36 C
Karnataka
Monday, April 21, 2025
    Home Blog Page 18

    ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸಿಪೋರೆಕ್ಸ್ ಕಾರ್ವಿಂಗ್ ಕಾರ್ಯಾಗಾರ

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಕಲಾ ಮಹಾವಿದ್ಯಾಲಯ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶಿಲ್ಪಕಲಾ ವಿಭಾಗದಲ್ಲಿ ಅಡಿ ಇಟ್ಟವರಿಗೆ ಒಂದು ವಿಸ್ಮಯಕಾರಿ ಶಿಲ್ಪ ಕಲಾಲೋಕಕ್ಕೆ ಅಡಿ ಇಟ್ಟ ಅನುಭವವಾಗಿತ್ತು. ಒಂದಕ್ಕಿಂತ ಒಂದು ಕಲಾಕೃತಿಗಳು ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿ ಒಂದು ವಿನೂತನವಾದ ಶಿಲ್ಪಕಲಾಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತಿದೆ.

    ಹಾಗಾದ್ರೆ ಏನಿರಬಹುದು ಎಂಬ ಕುತೂಹಲ ಕಲಾಸಕ್ತರಿಗೆ ಅನಿಸದೇ ಇರುವುದಿಲ್ಲ. ಚಿತ್ರಕಲಾ ಮಹಾವಿದ್ಯಾಲಯದ ಬಿ. ವಿ. ಎ. ಫೌಂಡೇಶನ್ ತರಗತಿಯ ವಿದ್ಯಾರ್ಥಿಗಳಿಗೆ ಶಿಲ್ಪಕಲಾ ಶಿಬಿರವೊಂದನ್ನು ಆಯೋಜಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಪ್ರಸಿದ್ಧ ಶಿಲ್ಪ ಕಲಾವಿದ

    ಪ್ರಕಾಶ್ ಪಾಟೀದಾರ್ ಅವರ ನಿರ್ದೇಶನದಲ್ಲಿ ಅತಿ ಹಗುರ ಸಿಮೆಂಟ್ ಇಟ್ಟಿಗೆ ಯನ್ನು ಬಳಸಿ ಅದರಲ್ಲಿ ಕಾರ್ವಿಂಗ್ ಮಾಡಿ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸುವ ತರಬೇತಿ ಶಿಲ್ಪಕಲಾ ವಿಭಾಗದಲ್ಲಿ ನಡೆಯುತ್ತಿರುವುದು ವಿಶೇಷ . ಬಿ.ವಿ.ಎ ಫೌಂಡೇಶನ್ ತರಗತಿಯ ಸುಮಾರು 140 ಗಿಂತಲೂ ಹೆಚ್ಚಿನ ಕಲಾ ವಿದ್ಯಾರ್ಥಿಗಳಿಗೆ ವಿಭಿನ್ನಬಗೆಯ ಶಿಲ್ಪ ಕಲಾಕೃತಿಗಳನ್ನು ರಚಿಸುವ ಶಿಬಿರ ನಡೆದಿದೆ ಸುಮಾರು ಎರಡು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಕಲಾ ವಿದ್ಯಾರ್ಥಿಗಳು ಇಂಥ ಒಂದು ವಿಭಿನ್ನವಾದ ಶಿಲ್ಪಕಲಾಕೃತಿಗಳನ್ನು ಕಾರ್ವಿಂಗ್ ಮಾಡುವುದರ ಮೂಲಕ ರಚಿಸುವ ಕಾರ್ಯವನ್ನು ಮಾಡಿದ್ದಾರೆ.

    ಶಿಲ್ಪಕಲಾ ಶಿಬಿರದ ಉದ್ದೇಶವೆಂದರೆ ಕಲಾ ವಿದ್ಯಾರ್ಥಿಗಳಿಗೆ ಶಿಲ್ಪಕಲೆಯ ಸಾಧ್ಯತೆಗಳನ್ನು ತಿಳಿಸುವುದು ಬೇರೆಬೇರೆ ಮಾಧ್ಯಮ ಪ್ರಕಾರಗಳನ್ನು ಪರಿಚಯಿಸುವ ಕಾರ್ಯ ನಡೆಯಲಿದೆ. ಶಿಲ್ಪಕಲಾ ಶಿಬಿರದಲ್ಲಿ ಎಂದೂ ನೋಡದ ಅಚ್ಚರಿಯ ಶಿಲ್ಪಕಲಾಕೃತಿಗಳನ್ನು ವಿದ್ಯಾರ್ಥಿಗಳು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ಕಾರ್ವಿಂಗ್ ಮಾಡುವುದರ ಮೂಲಕಒಂದು ಅಚ್ಚರಿಯ ನೋಟ ನೋಟಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಪ್ರಕಾರದ ಶಿಲ್ಪಗಳನ್ನು ಮಾಡುವುದರಿಂದ ಮತ್ತು ಇನ್ಸ್ಟಾಲೇಷನ್ ಮಾಡಿದರೆ ಮುಂದೆ ಬರುವ ವಿದ್ಯಾರ್ಥಿಗಳಿಗೆ ವಿಭಿನ್ನ ಕಲಾಪ್ರಕಾರಗಳನ್ನು ಪರಿಚಯಿಸಿದ ಹಾಗೆ ಆಗುತ್ತದೆ.

    ಶಿಲ್ಪಕಲಾ ಶಿಬಿರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಾಬು ಜತ್ತಕರ ರವರ ಮುಂದಾಳತ್ವದಲ್ಲಿ ಮತ್ತು ಶಿಲ್ಪ ಕಲಾ ವಿಭಾಗದ ಉಪನ್ಯಾಸಕರಾದ ನಾಗಪ್ಪ ಪ್ರಧಾನಿ, ವಿಶಾಲ್ ಕಾವಟೆಕಾರ್, ಗೋಪಾಲ್ ಕಮ್ಮಾರ್ ರವರ ಸಹಭಾಗಿತ್ವದಲ್ಲಿ, ಮತ್ತು ಈ ಶಿಲ್ಪಕಲಾ ಶಿಬಿರ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ : ಬಿಎಲ್ ಶಂಕರ್ ಮತ್ತು ಗೌರವ ಕಾರ್ಯದರ್ಶಿಗಳಾದ ಪ್ರೊ. ಅಪ್ಪಜಯ್ಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಕಲಾ ಶಿಬಿರ ಇನ್ನು ಒಂದು ವಾರಗಳ ಕಾಲ ನಡೆಯಲಿದ್ದು ಕಲಾಸಕ್ತರು ಕಂಡುಕೊಳ್ಳಬಹುದಾಗಿದೆ.


    ಸ್ಥಳ:ಚಿತ್ರಕಲಾ ಮಹಾವಿದ್ಯಾಲಯ,ಕರ್ನಾಟಕ ಚಿತ್ರಕಲಾ ಪರಿಷತ್ತು
    ವಿಷ್ಣುವರ್ಧನ್ ರಸ್ತೆ ಓಂಕಾರ್ ಆಶ್ರಮದ ಹತ್ತಿರ ಶ್ರೀನಿವಾಸಪುರ ಬೆಂಗಳೂರು

    ದಿಟ್ಟ ಮಹಿಳೆಯರ ಸೂಕ್ಷ್ಮ ಸಂವೇದನೆ


    ತಮ್ಮ ಲೇಖನಗಳ ಮೂಲಕ ಕನ್ನಡಪ್ರೆಸ್ .ಕಾಮ್ ಓದುಗರಿಗೆ ಚಿರಪರಿಚಿತರಾಗಿರುವ ಶಶಿಕಲಾ ರಾವ್ ಅವರ ಚೊಚ್ಚಲ ಕೃತಿ ಪುನರಕ್ತಿ ಕಾದಂಬರಿ ಇದೇ ಜೂನ್ 18ರ ಶನಿವಾರ ಲೋಕಾರ್ಪಣೆಯಾಗುತ್ತಿದೆ. ಸುಚಿತ್ರ ಫಿಲಂ ಸೊಸೈಟಿ ಆವರಣದಲ್ಲಿ ಸಂಜೆ 4-30 ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಹೆಸರಾಂತ ಕವಿ ವಿಮರ್ಶಕ ಡಾ.ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೆಸರಾಂತ ನಿರ್ದೇಶಕ ಪಿ,ಶೇಷಾದ್ರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕನ್ನಡಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ನಿರೂಪಕಿ, ಕಲಾವಿದೆ ಅಪರ್ಣಾ ವಸ್ತಾರೆ.ಮುಖ್ಯ ಅತಿಥಿಯಾಗಿ ಭಾಗವಹಿಸಸಿದ್ದಾರೆ.


    ಲೇಖಕಿ ಶಶಿಕಲಾ ರಾವ್ ಅವರು ಕೃತಿ ಬಿಡಗಡೆಗೂ ಮುನ್ನ ಕನ್ನಡಪ್ರೆಸ್ .ಕಾಮ್ ಜೊತೆ ಮಾತನಾಡಿ ತಮ್ಮ ಸಾಹಿತ್ಯ ಯಾತ್ರೆಯನ್ನು ವಿವರಿಸಿದ್ದಾರೆ.

    ಲೇಖನ ಬರೆಯುವುದಕ್ಕೂ ಕಾದಂಬರಿ ಬರೆಯುವುದಕ್ಕೂ ಇರುವ ವ್ಯತ್ಯಾಸ

    ಲೇಖನಗಳನ್ನು ಬರೆದು ಸಂಪಾದಿಸುವುದಕ್ಕು ಕಾದಂಬರಿಯನ್ನು ಸಂಪಾದಿಸುವುದಕ್ಕೂ ಅಜಗಜಾಂತರವ್ಯತ್ಯಾಸವಿದೆ. ಲೇಖನಗಳು ಪ್ರಬಂಧಗಳು ಅಥವಾ ಸಣ್ಣಕಥೆಗಳನ್ನು ಬರೆಯುವುದು ಮತ್ತು ಸಂಪಾದಿಸುವುದು ಸುಲಭ. ಇಲ್ಲಿ ಕಾಲದ ಮಿತಿ ಇರುತ್ತದೆ. ಆದರೆ ಕಾದಂಬರಿಯಲ್ಲಿ ಪಾತ್ರಗಳು ಒಂದಾದ ಮೇಲೆ ಒಂದು ಸೇರಿಕೊಂಡು ಬರುತ್ತಾ ಕಾಲದ ಮಿತಿ ಇರುವುದಿಲ್ಲ. ಹತ್ತಾರು ಪಾತ್ರವನ್ನು ಕಥೆಯಲ್ಲಿ ತಂದು ಎಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸಿ ಅವರವರ ಪಾತ್ರಗಳನ್ನು ಭೂತಕಾಲದಿಂದ ವರ್ತಮಾನಕಾಲದವರಿಗೂ ವಿಸ್ತರಿಸಿ ವಿಚಕ್ಷಣೆಯಿಂದ ಎಲ್ಲರನ್ನೂಕಥೆಯ ಅಂತ್ಯದವರಿಗೂ ಕುತೂಹಲಕಾರಿಯಾಗಿರುವಂತೆ ಬರೆಯುವುದು ಸಾಕಷ್ಟು ಕಷ್ಟದ ಕೆಲಸವೆ..

    ಕಾದಂಬರಿ ಬರೆಯಲು ಪ್ರೇರಣೆ

    ಪುನರುಕ್ತಿಯಲ್ಲಿ ಬಂದಿರುವ ಎಲ್ಲಾ ಪಾತ್ರಗಳು ನನ್ನ ಮನದಂಗಳದಲ್ಲಿ ಓಡಾಡುತ್ತ ಕಾಡುತ್ತಿದ್ದವು. ಒತ್ತಡದಿಂದ ಪಾತ್ರಗಳೇ ರೂಪುರೇಖೆಗಳನ್ನು ರಚಿಸಿಕೊಂಡು ಮೂರ್ತಿಸ್ವರೂಪರಾಗಿ ಅನಾವರಣಗೊಂಡಿವೆ

    ಕಾದಂಬರಿಯಲ್ಲಿ ಬಂದಿರುವ ಮಹಿಳಾ ಪಾತ್ರಗಳ ಬಗ್ಗೆ

    ಕಾದಂಬರಿಯಲ್ಲಿ ಬಂದಿರುವ ಡಾಕ್ಟರ್ ಭವಾನಿ, ಸೀತೆ, ಸುಜಯ, ಶ್ಯಾಮಲಬಾಯಿ(ನಿರುಪಮ) ಎಲ್ಲರೂ ಒದಗಿ ಬಂದ ಕಷ್ಟಗಳನ್ನು ಎದುರಿಸಿ, ಸೋಲದೆ ಸಾರ್ಥಕತೆ ಪಡೆಯುತ್ತಾರೆ. ಹಟದ ಸ್ವಭಾವವಿದ್ದ ಭವಾನಿ ಜೀವನದಲ್ಲಿ ಅತ್ಯಂತ ಸುಖದಲ್ಲಿದ್ದಾಗ ತನ್ನ ಗಂಡ ವಿನೋದನನ್ನು ಕಳೆದುಕೊಂಡು ಜೀವನದಲ್ಲಿ ಸಂಕಟನೋವು ಅನುಭವಿಸುತ್ತಾಳೆ. ಮುಗ್ದ ಸೀತೆಯನ್ನು ಜನ ಸಂಶಯದಿಂದ ನೋಡುತ್ತಾರೆ. ಜೀವನಪೂರ್ತಿ ತಾನೊಬ್ಬ ಕೊಲೆಗಾತಿಯೆಂದು ನರಳುತ್ತಾಳೆ.ಅತ್ಯಂತ ಬುದ್ಧಿವಂತಳಾದ ಸುಜಯ ಸಲೀಲನ ಸುಂದರ ರೂಪಕ್ಕೆ ಮೆಚ್ಚಿಕೊಂಡು ಜೀವನದಲ್ಲಿ ಮುಗ್ಗರಿಸುತ್ತಾಳೆ. ಇದರ ಮಧ್ಯೆ ಶ್ಯಾಮಲ ಬಾಯಿ ತನ್ನನ್ನು ವೇಶ್ಯಾವಾಟಿಕೆಗೆ ಮಾರುತ್ತಾನೆಂದು ಗೊತ್ತಾದ ತಕ್ಷಣ ಧೈರ್ಯ ಸಾಹಸದಿಂದ ತಪ್ಪಿಸಿಕೂಳ್ಳುತ್ತಾಳೆ. ಇಲ್ಲಿ ಹೆಣ್ಣಿಗೆ ಬಂದೊದಗಿದ ಕಷ್ಟಗಳನ್ನು ಹೀಗೆ ಧೈರ್ಯದಿಂದ ಎದುರಿಸಿ ಹೊಸ ದಾರಿ ಕಂಡುಕೊಳ್ಳುತ್ತಾರೆ. ಮುಖ್ಯ ಸ್ತ್ರೀ ಪಾತ್ರಗಳೆಲ್ಲಾ ಶಕ್ತಿ ಸ್ವರೂಪಣಿಯಾಗಿದ್ದಾರೆ.

    ಪುನರುಕ್ತಿ ಎಂದು ಹೆಸರಿಡಲು ಕಾರಣ

    ಮಹಿಳೆಯರೆಲ್ಲಾ ಭಾವನಾತ್ಮಕವಾಗಿ ನೊಂದಿರುವುದು ಪುನಃ ಪುನಃ ಕಾಣಿಸಿತು. ಅದ್ದರಿಂದ ಈ ಕಾದಂಬರಿಯ ಹೆಸರೂ ಪುನರುಕ್ತಿ ಆಯಿತು.


    ಬೆಂಗಳೂರಿನ ಸಂಪದ ಪಬ್ಲಿಕೇಶನ್ ಪುಸ್ತಕವನ್ನು ಪ್ರಕಟಿಸಿದೆ. ಆಸಕ್ತರು 9880593349/ 08026612655 ಫೋನ್ ಮಾಡಿದರೆ ಪುಸ್ತಕ ಮನೆಗೆ ತಲುಪುತ್ತದೆ.

    ಕೋವಿಡ್ ನಿಯಂತ್ರಣದಲ್ಲಿದೆ; ಗಾಬರಿ ಬೇಡ: ಮುಖ್ಯಮಂತ್ರಿ

    BENGALURU JUNE 6

    ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಅನಗತ್ಯವಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಭೆ ನಡೆಸಿ ಎಲ್ಲಾ ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದ ಮೇಲೆ 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ನಾವು ಒಬ್ಬರಿಗೆ  ತೊಂದರೆ ಕೊಡಲು  ಯತ್ನಿಸಿದರೆ  ನಮಗೆ ತೊಂದರೆ ಕೊಡಲು   ಇನ್ನೊಬ್ಬರು ಸರದಿಯಲ್ಲಿರುತ್ತಾರೆ !

    ಸುಮಾ ವೀಣಾ

    ಕೊಲ್ವೆಡೆ ಕಾವರಾರೆಲವೊ- ರುದ್ರಭಟ್ಟನ  ‘ಜಗನ್ನಾಥ ವಿಜಯದ’  ಮೂರನೆಯ  ಆಶ್ವಾಸದಿಂದ ಆರಿಸಿರುವ ವಾಕ್ಯವಿದು.  ಕಂಸನು ,ಕೂಸನ್ನು  ವಧ್ಯೆ  ಶಿಲೆಗೆ ಕರೆದೊಯ್ಯಲು ಕೈ ಎತ್ತಿದಾಗ  ಮಗುವು ಗಗನಕ್ಕೇರಿ  ಕಂಸನನ್ನು  ಕುರಿತು ನಾನು ನಿನ್ನನ್ನು ಕೊಲ್ಲುವುದಾದರೆ  ರಕ್ಷಿಸುವರಾರಿರುವರು?  ಎಂದು ಹೇಳುತ್ತದೆ.  ಕಂಸನ ನಿರ್ದಯತೆಯನ್ನು ಸಾಕ್ಷೀಕರಿಸುವ ಸಂದರ್ಭವಿದು.

    ಕಂಸ ವಧೆ | ಚಿತ್ರ ಕೃಪೆ ವಿಕಿಪಿಡಿಯಾ

    ನಾವು ಒಬ್ಬರಿಗೆ  ತೊಂದರೆ ಕೊಡಲು  ಯತ್ನಿಸಿದರೆ  ನಮಗೆ ತೊಂದರೆ ಕೊಡಲು   ಇನ್ನೊಬ್ಬರು ಸರದಿಯಲ್ಲಿರುತ್ತಾರೆ  ಎಂಬುದು ಇದರ ತಾತ್ಪರ್ಯ.  “ಪಾಪಾಯ ಪರಪೀಡನಂ” ಎನ್ನುವಂತೆ  ಇತರರಿಗೆ ತೊಂದರೆ ಕೊಟ್ಟು ಪಾಪದ ಬುತ್ತಿಯನ್ನು  ನಾವೇ ಭಾರವಾಗಿಸಿಕೊಳ್ಳುವುದು ದುಸ್ಸಾಹಸವೇ ಸರಿ!

    “ಉಪ್ಪು ತಿಂದವನು ನೀರು ಕುಡಿಯಬೇಕು” ಎನ್ನುವಂತೆ ನಾವು ಮಾಡುವ ಕರ್ಮ ಅಥವಾ ಕೆಲಸ ನಮ್ಮ ಪಾಲಿನ ಬುತ್ತಿಯೇ ಸರಿ!  ಕತ್ತಲು ಹರಿದು, ಬೆಳಕು ಸರಿದು  ಪುನಃ ಕತ್ತಲು ಆವರಿಸುವಂತೆ  ಆವರ್ತಿಸುವವು ಪಾಪ, ಪುಣ್ಯ ಕೆಲಸಗಳು .  ಗಡಿಯಾರದ  ಮುಳ್ಳುಗಳಲ್ಲಿ ವೇಗ ,ಅಲ್ಪವೇಗ ಮತ್ತು ನಿಧಾನವಾಗಿ ಸಾಗುವ ಮುಳ್ಳುಗಳಿದ್ದರೂ  ಒಟ್ಟಿಗೆ ಅಲ್ಲದೆ ಇದ್ದರೂ  ತಾವು ಸಂಧಿಸಿದ ಜಾಗವನ್ನು ಮತ್ತೆ ಮತ್ತೆ ಬೇರೆ ಬೇರೆ ಪ್ರಕಲ್ಪನೆಗಳಲ್ಲಿ ಸಂಧಿಸುವಂತೆ ನಮ್ಮ ಕರ್ಮಗಳು ಬೇರೆ ಬೇರೆ ಪ್ರಕಲ್ಪನೆಗಳಲ್ಲಿ ನಮ್ಮನ್ನು ಸಂಧಿಸಿ ಮುಂದೆ ಹೋಗುತ್ತವೆ. 

    ಆದ್ದರಿಂದ   ನಮ್ಮ ಮಾತು,ಕೃತಿಗಳು, ನಡವಳಿಕೆಗಳೇ ಆಗಲಿ ಕಿಂಚಿತ್ ಕೂಡ  ಇತರರನ್ನು ಭಾದಿಸುವಂಥವಾಗಿರಬಾರದು.   ಧರ್ಮಮಾರ್ಗಿಯಾಗದೆ ಇದ್ದರೂ ಆದೀತು ದುರ್ಮಾರ್ಗಿಯಾಗಬಾರದು ಅಲ್ಲವೇ!.  

    ಇತರರ ಬಾಳಿನಲ್ಲಿ ಇನ್ನಿಲ್ಲದ ಸಂಚನೆಗಳನ್ನು ತಂದು ದಿಗ್ವಿಜಯಿಯಾಗುವುದು ಮೂರ್ಖತನದ ಪರಮಾವಧಿ. ಜಗತ್ತನ್ನೇ ಗೆದ್ದ ವೀರರಂಥ ವೀರರೂ ಕೂಡ    ಈ ಜಗತ್ತಿನಿಂದ ಶೂನ್ಯವಾಗಿಯೇ  ನಿರ್ಗಮಿಸಿರುವುದು. ಹಾಗಾಗಿ ಜಗತ್ತನ್ನು ಶಾಂತಿಯ ಕಡಲಂತೆ ತಿಳಿದು ಕ್ಷಮೆ ಎನ್ನುವ ಕಂದೀಲನ್ನು  ನಿರಂತರ ಹಿಡಿಯಬೇಕು. 

    ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ ಪ್ರಜೆಗಳ ಬಿನ್ನಹವ ಕೇಳುವವರಾರು ? ಎಂದು ಕುಮಾರವ್ಯಾಸ ಹೇಳುವಂತೆ  ಎಲ್ಲರೂ ವಿಧ್ವಂಸಕರೆ ಆದರೆ ಜಗತ್ತನ್ನು ರಕ್ಷಿಸುವವರು ಯಾರು?  ಜಗತ್ತನ್ನು ಸುಭಿಕ್ಷವಾಗಿ ಮುನ್ನಡೆಸಿಕೊಂಡು ಹೋಗಲು ಧರ್ಮಮಾರ್ಗಿಗಳು ಎಂಬ ಕಾವಲುಗಾರರು ಬೇಕೇ ಬೇಲ್ಲವೆ?  

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    MONEY ವಿಕಾಸದೊಂದಿಗೆ ಮನೋವಿಕಾಸ

    ಹೂಡಿಕೆಯ ಮೂಲ ಉದ್ದೇಶ ಎಂದರೆ, ಹೂಡಿಕೆಯು ಸುರಕ್ಷಿತವಾಗಿರಬೇಕು, ಹೂಡಿಕೆಯು ಆರ್ಥಿಕ ಬೆಳವಣಿಗೆ ಕಾಣುವುದರೊಂದಿಗೆ ಆಕರ್ಷಣೀಯ ಪ್ರಮಾಣದ ಕಾರ್ಪೊರೇಟ್‌ ಫಲಗಳನ್ನು ವಿತರಿಸುವಂತಿರಬೇಕು. ಅಲ್ಲದೆ ಹೂಡಿಕೆಯು ಮುತ್ತಿನ ಹಾರದಂತಿರಬೇಕು,ಹೂಡಿಕೆಯು ಮನಸ್ಸಿಗೆ ಮುದನೀಡುವಂತಿರಬೇಕು,ಹೂಡಿಕೆಯು ಮನೋಲ್ಲಾಸ ಮೂಡಿಸುವಂತಿರಬೇಕು,ಹೂಡಿಕೆಯು ದೈಹಿಕ ಚೈತನ್ಯ ವೃದ್ಧಿಸುವಂತಿರಬೇಕು,ಹೂಡಿಕೆಯು ಅಗತ್ಯದ ಸಮಯದಲ್ಲಿ ಸಂಜೀವಿನಿಯಂತಿರಬೇಕು,ಹೂಡಿಕೆಯ ಅವಧಿಯಲ್ಲಿ ನಿಯತಕಾಲಿಕ ಮಾಶಾಸನ ಒದಗಿಸುವಂತಿರಬೇಕು,ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೆ ದಾರಿಯಾಗುವಂತಿರಬೇಕು,ಹೂಡಿಕೆಯು ಆರೋಗ್ಯ ಸಮಸ್ಯೆಗಳನ್ನು ದೂರವಿಡುವಂತಿರಬೇಕು ಹೂಡಿಕೆಯು ಮಾನಸಿಕ ತೃಪ್ತಿ, ನೆಮ್ಮದಿ, ಸಂತೋಷಗಳಿಗೆ ರಾಮಬಾಣದಂತಿರಬೇಕು ಆಗಲೇ ಹೂಡಿಕೆಯು ಪರಿಪೂರ್ಣವಾಗುತ್ತದೆ.

    ಆದರೆ ಈಗಿನ ದಿನಗಳಲ್ಲಿ ಇವೆಲ್ಲವನ್ನೂ ಕಂಡುಕೊಳ್ಳುವುದಾಗಲಿ, ಪಡೆದುಕೊಳ್ಳುವುದಾಗಲಿ ಅಸಾಧ್ಯವಲ್ಲದಿದ್ದರೂ ಸುಲಭ ಸಾಧ್ಯವಂತೂ ಅಲ್ಲ. ಇವುಗಳನ್ನು ಗಮನಿಸಿದಾಗ ಕವಿವರ್ಯ ಪುತಿನ ರವರ ಹಗುರಾಗಿಹ ಮೈ, ಕೆಸರಿಲ್ಲದ ಮನ, ಹಂಗಿಲ್ಲದ ಬದುಕು, ಕೇಡೆಣಿಸದ ನಡೆ, ಕೇಡಿಲ್ಲದ ನುಡಿ, ಸಾಕಿವು ಇಹಕೂ ಪರಕೂ – ಮೇಲೇನಿದೆ ಇದಕ್ಕೂ ಎಂಬ ಸಾಲುಗಳು ನೆನಪಾಗುತ್ತವೆ.

    ಅಳವಡಿಕೆ ಸುಲಭವಲ್ಲ

    ಮೇಲ್ನೋಟಕ್ಕೆ ಇವೆಲ್ಲಾ ಸುಲಭವೆನಿಸಿದರೂ ಅಳವಡಿಕೆ ಸುಲಭವಲ್ಲ. ಈಗಿನ ಜೀವನ ಚಕ್ರದ ಚಲನೆಯ ವೇಗವು ಚಿಂತನಾ ಶೈಲಿಗಳನ್ನೇ ಬದಲಿಸಿದೆ. ಎಲ್ಲವಕ್ಕೂ ನಮ್ಮ ವಿವೇಚನಾ ಶಕ್ತಿಯನ್ನು ಬಳಸದೆ ಒಂದು ರೀತಿಯ ಪರಾವಲಂಬಿಗಳಾಗುತ್ತಿದ್ದೇವೆ. ನಮ್ಮ ವೈಯಕ್ತಿಕ ವಿಚಾರಗಳಿಗೂ, ಹಣಕಾಸಿನ ನಿರ್ವಹಣೆ ಮತ್ತು ಹೂಡಿಕೆಗೂ, ಪರರ ವಿಚಾರಗಳನ್ನು, ಚಿಂತನೆಗಳನ್ನೇ ವಿವೇಚಿಸದೆ ಅಳವಡಿಸಿಕೊಳ್ಳುವಷ್ಟು ಅವಲಂಬಿತವಾಗುತ್ತಿದ್ದೇವೆ. ಎಷ್ಟರಮಟ್ಟಿಗೆ ನಾವು ನಮ್ಮ ಚಿಂತನಾ ಸಾಮರ್ಥ್ಯವನ್ನು ಕಡೆಗಣಿಸಿದ್ದೇವೆ ಎಂದರೆ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ಧಿಗಳನ್ನು ಸಂಪೂರ್ಣವಾಗಿ ಒಪ್ಪಿ ಅದಕ್ಕನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

    ಜಾಲತಾಣಗಳಲ್ಲಿ ಪ್ರೊಫೈಲ್‌ಗಳ ದುರುಪಯೋಗವಾಗಬಾರದೆಂಬ ಕಾರಣಕ್ಕಾಗಿ ಲಾಕ್‌ಮಾಡಿ ಸುರಕ್ಷತೆಗೆ ಮುಂದಾಗುವಷ್ಠು ಮುನ್ನೆಚ್ಚರಿಕೆ ವಹಿಸುವ ನಾವು ನಮ್ಮ ಸ್ವಂತ ಹಣವನ್ನು ವಿನಿಯೋಗಿಸುವಾಗ ಏಕೆ ಆ ಭಾವನೆ ಮೂಡುವುದಿಲ್ಲ. ಒಂದು ಬಂಗಾರದ ಗಟ್ಟಿಯನ್ನು ಆಭರಣ ತಯಾರಕರಿಗೆ ನೀಡಿ ಒಂದು ನೆಕ್ಲೇಸ್‌ಮಾಡಿಕೊಡಲು ಕೇಳಿದರೆ, ಅದರಲ್ಲಿ ವೇಸ್ಟೇಜ್‌ಇಲ್ಲದೆ ಮಾಡಲು ಸಾಧ್ಯವಿಲ್ಲ. ಅಂತೆಯೇ, ಒಂದು ಟೀಕ್‌ವುಡ್‌ಲಾಗನ್ನು ನೀಡಿ ಕಿಟಕಿ, ಬಾಗಿಲುಗಳನ್ನು ತಯಾರಿಸಲು ಹೇಳಿದಾಗ ಅದರಲ್ಲಿ ಹೆಚ್ಚಿನ ವೇಸ್ಟೇಜ್‌ಹೋಗುತ್ತದೆ. ಅರೆ ಅವೆಲ್ಲಾ ಏಕೆ ಅದು ದುಬಾರಿಯಾಗುತ್ತದೆ, ಎಂದೆನಿಸುವುದೇ ಇಲ್ಲ. ಕಾರಣ ಅದು ಅನಿವಾರ್ಯ.

    ಹಾಗೆಯೇ ಒಂದು ವೃತ್ತಿಪರರ ಸೇವೆಯನ್ನು ಪಡೆದುಕೊಳ್ಳುವಾಗ ಅವರ ಸೇವೆಗೆ ತಕ್ಕದಾದ ಸೇವಾ ಶುಲ್ಕವನ್ನು ನೀಡದಿದ್ದರೆ ನ್ಯಾಯಸಮ್ಮತವಾದ ಸೇವೆ ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರ ನೀಡುತ್ತಿರುವ ʼ ನೋ ಬ್ರೋಕರೇಜ್‌ʼ ಸಂಸ್ಥೆಗಳ ಸೇವೆ ಪಡೆದುಕೊಳ್ಳುವಾಗ ಅವುಗಳಲ್ಲಿ ಅಡಕವಾಗಿರುವ ಸೇವೆಗಳ ಅಂಶಗಳನ್ನು ತುಲನೆ ಮಾಡಿ ನಿರ್ಧರಿಸಬೇಕು.

    ಷೇರುಪೇಟೆಯಲ್ಲಿ ಹಿಂದೆ ಹೂಡಿಕೆ ಮಾಡಿದ ಹಣ ಈಗ ಹಲವು ಪಟ್ಟು ಹೆಚ್ಚಿದೆ. ಹಾಗೆಯೇ ಈಗ ಹೂಡಿಕೆ ಮಾಡಿದಲ್ಲಿ ಹೂಡಿಕೆ ಹಣ ಹಲವು ಪಟ್ಟು ಹೆಚ್ಚಲಿದೆ ಎಂಬ ಮಾತುಗಳು ಹೆಚ್ಚಿನವರಲ್ಲಿ ಕೇಳಿಬರುತ್ತದೆ. ಈಗ ತಾನೆ ಐ ಪಿ ಒ ಮೂಲಕ ವಿತರಣೆ ಮಾಡಿದ್ದೇವೆ ಅದನ್ನು ನ್ಯಾಯ ಸಮ್ಮತವೆಂದು ತೋರಿಸಲು ಐದು ವರ್ಷಗಳಷ್ಟು ಸಮಯ ನೀಡಬೇಕು ಎಂಬುದು ಕೆಲವರ ವಾದ. ಹೌದು ಸಮಯಾವಕಾಶ ನೀಡದಿದ್ದರೆ ಸಾಧಿಸುವುದಾದರೂ ಹೇಗೆ? ಆದರೆ ಆ ರೀತಿಯ ಸಮಯಾವಕಾಶ ಅಗತ್ಯವಿದ್ದಲ್ಲಿ ತಮ್ಮ ಬ್ರಾಂಡನ್ನು ಬಳಸಿಕೊಂಡು ಐದು ವರ್ಷಗಳ ನಂತರದ ಸಾಧನೆಗೆ ಇಂದೇ ಬೆಲೆಕಟ್ಟಿ ಆ ಬೆಲೆಯಲ್ಲಿ ಅಂದರೆ ಅತಿ ಹೆಚ್ಚಿನ ಪ್ರೀಮಿಯಂನಲ್ಲಿ ಷೇರು ವಿತರಣೆ ಮಾಡುವುದು ಸರಿಯೇ?

    5 ಕೋಟಿಯಿಂದ 10.7 ಕೋಟಿಗೆ ಏರಿಕೆ

    ಕಳೆದ ಎರಡುವರ್ಷಗಳಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ಅಂಶಗಳ ಪ್ರಕಾರ ನೋಂದಾಯಿತ ಹೂಡಿಕೆದಾರರ ಸಂಖ್ಯೆಯು ಸುಮಾರು 5 ಕೋಟಿಯಿಂದ 10.7 ಕೋಟಿಗೆ ಏರಿಕೆಯಾಗಿದೆ. ಅಂದರೆ ಪೇಟೆಯೊಳಗೆ ಹರಿದುಬರುತ್ತಿರುವ ಆಸಕ್ತರ ಹಣ ಅತಿ ಹೆಚ್ಚಾಗುತ್ತಿದೆ. ಹೆಚ್ಚಿನವರು ಮ್ಯೂಚುಯಲ್‌ಫಂಡ್‌ಗಳ ಸಿಪ್‌ಮೂಲಕ ಹೂಡಿಕೆ ಮಾಡುತ್ತಿರುವುದರಿಂದ, ಅದೂ ಸಹ ಷೇರುಪೇಟೆಯತ್ತ ತಿರುಗುವುದರಿಂದ ಪೇಟೆಯೊಳಗೆ ಹರಿದುಬರುತ್ತಿರುವ ಹಣ ಹೆಚ್ಚಾಗಿದೆ. ಆದರೆ ಅದಕ್ಕನುಗುಣವಾಗಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕಂಪನಿಗಳ ಸಂಖ್ಯೆ ಮಾತ್ರ ಏರಿಕೆಯಾಗಿರದೆ ಅದೇ ಹಂತದಲ್ಲಿದೆ. ಕೆಲವು ಕಂಪನಿಗಳು ಡಿಲೀಸ್ಟ್‌ಆಗಿರುವುದಾಗಲಿ, ಕೆಲವು ಕಂಪನಿಗಳಲ್ಲಿ ವಿಲೀನಗೊಳ್ಳುವ ಕ್ರಮದಿಂದಾಗಿ ವಹಿವಾಟಾಗುತ್ತಿರುವ ಕಂಪನಿಗಳ ಸಂಖ್ಯಾಗಾತ್ರವು ಕ್ಷೀಣಿತವಾಗುತ್ತಿದೆ. ಇದು ಷೇರುಪೇಟೆಯಲ್ಲಿ ಷೇರುಗಳ ಬೆಲೆಗಳಲ್ಲಿ ಏರಿಕೆ ಕಾಣಲಿಕ್ಕೆ ಪೂರಕ ಕಾರಣಗಳಾಗಿವೆ. ಆಯ್ಕೆಗಳು ವಿರಳ, ಬೇಡಿಕೆ ಬಹಳವಾದ ಕಾರಣ ಷೇರಿನ ಬೆಲೆಗಳಲ್ಲಿ ಹೆಚ್ಚು ಹೆಚ್ಚು ಏರಿಳಿತಗಳನ್ನು ಕಾಣಬಹುದಾಗಿದೆ.

    ಇತ್ತೀಚೆಗೆ ನಡೆದ ವರ್ಲ್ಡ್‌ ಎಕಾನಾಮಿಕ್‌ ಫೋರಂ ಪ್ರಕಾರ ” ಗ್ಲೋಬಲ್‌ ಇನ್ನೋವೆಟಿವೇಶನ್‌ ಇಂಡೆಕ್ಸ್”‌ ವಿಭಾಗದಲ್ಲಿ ಭಾರತದ ಸ್ಥಾನ 46 ಕ್ಕೇರಿದೆ. 2016 ರರಲ್ಲಿ 66 ನೇ ಸ್ಥಾನದಲ್ಲಿತ್ತು. ಅಲ್ಲದೆ ಭಾರತಕ್ಕೆ ಸ್ಟಾರ್ಟ್‌ ಅಪ್‌ ಎಕೋ ಸಿಸ್ಟಂ ವಿಭಾಗದಲ್ಲಿ 3ನೇ ಸ್ಥಾನವನ್ನು ನೀಡಲಾಗಿದೆ. ಇಂಡಿಯಾ ಗ್ಲೋಬಲ್‌ ಇನ್ನೋವೆಶನ್‌ ಸಮ್ಮಿಟ್‌ ನಲ್ಲಿ ವ್ಯಕ್ತಪಡಿಸಿದ ವಿಷಯ ಗಮನಾರ್ಹವಾದುದಾಗಿದೆ. ಅದೆಂದರೆ ಒಂದು ಉದ್ದಿಮೆ ಯಶಸ್ಸು ಕಾಣಬೇಕಾದರೆ ನಿರೀಕ್ಷಿತ ಮಟ್ಟದ ವಹಿವಾಟು, ಸದೃಢತೆ, ಲಾಭಗಳಿಕೆಯ ಸಾಮರ್ಥ್ಯ, ನಂಬಿಕೆಯ ಮಟ್ಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಾಗಿದೆ. ಆದರೆ ಈಚಿನ ದಿನಗಳಲ್ಲಿ ಕೇವಲ ವಹಿವಾಟಿನ ಗಾತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು, ಕಂಪನಿಯ ಲಾಭಗಳಿಕೆಯ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ.

    ಸಾಮಾನ್ಯವಾಗಿ ಷೇರುಪೇಟೆಯ ಯಶಸ್ಸಿಗೆ ಅವಶ್ಯವಿರುವುದು ಮೌಲ್ಯಾಧಾರಿತ ಖರೀದಿ. ಅಂದರೆ ಒಂದು ಉತ್ತಮ ಕಂಪನಿಯ ಷೇರಿನ ಬೆಲೆ, ಭಾಹ್ಯ ಕಾರಣಗಳ ಪ್ರಭಾವದಿಂದ, ಭಾರಿ ಕುಸಿತ ಕಂಡಾಗ ಅದನ್ನು ಮೌಲ್ಯಾಧಾರಿತ ಖರೀದಿಗೆ ಪರಿವರ್ತಿಸಿಕೊಳ್ಳಬಹುದು. ಈರೀತಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಾಗ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದಲೇ ಎಂದು ನಿರ್ಧರಿಸಿರಬೇಕು. ಒಂದು ವೇಳೆ ಖರೀದಿಸಿದ ಷೇರಿನ ಬೆಲೆಯು ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಅಲ್ಪಾವಧಿಯಲ್ಲೇ ಪ್ರದರ್ಶಿಸಿದಲ್ಲಿ ಪೂರ್ಣವಾಗಿಯಲ್ಲದಿದ್ದರೂ ಭಾಗಶ:ವಾದರೂ ಲಾಭದ ನಗದೀಕರಣ ಮಾಡಿಕೊಳ್ಳುವುದು ಉತ್ತಮ. ನೆನಪಿರಲಿ ಬ್ಯಾಂಕ್‌ಗಳಲ್ಲಿ ಠೇವಣಿ ಮೊತ್ತವು ದ್ವಿಗುಣವಾಗಲು ಸುಮಾರು 12 ವರ್ಷಗಳ ಸಮಯ ಬೇಕಾಗಬಹುದು. ಅಂದರೆ ಈ ಅಲ್ಪಬಡ್ಡಿದರದ ಯುಗದಲ್ಲಿ ಆಕರ್ಷಕ ಲಾಭವನ್ನು ಪೇಟೆ ಒದಗಿಸಿದಾಗ ಫಲಾನುಭವಿಯಾಗುವುದು ಸರಿಯಾದ ಕ್ರಮ.

    ಆಕರ್ಷಣೀಯ ಲಾಭಾಂಶ ಮತ್ತು ಕಾರ್ಪೊರೇಟ್‌ಫಲಗಳನ್ನು ವಿತರಿಸಿದ ಕಂಪನಿಗಳ ಪಟ್ಟಿ ಇಂತಿದೆ.

    Name of CompanyMarket rateDividendsPrevious year Rs.
    BPCL3285+5+679.00
    COAL INDIA1979+ 5 +316.00
    GAIL1474+5+ buyback+1  5.00 + buyback
    H P C L23314.00  22.75
    I O C1185 + 4 +3.6012.00
    IRCON ( 2)400.70+0.70+0.65  2.15 + 1:1 BONUS
    R V N L331.58  2.72
    IRFC220.77+0.63  1.05
    N M D C (1)1279.01 +5.73 7.76 + BUY BACK
    N T P C1554.00 + 3.00 6.15 + BUYBACK
    P  F C1122.25+2.50+6.00+1.2510.00
    POWER GRID CORP2257 +5.50+ 2.25 9.00 + 1: 3 BONUS
    OIL INDIA2503.50+5.75+5.00 5.00
    R E C1192.50+6.00+4.80 8.71
    SAIL764.00+2.50+2.25 2.80
    BALMER LAWRI INVESTMENTS37730.0038.00 (37.50 PRVYR)
    SANOFI6,900490.00365.00

    *ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ. ಇದು ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ಶಿಫಾರಸ್ಸಿನ ದೃಷ್ಠಿಯಿಂದಲ್ಲ.

    ಮೇಲಿನ ಕಂಪನಿಗಳು ಆಕರ್ಷಣಿಯ ಪ್ರಮಾಣದ ಲಾಭಾಂಶಗಳನ್ನು ಹಿಂದಿನ ವರ್ಷಗಳಲ್ಲಿ ವಿತರಿಸಿವೆ. ಆದರೆ ಮುಂದೆಯೂ ಇದೇ ರೀತಿಯ ವಿತರಣೆಯಾಗಬಹುದೆಂದು ನಿಶ್ಚಿತವಾಗಿ ಹೇಳಲು ಅಸಾಧ್ಯ. ಆದರೂ ಹೂಡಿಕೆ ಮಾಡಿದ ಮೇಲೆ ಆ ಕಂಪನಿಗಳಲ್ಲುಂಟಾಗುವ ಪ್ರಭಾವಿ ನಡೆಗಳ ಮೇಲೆ ನಿಗಾ ಇರಿಸಿರಬೇಕು.

    ಇನ್ನು ಕೆಲವು ಅಗ್ರ ಮಾನ್ಯ ಕಂಪನಿಗಳು ಕಾರ್ಪೊರೇಟ್‌ಫಲಗಳ ಆಧಾರದ ಮೇಲೆ ಅಲ್ಪ ಕಾಲೀನದಲ್ಲೇ ಅಪೂರ್ವ ಅವಕಾಶಗಳನ್ನು ಕಲ್ಪಿಸುತ್ತವೆ. ಇದಕ್ಕೆ ಉದಾಹರಣೆಗಳು ಇಂತಿವೆ.

    ಬೋನಸ್‌ ಷೇರಿನ ವಿಚಾರದಲ್ಲಿ ಪ್ರಮುಖ ಕಂಪನಿಗಳಾದ ಹಿಂದೂಜಾ ಗ್ಲೋಬಲ್‌ ಸೊಲೂಷನ್ಸ್‌, ಬಿ ಎಸ್‌ ಇ , ಗೋದಾವರಿ ಪವರ್‌ ಅಂಡ್‌ ಇಸ್ಪಾಟ್‌, ಮುಂತಾದ ಕಂಪನಿಗಳು, ಷೇರಿನ ಮುಖಬೆಲೆ ಸೀಳಿಕೆ ಸಂದರ್ಭದಲ್ಲಿ ಐ ಆರ್‌ ಸಿ ಟಿ ಸಿ, ಜುಬಿಲಿಯಂಟ್‌ ಫುಡ್‌, ಸರಿಗಮ ಇಂಡಿಯಾ, ವರ್ಧಮಾನ್‌ ಟೆಕ್ಸ್‌ಟೈಲ್ಸ್‌ ನಂತಹಕಂಪನಿಗಳು ಪ್ರದರ್ಶಿಸಿದ ಏರಿಳಿತಗಳ ವೈಖರಿ, ಲಾಭಾಂಶ ಗಳ ಘೋಷಣೆಯ ನಂತರ ಕಂಪನಿಗಳಾದ ಸನೋಫಿ, ಇನಿಯೋಸ್‌ ಸ್ಟೈರೊಲೂಷನ್‌, ವೇದಾಂತ, ಟಾಟಾ ಇನ್ವೆಸ್ಟ್ ಮೆಂಟ್ಸ್‌, ಟಾಟಾ ಕೆಮಿಕಲ್ಸ್‌, ಜಿ ಎಂ ಡಿ ಸಿ, ಇಂಡಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ನಂತಹ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸಿದ ರಭಸದ ಏರಿಳಿತಗಳು ಪೇಟೆಯಲ್ಲಿ ವಹಿವಾಟುದಾರರ, ಹೂಡಿಕೆದಾರರ ಚಿಂತನಾ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

    ಒಂದು ರೀತಿ ಬೇಗ ಬೇಗ ಡ್ರಾ – ಬೇಗ ಬೇಗ ಬಹುಮಾನ ಎಂಬಂತಹ ಪರಿಸ್ಥಿತಿಯಲ್ಲಿರಲು ಕಾರಣ ಪೇಟೆಯ ಮೇಲೆ ಪ್ರಭಾವಿಯಾಗಬಲ್ಲ ಅಂಶಗಳು ಹೆಚ್ಚಾಗಿದ್ದು, ಯಾವ ಸಂದರ್ಭದಲ್ಲಿ ಯಾವ ಅಂಶ ನಾಯಕತ್ವ ವಹಿಸಿ ಪ್ರಭಾವ ಬೀರುತ್ತದೆಂಬುದನ್ನು ಕಲ್ಪಿಸಲಸಾಧ್ಯವಾದ ಹಂತದಲ್ಲಿರುವಾಗ, ಕಣ್ಣಿಗೆ ಗೋಚರವಾಗುವ ಪರದೆಯ ಮೇಲಿನ ಅಂಕಿ ಅಂಶಗಳನ್ನಾಧರಿಸಿ ನಿರ್ಧರಿಸಿದಲ್ಲಿ, ಬಂಡವಾಳ ಸುರಕ್ಷತೆಯೊಂದಿಗೆ, ಸ್ವಲ್ಪಮಟ್ಟಿನ ಆದಾಯಕ್ಕೂ ಆಸ್ಪದವಾಗಬಹುದಲ್ಲವೇ?

    ಒಂದು ಕಂಪನಿಯು ಆಕರ್ಷಣೀಯ ರೀತಿಯಲ್ಲಿ ಫಲಿತಾಂಶ ಪ್ರಕಟಿಸಿದಲ್ಲಿ, ಆ ಷೇರಿನ ಬೆಲೆ ಮುಂಚಿತವಾಗಿಯೇ ಏರಿಕೆ ಕಂಡ ಕಾರಣ ಮೇನೇಜ್‌ ಮೆಂಟ್‌ ನ ಕಾಮೆಂಟರಿ ಪ್ರೋತ್ಸಾಹದಾಯಕವಿಲ್ಲ ಎಂಬ ನೆಪದಿಂದ ಭಾರಿ ಪ್ರಮಾಣದ ಕುಸಿತವನ್ನು ಫಾರ್ಮ ವಲಯದ ಕಂಪನಿ ಪ್ರದರ್ಶಿಸಿದೆ. ಒಂದು ಕಂಪನಿಯು ತನ್ನ ಕಾರ್ಯವ್ಯಾಪ್ತಿಯನ್ನು ಪೇಂಟ್ಸ್‌ ವಿಭಾಕ್ಕೆ ವಿಸ್ತರಿಸಲು ಸುಮಾರು ರೂ.50 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂಬ ಸುದ್ಧಿಯು ಪೇಂಟ್ಸ್ ವಲಯದ ಷೇರುಗಳ ಕುಸಿತಕ್ಕೆ ಕಾರಣವಾಯಿತು. ಕೇವಲ ಪ್ರಸ್ತಾವನೆಗೆ ಈ ರೀತಿ ಸ್ಪಂದನೆ. ಈ ಯೋಜನೆ ಜಾರಿಯಾಗಲು ಹಲವಾರು ವರ್ಷಗಳೇ ಬೇಕಾಗಬಹುದಾದರೂ, ಭಾವನಾತ್ಮಕವಾಗಿ ಸ್ಪಂಧಿಸುವ ಇಂದಿನ ಶೈಲಿ ಇದಾಗಿದೆ. ಸೀಮೆಂಟ್‌ ಕಂಪನಿಯು ತನ್ನ ಉತ್ಪಾಧನೆಯನ್ನು ಹೆಚ್ಚಿಸಲು ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿದರೆ ಆ ಷೇರಿನ ಬೆಲೆ ರೂ.400 ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಗಬೇಕಾಯಿತು. ಈವಾರ ಟೆಕ್ಸ್‌ ಟೈಲ್‌ ವಿಭಾಗದ ಕಂಪನಿಗಳು ಭಾರಿ ಏರಿಕೆಯನ್ನು ಒಂದು ದಿನ ಪಡೆದುಕೊಂಡವು. ಆದರೆ ನಂತರದ ದಿನವೇ ಹೆಚ್ಚಿನ ಕುಸಿತಕ್ಕೊಳಗಾದವು. ಅಂದರೆ ಅವಕಾಶಗಳು ಮಿಂಚಿನ ವೇಗದಲ್ಲಿ ಸೃಷ್ಠಿಯಾಗಿ , ಕ್ಷಿಪಣಿ ವೇಗದಲ್ಲಿ ಮಾಯವಾಗುತ್ತಿವೆ.

    ಈಗಿನ ಚಿಂತನೆಗಳು ಹೇಗಿದೆ ಎಂದರೆ ನಮ್ಮ ಪ್ರೊಫೈಲ್‌ ನ ಅಂಶಗಳು ದುರುಪಯೋಗಪಡಿಸಿಕೊಳ್ಳಬಾರದೆಂದು ಅದನ್ನು ಲಾಕ್‌ ಮಾಡುತ್ತೇವೆ ಆದರೆ ಹಣಕಾಸಿನ ವಿಚಾರದಲ್ಲಿ ನಮ್ಮ ಸುರಕ್ಷತೆಯನ್ನು ಸಾಧಿಸಲು ನಿರ್ಲಕ್ಷಿಸುತ್ತೇವೆ. ಕಾರಣ ಪೇಟೆಯಲ್ಲಿ ಸಹಜವಾಗಿ ನಮಗೆ ದೊರೆತಂತ ಅವಕಾಶಗಳನ್ನು ಕೈಚೆಲ್ಲುತ್ತೇವೆ. ಕಾಣದೆ ಇರುವ ಪ್ರಚಾರಿಕ ತಂತ್ರದ ಅಲಂಕಾರಿಕ ಪದಗಳಿಗೆ ಮೋಹಿತರಾಗಿ ನಮ್ಮ ಚಿಂತನೆಗಳನ್ನು ಮರೆತುಬಿಡುತ್ತೇವೆ. ಒಂದು ಪ್ರಮುಖ ಸರಳ ಹೂಡಿಕೆಯ ಸೂತ್ರವೆಂದರೆ, ಇನ್ಫೋಸಿಸ್‌ ಸಂಸ್ಥೆಯ ಪ್ರವರ್ತಕರಾದ ನಾರಾಯಣ ಮೂರ್ತಿಯವರಂತೆ, ಒಂದು ಕಂಪನಿಯು ಯಶಸ್ವಿಯಾಗಬೇಕಾದರೆ ಆ ಕಂಪನಿಯ ಟಾಪ್‌ ಲೈನ್‌ ಮತ್ತು ಬಾಟಮ್‌ ಲೈನ್‌ ಸಾಧನಾ ಅಂಶಗಳು ಉತ್ತಮವಾಗಿರಬೇಕು. ಆದರೆ ಈಗಿನ ದಿನಗಳಲ್ಲಿ ಕೇವಲ ಟಾಪ್‌ ಲೈನ್‌ ಬೆಳವಣಿಗೆಗಳಿಗೆ ಒತ್ತು ನೀಡಿ ಕಂಪನಿಗಳು ಹಾನಿಗೊಳಗಾಗಿದ್ದರೂ, ಅಲಂಕಾರಿಕ ಪದಗಳನ್ನು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡಬಹುದೆಂಬ ಅಂಶಗಳನ್ನು ಬಿಂಬಿಸಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಸಹಜವಾಗಿ ಕಂಪನಿಗಳು ಲಾಭಗಳಿಕೆಯೊಂದಿಗೆ ಹೂಡಿಕೆದಾರರಿಗೆ ಪ್ರತಿಫಲಗಳನ್ನು ನೀಡುವ ಕಂಪನಿಗಳ ಬಗ್ಗೆ ಚಕಾರವೆತ್ತದೆ ಕಡೆಗಣಿಸುವುದು ವಾಡಿಕೆಯಾಗಿದೆ.

    ಈ ಸಂದರ್ಭದಲ್ಲಿ ಕಂಪನಿಗಳನ್ನು ಹೋಲಿಕೆ ಮಾಡುವ ಮುನ್ನ ಲೆವೆಲ ಪ್ಲೇಯಿಂಗ್‌ ವೇದಿಕೆಯನ್ನು ಸಿದ್ಧಗೊಳಿಸಿಕೊಂಡು ಮಾಪನಮಾಡಬೇಕು. ಉದಾಹರಣೆಗೆ ಎಲ್‌ ಐ ಸಿ ಆಫ್‌ ಇಂಡಿಯಾದ ಷೇರಿನ ಬೆಲೆ ಭಾರಿ ಕುಸಿತಕ್ಕೊಳಗಾಗಿದೆ ಎಂಬ ಪ್ರಚಾರ ಹೆಚ್ಚಾಗುತ್ತಿದೆ. ಆದರೆ ಆ ಷೇರಿನ ಮುಖಬೆಲೆ ರೂ.10 ಆಗಿದ್ದು ಇತರೆ ಹೊಸ ಕಂಪನಿಗಳಾದ ಡೆಲಿವರಿ, ಪೇಟಿಎಂ, ನೈಕಾ, ಝೊಮೆಟೋ, ವಿಜಯ್‌ ಡಯಾಗ್ನಾಸ್ಟಿಕ್ಸ್‌, ಮುಂತಾದವುಗಳ ಷೇರಿನ ಮುಖಬೆಲೆ ರೂ.1 ಆಗಿದೆ. ಅಂದರೆ ಎಲ್‌ ಐ ಸಿ ಷೇರನ್ನು ಈ ಕಂಪನಿಗಳಿಗೆ ಹೋಲಿಸಬೇಕಾದಲ್ಲಿ ರೂ.10 ರ ಮುಖಬೆಲೆಯ ಷೇರನ್ನು ರೂ.1 ಕ್ಕೆ ಪರಿವರ್ತಿಸಿ ಅಂದರೆ ಈಗಿನ ರೂ.800 ರ ಸಮೀಪವಿರುವ ಷೇರು ರೂ.80 ಆಗುತ್ತದೆ. ರೂ.80 ರ ಸಮೀಪವಿರುವ, ಅತಿ ಹೆಚ್ಚಿನ ರಿಯಲ್‌ ಎಸ್ಟೇಟ್ ಸ್ವತ್ತನ್ನು ಹೊಂದಿರುವ, ಗಣನೀಯ ಪ್ರಮಾಣದ ಭಾಗಿತ್ವವನ್ನು ಅಗ್ರಮಾನ್ಯ ಕಂಪನಿಗಳಲ್ಲಿ ಹೊಂದಿರುವ, ಆಕರ್ಷಣೀಯ ಮಟ್ಟದ ಲಾಭಗಳಿಸುತ್ತಿರುವ, ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ, ಕೈಗಾರಿಕೋದ್ಯಮವನ್ನು ಪೋಷಿಸಿ ಬೆಳೆಸುತ್ತಿರುವ, ಸಾರ್ವಜನಿಕ ಜವಾಬ್ಧಾರಿಯನ್ನು ವಿಮಾ ಯೋಜನೆಗಳ ಮೂಲಕ ನಿರ್ವಹಿಸುತ್ತಿರುವ, ಅಪಾರ ಸಂಖ್ಯೆಯ ಪ್ರತಿನಿಧಿಗಳಿಗೆ ಜೀವನ ಕಟ್ಟಿಕೊಟ್ಟಿರುವ ಒಂದು ಬೃಹತ್‌ ಸಂಸ್ಥೆಯ ಸಾಧನೆಯ ಮುಂದೆ ಇತರೆ ಕಂಪನಿಗಳು, ಅದರಲ್ಲೂ ಹಾನಿಗೊಳಗಾಗಿದ್ದರೂ, ವೈವಿಧ್ಯಮಯ ಅಲಂಕಾರಿಕ ಶಬ್ಧಗಳಿಂದ ಮರಳುಮಾಡಲಿಚ್ಚಿಸುತ್ತಿರುವ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಉತ್ತಮ ಪ್ರತಿಫಲ ಪಡೆದುಕೊಳ್ಳಲು ಸಾಧ್ಯ.

    ಇದರಿಂದ ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೆ ದಾರಿಮಾಡಿಕೊಟ್ಟಂತಾಗುವುದಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    CHITRADURGA JUNE 4
    ನಮ್ಮದು ಬಸವ ಪಥದ ಸರ್ಕಾರ. ಪಠ್ಯ ಪರಿಷ್ಕರಣೆಯಲ್ಲಿ ಏನಾದರೂ ವ್ಯತ್ಯಾಸವಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವಾಂಶದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.

    ಅವರು ಇಂದು ಹಿರಿಯೂರಿನ ದೇವರಕೊಟ್ಟ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಪಠ್ಯಪುಸ್ತಕ ಸಮಿತಿಯ ಕೆಲಸ ಪೂರ್ಣಗೊಂಡಿದ್ದರಿಂದ ಸಮಿತಿಯನ್ನು ವಿಸರ್ಜನೆ ಗೊಳಿಸಲಾಗಿದೆ. ಪರಿಷ್ಕೃತ ಪಠ್ಯದ ಬಗ್ಗೆ ಹಲವಾರು ಸ್ವಾಮೀಜಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಮ್ಮದು ಬಸವಪಥ ಸರ್ಕಾರ. ಬಸವಣ್ಣನವರ ಉತ್ತಮ ವಚನಗಳಿದ್ದು, ಅವುಗಳನ್ನು ಪರಿಶೀಲಿಸಿದ್ದೇನೆ. 2015 ರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗಿನ ಸಮಿತಿಗೆ ಕೇವಲ ಒಂದು ವಾಕ್ಯದ ವ್ಯತ್ಯಾಸವಿದ್ದು, ಉಳಿದಂತೆ ಲಿಂಗದೀಕ್ಷೆ ಸೇರಿದಂತೆ ಎಲ್ಲ ವಿಷಯಗಳು ಬರಗೂರು ರಾಮಚಂದ್ರಪ್ಪ ಅವರ ಪಠ್ಯದಲ್ಲಿಯೂ ಇದೆ ಎಂದರು.

    ಒಟ್ಟಾರೆ ಬಸವಣ್ಣ ನವರ ನಿಜ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂಬುದು ಲ್ಲರ ಇಚ್ಛೆ. ಅದಕ್ಕಾಗಿ ಎಲ್ಲರ ಜತೆ ಸಮಾಲೋಚನೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಹೆಡಗೆವಾರ್ ಅವರ ಪಠ್ಯವೂ ಇರಲಿದೆ. ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟವನ್ನು ನೀಡಲಾಗುವುದು ಎಂದು ತಿಳಿಸಿದರು.

    Crop insurance :ದಾಳಿಂಬೆ ಹಾಗೂ ಇತರ ತೋಟಗಾರಿಕಾ ಬೆಳೆಗಳ ಬೆಳೆವಿಮೆ ಮಂಜೂರು

    CHITRADURGA , JUNE 04

    ದಾಳಿಂಬೆ ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳ ಬೆಳೆವಿಮೆಗೆ ಶೀಘ್ರದಲ್ಲಿ ಮಂಜೂರಾತಿಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆ ಮತ್ತು ಇತರೆ 7 ಕೆರೆಗಳಿಗೆ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

    ಚಿತ್ರದುರ್ಗ 171 ಹಳ್ಳಿಗಳಿಗೆ, ಹಿರಿಯೂರಿನ 131 ಹಳ್ಳಿಗಳಿಗೆ ಬಹುಗ್ರಾಮ ಕುಡಿಯು ನೀರಿನ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿರುತ್ತದೆ. ಧರ್ಮಪುರ ಕೆರೆ ಸೇರಿದಂತೆ 7 ಕೆರೆಗಳಿಗೆ ನೀರು ತುಂಬುವ ಕಾಮಗಾರಿಯನ್ನು 40 ಕೋಟಿ ರೂ.ಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಇನ್ನಿತರ ಪೂರಕ ಕೆಲಸಗಳಿಗೆ 50 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಇದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು. ಈ ಭಾಗದ ಜನರ ಆರೋಗ್ಯ ಸೌಕರ್ಯಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 1000 ಎಕರೆಯ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ಸರ್ಕಾರಿ ಆದೇಶವನ್ನು ನೀಡಲಾಗಿದೆ. ಟೌನ್‍ಶಿಪ್‍ಗಾಗಿ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದೆ. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಮತ್ತು ಧಾರವಾಡದಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

    25 ಲಕ್ಷ ಮನೆಗಳಿಗೆ ನಳ ಸಂಪರ್ಕ:
    ಈ ಪ್ರದೇಶದ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. ಮನೆ ಮನೆ ಗಂಗೆ – ನರೇಂದ್ರ ಮೋದಿಯವರ ದಿಟ್ಟತನದ ಕಾರ್ಯಕ್ರಮವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ನೀಡಲಾಗಿದ್ದು, ಈ ವರ್ಷವೂ 25 ಲಕ್ಷ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸುವ ಗುರಿಯನ್ನು ತಲುಪಲಾಗುವುದು ಎಂದರು.

    ಭದ್ರಾ ಮೇಲ್ದಂಡೆ ಯೋಜನೆ- ರಾಷ್ಟ್ರೀಯ ಯೋಜನೆಯಾಗಿ ಘೋಷಣೆ:
    ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಗಳು ಈ ಭಾಗದ ರೈತರ ಕನಸನ್ನು ನನಸು ಮಾಡುವ ದಿಕ್ಕನಲ್ಲಿ ಪ್ರಾರಂಭವಾಗಿದೆ. 2008 ರಲ್ಲಿ ನಾಯಕರಾದ ಯಡಿಯೂರಪ್ಪನವರ ಈ ಭಾಗದ ನೀರಿನ ಬವಣೆಯನ್ನು ತೀರಿಸಲು ತೀರ್ಮಾನಿಸಿ, ನಾನು ನೀರಾವರಿ ಸಚಿವನಾಗಿದ್ದಾಗ, ಈ ಬೃಹತ್ ಯೋಜನೆಗೆ ಅನುಮತಿ, ಪರಿಸರ ಅನುಮತಿ, ಅರಣ್ಯದ ಅನುಮತಿಯನ್ನು ಪಡೆದು ಯೋಜನೆ ಪ್ರಾರಂಭಿಸಲಾಯಿತು. ಹಿರಿಯೂರಿನ ರೈತರು 543 ದಿನಗಳ ಧರಣಿಯನ್ನು ನಡೆಸಿದ್ದರು. ಇದು ಗಂಭೀರವಾದ ಹೋರಾಟವಾಗಿತ್ತು. ಹೋರಾಟದಲ್ಲಿ ನಿರತರಾಗಿದ್ದ ರೈತರಿಗೆ, 15 ದಿನದೊಳಗೆ ವಾಣಿವಿಲಾಸ ಡ್ಯಾಂಗೆ ನೀರನ್ನು ಹರಿಸುವ ಭರವಸೆ ನೀಡಿ, ಆದೇಶವನ್ನೂ ನೀಡಿದ್ದೆ. ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದು ಶೀಘ್ರದಲ್ಲಿ ರಾಷ್ಟ್ರೀಯ ಯೋಜನೆಯಂದು ಘೋಷಣೆಯಾಗಿ , ಯೋಜನೆಯ ಅನುಷ್ಠಾನಕ್ಕೆ ಕೇಂದ್ರದಿಂದ ಅನುದಾನ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.

    ದುಡಿಯುವ ವರ್ಗಕ್ಕೆ ಶಕ್ತಿ ತುಂಬಲಾಗುತ್ತಿದೆ :
    ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡುತ್ತಿದೆ. ಒಂದೇ ವರ್ಷದಲ್ಲಿ 7000 ಕೊಠಡಿಗಳನ್ನು ನಿರ್ಮಿಸುವ ತೀರ್ಮಾನಿಸಲಾಗಿದೆ. 100 ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ,ಪ್ರತಿ ತಾಲ್ಲೂಕಿನಲ್ಲಿಯೂ ಕಡುಬಡವರಿಗೆ, ಹಿರಿಯರಿಗೆ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ, ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರವಣದೋಷವಿರುವ ಕಡುಬಡವರಿಗೆ ಶ್ರವಣ ಸಮಸ್ಯೆ ನಿವಾರಣೆಗೆ ಧ್ವನಿ ಪೆಟ್ಟಿಗೆಯನ್ನು ವಿತರಿಸುವ ಯೋಜನೆಗೆ 500 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಡಯಾಲಿಸಿಸ್‍ನ್ನು 30 ಸಾವಿರ ಸೈಕಲ್‍ನಿಂದ 60 ಸಾವಿರ ಸೈಕಲ್‍ಗೆ ಏರಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 10 ಕೇಂದ್ರಗಳಲ್ಲಿ ಕಿಮೋಥೆರಪಿ ನೀಡಲಾಗುತ್ತಿದೆ. ಹೀಗೆ, ಶಿಕ್ಷಣ, ಉದ್ಯೋಗ ಪ್ರಾಶಸ್ತ್ಯ ನೀಡಿ ಎಸ್ ಸಿ ಎಸ್‍ಟಿ, ಹಿಂದುಳಿದ ವರ್ಗಗಳ ಅಭ್ಯುದಯ, ಸ್ತ್ರೀಶಕ್ತಿ ಸಂಘಗಳಿಗೆ 1.5 ಲಕ್ಷ ಸಾಲಸೌಲಭ್ಯ ನೀಡಿ, ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುವುದು. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ರೈತವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದು, 8 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯನ್ನು ತಲುಪಿಸಲಾಗಿದೆ. ಎಸ್ ಸಿ ಎಸ್ ಟಿ ಜನಾಂಗದ ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು

    ಪಠ್ಯಪುಸ್ತಕ ಪರಿಷ್ಕರಣೆ- ವರದಿ ಪರಿಶೀಲನೆಯ ನಂತರ ಶೀಘ್ರದಲ್ಲಿ ತೀರ್ಮಾನ -ಸಿಎಂ

    UDUPI JUNE 1

    ಪಠ್ಯಪುಸ್ತಕ ಪರಿಷ್ಕರಣೆಯ ವರದಿ ಪರಿಶೀಲನೆಯ ನಂತರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಇಂದು ಅವರು ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 8ನೇ ವರ್ಷಾಚರಣೆ ಅಂಗವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

    ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿದಂತೆ, ಈಗಾಗಲೇ ಪಠ್ಯದಲ್ಲಿರುವ ಪಾಠಗಳನ್ನು ತೆಗೆಯುವಂತೆ ಕೆಲ ಸಾಹಿತಿಗಳು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದೆ. ಸ್ವಾಮೀಜಿಗಳು ಹಾಗೂ ಇತರರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ವರದಿ ಹಾಗೂ ವಾಸ್ತವಾಂಶವನ್ನು ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ಪಡೆದು, ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ನಾಳೆ ವರದಿ ದೊರೆಯಲಿದ್ದು, ಪಠ್ಯಗಳನ್ನು ವಾಪಸ್ಸು ಪಡೆಯುತ್ತೇವೆ ಎನ್ನುವ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

    ಎಸಿಬಿ ಈಗಾಗಲೇ ಬಲವರ್ಧನೆಯಾಗಿದೆ. ಲೋಕಾಯುಕ್ತ ಇದ್ದರೂ , ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಸಿಬಿ ಆ ಅಧಿಕಾರವಿದೆ ಎಂದರು.

    ಲವ್ ಜಿಹಾದ್ ಕರಾವಳಿ ಭಾಗದಲ್ಲಿ ಮತ್ತೊಮ್ಮೆ ಸದ್ದುಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇದಕ್ಕಾಗಿ ಕಾನೂನು ರೂಪಿಸಲಾಗಿದ್ದು, ಯಾರೂ ಕಾನೂನು ಉಲ್ಲಂಘನೆ ಮಾಡುವಂತಿಲ್ಲ ಎಂದರು.

    ಹೆಬ್ರಿ ನೂತನ ಆಡಳಿತ ಸೌಧ ಲೋಕಾರ್ಪಣೆ
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಹೆಬ್ರಿ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ್ , ಗೋವಿಂದ ಕಾರಜೋಳ , ಸುನಿಲ್ ಕುಮಾರ್ , ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ರಾಜ್ಯ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.

    ಮೂರನೇ ವರ್ಷಕ್ಕೆ ಕನ್ನಡಪ್ರೆಸ್.ಕಾಮ್

    ಪ್ರಿಯ ಓದುಗರೇ,

    ಎರಡು ವರ್ಷದ ಹಿಂದೆ ಇದೇ ದಿನ. ಆಗಷ್ಟೇ ಲಾಕ್ ಡೌನ್ ತೆರವಾಗಿ ಚಟುವಟಿಕೆಗಳು ಶುರುವಾಗುತ್ತಿದ್ದ ಸಮಯ. ವರ್ಕ್ ಫ್ರಮ್ ಹೋಮ್ ಗಳು, ಆನ್ ಲೈನ್ ತರಗತಿಗಳು , ಪರೀಕ್ಷೆ ನಡೆಯುವುದೋ ಇಲ್ಲವೋ ಗೊಂದಲ. ಆದರೆ ಸ್ವಲ್ಪ ದಿನದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗುವ ಆಶಾ ಭಾವನೆಯಂತೂ ಇತ್ತು.

    ಇಂಥ ಸಂದರ್ಭದಲ್ಲೇ ವರ್ಷದ ಹಿಂದೆ -ಮೇ 29,2020- ನಾನು ಕನ್ನಡಪ್ರೆಸ್.ಕಾಮ್ ಅನ್ನು ಶುರುಮಾಡಿದ್ದು. ಹಿರಿಯ ನಿರ್ದೇಶಕ ಯೋಗರಾಜ ಭಟ್ಟರು ಲೋಕಾರ್ಪಣೆಗೊಳಿಸಿದ್ದರು. ಆ ದಿನ ಬರೆದ ಸಂಪಾದಕೀಯದಲ್ಲಿ ಬರೆದಿದ್ದ ಕೆಲ ಸಾಲು ಹೀಗಿತ್ತು….ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ  ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ. ಕಳೆದ ವರ್ಷವೂ ಇದೇ ಸ್ಥಿತಿ . ಆದರೆ ನಾವು ಎರಡನೇ ವರ್ಷ ಮುಗಿಸುವಷ್ಟರಲ್ಲಿ ಕೊರೋನಾ ಮಹಾಮಾರಿ ಒಂದು ಹಂತದ ತಹಬಂದಿಗೆ ಬಂದಿದೆ. ಇದೇ ಸಂತಸದ ವಿಷಯ.

    ಕಳೆದ ವರ್ಷ ಕನ್ನಡಪ್ರೆಸ್.ಕಾಮ್ ನ ಸಹೋದರ ಪೋರ್ಟಲ್ english.kannadapress.com ಕೂಡ ಆರಂಭವಾಗಿ ಜನ ಮನ್ನಣೆ ಗಳಿಸಿತು. ಅದರ ಜೊತೆಗೆ ನಮ್ಮ ಯು ಟ್ಯೂಬ್ ಚಾನಲ್ ಕನ್ನಡಪ್ರೆಸ್ ಕೂಡ ಸಕ್ರಿಯವಾಯಿತು. ಈಗ ಆ ಚಾನಲ್ ನಲ್ಲಿ ಈಗ ನೂರಕ್ಕೂ ಹೆಚ್ಚು ವಿಡಿಯೋಗಳಿವೆ. ಈ ಚಾನಲ್ ಗೂ SUBSCRIBE ಆಗುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಲು ವಿನಂತಿ.

    ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ. ನಮ್ಮ ಯಾತ್ರೆಯೆ ಮೂರನೇ ವರ್ಷದ ಮೊದಲ ದಿನವಾದ ಇಂದು ಶುದ್ಧ ಪತ್ರಿಕೋದ್ಯಮಕ್ಕೆ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗೆ ಎಂದಿನಂತೆ ಸದಾ ಸ್ವಾಗತ.

    ಶ್ರೀವತ್ಸ ನಾಡಿಗ್,ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

    ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURY MAY 27 :

    ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಅಂದಾಜು 65ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕಂಪನಿಗಳು ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

    ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲ್ಯಯುತ ಮಾನವಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹಕಗಳು, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ಕರ್ನಾಟಕದ ರಾಜ್ಯದ ಮೇಲೆ ವಿಶ್ವಾಸವನ್ನು ಮೂಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.

    ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದೆ. ಕರ್ನಾಟಕದಲ್ಲಿ ಒಟ್ಟು 65 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ವಿಶ್ವ ಪ್ರಮುಖ ಸಂಸ್ಥೆಗಳು ಬದ್ಧತೆ ತೋರಿದ್ದು, ಸುಮಾರು 25 ಕಂಪನಿಗಳೊಂದಿಗೆ ಚರ್ಚಿಸಲಾಗಿದೆ. ಭಾರತ ದೇಶವನ್ನು ಹೊಸ ಆರ್ಥಿಕ ಶಕ್ತಿಯಾಗಿ ವಿಶ್ವ ಎದುರುನೋಡುತ್ತಿದೆ. ಕರ್ನಾಟಕ ರಾಜ್ಯದ ಎಲ್ಲ ರಂಗಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು. ಬಂಡವಾಳ ಹೂಡಿಕೆಯ ಜೊತೆಗೆ ವಿಸ್ತರಣಾ ಕಾರ್ಯಕ್ಕೂ ಉತ್ಸುಕತೆ ತೋರಿದರು. ಹೈಡ್ರೋ ಪವರ್, ಏರೋಸ್ಪೇಸ್, ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರದ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ ತೋರಿದರು. ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು ಎಂದರು.

    ಕೋವಿಡ್ ನಂತರದ ದೇಶದ ಆರ್ಥಿಕತೆಯ ಬಲವರ್ಧನೆಯಲ್ಲಿ ಕರ್ನಾಟಕದ ಪಾತ್ರ ವಹಿಸಿದೆ ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿರುವ ಸಂಸ್ಥೆಗಳ ಉದ್ದಿಮೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮೂಲಭೂತಸೌಕರ್ಯ, ಉದ್ದಿಮೆ ಸ್ಥಾಪನೆಗೆ ಸರಳೀಕೃತ ಪ್ರಕ್ರಿಯೆಗಳು, ಈಸ್ ಆಫ್ ಡೂಯಿಂಗ್ ಬಿಸನೆಸ್ ನೀತಿಯ ಮೂಲಕ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.

    ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.

    ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು,4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 10 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.

    ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಎನರ್ಜಿ, ಸೀಮೆನ್ಸ್ , ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ , ನಸ್ಟ್ಲೆ , ಆರ್ಸೆಲಾರ್ ಮಿತ್ತಲ್ ಸಂಸ್ಥೆ ಭಾರ್ತಿ ಎಂಟರ್ ಪ್ರೈಸಸ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ ಎಂದರು.

    ಇದಲ್ಲದೆ ಅದಾನಿ ಗ್ರೂಪ್, ದಾಲ್ಮಿಯಾ ಸಿಮೆಂಟ್, ಜಾನ್ಸ್ ನ್ ಕಂಟ್ರೋಲ್ಸ್, ಹನಿವೆಲ್, ಐಬಿಎಂ, ಐಕಿಯ ಸ್ಟೋರ್ಸ್, ಪೇಪಾಲ್, ಆಕ್ಸಿಸ್ ಬ್ಯಾಂಕ್ ಸಂಸ್ಥೆಗಳು ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶ ಬಗ್ಗೆ ಆಸಕ್ತಿ ತೋರಿರುವುದಾಗಿ ತಿಳಿಸಿದರು.

    ಕರ್ನಾಟಕ ಸರ್ಕಾರ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಹಮ್ಮಿಕೊಂಡಿರುವ ಯೋಜನೆಯಂತೆ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲಸೌಲಭ್ಯ ನೀಡಲು ಆಕ್ಸಿಸ್ ಬ್ಯಾಂಕ್ ಸಂಸ್ಥೆಗೆ ಆ್ಯಂಕರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

    ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ವಿಶ್ವದ ಎಲ್ಲ ಪ್ರಮುಖ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ ಎಂದರು.

    ನವೆಂಬರ್ ಮಾಹೆಯೊಳಗೆ ನಗರದ ಮೂಲಸೌಲಭ್ಯವನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ 6 ಸಾವಿರ ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ 18 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.

    error: Content is protected !!