19.9 C
Karnataka
Sunday, September 22, 2024

    Health Camp: ಮಂಗಳೂರು ವಿವಿ ಆಶ್ರಯದಲ್ಲಿ ಆರೋಗ್ಯ ಶಿಬಿರ

    Must read

    MANGALURU FEB 1

    ಆರೋಗ್ಯವೇ ಭಾಗ್ಯ.  ಅರೋಗ್ಯ ಹದಗೆಟ್ಟಾಗ ಮಾತ್ರ ಅದರ ಮಹತ್ವ ನಮಗೆ ಅರಿವಾಗುತ್ತದೆ.  ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಆದರೆ, ಮಿತಿಮೀರಿದ  ಪರಿಸರ ಮಾಲಿನ್ಯ, ಆಧುನಿಕ ಜೀವನ ಶೈಲಿ, ಕಲಬೆರಕೆ ಆಹಾರ,  ಹಲವಾರು  ಕಾರಣಗಳಿಂದ ಇಂದು  ಅರೋಗ್ಯ ಸಮಸ್ಯೆಗಳಿಗೆ ಒಳಗಾಗುವವರ ಸಂಖ್ಯೆ ಏರುತ್ತಿದೆ. ಅನೇಕ ಕಾಯಿಲೆಗಳ ರೋಗಲಕ್ಷಣಗಳು  ಆರಂಭದಲ್ಲಿ  ನಮ್ಮ ಗಮನಕ್ಕೆ ಬಾರದೇ ಒಂದೇ ಸಮಯದಲ್ಲಿ   ಉಲ್ಬಣಗೊಳ್ಳುತ್ತವೆ.  ಕೆಲವೊಂದು ಸಂದರ್ಭದಲ್ಲಿ ಅದು ಕೈಮೀರಿ ಹೋಗಬಹುದು.   ಯಾವುದೇ ಅರೋಗ್ಯ ಸಮಸ್ಯೆ ಇದ್ದರೂ  ಅದನ್ನು ಆರಂಭದಲ್ಲೇ ಪತ್ತೆ ಹಚ್ಚುವುದರ ಮೂಲಕ ಅದು ಉಲ್ಬಣಗೊಳ್ಳವುದನ್ನು  ತಡೆಯಲು ಸಾಧ್ಯವಿದೆ ಮತ್ತು ಉತ್ತಮ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಬಹುದು.

    ಈ ಹಿನ್ನೆಲೆಯಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳು ಸೇರಿದಂತೆ ಎಲ್ಲಾ ನಾಗರಿಕರಿಗಾಗಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ದಕ್ಷಿಣ ಕನ್ನಡ ಜಿಲ್ಲೆ , ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ –  ಗ್ರಾಮ ದತ್ತು ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ  ಸೇವಾ ಯೋಜನೆ, ಮಂಗಳಗಗೋತ್ರಿ ಘಟಕ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದೇರಳಕಟ್ಟೆ ಹಾಗೂ ಜನ ಶಿಕ್ಷಣ ಟ್ರಸ್ಟ್ , ಮಂಗಳೂರು ಇದರ ಜಂಟಿ ಸಹಭಾಗಿತ್ವದಲ್ಲಿ ಫೆಬ್ರವರಿ 2ರ ಬುಧವಾರದಂದು  ಪೂರ್ವಾಹ್ನ 9:00 ಗಂಟೆಯಿಂದ ಸಂಜೆ   4:00 ಗಂಟೆಯವರೆಗೆ ಜನ ಶಿಕ್ಷಣ ಟ್ರಸ್ಟ್  ಸಭಾಂಗಣ, ಮುಡಿಪು ಇಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಅರ್ಭುಧ ಖಾಯಿಲೆ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ.

    ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

    ಶಿಬಿರವನ್ನು ಮಂಗಳೂರು ವಿಶ್ವವಿದ್ಯಾನಿಲಯದ  ಕುಲಪತಿಯವರಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಉದ್ಘಾಟಿಸಲಿದ್ದಾರೆ.  ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಗಳಾದ ಸಿ.ಎ. ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದೇರಳಕಟ್ಟೆ ಇದರ ಕುಲಪತಿಯವರಾದ ಡಾ. ಎಂ. ವಿಜಯ್ ಕುಮಾರ್;  ಒಂಬುಡ್ಸ್ಮೆನ್ ಮಹಾತ್ಮ ಗಾಂಧಿ ನರೇಗಾ  ಮಾಜಿ ನಿರ್ದೇಶಕರಾದ ಎನ್.  ಶೀನ ಶೆಟ್ಟಿ , ಜನ ಶಿಕ್ಷಣ ಟ್ರಸ್ಟ್ ಸಹ ನಿರ್ದೇಶಕರಾದ ಕೃಷ್ಣ ಮೂಲ್ಯ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯೆನೆಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇದರ ಮುಖ್ಯಸ್ಥರು ಸಮುದಾಯ ಅರ್ಭುಧರೋಗ ತಜ್ಞರಾದ ಡಾ. ಇಬ್ರಾಹಿಂ ನಾಗನೂರ್,  ಯೆನೆಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಹಾಗೂ ಸ್ತ್ರೀರೋಗ  ಕ್ಯಾನ್ಸರ್ ತಜ್ಞರಾದ ಡಾ. ಮರಿಯಮ್ ಅಂಜುಮ್ ಇಪ್ತಿಕಾರ್ ಮತ್ತು ಇನ್ನಿತರ   ತಜ್ಞ  ವೈದ್ಯರುಗಳ ತಂಡ ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸಲಿರುವರು.ಪ್ರೊ. ಕಿಶೋರ್ ಕುಮಾರ್ ಸಿ. ಕೆ . ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ ಉಪಸ್ಥಿತರಿರುವರು.  


    ನಿತ್ಯಾಶ್ರೀ ಬಿ. ವಿ . ಕಾರ್ಯಕ್ರಮ ಅಧಿಕಾರಿ, ಯುವ ರೆಡ್ ಕ್ರಾಸ್, ಯೆನೆಪೋಯ, ಡಾ. ಪರಮೇಶ್ವರ, ಕಾರ್ಯಕ್ರಮ ಅಧಿಕಾರಿ, ಯುವ ರೆಡ್ ಕ್ರಾಸ್, ಯೆನೆಪೋಯ, ಮಂಗಳೂರು ವಿ. ವಿ. ಘಟಕ, ಡಾ. ಗೋವಿಂದರಾಜು ಬಿ. ಎಂ., ಕಾರ್ಯಕ್ರಮ ಅಧಿಕಾರಿ, ಎನ್ . ಎಸ್ . ಎಸ್ . ಮಂಗಳೂರು ವಿ. ವಿ . ಘಟಕ, ಪ್ರೊ. ಪ್ರಶಾಂತ ನಾಯ್ಕ, ಮಂಗಳ – ಗ್ರಾಮ ದತ್ತು ಯೋಜನೆ ಸಂಯೋಜಕರು,  ಶ್ರೀ ಸುಚೇತ್ ಸುವರ್ಣ, ನಿರ್ದೇಶಕರು, ರೆಡ್ ಕ್ರಾಸ್, ಉಪಸಮಿತಿ ( ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ. ಕ. ಜಿಲ್ಲೆ), ಡಾ. ಗಣಪತಿ ಗೌಡ, ನೋಡಲ್ ಅಧಿಕಾರಿ, ಮಂಗಳೂರು  ವಿ. ವಿ. ರೆಡ್ ಕ್ರಾಸ್, ಡಾ. ಲೀನಾ ಕೆ. ಸಿ . ಪ್ರಾಶುಂಪಾಲರು, ಯೆನೆಪೋಯ ನರ್ಸಿಂಗ್ ಕಾಲೇಜು, ಶ್ರೀ ಬಿ. ಕುಸುಮಾಧರ, ಗೌರವ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ ಕಾರ್ಯಕ್ರಮವನ್ನು ಸಂಘಟಿಸಲಿರುವುರು.

    ಜ್ವರ, ಕೆಮ್ಮು, ಕಫ, ಉಸಿರಾಟದ ತೊಂದರೆ, ರಕ್ತದೊತ್ತಡ ಮಧುಮೇಹ, ಹೃದಯರಕ್ತನಾಳಗಳ ಕಾಯಿಲೆಗಳು, ಅರ್ಭುದ,  ಹೊಟ್ಟೆಬಾಧೆ, ಮೂಳೆ ಸಮಸ್ಯೆ, ಚರ್ಮ ರೋಗ, ಕಣ್ಣು , ಕಿವಿ ಮೂಗಿಗೆ ಸಂಬಂಧಿಸಿದ ಹಾಗೂ ಇನ್ನಿತರ ಯಾವುದೇ   ಆರೋಗ್ಯಗಳ ಸಮಸ್ಯೆಗಳನ್ನು ತಪಾಸಣೆ ನಡೆಸಿ ಸೂಕ್ತ ಚಿಕ್ತಿತ್ಸೆಗೆ ಅವಕಾಶ ಮಾಡಿಕೊಡಲಾಗುವುದು.  
    ಶಿಬಿರವನ್ನು ಕೋವಿಡ್ -19 ಸುರಕ್ಷತಾ ನಿಯಮಾವಳಿಯನ್ನು ಪಾಲನೆಯೊಂದಿಗೆ ಆಯೋಜಿಸಲಾಗುವುದು.
    ಸಾರ್ವಜನಿಕರು  ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ವಿಜ್ಞಾಪಿಸಲಾಗಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!