ಈ ಕಾರಣದಿಂದಲೇ ಎಳ್ಳು ಬೀರುವ ಆಚರಣೆ ಬಂದಿರುವುದಾಗಿಯೂ, ಮಕರ ಸಂಕ್ರಮಣ ಎಂಬ ಹೆಸರುಜನರಲ್ಲಿ ಉಳಿದಿರುವುದಾಗಿ ಈ ಕಥೆಯಿಂದ ತಿಳಿದುಬರುತ್ತದೆ.

    ಕರ್ನಾಟಕದಲ್ಲಿಎಳ್ಳು, ಸಕ್ಕರೆ ಅಚ್ಚು, ಬೆಲ್ಲ, ಕಬ್ಬು, ಬಾಳೆಹಣ್ಣನ್ನು ಬಂಧು ಮಿತ್ರರಿಗೆ ಹಂಚುವ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ.
    ದನ ಕರುಗಳಿಗೆ ಮೈತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ದಾಟಿಸುವುದರ ಉಂಟು.ಸಂಕ್ರಮಣ ಕರ್ನಾಟಕದ ಆಹಾರ ವೈವಿಧ್ಯ ಗಳನ್ನು ಅನಾವರಣಗೊಳಿಸುತ್ತದೆ. ಆ ವರ್ಷದಲ್ಲಿ ಬೆಳೆದ ಬೆಳೆಗಳನ್ನು ಬಳಸಿ ವಿಭಿನ್ನ ಅಡುಗೆಯನ್ನು ತಯಾರಿಸುತ್ತಾರೆ.

    ಒಟ್ಟಾರೆ ಸಂಕ್ರಾಂತಿ ಬದಲಾವಣೆ ಯನ್ನು ಅಳವಡಿಸಿ ಕೊಳ್ಳಲು ಹೇಳಿ ಮಾಡಿಸಿದ ಹಬ್ಬ. ಏಕೆಂದರೆ ಇದು ಕಾಲದ ಚಲನೆಯನ್ನು ತನ್ಮೂಲಕ ಬದಲಾವಣೆಯನ್ನೇ ಆಶಯವಾಗಿರಿಸಿ ಕೊಂಡಿದೆ.ಇದರ ವಿಶೇಷವೆಂದರೆ ಸಿಹಿಯಾದ ಮಾತು.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಿಹಿ ಮಾತಿನ ಹಬ್ಬ.

    ಈ ಸಂಕ್ರಮಣ ಎಲ್ಲರಲ್ಲಿಯೂ ಸಿಹಿ ಮಾತಿಗೆ, ಮಧುರಭಾವನೆಗೆ ಮೂಲವಾಗಲಿ. ಎಲ್ಲೆಡೆಯು ಆರೋಗ್ಯ, ಸಮೃದ್ದಿ, ಸಂತಸವಿರಲಿ.
    ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

    This image has an empty alt attribute; its file name is ratna-srinivas-edited.jpg

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!