29.3 C
Karnataka
Sunday, September 22, 2024

    ಶಿಲ್ಪಕಲಾ ಚತುರ ಅಮಿತ್ ಮಂಜುನಾಥ್ ನಾಯಕ

    Must read

    ಬಳಕೂರು ವಿ ಎಸ್ ನಾಯಕ

    ಬಾಲ್ಯದಿಂದಲೇ ಅಪಾರವಾದಂತಹ ಕಲಾಸಕ್ತಿ. ಕಲೆಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಅಚಲ ಗುರಿ. ಬಾಲ್ಯದಲ್ಲಿಯೇ ತನ್ನ ಮನಸ್ಸಿಗೆ ಬಂದದ್ದನ್ನು ಗೀಚಿ ಸಂಭ್ರಮಿಸಿದ ಪರಿ. ಶಾಲೆಯಲ್ಲಿರುವಾಗ ತನಗೆ ತೋಚಿದ್ದನ್ನು ಕ್ಷಣಾರ್ಧದಲ್ಲಿಯೇ ಬರೆದು ನಮ್ಮ ಅಧ್ಯಾಪಕರಿಗೆ ತೋರಿಸಿ ಅವರಿಂದ ಪ್ರಶಂಸೆಗೆ ಒಳಗಾಗಿತ್ತು. ಹೀಗೆ ಬಾಲ್ಯದಲ್ಲಿಯೇ ಅರಳಿದ ಕಲಾಸಕ್ತಿ ನಂತರ ಹೆಮ್ಮರವಾಗಿ ತನ್ನ ಕಲಾ ಪಯಣದ ಕಡೆಗೆ ಸಾಗುವಂತೆ ಮಾಡಿದ್ದಂತೂ ಸತ್ಯ. ಅದ್ಭುತ ಕಲಾಸಕ್ತಿಯನ್ನು ಹೃದಯಾಂತರಾಳದಲ್ಲಿ ಬಚ್ಚಿಟ್ಟುಕೊಂಡು ನಂತರದ ದಿನಗಳಲ್ಲಿ ಶಿಲ್ಪಕಲೆಯ ಮಾಧ್ಯಮ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದವರು ಶಿಲ್ಪ ಕಲಾವಿದ ಅಮಿತ್ ಮಂಜುನಾಥ್ ನಾಯಕ .

    ಇವರು ಮೂಲತಹ ಮಲೆನಾಡಿನವರು. ನಮಿತಾ ನಾಯಕ್ ಮತ್ತು ಮಂಜುನಾಥ್ ನಾಯಕರವರ ಪುತ್ರ. ಬಾಲ್ಯದಿಂದಲೇ ಇವರ ಕಲಾ ಪ್ರತಿಭೆಯನ್ನು ಗುರುತಿಸಿದ ಇವರ ತಂದೆ ತಾಯಿ ನಂತರ ಇವನನ್ನು ಚಿತ್ರಕಲಾ ಮಹಾವಿದ್ಯಾಲಯ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕಲಾ ಅಧ್ಯಯನಕ್ಕಾಗಿ ಸೇರಿಸಿದರು. ಆದರೆ ಅಲ್ಲಿ ಹೋದ ಅವರಿಗೆ ವಿವಿಧ ಕಲಾ ಪ್ರಕಾರಗಳು ಆಕರ್ಷಿಸಿದವು. ಕಲಾತ್ಮಕವಾಗಿ ಏನಾದರೂ ಚಿತ್ರಿಸಬೇಕು ವಿಶೇಷವಾದಂತಹ ಶಿಲ್ಪಗಳನ್ನು ರಚಿಸಬೇಕು ತನ್ನದೇ ಆದಂತಹ ಭಾವನಾತ್ಮಕವಾದ ವಿಚಾರಗಳನ್ನು ಬಿಂಬಿಸಿ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಅದನ್ನು ತೋರ್ಪಡಿಸಬೇಕು ಎಂಬ ವಿಚಾರ ಅಂದೇ ಆರಂಭವಾಯಿತು. ನಂತರ ಶಿಲ್ಪಕಲೆಯನ್ನು ಆಯ್ಕೆಮಾಡಿಕೊಂಡ ಅವರು ಶಿಲ್ಪಕಲೆಯಲ್ಲಿ ಯಾರಿಗೂ ಕೂಡ ನಿಲುಕದ ವಿಶೇಷವಾದ ಶಿಲ್ಪಗಳನ್ನು ರಚಿಸುವುದರ ಮೂಲಕವಾಗಿ ಚಿಕ್ಕವಯಸ್ಸಿನಲ್ಲಿ ಅದ್ಭುತವಾದ ಕಲಾ ಸಾಧನೆ ಮಾಡಿರುವುದು ನಿಜವಾಗಿಯೂ ಕೂಡ ಮೆಚ್ಚ ಬೇಕಾದ ವಿಷಯ.

    ಒಬ್ಬ ಕಲಾವಿದ ಆದವನಿಗೆ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಮಿತ್ ರವರ ಶಿಲ್ಪಕಲಾಕೃತಿಗಳು ಸಾಕ್ಷಿ . ಇವರ ಈ ಶಿಲ್ಪಕಲಾಕೃತಿಗಳನ್ನು ನಾವು ನೋಡಿದಾಗ ನಮ್ಮ ಸಮಾಜದಲ್ಲಿ ಹಲವಾರು ರೀತಿಯ ವಿಚಾರಗಳು ಅದರ ಜೊತೆಗೆ ಮನುಷ್ಯನ ಅನುಭವ ನೋವು ದುಃಖ ಸಾಧನೆ ಸಂತೋಷಎಲ್ಲಾ ಭಾವನೆಗಳನ್ನು ಇವರ ಶಿಲ್ಪಗಳಲ್ಲಿಕಾಣ ಬಹುದಾಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಪದವಿಯನ್ನು ಪಡೆದಿರುವ ಇವರಿಗೆ ಇವರ ಕಲಾ ಸಾಧನೆಯನ್ನು ಗಮನಿಸಿ ಲಲಿತಕಲಾ ಅಕಾಡೆಮಿ ಇಂದ ರಾಜ್ಯಪ್ರಶಸ್ತಿ. ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಆನ್ಲೈನ್ ಕಲಾಪ್ರದರ್ಶನದಲ್ಲಿ ಪಾಲ್ಗೊಂಡು ಒಳ್ಳೆಯ ಹೆಸರನ್ನು ಮಾಡಿದ್ದಾರೆ ಇವರ ಅದ್ಭುತ ಕಲಾ ಸೇವೆಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ ಇಂತಹ ಶಿಲ್ಪ ಕಲಾವಿದರನ್ನು ನಾವು ಕೂಡ ಗೌರವಿಸೋಣ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    3 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!