26.4 C
Karnataka
Saturday, April 12, 2025
    Home Blog Page 176

    ಶರಾವತಿ ವ್ಯಾಪ್ತಿಯ ದಟ್ಟ ಹಸಿರು ಮೈಗೆ ಮುಳ್ಳು ಬಕೆಟ್

    ಯೋಜನೆಗಳ ಕಡತಗಳು, ಅಭಿವೃದ್ಧಿಯ ಗುಂಡುಪಿನ್ನು ಹಚ್ಚಿಕೊಂಡೇ ಇರುತ್ತವೆ ನಿಜ.ಆದರೆ ಅವುಗಳ ರೂಪಿಸುವ ಮುನ್ನ ಸ್ಥಳೀಯವಾಗಿ ಪರಿಸರ,ಜನಜೀವನ ವಿರೂಪಗೊಳ್ಳುವುದೂ ಅಪಾರ ಹಾನಿಯೆಂದು ಉನ್ನತ ಅಧಿಕಾರದ ಪಂಡಿತರಿಗೆ ಹೊಳೆಯುವುದೇ ಇಲ್ಲ.

    ಬೆಂಗಳೂರಿನ ಜನರ ಬಾಯಾರಿಕೆ ನೀಗಲು, ಸರ್ಕಾರದ ಯೋಜನೆಯ ನಾಲಗೆ ಶರಾವತಿಯತ್ತ ಚಾಚಿರುವ ಸುದ್ದಿ ಹಳೆಯದಾದರೂ ಈಗ ಯಾವಹೊತ್ತಿಗೆ ಯಾವ ರೀತಿ ಜೆಸಿಬಿಗಳು ಬಂದು ಶರಾವತಿ ವ್ಯಾಪ್ತಿಯ ದಟ್ಟ ಹಸುರು ಮೈಗೆ ಮುಳ್ಳು ಬಕೆಟನ್ನ ನೆಡುವುವೋ ಇನ್ನೂ ಗೊತ್ತಿಲ್ಲ.ಇದು ಸುದ್ದಿಯಾಗುತ್ತಿದಂತೆಯೇ ಜೋಗದ ಜಲಪಾತದಿಂದ ಧುಮುಕಿ ಮುಂದೆ ಸಾಗರ ಸೇರುವ ಶರಾವತಿಯ ಕುತ್ತಿಗೆ ಹಿಡಿದು ಗೇರುಸೊಪ್ಪೆಯಿಂದ ಮತ್ತೆ ತಲಕಳಲೆ ಜಲ ಸಂಗ್ರಹಾಲಯಕ್ಕೆ ಗುರುತ್ವಾಕರ್ಷಣೆ ವಿರುದ್ಧ ಪಂಪ್ ಮಾಡಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ಮತ್ತೊಂದು ಯೋಜನೆಯೂ ತಯಾರಾಯಿತು. ಅದರ  ತಿದಿ ಒತ್ತುತ್ತಿರುವ ಸದ್ದು ಪರಿಸರ ಪ್ರಿಯರ ನಿದ್ದೆಗೆಡಿಸಿದೆ.

    ಹಣ ದೋಚುವ ತಂತ್ರ

    ಜೋಗದ ನೀರು ವ್ಯರ್ಥವಾಗುತ್ತಿರುವ ಬಗ್ಗೆ ಹಿಂದೆಯೇ ವಿಶ್ವೇಶ್ವರಯ್ಯ ನವರು ಉದ್ಗರಿಸಿದ್ದು ಜಲವಿದ್ಯುತ್ ಉತ್ಪಾದನೆಗೆ ಪ್ರೇರೇಪಣೆ ಸಿಕ್ಕಿತು. ನಾಡಿಗೆ ಬೆಳಕು ಸಿಕ್ಕಿತು ಅಂತ ಅದನ್ನ ಸ್ವಾಗತಿಸಲಾಯಿತು.ಆದರೀಗ ಪರಿಸರ ಆಸಕ್ತರು ಹೊಸ ಯೋಜನೆಯ ಬಗ್ಗೆ ಈ ರೀತಿ ಆಲೋಚಿಸುತ್ತಿಲ್ಲ. ಸರ್ಕಾರದ ಹಣ ದೋಚಲು ಒಂದು ಹುನ್ನಾರು ಎಂದು ಅಭಿಪ್ರಾಯಪಡುತ್ತಾರೆ.ಏಕೆಂದರೆ ಅವರ ಪ್ರಕಾರ ಎರಡುಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಎರಡೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ತನ್ನ ಅಪವ್ಯಯ ಮಾಡುವ ಮೂರ್ಖತನದ ಸಾಹಸ ಇದು.

    ಶರಾವತಿ ನದಿ ಉಳಿಸಿ ಹೋರಾಟಗಾರ ಅಖಿಲೇಶ್ ಚಿಪ್ಲಿ ಅವರೊಂದಿಗೆ ಡಾ. ಚನ್ನಗಿರಿ ಸುಧೀಂದ್ರ ಅವರು ನೆಡಸಿರುವ ಮಾತುಕತೆ

    ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ  ಈ ಬಗ್ಗೆ ಹಿಂದಿನ ಸಮ್ಮಿಶ್ರ ಸರ್ಕಾರ ಹೇಳಿಕೆ ನೀಡಿತ್ತು  ಈ ಬಗ್ಗೆ ವಿವಾದವೆದ್ದಾಗ ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಸ್ತಾವನೆ ಕುರಿತು ‘ನೋ’ ಎಂದಿದ್ದಾರೆ.ಆದರೆ ಸದ್ಯ ಈಗ ವ್ಯರ್ಥವಾಗಿ  ಹರಿದುಹೋಗುವ ನೀರನ್ನ ಪುನರ್ವಿದ್ಯುತ್ ಉತ್ಪಾದನೆಗೆ ಬಳಸುವ ಯೋಜನೆ ಸದ್ದು ಮಾಡುತ್ತಿದೆ.  ಸಿದ್ಧರಾಮಯ್ಯನವರ ಸರ್ಕಾರವಿದ್ದಾಗ ಇದು ರೂಪಿತವಾಗಿತ್ತು. ಪ್ರಸ್ತುತ ಸರ್ಕಾರ ಅದಕ್ಕೆ ಪೂರಕ ಏರ್ಪಾಡುಗಳನ್ನ ಕೈಗೆತ್ತಿಕೊಂಡಿದೆ.ಈಗಾಗಲೇ ಭೂಗರ್ಭದೊಳಗೇ ಸುರಂಗದ ಮೂಲಕ ನೀರನ್ನ ಮರು ಎತ್ತುವ,ಮತ್ತು ಬೆಟ್ಟದೊಳಗೇ ಭೂಅಂತರ್ಗತ ವಿದ್ಯುತ್ ಉತ್ಪಾದನಾ ಕೇಂದ್ರದ ಪ್ಲಾನ್ ಶುರುವಾಗಿದೆ.

    ಏನಿದು ಯೋಜನೆ?

    ಜಲಪಾತದಿಂದ ಬಿದ್ದ ನೀರು ಸಮುದ್ರ ಸೇರುತ್ತಿದೆ. ಗೇರುಸೊಪ್ಪ ಜಲಸಂಗ್ರಹಾಲಯದಲ್ಲಿ ಮುಂಚೆನಿಂತು ಅಲ್ಲಿಂದ ಕಾಫರ್ ಡ್ಯಾಂ ನಿರ್ಮಿಸಿ ಮತ್ತೆ ತಲಕಳಲೆ ಜಲಾಗಾರಕ್ಕೆ ಪಂಪ್ ಮಾಡಿ ಸುರಂಗ ಕೊಳವೆಗಳ ಮೂಲಕ ಪಂಪ್ ಮಾಡಿ ವಾಪಸ್ ಕಳಿಸುವುದು. ಅಲ್ಲಿಂದ ಪೈಪ್ ಮೂಲಕ ಹೊಸ ಪವರ್  ಹೌಸ್ ನಲ್ಲಿ ಟರ್ಬೈನ್ ಗಳ ಮೂಲಕ ನೀರುಹಾಯಿಸುವುದು ಎಂದು ಸರಳವಾಗಿ ಹೇಳಬಹುದು.

    ನಾರ್ವೆಯಲ್ಲಿ ಭೂಅಂತರ್ಗತ ವಿದ್ಯುತ್ ಉತ್ಪಾದನೆ

    ಇಂತಹ ಎರಡು ಪ್ರಾಜೆಕ್ಟುಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿವೆ. ಅವುಗಳ ಸಂರಚನೆಯ ರೂಪುರೇಷೆಗಳೇ ಶರಾವತಿ ಪಂಪ್ಡ್ ವಾಟರ್ ಪ್ರಾಜೆಕ್ಟ್ ಗೆ ಮಾದರಿ. ಇದರ ಅಂದಾಜು ಐದುಸಾವಿರ ಕೋಟಿ ರೂಪಾಯಿಗಳು. ಈಗಿನ ಮಹಾತ್ಮಗಾಂಧಿ ಪವರ್ ಜನರೇಷನ್ ಕೇಂದ್ರ ಕ್ಕಿಂತ ಬೇರೆಯೇ ವ್ಯವಸ್ಥೆ. ತಲಕಳಲೆ ಡ್ಯಾಮ್ ಮೇಲ್ಮಟ್ಟದ ಜಲಾಗಾರವಾಗಿ ಮತ್ತು ಗೇರುಸೊಪ್ಪ ಡ್ಯಾಮ್ ಕೆಳಮಟ್ಟದ ಜಲಾಗಾರವಾಗಿಯೇ ಇದ್ದು ಅವುಗಳ ಸ್ವರೂಪದಲ್ಲೇನೂ ಬದಲಾವಣೆಮಾಡುವುದಿಲ್ಲ. ತಲಕಳಲೆ ಡ್ಯಾಮಿನ ನೀರನ್ನ ಟರ್ಬೈನ್ ಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡುವುದಾಗಿದೆ .ಮತ್ತೆ ಅದೇ ನೀರು ಗೇರುಸೊಪ್ಪ ಜಲಾಗಾರದಲ್ಲೇ ಸಂಗ್ರಹವಾಗುತ್ತದೆ.ಇಲ್ಲಿ ನಡುವೆ ಸಂಪೂರ್ಣ ಸುರಂಗದಲ್ಲಿಯೇ ಪವರ್ ಹೌಸ್ ನಿರ್ಮಿಸುವ ಯೋಜನೆ.

    ಈ ಹಿಂದಿನ ಅಂದಾಜಿನಂತೆ 2021ಕ್ಕೆ ಈ ಯೋಜನೆ ಪೂರ್ಣವಾಗಬೇಕು.ಅದೀಗ ಅನುಮಾನವೇ.ಇದಕ್ಕೆ  ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿ ಅಭಯಾರಣ್ಯಅಡ್ಡವಿದೆ. ಅದರ ಆಸುಪಾಸು ಈ ಯೋಜನೆ ಹಾದುಹೋಗುತ್ತದೆ .ಇದು ಅಭಯಾರಣ್ಯದ ನಡುವಿನ 902 ಚ.ಕಿಮೀ ವ್ಯಾಪ್ತಿ ಆವರಿಸಲಿದೆ ಎಂಬುದು ಇನ್ನೊಂದು ಅಂಶ.ಸರ್ಕಾರದ ದಾಖಲೆಗಳಲ್ಲಿ ಮಾತ್ರ 153 ಹೆ.ಭೂಮಿ ಸಾಕು ಎಂದಿದೆ.ಯೋಜನೆಯ ಸ್ಥಳ ಶರಾವತಿ ಅಭಯಾರಣ್ಯದಿಂದ 3.4ಕಿಮೀ ದೂರದಲ್ಲಿದೆ .ಅದಕ್ಕಾಗಿಯೇ ರಾಷ್ಟ್ರೀಯ. ವನ್ಯಜೀವಿ ಮಂಡಳಿ ಅನುಮೋದನೆಯೂ ಬೇಕಿದೆ.ಪರಿಸರ ಆಸಕ್ತರು ಹೇಳುವಂತೆ ಮುಂದೆ ಬರಲಿರುವ ಐವತ್ತೆಂಟನೇ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದು ಅನುಮತಿ ಬಗ್ಗೆ ತೀರ್ಮಾನವಾಗಲಿದೆ.ಯೋಜನೆ ಶುರುವಾದಂತೆ ಮತ್ತೇನು ವ್ಯತ್ಯಾಸಗಳಾಗುವವೋ ಗೊತ್ತಿಲ್ಲ.

    ಪ್ರಸ್ತುತ ಯೋಜನೆಯ ಭೌ-ತಾಂತ್ರಿಕ ‌‌  ( geotechnical) ಅಧ್ಯಯನದ ಅಗತ್ಯವಿದೆ. ಸಾಗರ ಮತ್ತು ಹೊನ್ನಾವರ ಅರಣ್ಯ ವಿಭಾಗಗಳಿಗೆ ಸೇರಿರುವ ಸು,877.507 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶವಿದೆ. 2019 ಅಕ್ಟೋಬರ್ ತನಕವೂ ಇದಕ್ಕೆ ಕೇಂದ್ರ ಸರ್ಕಾರದ ಇಲಾಖಾ ಅನುಮತಿ ಸಿಕ್ಕಿರಲಿಲ್ಲ .( ನ್ಯೂ ಇಂಡಿಯನ್ ಎಕ್ಸ್ ಪ್ರೆಸ್. 23-10-2019. ವರದಿ )

    ಈ ಯೋಜನೆಯನ್ನು ರಾಜ್ಯ ವನ್ಯಜೀವಿ ಮಂಡಳಿ ಪ್ರಸ್ತಾವನೆಯನ್ನ ಅಮೂಲಾಗ್ರ ಚರ್ಚಿಸದೇ ಅನುಮೋದಿಸಿದೆಯೆಂದೂ ವರದಿಯಾಗಿತ್ತು.ವನ್ಯಜೀವಿ ಸಂರಕ್ಷಣೆ 19 ಸೆಕ್ಷನ್ ಪ್ರಕಾರ ವನ್ಯಜೀವಿಗಳ ಅಸ್ತಿತ್ವ ಉತ್ತಮಪಡಿಸಲು ಯೋಜನೆಗಳನ್ನ ಅರಣ್ಯದಲ್ಲಿ ಕೈಗೊಳ್ಳಬಹುದಷ್ಟೆ.ಈ ಯೋಜನೆಯಿಂದ ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿಯ ಅಭಯಾರಣ್ಯದಲ್ಲಿ ಅವುಗಳ ಸಂರಕ್ಷಣೆಗೆ ಚ್ಯುತಿ ಬರುವುದಿಲ್ಲವೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ. ರಾಜ್ಯ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಪ್ರಕಾರ ಈ ಯೋಜನೆ ಜಾರಿಯಾದರೆ ಕಾರ್ಗಲ್ ಮತ್ತು ಗೇರುಸೊಪ್ಪ ವಲಯದಲ್ಲಿನ ಸರ್ವಋತು ಹಸಿರಡವಿಯ ವನ್ಯಜೀವಿಗಳಿಗೆ ಮಾರಕವಾಗುತ್ತದೆ.

    ಮಾಹಿತಿಗಾಗಿ ಶರಾವತಿ ಉಳಿಸಿ ಹೋರಾಟ ಒಕ್ಕೂಟದ SWAN & MANವೇದಿಕೆಯ ಅಖಿಲೇಶ್ ಚಿಪ್ಳಿ ಅವರನ್ನ ಸಂಪರ್ಕಿಸಿದಾಗ ಶರಾವತಿ ಮೈಗೆ ನೆಲಕಿಂಡಿ ( ಡ್ರಿಲ್ಲ್  ಹೋಲ್ )ಮಾಡುವ ಘನ ಕಾರ್ಯ ಶುರುವಾಗಿಬಿಟ್ಟಿದೆ ಎಂಬ ಸಂಗತಿ ತಿಳಿಯಿತು. ಅದಕ್ಕೂ ಈಗ ಸದ್ಯಕ್ಕೆ  ನೆಲಕಿಂಡಿ ಚಟುವಟಿಕೆ ನಿಲ್ಲಿಸುವಂತೆ  ಮನವಿಯನ್ನೂ ಒಕ್ಕೂಟ ಅರಣ್ಯ ಇಲಾಖೆಗೆ ಸಲ್ಲಿಸಿದೆ.ಅಲ್ಲದೇ ಸಾಗರದ ಪವರ್ ಪಾಲಿಸಿ ಅನಾಲಿಸ್ಟ್ ಶಂಕರ್ ಶರ್ಮ ಅವರೂ ಪರಿಸರ ಉಳಿವಿನ ಕಾರ್ಯಕರ್ತರ ಪಡೆಯಲ್ಲಿದ್ದಾರೆ.ಈಗಾಗಲೇ ಮುಖ್ಯಮಂತ್ರಿಗಳಿಗೆ ,ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಮನವಿಯಲ್ಲಿ ಏನಿದೆ?

    ರಾಜ್ಯದ ಹಾಗೂ ಸ್ಥಳೀಯ ಪರಿಸರವಾದಿಗಳಿಗೆ ಮತ್ತು ವನ್ಯಜೀವಿ  ಸಂರಕ್ಷಣಾ ಪ್ರಿಯರಿಗೆ ಸದ್ಯದ ಭೌತಾಂತ್ರಿಕ ಅನ್ವೇಷಣೆ ಕೈಗೊಂಡಿರುವ ಬಗ್ಗೆ ನಿರಾಶೆಯಾಗಿದೆ.ನಾಗರಿಕ ಸಮಾಜವು ವ್ಯಕ್ತಪಡಿಸಿರುವ ಅನೇಕ ಗಂಭೀರ ಸಮಸ್ಯೆಗಳಿಗೆ ಸಮಾಧಾನಕರವಾಗಿ ಪರಿಹಾರ ನೀಡದೇ ಅಭಯಾರಣ್ಯ ಪ್ರದೇಶದಲ್ಲಿ  ಪಂಪ್ ಮಾಡಿ ಜಲವಿದ್ಯುತ್  ಯೋಜನೆ ಆರಂಭಕ್ಕೆ ಅನುಮತಿ ನೀಡಿರುವುದು ಈ ನಿರಾಶೆಗೆ ಕಾರಣ.

    ಸದ್ಯ ಈಗ ಕೋವಿಡ್ 19 ರ ವ್ಯಾಪಕವಾಗಿ ಹಬ್ಬಿರುವ ವಾತಾವರಣವಿದೆ.ಅಲ್ಲಿಗೆ ನಿಯುಕ್ತವಾಗಿರುವ ಸಿಬ್ಬಂದಿಗಳು ಬೇರೆ ಬೇರೆ ರಾಜ್ಗಗಳ‌ ಪ್ರದೇಶದಿಂದ ಬಂದವರಾಗಿರುತ್ತಾರೆ.ವನ್ಯಜೀವಿಗಳೂ ಇದರಿಂದ ಬಾಧಕವಾಗಬಹುದು.ಕೋವಿಡ್ 19  ಸೋಂಕಿನ ಬಗ್ಗೆಯೂ ಪರಿಶೀಲನೆಯಾಗಿಲ್ಲ. ಸೋಂಕುಇದೆಯೋ ಇಲ್ಲವೋ  ಆರೋಗ್ಯ ಸಚಿವಾಲಯದ ಪ್ರಕಾರ 14 ದಿನಗಳ ಕ್ವಾರಂಟೈನ್ ಆಗಲೇಬೇಕು.ಅಭಯಾರಣ್ಯ ಪ್ರದೇಶದೊಳಕ್ಕೆ ಕಾಲಿಡುವ ಮೊದಲು ಈ ಬಗ್ಗೆಈ ಉಪಕ್ರಮ ಅತ್ಯವಶ್ಯವಾಗಿದೆ.ಮಳೆಗಾಲ ಆರಂಭವಾಗಿದೆ.‌ ವನ್ಯಜೀವಿಗಳ ಮತ್ತು ಸಸ್ಯ ಸಂಕುಲಗಳ  ಜೈವಿಕ ಕ್ರಿಯೆ ನಡೆಯುವ ಸೂಕ್ತ ಕಾಲವಾಗಿದೆ. ಇಂತಹ ಸನ್ನಿವೇಶದಲ್ಲಿ ಭೌಗೋಳಿಕ ತಾಂತ್ರಿಕ ಚಟುವಟಿಕೆ ಶುರುಮಾಡುವುದು ನಿಲ್ಲಿಸಬೇಕೆಂದು ಕೋರಿದ್ದಾರೆ.

    ಮತ್ತೊಬ್ಬ ಜೈವಿಕ ಶಾಸ್ತ್ರಜ್ಞ ಪ್ರೊ.ಮೇವಾಸಿಂಗ್ ಕೂಡ ಹೀಗೆಯೇ ಹೇಳಿದ್ದಾರೆ.ಪ್ರೊ.ಸಿಂಗ್ ಅವರ ಅಪಾರ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಆ ಅರಣ್ಯ ಪ್ರದೇಶವು ಸಿಂಹಬಾಲದ ಸಿಂಗಳಿಕಗಳ ಅಭಯಾರಣ್ಯವಾಗಿ ಇತ್ತೀಚೆಗೆ ಘೋಷಿಸಲ್ಪಟ್ಟಿದೆ.ಕೇವಲ 360 ಹೆಕ್ಟೇರ್ ಅರಣ್ಯ ಮಾತ್ರ ಬಳಕೆಯಾಗುತ್ತದೆ ಎಂಬುದನ್ನ ನೋಡಿದರೆ ಪ್ರಸ್ತುತ ಯೋಜನೆಯ ವಿವಿಧ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಪ್ರದೇಶ ಕಬಳಿಸಲ್ಪಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

    ಈಗ ಯೋಜನೆಯ ಸಮೀಕ್ಷೆಗಾಗಿಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಅಷ್ಟೆ.ಅದೂ ಮರಗಳನ್ನ ಕತ್ತರಿಸದೇ ವನ್ಯಜೀವಿಗಳ ದೈನಿಕ ಚಲನವಲನ ಚಟುವಟಿಕೆಗೆ ಭಂಗತಾರದೇ ಕೊರೆಯುವ ಯಂತ್ರಗಳನ್ನ ನಿರ್ವಹಿಸಬೇಕು. ಬೆಳಿಗ್ಗೆ ಒಂಭತ್ತಕ್ಕೆ ಶುರುಮಾಡಿ ಸಂಜೆ ಆರಕ್ಕೆ ಪೂರೈಸಬೇಕು.ಸ್ಥಳದಲ್ಲಿ ಯಾರೂ ವಾಸ್ತವ್ಯದ ಟೆಂಟ್ ಹಾಕುವಂತಿಲ್ಲ.ಮಳೆಗಾಲದಲ್ಲಿ ಸಮೀಕ್ಷೆ ನಿಲ್ಲಿಸಬೇಕು. ಶಿರಸಿಯ ಜೀವಶಾಸ್ತ್ರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ದಿ ಕೇಂದ್ರದ ನಿರ್ದೇಶಕ

    ಡಾ.ಕೇಶವ ಕೊರ್ಸೆ ಅವರೇ ಹೇಳುವಂತೆ….Anyway, I can only say that it is suicidal project… According to IISc experts, this region is landslide vulnerable. And ecologists say that this lower reaches is the home of rare Wildlife. So  digging earth in such a fragile zone is ecologically disastrous and economically illogical endeavour.May better sense prevail upon the govt to drop this project.

    ನೋಡುವುದಕ್ಕೆ ಬಹಳ ಸರಳ.ಮತ್ತು ಹೌದಲ್ಲ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನ ವಿದ್ಯುತ್ ಉತ್ಪಾದನೆಗೆ ಬಳಸಬಹುದಲ್ಲ?ಎಂದು ಕುಶಲಮತಿಗಳಂತೆ ಸರಿ ಎನ್ನ ಬಹುದು.ಆದರೆ ಅಷ್ಟು ಹಸಿರುಹೊದ್ದು ನಿಸರ್ಗವೇ ನಿರ್ಮಿಸಿದ ಅರಣ್ಯದ ಮೇಲ್ಮೈಮತ್ತೆ ನೈಜವಾಗಿ ಬೆಳೆದೀತೆ? ಮತ್ತೆ ಮನುಷ್ಯರ ಹಾವಳಿಯಿಂದ ಅಲ್ಲಿನಸಸ್ಯ ವನ್ಯ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಉಳಿವು ಅಳಿವಿನ ಪ್ರಶ್ನೆಯೂ ಆಗಿದೆ.

    ಸದ್ಯಕ್ಕೆ ಭಾರತಕ್ಕೆ ಬರುವುದಿಲ್ಲ ವಿಜಯ್ ಮಲ್ಯ

    ಸುಮಾರು 9,961 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿ ಬ್ರಿಟನ್‌ಗೆ ಪರಾರಿಯಾಗಿದ್ದ ಮದ್ಯ ದೊರೆ, ಉದ್ಯಮಿ ವಿಜಯ್ ಮಲ್ಯ ಇನ್ನೇನು ಭಾರತಕ್ಕೆ ಗಡಿಪಾರು ಆಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ವ್ಯಾಪಕವಾಗಿ ಹಬ್ಬಿತ್ತು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೂಡ ಈ ಕುರಿತು ನಡೆಯಬೇಕಾಗಿದ್ದ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಹೇಳಿವೆ ಎಂದು ಹೇಳಲಾಗಿತ್ತು. ಹೀಗಾಗಿ ಬುಧವಾರ ರಾತ್ರಿ ಲಂಡನ್‌ನಿಂದ ಹೊರಟು ಗುರುವಾರ ಭಾರತಕ್ಕೆ ಮದ್ಯದ ದೊರೆ ತಲುಪಬೇಕಿತ್ತು.

    ಆದರೆ ವಸ್ತುಸ್ಥಿತಿ ಹಾಗಿಲ್ಲ. ಸದ್ಯದ ಮಟ್ಟಿಗೆ ಮಲ್ಯ ಭಾರತಕ್ಕೆ ಗಡಿಪಾರು ಆಗುವ ಸಾಧ್ಯತೆಯಿಲ್ಲ. ಭಾರತದ ವಿಮಾನವನ್ನೂ ಮಲ್ಯ ಸದ್ಯಕ್ಕೆ ಹತ್ತಿಲ್ಲ ಮತ್ತು ಅಂತಹ ಸಾಧ್ಯತೆಗಳು ಕೂಡ ಕ್ಷೀಣ ಎನ್ನುವುದು ಹೊಸ ಬೆಳವಣಿಗೆ. ಮಲ್ಯ ಅವರ ಆಪ್ತ ಸಹಾಯಕಿ ಹಾಗೂ ಸ್ವತಃ ಮಲ್ಯ ಕೂಡ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಕೇಂದ್ರ ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಇನ್ನೂ ಗಡಿಪಾರು ಒಪ್ಪಂದಕ್ಕೆ ಕಾನೂನಾತ್ಮಕ ಕಾರಣಗಳಿಂದಾಗಿ ಸಹಿ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಇದುವೇ ಹೊಸ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ. ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಮಲ್ಯ ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ, ಮಾತ್ರವಲ್ಲ ಅವರ ಮೇಲೆ ಡಿಯಾಗಿಯೋದ 303 ಕೋಟಿ ರೂ. ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ವಿಚಾರಣೆ ಇನ್ನೂ ಅಲ್ಲಿನ ಸಿವಿಲ್ ಕೋರ್ಟ್‌ನಲ್ಲಿ  ವಿಚಾರಣೆಗೆ ಬಾಕಿ ಇದೆ. ಇದು ಕೂಡ ಮಲ್ಯ ಗಡಿಪಾರು ವಿಳಂಬಕ್ಕೆ ಕಾರಣವಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ನ ಮೆಟ್ರೊಪಾಲಿಟನ್ ಪೊಲೀಸ್ ಮುಖ್ಯಸ್ಥರು ಈ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ದೇಶನ ತಮಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮೇ 14ರಂದು ಬ್ರಿಟನ್ ಕೋರ್ಟ್‌ನ ಎದುರು ತಮ್ಮ ಕಾನೂನು ಹೋರಾಟದಲ್ಲಿ ಮಲ್ಯ ಸೋತು ಹೋಗಿದ್ದರು. ನ್ಯಾಯಾಲಯವು 28 ದಿನಗಳ ಒಳಗೆ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಹಬ್ಬಿದ್ದವು.

    STOP ONLINE CLASSES ಪುಟ್ಟ ಮಕ್ಕಳಿಂದ ಪ್ರಾಥಮಿಕ ಶಾಲಾ ಸವಿನೆನಪುಗಳನ್ನು ಕಿತ್ತುಕೊಳ್ಳಬೇಡಿ

    ಭಾರತದಲ್ಲಿ ಮಗುವಿನ ಕಲಿಕಾ ಪ್ರಕ್ರಿಯೆಯು ಪ್ರಾಚೀನವಾದ ಗುರುಕುಲ ಪದ್ಧತಿಯಿಂದ ಪ್ರಾರಂಭವಾಗಿ ಇಂದು ನಾವು ಕಾಣುತ್ತಿರುವ ಆಧುನಿಕ ಶಿಕ್ಷಣವ್ಯವಸ್ಥೆಯ ವರೆಗೆ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತ ಸಾಗಿಬಂದಿದೆ.

    “ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ನೀಡುವುದಲ್ಲ ಜಗತ್ತಿನ ಇತರ ಜೀವಿಗಳೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ಕಲಿಸುವುದು ಶಿಕ್ಷಣ”ಎಂದು ನೋಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ್ ಟ್ಯಾಗೋರ್ ಹೇಳಿದ್ದಾರೆ. ಶಿಕ್ಷಣವು ಮಗುವನ್ನು ಹೊರ ಜಗತ್ತಿನ ಆಗುಹೋಗುಗಳಿಗೆ ತೆರೆದುಕೊಳ್ಳುವಂತೆ ಮಾಡಲು ಕಿಟಕಿಯಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಸತತವಾದ ಬದಲಾವಣೆಯನ್ನು ಬಯಸುತ್ತದೆ.

    ಕೊರೋನಾ ಇಫೆಕ್ಟ್
    ಇವೆಲ್ಲವನ್ನೂ ಮೀರಿ ಕೊರೋನಾ ವೈರಾಣುವಿನ ದುಷ್ಪರಿಣಾಮವು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ಅಳವಡಿಸಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡಿದೆ . ಈ ದಿಸೆಯಲ್ಲಿ ಶಿಕ್ಷಣ ತಜ್ಞರು ಮನಃಶಾಸ್ತ್ರಜ್ಞರಾದಿಯಾಗಿ ಪ್ರತಿಯೊಬ್ಬರೂ ಹೊಸ ಆಯಾಮದ ಅನ್ವೇಷಣೆಯಲ್ಲಿ ತೊಡಗಿದ್ದಾರೆ .ಈ ಮಂಥನದಲ್ಲಿ ಹೊಳೆದ ತತ್ ಕ್ಷಣದ ಪರಿಹಾರದ ಮಾರ್ಗ ಆನ್ ಲೈನ್ ಶಿಕ್ಷಣ.


    ಪೋಷಕರ ವಿಪರೀತ ಕಾಳಜಿಯೋ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯ ಒತ್ತಡವೋ ಅಥವಾ ಕಾಣದ ಕೈಗಳ ಲಾಬಿಯೋ ಕಾಣೆ ಪುಟ್ಟ ಮಕ್ಕಳಿಗೂ ಆನ್ ಲೈನ್ ತರಗತಿಗಳು ಪ್ರಾರಂಭವಾಗಿವೆ. ಗೆಳೆಯರೊಡನೆ ಆಡುತ್ತಾ ಹಾಡುತ್ತಾ ಕುಣಿಯುತ್ತಾ ಕಲಿಯುವ ಮಗು ಒಂದೇ ಕಡೆ ಕುಳಿತು ಕಂಪ್ಯೂಟರ್ ಪರದೆಯ ಮೇಲೆ ಗಂಟೆಗಟ್ಟಲೆ ದೃಷ್ಟಿನೆಟ್ಟು ಕೂರುವ ಪರಿಸ್ಥಿತಿ ಉಂಟಾಗಿದೆ.


    ಮಾಂಟೆಸರಿ ಶಿಕ್ಷಣ ಪದ್ದತಿಯ ಇಟಲಿಯ ವೈದ್ಯೆ ಡಾಕ್ಟರ್ ಮರಿಯಾ ಮಾಂಟೆಸ್ಸರಿಯ ಪ್ರಕಾರ “ಚಿಕ್ಕ ಮಕ್ಕಳ ಕಲಿಕೆಯ ಉದ್ದೇಶ ಅವರ ಭವಿಷ್ಯ ಜೀವನಕ್ಕೆ ಅತ್ಯವಶ್ಯಕವಾದ ಮೌಲ್ಯಗಳನ್ನು ಬಿತ್ತುವ ವೇದಿಕೆಯನ್ನು ಸೃಷ್ಟಿಸುವುದೇ ಹೊರತು ಒಣ ದಿನಚರಿಯನ್ನೆಲ್ಲ”. ಆದರೆ ಇಂದು ಪುಟ್ಟ ಮಕ್ಕಳಿಗೂ ಆರಂಭವಾಗಿರುವ ಆನ್ ಲೈನ್ ಶಿಕ್ಷಣ ಶಿಶು ಕೇಂದ್ರಿತವಾಗಿದೆಯೇ?


    ಮನೆಯಲ್ಲಿಯೇ ಆನ್ ಲೈನ್ ಕಲಿಕೆಯ ಪ್ರಕ್ರಿಯೆ ಆರಂಭವಾದರೆ ಮಗು ಕೊರೋನಾ ವೈರಾಣುವಿಗೆ ತುತ್ತಾಗುವ ಸಂಭವ ಕಡಿಮೆ.ಮನೆಯಲ್ಲೇ ಸುರಕ್ಷಿತವಾಗಿರುತ್ತವೆ. ಬ್ಯಾಗನ್ನು ಹೊರಲಾರದೆ ಹೊತ್ತು ಶಾಲೆೆಗೆ ಹೋಗುವ ಶ್ರಮವೂ ತಪ್ಪುತ್ತದೆ.ಜೊತಗೆ ಸಣ್ಣ ವಯಸ್ಸಿನಲ್ಲೇ ಕಂಪ್ಯೂಟರ್ ಜ್ಞಾನವು ಸಿಕ್ಕಂತಾಗುತ್ತದೆ. ಕೋವಿಡ್ ಕಾರಣದಿಂದಾಗಿ ಮಗುವಿನ ಶೈಕ್ಷಣಿಕ ವರ್ಷವೂ ವ್ಯರ್ಥವಾಗುವುದಿಲ್ಲ. ಇದೆಲ್ಲವೂ ಸರಿಯೇ.. ! ಆದರೆ ಆಳವಾಗಿ ಯೋಚಿಸಿದಾಗ ಆನ್ ಲೈನ್ ಶಿಕ್ಷಣವು ಪುಟ್ಟ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ.


    ಕಿಂಡರ್ ಗಾರ್ಟನ್ (ಅಂದರೆ ಮಕ್ಕಳ ಹೂಬನ) ಅಥವಾ ಕೆ.ಜಿ.ತರಗತಿಗಳ ಪಧ್ಧತಿಯನ್ನು ಪರಿಚಯಿಸಿದ ಜರ್ಮನಿಯ ಶಿಕ್ಷಣ ತಜ್ಞ ಫೆಡರಿಕ್ ಪ್ರೊಬೆಲ್ ರ ಪ್ರಕಾರ “children are like flowers. Each is beautiful alone but glorious when seen in the community of peers”
    ಶಿಸ್ತಿನ ಚೌಕಟ್ಟಿನಲ್ಲಿ ಪರಸ್ಪರ ಹೊಂದಾಣಿಕೆ ಸಹಕಾರಗಳಿಂದ ಗುಂಪಿನಲ್ಲಿ ಉಂಟಾಗುವ ಕಲಿಕೆಯು ಮಕ್ಕಳಲ್ಲಿ ಕಲಿಯುವ ಖುಷಿಯನ್ನು ಹುಟ್ಟುಹಾಕುತ್ತದೆ.

    miss ಆದ ಮಿಸ್


    ತರಗತಿಗಳಲ್ಲಿ ನಡೆಯುವ ಮನೋ ದೈಹಿಕ ಚಟುವಟಿಕೆಗಳು ಮಗುವಿನ ಮಾನಸಿಕ ಮತ್ತು ಶಾರೀರಿಕ ವಿಕಾಸವನ್ನು ಉತ್ತೇಜಿಸುತ್ತವೆ. ಜೊತೆಗಾರರೊಂದಿಗಿನ ಕಲಿಕೆಯು ಮಗುವಿನಲ್ಲಿ ಹೊಸಹೊಸ ಪರಿಕಲ್ಪನೆಗಳನ್ನು ಮೂಡಿಸಿ ಇತರರ ಮೆಚ್ಚುಗೆ ಗಳಿಸಲಾದರೂ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸುತ್ತದೆ. ಗುಂಪಿನಲ್ಲಿ ಕಲಿಕೆಯ ವೇಗವೂ ಅಧಿಕ ಮತ್ತು ಪರಿಣಾಮಕಾರಿಯಾಗಿರುತ್ತದೆ .ಏಕತೆಯ ಪರಿಕಲ್ಪನೆಯು ಸ್ವಾಭಾವಿಕವಾಗಿ ಒಡಮೂಡುತ್ತದೆ .ಕಣ್ಣೆದುರಿನಲ್ಲಿಯೇ ಇರುವ “miss” ಮಕ್ಕಳ ಪ್ರೀತ್ಯಾದರಗಳ

    ಕೇಂದ್ರವಾಗಿ ಮಗುವಿನ ಮುಗ್ಧ ಮಾತುಗಳಿಗೆ ಕಿವಿಯಾಗುತ್ತಾರೆ.
    ಮನೆಯಲ್ಲೇ ಕುಳಿತು ಆನ್ ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳನ್ನೆಲ್ಲಾ ಕಲ್ಪಿಸಿಕೊಳ್ಳಲು ಅಸಾಧ್ಯ. ಮಗುವು ಸಂಭಾಷಣಾ ಕೌಶಲ್ಯ, ಸಂವಹನಾ ಚಾತುರ್ಯಗಳಿಂದ ವಂಚಿತವಾಗಿ ಒಂಟಿತನಕ್ಕೆ ತುತ್ತಾಗುತ್ತದೆ. ಅದರಲ್ಲೂ ಪೋಷಕರು ಕೆಲಸದ ನಿಮಿತ್ತ ಹೊರ ಹೋದರಂತೂ ಆನ್ ಲೈನ್ ಶಿಕ್ಷಣದ ಕಥೆ ವ್ಯಥೆಯೇ ಸರಿ .ಹಿರಿಯರ ಉಸ್ತುವಾರಿಯಿಲ್ಲದೆ ಆನ್ ಲೈನ್ ತರಗತಿಗಳು ನಡೆಯುವಾಗ ಇಂಟರ್ನೆಟ್ ಯುಗದ ಸೈಬರ್ ಕ್ರೈಮ್ ಗಳಿಂದ ಮಗುವನ್ನು ರಕ್ಷಿಸುವವರು ಯಾರೆಂಬುದು ಯಕ್ಷಪ್ರಶ್ನೆ.

    ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ?


    ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ ಆ ಕೂಪದಿಂದ ಅದನ್ನು ಮೇಲೆತ್ತುವ ಬಗೆಯಾದರೂ ಎಂತು ? ಸ್ಕ್ರೀನ್ ಟೈಂ ಅತಿಯಾಗಿ ಮಗುವಿನ ದೃಷ್ಟಿಯ ಮೇಲೆ ಉಂಟಾಗುವ ದುಷ್ಪರಿಣಾಮ, ವ್ಯಾಯಾಮವಿಲ್ಲದ ದಿನಚರಿಯಿಂದ ಚಿಕ್ಕವಯಸ್ಸಿನಲ್ಲೇ ಬರುವ ಬೊಜ್ಜು ಇವೆಲ್ಲವುಗಳಿಗೂ ಆನ್ ಲೈನ್ ಶಿಕ್ಷಣ ಕಾರಣೀಭೂತವಾಗುತ್ತದೆ . ಚಿಕ್ಕ ಮಕ್ಕಳಲ್ಲಿ ಏಕಾಗ್ರತೆ ಮತ್ತು ಜ್ಞಾನತ್ಮಕ ಹಾಗೂ ಭಾವನಾತ್ಮಕ ವಲಯಗಳು ಹಿರಿಯರಷ್ಟು ಬೆಳವಣಿಗೆ ಹೊಂದದೇ ಇರುವುದರಿಂದ ಆನ್ ಲೈನ್ ತರಗತಿಗಳ ನಿರ್ವಹಣೆ ಸುಲಭದ ಮಾತಲ್ಲ.

    ಮನೆಗಳಲ್ಲಿ ಆನ್ಲೈನ್ ಶಿಕ್ಷಣಕ್ಕಾಗಿ ಪ್ರತ್ಯೇಕ ಕೊಠಡಿ, ಕಂಪ್ಯೂಟರ್, ಕಲಿಕಾ ವಾತಾವರಣಗಳನ್ನು ಸೃಷ್ಠಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆಗ “ಶಿಕ್ಷಣ ಪಡೆಯುವ ಹಕ್ಕು” ಅರ್ಥಹೀನವಾಗಿಬಿಡುತ್ತದೆ. ಬಣ್ಣಬಣ್ಣದ ಅಂಗಿ ಧರಿಸಿ ಸ್ಕೂಟರ್ ನಲ್ಲಿ ತಾಯಿ/ತಂದೆಯ ಹಿಂದೆ ತಬ್ಬಿಕುಳಿತು, ಅಜ್ಜಿ ತಾತಂದಿರಿಗೆ ಪುಟ್ಟ ಕೈಗಳಿಂದ ಟಾಟಾ ಮಾಡುತ್ತಾ, ಪುಟ್ಟ ತಲೆಯಲ್ಲಿ ಅಂದು ಶಾಲೆಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳ ಬೇಕಿರುವ ನಾನಾ ವಿಷಯಗಳ ಬಗ್ಗೆ ಯೋಚಿಸುತ್ತಾ ಖುಷಿಯಿಂದ ಶಾಲೆಗೆ ತೆರಳುವ ದೃಶ್ಯವನ್ನು ನೋಡಿದವರಿಗೆ ಮಗು ಮನೆಯಲ್ಲಿ ಒಬ್ಬಂಟಿಯಾಗಿ ಕಂಪ್ಯೂಟರಿನೆದುರು ಏಕತಾನತೆಯಿಂದ ಕುಳಿತಿರುವ ದೃಶ್ಯ ನಿಜಕ್ಕೂ ಭೀತಿ ಹುಟ್ಟಿಸುತ್ತದೆ. ಮಗುವಿನ ಶಿಕ್ಷಣಿಕ ಜೀವನದ ಆರಂಭದ ವರ್ಷಗಳು ಹರುಷದ ವಾತಾವರಣವನ್ನು ನಿರ್ಮಿಸಬೇಕೆ ಹೊರತು ಬಂಧನದ ಅನುಭವವನ್ನಲ್ಲ.

    ಆಟವಾಡುತ್ತಾ ತಾನೇತಾನಾಗಿ ಕಲಿಯುವ ಹಂತದಲ್ಲಿ ಮಗುವಿನ ಆಸಕ್ತಿಯ ಕ್ಷೇತ್ರ, ರಚನಾತ್ಮಕ ಸ್ವಭಾವ, ಗುಂಪಿನಲ್ಲಿ ನಡವಳಿಕೆ, ಮನಸ್ಸಿನ ಸಂಕೀರ್ಣತೆ, ಕಲ್ಪನಾಶಕ್ತಿ ಇವೆಲ್ಲವುಗಳನ್ನು ಸತತವಾಗಿ ಗಮನಿಸಿ,ಪೋಷಕರಿಗೆ ತಿಳಿಯಪಡಿಸುವುದು ಸುಲಭವಲ್ಲ. ಇದಕ್ಕೆ ಅತ್ಯುತ್ತಮ ತರಬೇತಿ ಪಡೆದ ತಾಯಿ ಮನದ ಶಿಕ್ಷಕಿಯರೇ ಬೇಕು. ಮನೆಯಲ್ಲಿ ನಡೆಯುವ ಆನ್ಲೈನ್ ಶಿಕ್ಷಣದಿಂದ ಈ ಎಲ್ಲಾ ಪ್ರಕ್ರಿಯೆಗಳನ್ನು ಅಪೇಕ್ಷಿಸುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮಾರಕವೇ ಸರಿ. ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ತರಗತಿಗಳು ಸಂಪೂರ್ಣವಾಗಿ ಚಟುವಟಿಕೆ ಆಧಾರಿತವಾಗಿ ನಡೆಯಬೇಕೆಂಬುದು RTE (Right to Education) ನ ಧ್ಯೇಯ. ಇದು ಸರ್ವ ಶಿಕ್ಷಣ ಅಭಿಯಾನದ ಮೂಲ ಮಂತ್ರವೂ ಹೌದು. ಆನ್ಲೈನ್ ಶಿಕ್ಷಣದಿಂದ ಈ ಮೂಲ ಉದ್ದೇಶಕ್ಕೆ ಕೊಡಲಿಯೇಟು ಬೀಳುತ್ತದೆ. ಆನ್ಲೈನ್ನಲ್ಲಿ ಬೋಧಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ನೀಡದ ಹೊರತು ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳೆರಡೂ ಯಶಸ್ವಿಯಾಗುವುದು ಅನುಮಾನ .


    ಆದಾಗ್ಯೂ ಜಾಗತಿಕ ಪರಿಸ್ಥಿತಿಯ ಒತ್ತಡದಿಂದ ಅನ್ಯಮಾರ್ಗವಿಲ್ಲದೆ ಪುಟ್ಟ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳುವುದೇ ಆದರೆ ಅದಕ್ಕಾಗಿ ಸೂಕ್ತವಾದ ಮಾರ್ಗದರ್ಶಿಯನ್ನು ಅನುಸರಿಸಲೇಬೇಕು. ಆನ್ಲೈನ್ ತರಗತಿಯ ಪ್ರಾರಂಭದಲ್ಲಿ ಪ್ರಾರ್ಥನೆ, ವ್ಯಾಯಾಮ, ತರಗತಿಗಳ ಮಧ್ಯೆ ವಿಶ್ರಾಂತಿ, ಮನೆಯಲ್ಲೇ ಅತ್ತಿತ್ತ ಓಡಾಡುತ್ತಾ ಚಟುವಟಿಕೆ ಮಾಡುವಂತೆ ಮಾರ್ಗದರ್ಶನ ,ಕಂಪ್ಯೂಟರ್ ಗೇಮ್ ಗಳ ಮೂಲಕ ಪಾಠ ಇವೆಲ್ಲವನ್ನು ಅಳವಡಿಸಿ ವೇಳಾ ಪಟ್ಟಿಯನ್ನು ಸಿದ್ಧಗೊಳಿಸಲು ಬೇಕಾಗುತ್ತದೆ. ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಗುವಿಗೆ ಕಂಪ್ಯೂಟರ್ ಪರದೆಯ ಮೇಲೆ ಶಿಕ್ಷಕರೊಂದಿಗೆ ಇತರ ಸ್ನೇಹಿತರು ಕಾಣುವಂತಿರಬೇಕು. ಇವೆಲ್ಲ ಮಾನದಂಡಗಳನ್ನು ಪೂರೈಸಿ, ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ರಚಿಸುವುದು ಸುಲಭವೇ ?ಯೋಚಿಸಿ.

    ಮಕ್ಕಳಿಗೆ ಶಿಕ್ಷೆ

    ಎಲ್ಲರೊಡನೆ ಬೆರೆತು ಕಲಿಯಬೇಕಾದ ಮಗುವನ್ನು ಶಿಕ್ಷೆಗೊಳಪಡಿಸಿದಂತೆ ಆಗುವುದಿಲ್ಲವೇ ? ಪುಟ್ಟ ಮಕ್ಕಳಿಂದ ಅವರ ಪ್ರಾಥಮಿಕ ಶಾಲಾ ಸವಿನೆನಪುಗಳನ್ನು ಕಿತ್ತುಕೊಳ್ಳುವ ಹಕ್ಕು ನಮಗೆಲ್ಲಿದೆ? ಆನ್ ಲೈನ್ ಶಿಕ್ಷಣದಿಂದ ಪುಟ್ಟ ಮಕ್ಕಳನ್ನು ಕಷ್ಟಪಟ್ಟು ಕಲಿಯುವಂತೆ ಮಾಡಬಹುದೇ ವಿನಃ ಇಷ್ಟಪಟ್ಟು ಕಲಿಯುವಂತೆ ಮಾಡುವುದು ಕಷ್ಟಸಾಧ್ಯ.


    ಎಲ್ಲ ಕ್ರಿಯೆಗೂ ಒಂದು ಕೊನೆ ಇದ್ದೇ ಇರುತ್ತದೆ. ಹಾಗೆ ಕರೋನಾಗೆ ಸಹ . ಒಂದೆರಡು ತಿಂಗಳುಗಳಲ್ಲಿ ಪುಟ್ಟ ಮಕ್ಕಳು ಆನ್ ಲೈನ್ ನಲ್ಲಿ ಕಲಿತು ಗುಡ್ಡೆ ಹಾಕುವುದೇನು ಇರುವುದಿಲ್ಲ. ಕೆಲಕಾಲ ಮಕ್ಕಳನ್ನು ಮಕ್ಕಳಾಗಿ ಇರಲು ಬಿಟ್ಟು ಬಿಡೋಣ. ಅವರನ್ನು ಯಂತ್ರಗಳನ್ನಾಗಿಸಲು ಉಳಿದ ಜೀವನವೇ ಎದುರಿಗಿದೆ. ಹಾಗಾಗಿ ಕವಿದ ಮೋಡ ಕರಗಿದ ಮೇಲೆ ಮಕ್ಕಳು ಕುಣಿಯುತ್ತಾ ಶಾಲೆಗೆ ಹೋಗಲಿ ಅಲ್ಲವೇ ? 

    ಇದನ್ನೂ ಕೇಳಿ: ಮನೆಗೆ ಬಂದ ಸ್ಕೂಲು

    ಚೀನಾದ ಹುಸಿ ಆಕ್ರಮಣ ನೀತಿಯ ಹಿಂದೆ ಹಲವು ತಂತ್ರ

    ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಇದಕ್ಕೆ ಹೊರತಲ್ಲ. ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.

    ಈ ಹಿಂದೆ ಅಂದರೆ ದಶಕಗಳ ಹಿಂದೆ ಸೇನಾ ಬಲದ ವಿಷಯದಲ್ಲಿ ದುರ್ಬಲವಾಗಿದ್ದ ಭಾರತಕ್ಕೆ ಹೀನಾಯ ಸೋಲು ಉಣಿಸಿದ್ದ ಚೀನಾ ಈ ಬಾರಿ ಕೇವಲ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಲಷ್ಟೇ ಮುಂದಾಗಿದೆ. ಲಡಾಖ್ ಘಟನೆಯೂ ಇದಕ್ಕಿಂತ ಹೆಚ್ಚಿನದ್ದೇನಲ್ಲ. ಯಾರೂ ಕೂಡ ಪೂರ್ಣ ಪ್ರಮಾಣದ ಯುದ್ಧ ಎರಡು ಅಣ್ವಸ್ತ್ರ ಶಕ್ತ ರಾಷ್ಟ್ರಗಳ ನಡುವೆ ನಡೆಯಬಹುದು ಎಂಬ ನಿರೀಕ್ಷೆ ಅಥವಾ ಅತಿಯಾದ ಭಯಂಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ. ಇದು ಒಂದು ಹಂತದಲ್ಲಿ ಸಹಜವಾಗಿಯೇ “ಪರಸ್ಪರ ಮಾತುಕತೆ”ಯ ಮೂಲಕ ಬಗೆಹರಿಯಲಿರುವ ಸಮಸ್ಯೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

    ಚೀನಾದ ಸಮಸ್ಯೆ

    ಕೋವಿಡ್ -19 ಸಮಸ್ಯೆಯು ಚೀನಾವನ್ನು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಿದೆ. ಒಂದೆಡೆ ಅಮೆರಿಕ ಗುಡುಗಿದೆ.ಇನ್ನೊಂದೆಡೆ ಆಸ್ಟ್ರೇಲಿಯಾ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ದೇಶಗಳು ವೈರಸ್ ಹಾವಳಿ ಹೇಗೆ ಆರಂಭವಾಯಿತು ಎಂಬ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ಅದಕ್ಕೆ ಭಾರತ ಕೂಡ ಪೂರ್ಣ ಸಮ್ಮತಿ ನೀಡಿದೆ. ಚೀನಾದಿಂದ ನಿರ್ಗಮಿಸುತ್ತಿರುವ ಕಂಪನಿಗಳಿಗೆ ಪೂರ್ಣಕುಂಭದ ಸ್ವಾಗತವನ್ನು ಕೋರುತ್ತಿರುವ ಭಾರತದಲ್ಲಿ ರಿಮೂವ್ ಚೀನಾ ಪ್ರಾಡಕ್ಟ್ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿದೆ. ಇದೆಲ್ಲವೂ ಚೀನಾಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಭಾರತದ ಮೇಲೆ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಮೂಲಕ ತನ್ನ ಆರ್ಥಿಕತೆಗೆ ಹೊಡೆತ ಬೀಳದಂತೆ ತಡೆಯುವ ಯತ್ನವೇ ಲಡಾಖ್ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.

    ಇವುಗಳನ್ನು ಹೊರತು ಪಡಿಸಿ ಚೀನಾದ ಭಯಕ್ಕೆ ಹಲವು ಕಾರಣಗಳಿವೆ. ರಷ್ಯಾದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಡೀ ದೇಶವನ್ನು ಸಮರ್ಥವಾಗಿ ನಿಭಾಯಿಸಿ ತಾವು ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆ ಬಹುತೇಕ ಖಚಿತಪಡಿಸಿಕೊಂಡಿದ್ದು ಅದಕ್ಕಾಗಿ ರಾಜಕೀಯವಾಗಿ ಶಾಸನಾತ್ಮಕವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ  ಜಿನ್ ಪಿಂಗ್  ವಿರುದ್ಧ ಮಾರ್ಚ್ ನಲ್ಲೇ ಕಮ್ಯೂನಿಸ್ಟ್ ಪಕ್ಷದ ಅತ್ಯುನ್ನತ ನೀತಿ ನಿರ್ದೇಶಕ ಘಟಕವಾದ ಪಾಲಿಟ್ ಬ್ಯೂರ್ ಗೆ ಹಲವರು ಪತ್ರ ಬರೆದು, ಚೀನಾದ ಬಲಿಷ್ಠತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿನ್ ಪಿಂಗ್ ಅವರನ್ನು ಪದಚ್ಯುತಗೊಳಿಸಬೇಕು ಎಂಬುದನ್ನು ಸಕಾರಣವಾಗಿ ಉಲ್ಲೇಖಿಸಿದ್ದರು. ಆ ಬಳಿಕ ಕೆರಳಿದ್ದ ಪಿಂಗ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಉಳಿದಂತೆ ನಾನಾ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಸೇರಿದಂತೆ ಚೀನಾದ ಅಭಿವೃದ್ಧಿ ಪರವಾಗಿರುವ ವ್ಯಕ್ತಿಗಳು ಕೂಡ ಈ ನಿಟ್ಟಿನಲ್ಲಿ ಪತ್ರ ಬರೆದು ಎಚ್ಚರಿಸಿದ್ದರು.

    ರಾಷ್ಟ್ರೀಯವಾದದ ಸೋಗು

    ಈ ಸಂದರ್ಭದಲ್ಲಿ ಪಿಂಗ್ ರಾಷ್ಟ್ರೀಯವಾದದ ಸೋಗನ್ನು ಧರಿಸಲು ಆರಂಭಿಸಿದರು. ಕೊರೊನಾ ವೈರಸ್ ಹಾವಳಿಯಿಂದ ದೇಶವನ್ನು ಕಾಪಾಡಲು ಅಸಮರ್ಥರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾದ ಅವರು ಅದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತರಲು ರಹಸ್ಯ ಯೋಜನೆ ರೂಪಿಸುವಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾದರು. ಆದರೆ, ಹಾಂಗ್ ಕಾಂಗ್ ಕೇವಲ ಚೀನೀಯರನ್ನು ಮಾತ್ರ ಒಳಗೊಂಡಿಲ್ಲ. ಅಲ್ಲಿ 7.5 ದಶ ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಇಂತಹ ಕಾನೂನು ಜಾರಿಗೆ ತಂದರೆ ಅಗ ಸಹಜವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ತಿಳಿಯದಷ್ಟು ಅಮಾಯಕ ಪಿಂಗ್ ಅಲ್ಲ. ಆದರೂ ಅ ನಿಟ್ಟಿನಲ್ಲಿ ಮನಸ್ಸು ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಕಾರ್ಯತಂತ್ರ ಎಂದೇ ಹೇಳಲಾಗುತ್ತಿದೆ.

    ಭಾರತದ ಜತೆ ಸಂಘರ್ಷ

    ಭಾರತ-ಚೀನಾ ಎರಡು ಅಣ್ವಸ್ತ್ರ ಸಶಕ್ತ ರಾಷ್ಟ್ರಗಳು. ಹೀಗಾಗಿ ಇಲ್ಲಿ ನಡೆಯುವ ಯಾವುದೇ ಸಂಘರ್ಷ ಕೇವಲ ಏಷ್ಯಾ ಖಂಡಕ್ಕೆ ಸೀಮಿತವಾಗುವುದಿಲ್ಲ. ಅದರಲ್ಲೂ ಭಾರತದಲ್ಲಿ ನರೇಂದ್ರ ಮೋದಿಯಂತಹ ವರ್ಚಸ್ವಿ ನಾಯಕ ಪ್ರಧಾನಿಯಾಗಿದ್ದು, ಈಗಾಗಲೇ ಸರ್ಜಿಕಲ್ ಸ್ಟ್ರೈಕ್ ನಂಥ ವಿದ್ಯಮಾನಗಳ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಆದ್ದರಿಂದ ಇಲ್ಲಿ ಆಗುವ ಚಿಕ್ಕ ಸಂಘರ್ಷವನ್ನೂ ತೀರಾ ಲಘುವಾಗಿ ಯಾರೂ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಕೆಲವು ವರ್ಷಗಳಿಂದ ಲಡಾಖ್ ವಲಯದಲ್ಲಿ ಭಾರತದಿಂದ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಈಗ ಹೆಚ್ಚು ಪ್ರಚಾರ ಪಡೆಯುತ್ತಿದ್ದು, ಮುಖ್ಯ ಭೂಮಿಕೆಗೆ ಬಂದಿದೆ.

    ಎರಡೂ ದೇಶಗಳಿಗೂ ಪೂರ್ಣ ಪ್ರಮಾಣದ ಯುದ್ಧ ಬೇಕಾಗಿಲ್ಲ. ಯಾಕೆಂದರೆ ಭಾರತವು ಈಗ ನೆಹರೂ ಕಾಲದಂತೆ ದುರ್ಬಲವಾಗಿಲ್ಲ. ಸಶಕ್ತ ಸೇನೆ, ರಫೇಲ್ ಸೇರಿದಂತೆ ನಾನಾ ಆಧುನಿಕ ಯುದ್ಧ ವಿಮಾನಗಳು, ಉಪಗ್ರಹ ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನ, ಅತ್ಯುನ್ನತ ಯುದ್ಧ ಟ್ಯಾಂಕ್ ಸೇರಿದಂತೆ ಸೇನಾ ವಿಭಾಗದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಾಗಿ ಯುದ್ಧ ನಡೆಯುವ ಸಂಭವ ತೀರಾ ಕಡಿಮೆ. ಆದಾಗ್ಯೂ, ಬೆದರಿಸಿ ನೋಡುವ ಎಂಬ ಚೀನಾದ ತಂತ್ರವು ಯಾವಾಗಲೂ ಮುಂದುವರಿಯುತ್ತಲೇ ಇರುತ್ತದೆ. ಇದನ್ನು ಯಾವ ರೀತಿ ಭಾರತ ಯಶಸ್ವಿಯಾಗಿ ಹತ್ತಿಕ್ಕಿ ಇದೊಂದು ಭ್ರಮೆ ಎಂದು ವಿಶ್ವಕ್ಕೆ ತೋರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.-

    ಕೌಶಿಕ್ ಗಟ್ಟಿಗಾರು

    ಮನೆಗೆ ಬಂದ ಸ್ಕೂಲು

    ಮಕ್ಕಳ ಸ್ಖೂಲು ಮನೇಲಲ್ವೆ ಎಂದಿದ್ದರು ಕೈಲಾಸಂ. ಈಗ ಅಕ್ಷರಶಃ ಸ್ಕೂಲು ಮನೆಗೇ ಬಂದಿದೆ. ಎಲ್ಲೆಲ್ಲೂ ಆನ್ ಲೈನ್ ಶಾಲೆಗಳ ಆರ್ಭಟ.ಆಡುವ ಹೊತ್ತಲ್ಲಿ ಕಂಪ್ಯೂಟರ್ ಮುಂದೆ ಮಕ್ಕಳ ಪಾಠ. ಅವರ ಹಿಂದೆ ಪಾಲಕರ ಪರದಾಟ. ಕನ್ನಡಪ್ರೆಸ್.ಕಾಮ್ ನ ಇಂದಿನ ಪಾಡ್ ಕಾಸ್ಟ್ ನಲ್ಲಿ ಭಾರತಿ ಶ್ರೀನಿವಾಸ ಮತ್ತು ಸುಮಾ ಗಿರಿಧರ ಅವರು ಆನ್ ಲೈನ್ ತರಗತಿಗಳ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ

    ಪತ್ರಕರ್ತರ ಬದಲು ಕೃತಕ ಬುದ್ಧಿಮತ್ತೆ ಮೊರೆಹೋದ ಮೈಕ್ರೋಸಾಫ್ಟ್

    ಮೈಕ್ರೋಸಾಫ್ಟ್ ಮತ್ತು ಸಹ ಸಂಸ್ಥೆ ಎಂಎಸ್ಎನ್ ತನ್ನ ನ್ಯೂಸ್ ಪೋರ್ಟಲ್ ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಪತ್ರಕರ್ತರ ಬದಲು ಈ ಮೂಲಕ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್)ಯನ್ನು ಪತ್ರಿಕಾರಂಗಕ್ಕೂ ಅನ್ವಯಿಸಲು ಮುಂದಾಗಿದೆ.

    ಕೊರೊನಾ ವೈರಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಈ ಕ್ರಮವನ್ನು ತೆಗೆದುಕೊಳ್ಳಲು ಕೆಲವು ಕಾಲದ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎಂದು ಮೈಕ್ರೋಸಾಫ್ಟ್ ಸ್ಪಷ್ಟನೆ ನೀಡಿದೆ.

    ಕಳೆದ 25 ವರ್ಷಗಳಿಂದ ಮೈಕ್ರೋಸಾಫ್ಟ್ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು,  1995ರಲ್ಲಿ ಪ್ರತ್ಯೇಕ ವೆಬ್ ಚಾನಲ್ ಆರಂಭಿಸಿತ್ತು.  ಹೊಸ ಪ್ರಕ್ರಿಯೆಯ ಮೂಲಕ ಸಂಸ್ಥೆಯು ಎಐ ಮೂಲಕವೇ ಸುದ್ದಿಯ ಪ್ರಾಮುಖ್ಯತೆಯನ್ನು ಅಳೆದು ಪ್ರಕಾಶನ ಮಾಡಲಿದೆಯಂತೆ. ಅದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ಪತ್ರಕರ್ತರಿಗೆ ತರಬೇತಿಯನ್ನೂ ನೀಡಲಿದೆಯಂತೆ.ಈ ಮೂಲಕ ಮಾನವ ಬುದ್ಧಿಮತ್ತೆಗಿಂತಲೂ ರೊಬೋಟ್ ನಂತಹ ಯಾಂತ್ರಿಕ ಬುದ್ಧಿಮತ್ತೆಯು ಎಷ್ಟು ಪ್ರಮಾಣದಲ್ಲಿ ಸೂಕ್ತ ಸುದ್ದಿಯನ್ನು ಆಯ್ಕೆ ಮಾಡುತ್ತದೆ ಎಂದು ಗುರುತಿಸಲಿದೆ ಎಂದು ಹೇಳಲಾಗಿದೆ.

    ಆದರೆ ಪತ್ರಿಕಾರಂಗದಂತಹ ಅತಿ ಸೂಕ್ಷ್ಮ ಕ್ಷೇತ್ರದಲ್ಲಿ ಈ ರೀತಿ ಕೃತಕ ಬುದ್ಧಿಮತ್ತೆ ಯಾವ ರೀತಿ ನಿರ್ಧಾರಾತ್ಮಕ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಇಂತಹ ಒಂದು ಕ್ರಮವನ್ನು ಸಾಕಷ್ಟು ಅಧ್ಯಯನ ಅಥವಾ ವಿಶ್ಲೇಷಣೆಯಿಲ್ಲದೆ ಯಾವ ರೀತಿ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಜಗತ್ತು ಪ್ರತಿಕ್ರಿಯೆ ನೀಡಿದೆ.

    ಮಾನವನ ಬುದ್ಧಿಗೆ ಸಾಟಿಯಾಗದು

    ಯಂತ್ರಗಳು ಮಾನವ ಸೃಷ್ಟಿ. ಆತನ ಸೃಜನಶೀಲತೆಯಿಂದಲೇ ಅವುಗಳ ನಿರ್ಮಾಣವಾಗಿದ್ದು, ಹೀಗಾಗಿ ಎಐ ಯಾವ ಕಾರಣಕ್ಕೂ ಪೂರ್ಣವಾಗಿ ಮಾನವನ ಸ್ವಯಂ ಬುದ್ಧಿಮತ್ತೆ ಮತ್ತು ಆ ಕ್ಷಣದಲ್ಲಿ ಉದ್ಭವವಾಗುವ ಕ್ರಿಯೇಟಿವಿಟಿಗೆ ಸಾಟಿಯಾಗಲಾರದು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಲೇ ಸಾಗಿದೆ. ಅದರಲ್ಲೂ ಪತ್ರಿಕಾ ರಂಗದಲ್ಲಿ ಆ ಕ್ಷಣದ ಆಗು ಹೋಗುಗಳ ಬಗ್ಗೆ ನಿರ್ಧಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯಾವುದೋ ಒಂದು ಕಾಲದಲ್ಲಿ ಸಿದ್ಧಪಡಿಸಿದ ಯಂತ್ರಮಾನವ ಸುದ್ದಿಯನ್ನು ಯಾವ ರೀತಿ ನಿರ್ಧರಿಸಬಲ್ಲ ?

    ಉದಾಹರಣೆ ಕೊರೊನಾ ವೈರಸ್, ನಿಸರ್ಗ ಚಂಡ ಮಾರುತದಂತಹ ವಿಕೋಪಗಳು ಆ ಕ್ಷಣದಲ್ಲಿ ಮಾಡಬಹುದಾದ ಅನಾಹುತಗಳನ್ನು ಗ್ರಹಿಸಿಯೇ ಸುದ್ದಿಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಐಬಿಎಂ ವಾಟ್ಸನ್ ಸಿದ್ಧಪಡಿಸಿದ ಮೋರ್ಗನ್ ಸಿನಿಮಾದ ಟ್ರೇಲರ್ ನ್ನು ಅವರು ಉಲ್ಲೇಖಿಸುತ್ತಾರೆ. ಇದನ್ನು ನೋಡಿದರೆ ಸಾಮಾನ್ಯ ಮನುಷ್ಯನಿಗೆ ಕ್ರಿಯೇಟಿವಿ ಅರ್ಥವಾಗುತ್ತದೆಯೇ ವಿನಾಃ ಇನ್ನಷ್ಟೇ ಜಗತ್ತನ್ನು ಅರಿಯಬೇಕಾಗಿದ್ದ, ತನ್ನದೇ ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವ ಮಕ್ಕಳಿಗೆ ಅರ್ಥವಾಗಲು ಸಾಧ್ಯವಿಲ್ಲ. ಯಂತ್ರಗಳು ಮಾನವನ ಕ್ರಿಯೇಟಿವಿಟಿಗೆ ಪೂರಕವಾಗಬಹುದೇ ಹೊರತು ಅವುಗಳೇ ಸ್ವಯಂ ಯೋಚನೆ ಮಾಡುವ ಶಕ್ತಿಯನ್ನು ಹೊಂದಿಲ್ಲ. ಇದೇ ರೀತಿ ದಿನ ನಿತ್ಯದಲ್ಲಿ ಆಗುವ ನಾನಾ ಬೆಳವಣಿಗೆಗಳನ್ನು ಯಂತ್ರದ ಕಣ್ಣಿನಿಂದ ನೋಡಿ ಸುದ್ದಿಯ ಗ್ರಾವಿಟಿಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

    ರಿಮೂವ್ ಚೀನಾ ಆಪ್ ಗೆ ಕೊಕ್

    ಲಾಂಚ್ ಆದ ಒಂದೆರಡು ದಿನಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಹಿಟ್-ಲೈಕ್ ಸಂಪಾದಿಸಿದ್ದ ಜೈಪುರ ಮೂಲದ ರಿಮೂವ್ ಚೀನಾ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಿಂತೆಗೆದುಕೊಂಡಿದೆ.

    ಕೊರೊನಾ ವೈರಸ್ ಹಾವಳಿ, ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ದುಸ್ಸಾಹಸದ ಹಿನ್ನೆಲೆಯಲ್ಲಿ ಭಾರತದಲ್ಲಿ ದಾಖಲೆಯ ಹಿಟ್ ಕಂಡ ಇದು ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ.

    ಜನಪ್ರಿಯ 3 ಈಡಿಯೆಟ್ಸ್ ಸಿನಿಮಾದ ಪ್ರೇರಣೆಯಿಂದ ಮುಖ್ಯವಾಗಿ ಲಡಾಖ್ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದ ಆಂದೋಲನವನ್ನು ಆರಂಭಿಸಿದ್ದ ಸೋನಮ್ ವಾಗ್ನೆಹಕ್ ಸೇರಿದಂತೆ ಹಲವು ಖ್ಯಾತನಾಮರು ಇದರ ಫಾಲೋವರ್ ಆಗಿದ್ದರು.

    ಆದರೆ ಈಗ ಗೂಗಲ್ ಈ ಆಪ್ ನ್ನು ತನ್ನ ಆಪ್ ಸ್ಟೋರ್ ನಿಂದ ಹಿಂತೆಗೆದುಕೊಂಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ಆಪ್ ಅಭಿವೃದ್ಧಿ ಪಡಿಸಿದ ಒನ್ ಟಚ್ ಆಪ್ ಲ್ಯಾಬ್ ಮಾಲೀಕರಿಗೆ ಮಾಹಿತಿ ನೀಡಿದೆ.

    ಕೊರೊನಾದಿಂದಾಗಿ ಈ ವರ್ಷ ಬ್ಯಾಂಕ್ ಜಾಬ್ ಸಿಗುತ್ತಾ?

    ಕೊರೊನಾ (ಕೋವಿಡ್-19) ವೈರಾಣು ಜಾಗತಿಕ  ಅರ್ಥ ವ್ಯವಸ್ಥೆಗೆ, ಅದರಲ್ಲೂ ಉದ್ಯೋಗ ಮಾರುಕಟ್ಟೆಗೆ ನೀಡಿರುವ ಹೊಡೆತ ಊಹಿಸಲೂ ಸಾಧ್ಯವಾಗುತ್ತಿಲ್ಲ. ಈಗ ಎಲ್ಲೆಲ್ಲೂ ‘ಜಾಬ್ ಕಟ್’ ನದೇ ಸುದ್ದಿ. ಹೀಗಿರುವಾಗ ಜಾಬ್ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಏನು ಮಾಡಬೇಕು, ಜಾಬ್ ಪಡೆಯುವುದು ಹೇಗೆ? ಎಲ್ಲೆಲ್ಲಿ ಜಾಬ್ ಅವಕಾಶಗಳಿರಬಹುದು ಎಂಬ ಚಿಂತೆಯಲ್ಲಿದ್ದಾರೆ.

    ಅಂತಾರಾಷ್ಟ್ರೀಯ ಮ್ಯಾನೇಜ್ ಮೆಂಟ್ ಕನ್ಸಲ್ಟಿಂಗ್ ಕಂಪನಿ ‘ಅರ್ಥುರ್ ಡಿ ಲಿಟ್ಟಲ್ ‘ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಕೊರೊನಾದ ಪರಿಣಾಮವಾಗಿ ನಮ್ಮ ದೇಶದಲ್ಲಿ 13.6 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.  ದೇಶದಲ್ಲಿನ ನಿರುದ್ಯೋಗ ದರವು ಶೇ. 7.6 ರಿಂದ ಶೇ.35ಕ್ಕೆ ಏರಲಿದೆ. ಜಿಡಿಪಿಯ ಕುಸಿತ ಕೋಟ್ಯಂತರ ಜನರನ್ನು ಬಡತನಕ್ಕೆ ತಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಪಡೆಯುವುದು ಪ್ರತಿಯೊಬ್ಬರಿಗೂ ಸವಾಲಿನ ಸಂದರ್ಭ ಎಂದು ಬಿಡಿಸಿ ಹೇಳಬೇಕಾಗಿಲ್ಲ.

    ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗ ನಷ್ಟ, ಅಭದ್ರತೆ, ವೇತನ ಕಡಿತ, ಹೆಚ್ಚಿನ ಅವಧಿಯ ದುಡಿಮೆ  ಮತ್ತಿತರ ಕಾರಣಗಳಿಂದಾಗಿ ಇಂದು ಪ್ರತಿಯೊಬ್ಬರೂ ಖಾಸಗಿ ಕ್ಷೇತ್ರದ ಉದ್ಯೋಗವನ್ನು ಬಿಟ್ಟು, ಸರಕಾರಿ ನೌಕರಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಏನಿಲ್ಲವೆಂದರೂ ಸರಕಾರಿ ಉದ್ಯೋಗದಲ್ಲಿ ‘ಉದ್ಯೋಗ ಭದ್ರತೆ’ಯಾದರೂ ಇರುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

    ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿದ್ದ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಕ್ಷೇತ್ರವೂ ಒಂದು. ಸದ್ಯದ ಕೋವಿಡ್ ಪರಿಣಾಮ ಹಾಗೂ ಬ್ಯಾಂಕುಗಳ ವಿಲೀನದ ಪ್ರಕ್ರಿಯೆಯಿಂದಾಗಿ ಈ ಕ್ಷೇತ್ರ ಮೊದಲಿನಂತೆಯೇ ನೇಮಕ ಮಾಡಿಕೊಳ್ಳಲಿದೆಯೇ? ಈ ಪ್ರಶ್ನೆ ಹಲವರದ್ದು.

    ಅವಕಾಶಗಳು ಹೇಗಿವೆ?

    ಕೇಂದ್ರ ಸರ್ಕಾರದ ಹೊಸ ಹೊಸ ಆರ್ಥಿಕ ನೀತಿಗಳು, ಹಣಕಾಸು ವ್ಯವಹಾರದಲ್ಲಿ ಮಾಡಲಾಗುತ್ತಿರುವ ಬದಲಾವಣೆಗಳು ಪ್ರತಿಯೊಬ್ಬರೂ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವಂತೆ ಮಾಡಿದೆ. ಆರ್ಥಿಕ ಬೆಳವಣಿಗೆ ಎಂದರೆ ಕೃಷಿ, ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸೇವಾ ಕ್ಷೇತ್ರಗಳ ವಿಸ್ತರಣೆ. ಇದರಲ್ಲಿ ವಿತ್ತೀಯ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಸಹಜವಾಗಿಯೇ ವಿತ್ತೀಯ ಸಂಸ್ಥೆಗಳ ವ್ಯಾಪ್ತಿ  ವಿಸ್ತಾರಗೊಳ್ಳುತ್ತಿದೆ.

    ಭದ್ರ ಆರ್ಥಿಕ ಮತ್ತು ಕಾನೂನಾತ್ಮಕ ನೆಲೆಗಟ್ಟಿನಲ್ಲಿ ಬೇರು ಬಿಟ್ಟಿರುವ ದೇಶದ ಬ್ಯಾಂಕಿಂಗ್ ಕ್ಷೇತ್ರ ದೇಶದ ಪ್ರತಿಯೊಬ್ಬ ನಾಗರಿಕರನ್ನೂ ಒಳಗೊಳ್ಳುವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಹೀಗಾಗಿ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ತವಕದಲ್ಲಿವೆ. ಪ್ರತಿ ದಿನವೂ ಹೊಸ ಹೊಸ ಬಗೆಯ ಸೇವೆಗಳನ್ನು ಆರಂಭಿಸುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಪ್ರತಿ ವರ್ಷ ಸೃಷ್ಟಿಯಾಗುತ್ತಲೇ ಇರುತ್ತದೆ.

    ಆದರೆ ಆಟೋಮೇಷನ್ ಬಂದ ಮೇಲೆ ಸಹಜವಾಗಿಯೇ ಬ್ಯಾಂಕುಗಳಲ್ಲಿ ನೇಮಕದ ಪ್ರಮಾಣ ಕಡಿಮೆಯಾಗುತ್ತಾ ಬಂದಿತ್ತು. ಈಗ ಕೊರೊನಾ ಎಫೆಕ್ಟ್ ಬೇರೆ ಇರುವುದರಿಂದ ಇನ್ನಷ್ಟು ಕಡಿಮೆಯಾಗಬಹುದು. ಆದರೆ ಸರ್ಕಾರ ಘೋಷಿಸಿರುವ ವಿವಿಧ ಪ್ಯಾಕೇಜ್ ಗಳು, ವಿನಾಯಿತಿಗಳು ಬ್ಯಾಂಕಿಂಗ್ ಕ್ಷೇತ್ರದ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಉದ್ಯೋಗಿಗಳ ಅವಶ್ಯಕತೆಯಂತೂ ಈ ಕ್ಷೇತ್ರದಲ್ಲಿ ಸದಾ ಇರಲಿದೆ.

    ವಿಲೀನದಿಂದಾಗಿ ಬದಲಾವಣೆ

    ನಿಮಗೆಲ್ಲಾ ತಿಳಿದಿರುವಂತೆ ಕೇಂದ್ರ ಸರ್ಕಾರ 2019ರ ಆಗಸ್ಟ್ ನಲ್ಲಿ  10 ರಾಷ್ಟ್ರೀಕೃತ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಕುರಿತು ಪ್ರಕಟಣೆ ನೀಡಿತ್ತು.

    ಇದರ ಪ್ರಕಾರ ಎಸ್ ಬಿಐನ ಅಸೋಸಿಯೇಟ್ ಬ್ಯಾಂಕುಗಳನ್ನು ಮತ್ತು ಮಹಿಳಾ ಬ್ಯಾಂಕ್ ಅನ್ನು ಎಸ್ ಬಿಐನಲ್ಲಿ ವಿಲೀನಗೊಳಿಸಲಾಗಿದೆ. ಅಂತೆಯೇ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನವಾಗಿವೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನಗೊಂಡರೆ, ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ಸೇರಿದೆ. ಯೂನಿಯನ್ ಬ್ಯಾಂಕ್ ನೊಂದಿಗೆ ನಮ್ಮ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನವಾಗಿದೆ. ಇಂಡಿಯನ್ ಬ್ಯಾಂಕ್ ನೊಂದಿಗೆ ಅಲಹಾಬಾದ್ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗಿದೆ.

    ಹೀಗಾಗಿ 2017ರಲ್ಲಿದ್ದ 27 ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ, 2019ರಲ್ಲಿ 18ಕ್ಕೆ ಇಳಿದಿತ್ತು. ಈ ವರ್ಷ 12ಕ್ಕೆ ಇಳಿದಿದೆ. ಈಗ ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸಿಕೊಂಡ ಆರು ಮತ್ತು ಸ್ವತಂತ್ರ ಆರು ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಇವೆ. ಈ ಬ್ಯಾಂಕುಗಳಲ್ಲಿ ಈಗ ಉದ್ಯೋಗ ಪಡೆಯುವ ಸವಾಲು ಎಲ್ಲರ ಮುಂದಿದೆ.

    ನೇಮಕ ಹೇಗೆ?

    ನಿಮಗೆಲ್ಲಾ ತಿಳಿದಿರುವಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ  (ಐಬಿಪಿಎಸ್) ಮೂಲಕ ನೇಮಕ ನಡೆಯಲಿದೆ. ಇದೊಂದು ಸ್ವಾಯತ್ತ ನೇಮಕಾತಿ ಸಂಸ್ಥೆ.  ಇದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ (ಐಬಿಎ) ಅಸೋಸಿಯೇಟ್ ಮೆಂಬರ್ ಆಗಿದೆ.

    ಈ ಸಂಸ್ಥೆಯು ಸ್ವತಂತ್ರವಾದ ಆಡಳಿತ ಮಂಡಳಿಯೊಂದನ್ನು ಹೊಂದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (ಎನ್‌ಐಬಿಎಂ), ಕೇಂದ್ರ ಹಣಕಾಸು ಸಚಿವಾಲಯ, ವಿವಿಧ ರಾಷ್ಟ್ರೀಕೃತ ಬ್ಯಾಂಕ್, ವಿಮಾ ಸಂಸ್ಥೆಗಳ ಪ್ರತಿನಿಧಿಗಳು ಈ ಆಡಳಿತ ಮಂಡಳಿಯಲ್ಲಿರುತ್ತಾರೆ.

    ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕು, ವಿತ್ತೀಯ ಸಂಸ್ಥೆ ಹಾಗೂ ವಿಮಾ ಸಂಸ್ಥೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು, ಉದ್ಯೋಗಿಗಳ ನೈಪುಣ್ಯತೆ ಹೆಚ್ಚಿಸಲು ಅಧ್ಯಯನ ನಡೆಸುವುದು, ಉದ್ಯೋಗಿಗಳಿಗೆ ತರಬೇತಿ ನೀಡುವುದು, ಕಾರ್ಯಗಾರ ನಡೆಸುವುದು ಈ ಸಂಸ್ಥೆಯ ಮುಖ್ಯ ಕೆಲಸವಾಗಿದೆ.

    ಕಳೆದ ವರ್ಷ  ಐಬಿಪಿಎಸ್  ಒಟ್ಟಾರೆಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ  17, 500 (ಪಿಒ-ಕ್ಲರ್ಕ್ ಹುದ್ದೆಗಳೂ ಸೇರಿ) ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಕೈಗೊಂಡಿತ್ತು. ಈ ವರ್ಷ ಕೂಡ  ಬ್ಯಾಂಕುಗಳು ವಿಲೀನವಾಗಿದ್ದರೂ ಹೆಚ್ಚು ಕಡಿಮೆ ಇಷ್ಟೇ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಅಂದಹಾಗೆ ಎರಡು ಹಂತದ ಸ್ಪರ್ಧಾತ್ಮಕ ಪರೀಕ್ಷೆ  ಮತ್ತು ಸಂದರ್ಶನ ನಡೆಸಿ, ಈ ನೇಮಕ ನಡೆಯಲಿದೆ.

    ಇದಲ್ಲದೆ, ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸುಮಾರು 15 ಸಾವಿರಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಇದರಲ್ಲಿ ಕ್ಲರಿಕಲ್ ಕೇಡರ್ ನ ಹುದ್ದೆಗಳ ಸಂಖ್ಯೆಯೇ ಪ್ರತಿ ವರ್ಷ ಸುಮಾರು 8 ಸಾವಿರಕ್ಕೂ ಹೆಚ್ಚಿರುತ್ತದೆ.

    ಲಾಕ್ ಡೌನ್ ನ ಸಂದರ್ಭದಲ್ಲಿ  ಹಲವಾರು ಅಭ್ಯರ್ಥಿಗಳು  ಹೊಸ ಬಗೆಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಬ್ಯಾಂಕ್ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಾಗಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ಇನ್ನೊಂದು ಕಡೆಗೆ ಒಂದಿಷ್ಟು ಯುವಕರು ಲಾಕ್ ಡೌನ್ ನಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ ಅಂತ ಕೈ ಚೆಲ್ಲಿ ಕುಳಿತಿದ್ದಾರೆ. ನಿಜವಾಗಿಯೂ ಧನಾತ್ಮಕವಾಗಿ ಚಿಂತಿಸುವವರು ಹೊಸ ಹೊಸ ಬಾಣಗಳನ್ನು ಅವರ ಬತ್ತಳಿಕೆಯಲ್ಲಿ ಸೇರಿಸಿಕೊಂಡು ಪರೋಕ್ಷವಾಗಿ ತಯಾರಾಗಿದ್ದಾರೆ. ಇದರಲ್ಲಿ ನೀವು ಯಾವ ಗುಂಪಿಗೆ ಸೇರಿದವರಾಗಿದ್ದೀರಿ ಎಂದು ಯೋಚಿಸಿ.

    ಒಟ್ಟಾರೆ ವಿತ್ತೀಯ ವ್ಯವಹಾರಗಳನ್ನು ಸಮರ್ಥವಾಗಿ ಮುನ್ನಡೆಸುವ ಅರ್ಹತೆ ಹೊಂದಿರುವ ಉದ್ಯೋಗಿಗಳನ್ನು ಈ ಕ್ಷೇತ್ರ ಕೈ ಬೀಸಿ ಕರೆಯುತ್ತಿದೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮುಖ್ಯವಾಗಿ ನೇಮಕ ನಡೆಯುತ್ತಿದ್ದು, ಯಾವುದೇ ಪದವಿ ಹೊಂದಿದವರೂ ಉದ್ಯೋಗ ಪಡೆಯಬಹುದಾಗಿದೆ.

    ನಿಮ್ಮ ಅರ್ಹತೆಗೆ ಅನುಗುಣವಾಗಿ ನೀವು ಬ್ಯಾಂಕಿಂಗ್ ಉದ್ಯಮದಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಹೆಚ್ಚಿನ ಬ್ಯಾಂಕಿಂಗ್   ಉದ್ಯೋಗಗಳಿಗೆ,  ನೀವು ಪರೀಕ್ಷೆಯನ್ನು ಬರೆಯಬೇಕಾಗಿದೆ  ಮತ್ತು ಅದೇ ಸಮಯದಲ್ಲಿ, ನೀವು ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರಬೇಕು. ನೀವು ದೇಶದ ಯಾವುದೇ ವಾಣಿಜ್ಯ ಬ್ಯಾಂಕಿನಲ್ಲಿ ಉಪ-ಸಿಬ್ಬಂದಿ ಅಥವಾ ಗುಮಾಸ್ತ ಅಥವಾ ಪ್ರೊಬೆಷನರಿ ಅಧಿಕಾರಿಯಾಗಿ ನಿಮ್ಮ ವೃತ್ತಿ ಜೀವನ ಪ್ರಾರಂಭಿಸಬಹುದು. ಇದಲ್ಲದೆ, ನೀವು ಬ್ಯಾಂಕಿನಲ್ಲಿ ತಜ್ಞ ಅಧಿಕಾರಿಯಾಗಿಯೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಬಹುದು. ನೀವು ಆರ್‌ಬಿಐ,  ನಬಾರ್ಡ್, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮುಂತಾದ ಸಂಸ್ಥೆಗಳಿಗೆ ಸೇರುತ್ತಿದ್ದರೆ ನೀವು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬಹುದು.

    ಹೊತ್ತಿ ಉರಿಯುತ್ತಿರುವ ಅಮೆರಿಕಾ-ಆದದ್ದೇನು?

    ಜನಾಂಗೀಯ ಕೊಲೆಗಳು ಅಮೆರಿಕಾಕ್ಕೆ ಹೊಸದಲ್ಲ. ಆದರೆ 2015 ರಿಂದಲೂ ಮತ್ತೆ ಮತ್ತೆ ಪೊಲೀಸರ ಕೈನಲ್ಲಿ ಕರಿಯ ಜನಾಂಗೀಯರ ಅನಗತ್ಯ ಹತ್ಯೆ ಆಗುತ್ತಿರುವ ವಿಚಾರ ದೊಡ್ಡ ಸುದ್ದಿಗಳಾಗುತ್ತಲೇ ಬಂದಿವೆ.

    ಹಾಲಿವುಡ್ ನಟ ವಿಲ್ ಸ್ಮಿತ್  ‘ರೇಸಿಸಂ ಯಾವಾಗಲೂ ಇತ್ತು, ಇದೀಗ ಅದು ರೆಕಾರ್ಡ್ ಆಗುತ್ತಿದೆ ಅಷ್ಟೆ’ ಎಂದಿದ್ದಾನೆ.

    ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೊಲೆಯ ನಂತರ ಇದೇ ಮೊದಲ ಬಾರಿಗೆ ಅಮೆರಿಕಾ  ಈ ಮಟ್ಟದಲ್ಲಿ ಹೊತ್ತಿ ಉರಿಯುತ್ತಿದೆ.ಪೊಲೀಸರ ಬಳಿ ತನ್ನ ತಪ್ಪೇನು ಎಂದು ಕೇಳಲು ಹೋಗಿ ಕೇವಲ ನಾಲ್ಕು ನಿಮಿಷಗಳಲ್ಲಿ ಸಾರ್ವಜನಿಕರ ಎದುರೇ ಆಫ್ರಿಕಾ ಮೂಲದವನೊಬ್ಬನ ಹತ್ಯೆ ಆಗಿದೆ.

    ಆದದ್ದಿಷ್ಟೆ. ಅಮೆರಿಕಾದ ಮಿನಿಯಾಪೋಲಿಸ್ ನಗರದ ಸಣ್ಣದೊಂದು ಅಂಗಡಿಯಲ್ಲಿ ಜಾರ್ಜ್ ಫ್ಲಾಯ್ದ್ ಎನ್ನುವವ 20 ಡಾಲರ್ ನೋಟೊಂದನ್ನು ಕೊಟ್ಟು ಸಿಗರೇಟು ಖರೀದಿಸಿದ. ಅಂಗಡಿಯಾತ ಮರು ನಿಮಿಷದಲ್ಲಿ ಪೊಲೀಸರಿಗೆ ಕರೆಮಾಡಿ ಇದು ಖೋಟಾನೋಟು ಎಂದು ತಿಳಿಸಿದ. ಕೇವಲ 17 ನಿಮಿಷದಲ್ಲಿ ಪೊಲೀಸರು ಆಗಮಿಸಿದರು.ಜಾರ್ಜ್ ಫ್ಲಾಯ್ದ್ ನನ್ನು ಬಂಧಿಸಿದರು.ಇದೆಲ್ಲ ಅಲ್ಲಿಯೇ ಇದ್ದ ಸೆಕ್ಯೂರಿಟಿ ಕ್ಯಾಮರದಲ್ಲಿ ದಾಖಲಾಯಿತು. ಬಂಧನಕ್ಕೆ ಆತ ಪ್ರತಿರೋಧ ವ್ಯಕ್ತಪಡಿಸಲಿಲ್ಲ.ಆತನ ಬಳಿ ಯಾವುದೇ ಮಾರಕಾಸ್ತ್ರಗಳೂ ಇರಲಿಲ್ಲ. ಕೈ ಕೋಳ ಹಾಕಿ ಅವನನ್ನು ಪೊಲೀಸರು ರಸ್ತೆಯಲ್ಲೇ ಒದ್ದು ಬೀಳಿಸಿದರು .ಒಬ್ಬ ಅವನ ಬೆನ್ನಿನ ಮೇಲೆ ಕೂತ .ಮತ್ತೊಬ್ಬ ಅವನ ಕತ್ತಿನ ಹಿಂಭಾಗ ಹಿಡಿದ. ಮತ್ತೊಬ್ಬ ದೇಹವನ್ನು ಬಿಗಿಯಾಗಿ ಹಿಡಿದ . ಈ ಮೂರು ವ್ಯಕ್ತಿಗಳ ಭಾರದಲ್ಲಿ ಜಾರ್ಜನ ದೇಹ ನಿಷ್ಕ್ರಿಯಗೊಂಡಿತು. ‘ನನಗೆ ಉಸಿರಾಡಲಾಗುತ್ತಿಲ್ಲ’ ಎಂದು ಜಾರ್ಜ್ ಗೋಗೆರದದ್ದು ಸುತ್ತಲೂ ನಿಂತು ನೋಡುತ್ತಿದ್ದ ಜನರು ಮಾಡಿದ ವಿಡಿಯೋದಲ್ಲಿ ದಾಖಲಾಯಿತು. ನಾಲ್ಕನೇ ಪೊಲೀಸ್ ( ಸಾಮಾನ್ಯ ಭಾಷೆಯಲ್ಲಿ ’ಬ್ಲೂ ಶೀಲ್ಡ್ ’ ಎಂದು ಕರೆಯಲ್ಪಡುವ) ಸುತ್ತಲಿದ್ದ ಜನರು ಹತ್ತಿರ ಬರದಂತೆ ತಡೆದ.ನಾಲ್ಕೇ ನಿಮಿಷಕ್ಕೆ ಜಾರ್ಜ್ ನಿಷ್ಕ್ರಿಯನಾದರೂ ಅವನನ್ನು ಪರೀಕ್ಷಿಸುವ,  ಸಿ.ಪಿ.ಆರ್(cardio pulmonary resuscitation) ಮೂಲಕ ರಕ್ಷಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಒಟ್ಟು 8 ನಿಮಿಷ 46 ಸೆಕೆಂಡುಗಳ ಈ ನಾಟಕ ಮುಗಿಯವ ವೇಳೆಗೆ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು.

    ಜನರ ಆಕ್ರೋಶ ಪೊಲೀಸರ ಮೇಲೇಕೆ?

    ಕಾನೂನನ್ನು ರಕ್ಷಿಸುವ ಪೊಲೀಸರು ಜಾರ್ಜ್ ಬಳಿ ಆ 20 ಡಾಲರ್ ಎಲ್ಲಿಂದ ಬಂತು ಎಂದು ಕೇಳಲಿಲ್ಲ. ಅದನ್ನು ಆತನಿಗೆ ಬೇರೆ ಯಾರಾದರು ಕೊಟ್ದಿದ್ದರೆ ಎಂಬುದನ್ನು ತಿಳಿದುಕೊಳ್ಳುವ ಮೊದಲೇ ಆಕ್ರಮಣ ನಡೆಸಿ ಪ್ರತಿರೋಧವೇ ತೋರದ ಆತನ ಮೇಲೆ ಸಾರ್ವಜನಿಕವಾಗೇ ಹಿಂಸೆ ಮಾಡಿದರು. ಅವನ ದೇಹ ತಟಸ್ಥವಾದರೂ ಅವನನ್ನು ಪರೀಕ್ಷಿಸುವ ಯಾವುದೇ ಪ್ರಯತ್ನ ಮಾಡದೆ, ಸಹಾಯಕ್ಕೆ ಮುಂದಾದ ಸಾಮಾನ್ಯ ಜನರನ್ನು ತಡೆದರು.ಆರೋಗ್ಯವಾಗಿದ್ದ 46 ವರ್ಷದ ಜಾರ್ಜ್ ನ್ಯಾಯಾಲಯದ ಮುಂದೆ ಹಾಜರಾಗುವ ಮುನ್ನವೇ ಸತ್ತ. ಇವೆಲ್ಲಕ್ಕೂ ಸಾಕ್ಷಿಗಳಿದ್ದ ಕಾರಣ ಆಗಾಗಲೇ ನೊಂದಿದ್ದ ಕರಿಯ ಜನಾಂಗ ಮತ್ತು ಅವರ ಹೋರಾಟದಲ್ಲಿ ಬೆಂಬಲ ನೀಡುತ್ತಿರುವ ಬಿಳಿಯರು ರಸ್ತೆಗಿಳಿದರು. ಮರುದಿನವೇ ನಾಲ್ವರೂ ಪೊಲೀಸರನ್ನ ಅಮಾನತು ಮಾಡಲಾಯಿತು. ಆದರೆ ಆ ವೇಳೆಗೆ ಕಾಲ ಮಿಂಚಿತ್ತು.

    ಈ ಘಟನೆಗೆ ಜನಾಂಗೀಯ ದ್ವೇಷ ಮತ್ತು ಪೂರ್ವಗ್ರಹಗಳೇ ಕಾರಣ ಎನ್ನುವ ನೋವು, ಸಿಟ್ಟು, ದುಃಖ, ಅವಮಾನಗಳಿಂದ ನೊಂದು ಬೆಂದ ಜನ ಭುಗಿಲೆದ್ದರು. ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಲಭೆ, ಹಿಂಸೆ, ಲೂಟಿಗಳಾದವು. ದೂರದ ಲಂಡನ್ನಿನ ಅಮೆರಿಕನ್ ರಾಯಭಾರಿ ಕಚೇರಿಯ ಮುಂದೆಯೂ ಸಾವಿರಾರು ಜನರು ಸೇರಿ ಪ್ರತಿಭಟಿಸಿದರು.

    ಹಿಂಸೆ ತಾರಕಕ್ಕೇರಿದ್ದೇಕೆ?

    ಮಂಗಳವಾರ ಜಾರ್ಜ್ ಫ್ಲಾಯ್ಡ್ ನ ಪೋಸ್ಟ್  ಮಾರ್ಟಂ ರಿಪೋರ್ಟ್ ಹೊರಬಿದ್ದಿತು. ಸಾವಿಗೆ ಕಾರಣ ‘ಮೆಕ್ಯಾನಿಕಲ್ ಆಸ್ಫಿಕ್ಸಿಯೇಷನ್’ ಎಂದು ಅಧಿಕೃತವಾಗಿ ಪ್ರಕಟಗೊಂಡಾಗ ಅದು ಅಮೆರಿಕನ್ ಆಫ್ರಿಕನ್ನರ ಗಾಯದ ಮೇಲೆ ಉಪ್ಪು ಚೆಲ್ಲಿದಂತೆ ಆಯಿತು.

    ಟ್ರಂಪ್ ನಿಲುವು

    ರಾಜಧಾನಿ ವಾಷಿಂಗ್ಟನ್ ಕೂಡ ಸೇರಿದಂತೆ ಅಮೆರಿಕಾದ 75 ನಗರಗಳಲ್ಲಿ ಗಲಭೆ ನಡೆದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೆಕ್ಯೂರಿಟಿಯನ್ನು ಹೆಚ್ಚಿಸಲಾಗಿದೆ. ಆದರೆ ಇಂತಹ ಸಮಯದಲ್ಲಿ ಜನತೆಗೆ ಸಾಂತ್ವನ ಹೇಳುವ ಬದಲು ಟ್ರಂಪ್ ಗಲಭೆಯನ್ನು ಮಿಲಿಟರಿ ಪಡೆಯನ್ನು ತರಿಸಿ ನಿಯಂತ್ರಿಸುವ ಸೂಚನೆ ನೀಡಿದ್ದಾನೆ. ಅದಕ್ಕೆ ಉತ್ತರವಾಗಿ ಕೆಂಡ ಕಾರುತ್ತ  ಹ್ಯೂಸ್ಟನ್ನಿನ ಪೊಲೀಸ್ ಮುಖ್ಯಾಧಿಕಾರಿ ಆರ್ಟ್ ಆಸಿವಿಡೊ ಎಂಬಾತ “Let me just say this to the President of the United States, on behalf of the police chiefs of this country: Please, if you don’t have something constructive to say, keep your mouth shut,” ( ಉಪಯೋಗವಾಗುವ ಏನನ್ನಾದರೂ ಹೇಳಲು ಇಲ್ಲವೆಂದರೆ, ದಯವಿಟ್ಟು ಬಾಯ್ಮುಚ್ಚಿಕೊಂಡಿರು) ಎಂದು ಹೇಳಿದ್ದಾನೆ.

    ಗಡಿಯಲ್ಲಿ ಚೀನಾ ತಂಟೆಯ ಹಿಂದಿನ ಅಸಲಿ ಕಹಾನಿ

    ಭಾರತ ಮತ್ತು ಚೀನಾ ಗಡಿ ವಿವಾದ ತಾರಕಕ್ಕೇರಿದೆ.ಗಡಿಯಲ್ಲಿ ಸಂಘರ್ಷದ ವಾತಾವರಣ ಮೂಡಿದೆ. ಏನಿದು ವಿವಾದ ? ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪೊಡಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ: ಚೀನಾ ಸಾರಿದ ಜೈವಿಕ ಸಮರ: ಸಂಶಯದ ಪ್ರಚಂಡ ಮಾರುತ

    error: Content is protected !!