ಕೇಂದ್ರ ಸರಕಾರದ `ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ’ದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯವನ್ನು ಮೇ 3ರ ಮಂಗಳವಾರದಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿ.ವಿ.ದ ಶೈಕ್ಷಣಿಕ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮೇ 3ರ ಕಾರ್ಯಕ್ರಮಕ್ಕೆ ನಡೆದಿರುವ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದ ಅವರು, `ನೃಪತುಂಗ ವಿವಿ ಉದ್ಘಾಟನೆ ಕಾರ್ಯಕ್ರಮವನ್ನು ಚಾರಿತ್ರಿಕ ಸಮಾರಂಭವನ್ನಾಗಿ ಮಾಡಿ, ಸ್ಮರಣೀಯಗೊಳಿಸಲಾಗುವುದು. ಸರಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ಸಾವಿರ ಜನ ಭಾಗವಹಿಸಲಿದ್ದಾರೆ’ ಎಂದರು.
ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 100 ವರ್ಷಗಳ ಹಿಂದೆ (1921ರಲ್ಲಿ) ಸ್ಥಾಪಿಸಿದ ಈ ಸಂಸ್ಥೆಯು ಹಂತಹಂತವಾಗಿ ಬೆಳೆದು ಬಂದಿದೆ. ಈಗ ಪೂರ್ಣ ವಿಶ್ವವಿದ್ಯಾಲಯದ ರೂಪವನ್ನು ಪಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ಶೈಕ್ಷಣಿಕ ಕ್ರಾಂತಿ ಮಾಡಲು ಸಂಕಲ್ಪ ಮಾಡಿರುವುದರ ಫಲವಿದು’ ಎಂದು ಅವರು ಹೇಳಿದರು.
ನೃಪತುಂಗ ವಿ.ವಿ.ದಲ್ಲಿ ಬಿ.ಎಸ್ಸಿ ಮತ್ತು ಬಿಸಿಎ ಪದವಿಗಳಡಿ 24 ಕೋರ್ಸುಗಳು, 7 ಸ್ನಾತಕೋತ್ತರ ಶಿಸ್ತುಗಳು ಮತ್ತು 3 ಸಂಶೋಧನಾ ಕೇಂದ್ರಗಳು ಇರಲಿವೆ. ಈ ವಿ.ವಿ.ಗೆ ಕೇಂದ್ರ ಸರಕಾರವು 55 ಕೋಟಿ ರೂ.ಗಳಷ್ಟು ಅನುದಾನವನ್ನು ಮಂಜೂರು ಮಾಡಿದೆ. ಈ ಮೂಲಕ ನೃಪತುಂಗ ವಿ.ವಿ.ವನ್ನು ಜಾಗತಿಕ ಗುಣಮಟ್ಟದ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.
ಭಾರತವನ್ನು ಜ್ಞಾನದ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹತ್ತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಪಠ್ಯದ ಕಲಿಕೆಯ ಜತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯ ಗಮನ ಕೊಡಲಾಗಿದೆ. ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ನೃಪತುಂಗ ವಿ.ವಿ. ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಮುಂದಡಿ ಇಡಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಕುಲಸಚಿವ ರಾಮಕೃಷ್ಣ ರೆಡ್ಡಿ ಸೇರಿದಂತೆ ಸಿಬ್ಬಂದಿ ಇದ್ದರು.
ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ರಾಮಾ ರಾಮಾ ರೇ' ಹಾಗೂಒಂದಲ್ಲಾ ಎರಡಲ್ಲಾ’ ನಂತರ ಸತ್ಯ ಅವರು ಕರ್ಮಶಿಯಲ್ ಟಚ್ ಕೊಟ್ಟು ಈ ಮೂರನೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಿದು ಆನ್ಲೈನ್ ತೆರೆಯಲ್ಲಿ ಬರಲಿದೆ.
ಒಂದೇ ದಿನ ನಡೆಯುವ ಕತೆಯನ್ನು ವಿಭಿನ್ನ ತಿರುವುಗಳೊಂದಿಗೆ ಹೆಣೆಯಲಾಗಿದೆ ಎನ್ನುವುದು ಸತ್ಯ ಅವರ ಮಾತು. ತಮ್ಮ ಎಂದಿನ ತಂಡವರು ಇಲ್ಲಿ ಇದ್ದಾರೆ ಎನ್ನುತ್ತಾರೆ ಸತ್ಯ. ತಮ್ಮ ತಂಡದವರಷ್ಟೇ ಅಲ್ಲದೇ ಮತ್ತಷ್ಟು ನುರಿತ ಹಾಗೂ ಹೊಸ ಕಲಾವಿದರೂ ಇಲ್ಲಿ ನಟಿಸಿದ್ದಾರೆ ಎಂದರು ಸತ್ಯ. ಸರಿ ಸುಮಾರು ಎಪ್ಪತ್ತು-ಎಂಬತ್ತು ಕಲಾವಿದರನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದ್ದಾರೆ.
ರಾಮಾ ರಾಮಾ ರೇ' ಚಿತ್ರದಲ್ಲಿ ಕಳ್ಳನ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದಸಹಜ ನಟ’ ನಟರಾಜ್ ಚಿತ್ರದಲ್ಲಿ ನಿರ್ದೇಶಕನ ಪಾತ್ರದಲ್ಲಿದ್ದಾರೆ. ಧರ್ಮಣ್ಣ ಕಡೂರ್, ಸುಂದರ್, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾಟೋಗ್ರಫಿ ಲವಿತ್ ಹಾಗೂ ಸಂಗೀತ ವಾಸುಕಿ ವೈಭವ್ ಎಂದಿನಂತೆ ತಮ್ಮ ಛಾಪನ್ನು ಇಲ್ಲೂ ಮುದ್ರಿಸಿದ್ದಾರೆ. ಇವರ ವಿಭಿನ್ನ ಶೈಲಿಯ ಕಾರ್ಯವನ್ನು ಈ ಚಿತ್ರ ನೋಡಿಯೇ ಅರಿಯಬೇಕಿದೆ.
ಸತ್ಯ
ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರಕ್ಕೆ ಬೆನ್ನೆಲುಬಾಗಿದ್ದು ನಿರ್ಮಾಣದ ಹೊಣೆ ಹೊತ್ತಿದ್ದರು. ಒಮ್ಮೆ ಚಿತ್ರೀಕರಣದ ಲೊಕೇಶನ್ಗೂ ಬಂದು ಹಾರೈಸಿದ್ದರು. ಹೀಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಟ್ಟಿದ್ದ ಪುನೀತ್ ಈ ಚಿತ್ರದ ಬಿಡುಗಡೆಯನ್ನು ನೋಡಲಿಲ್ಲ ಎಂಬುಂದೇ ಬೇಸರದ ಸಂಗತಿ.ಸತ್ಯ ಅಂಡ್ ಮಯೂರ ಪಿಕ್ಚರ್ ಅಡಿಯಲ್ಲಿ ಹೋದ ವರ್ಷದ ಏಪ್ರಿಲ್ನಲ್ಲಿ ಕನ್ನಡ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಕನ್ನಡದ ಹೆಸರಾಂತ ಡಾಲಿ ಧನಂಜಯ್ ಕೂಡ ಜೊತೆಯಾಗಿದ್ದರು.
ಸತ್ಯ ನಿರ್ದೇಶಿಸಿದ `ಜಯನಗರ 4ನೇ ಬ್ಲಾಕ್’ ಕಿರು ಚಿತ್ರದಲ್ಲಿ ನಟಿಸಿದ್ದ ಧನಂಜಯ್ ಸತ್ಯ ಅವರ ತಂಡದ ಒಬ್ಬ ಸದಸ್ಯ ಕೂಡ ಹೌದು. ಈ ಚಿತ್ರವು ಸತ್ಯ ಅವರ ಉತ್ತಮ ನಿರ್ದೇಶನದ ಚಿತ್ರ ಮನರಂಜನೆಯನ್ನು ಖಂಡಿತಾ ನೀಡುತ್ತೆ ಎಂದಿನ ಸತ್ಯ ಅವರ ಚಿತ್ರಗಳಂತೆ ಒಂದು ಮೆಸೇಜ್ ಕೂಡ ಇರುತ್ತೆ. ಮೊದಲೆರಡೂ ಚಿತ್ರಗಳಿಗಿಂತ ಈ ಚಿತ್ರವು ವಿಭಿನ್ನವಾಗಿದ್ದು ಎಲ್ಲ ವರ್ಗದ ಚಿತ್ರಪ್ರೇಮಿಗಳನ್ನು ಸೆಳೆಯುತ್ತೆ ಎನ್ನುವುದು ಖಚಿತ ಎಂದಿದ್ದಾರೆ. ಹಾಗೇ ಮುಂದುವರೆದು ಮಾತಾಡಿರುವ ಧನಂಜಯ್ ಈ ಚಿತ್ರದ ಹೆಸರೇ ವಿಭಿನ್ನವಾಗಿದ್ದು ಸತ್ಯ ತಮ್ಮ ಎಲ್ಲಾ ಮ್ಯಾಚ್ಗಳಲ್ಲೂ ಗೆಲ್ಲಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಬೆಳೆಯಲಿ ಎಂದು ಹಾರೈಸಿದರು. ಧನಂಜಯ್ ಅವರೇ ಹೇಳುವಂತೆ ಮುಂದೆ ಸತ್ಯ ನಿರ್ದೇಶನದಲ್ಲಿ ಒಂದು ಚಿತ್ರವನ್ನು ಮಾಡುವ ಯೋಜನೆ ಇದೆ ಎಂದರು.
ಸತ್ಯ ತಂಡದ ಹಿನ್ನೆಲೆ! ಸತ್ಯ ಮೊದಲ ಬಾರಿಗೆ ನಿರ್ದೇಶನಕ್ಕಿಳಿದು ನಿರ್ದೇಶಿಸಿದ ಜಯನಗರ 4ನೇ ಬ್ಲಾಕ್' ಕಿರು ಚಿತ್ರದಲ್ಲಿ ಧನಂಜಯ್ ನಟಿಸಿದ್ದರು. ಆನಂತರ ಮೊಟ್ಟ ಮೊದಲನೆಯದಾಗಿ ಚಿತ್ರ ನಿರ್ದೇಶನ ಮಾಡಿದ್ದುರಾಮಾ ರಾಮಾ ರೇ’. ಈ ಚಿತ್ರವು ಕನ್ನಡ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತು. ಅಲ್ಲದೇ ಕನ್ನಡ ಚಿತ್ರರಂಗದ ಎಲ್ಲರ ಗಮನವನ್ನು ಸೆಳೆದ ಚಿತ್ರವಾಯ್ತು. ಕನ್ನಡಕ್ಕೆ ಹೊಸ ಪ್ರಯೋಗದ ಚಿತ್ರ ಕೊಟ್ಟ ಹೆಗ್ಗಳಿಕೆಯನ್ನು ಮೊದಲ ಚಿತ್ರವೇ ಪಡೆಯಿತು. ಆ ಚಿತ್ರದಲ್ಲಿ ಪ್ರಮುಖ ನಟರಾಗಿದ್ದ ನಟರಾಜ್ಗೆ ಕಳ್ಬೆಟ್ಟದ ದರೋಡೆಕೋರರು' ಚಿತ್ರದಲ್ಲಿ ಹೀರೋ ಪಟ್ಟ ಸಿಕ್ತು.ರಾಮಾ ರಾಮಾ ರೇ’ ಚಿತ್ರದಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದ ಧರ್ಮಣ್ಣ ಅವರಿಗೆ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅವಕಾಶಗಳು ಹುಡುಕಿ ಬಂತು. ನಾಟಿ ಸ್ಟಾರ್' ಎಂದೇ ಖ್ಯಾತರಾದರು. ಕನ್ನಡದ ಪ್ರಖ್ಯಾತ ಹೀರೋಗಳ ಚಿತ್ರಗಳಲ್ಲೂ, ಹೊಸ ರೀತಿಯ ಚಿತ್ರಗಳಲ್ಲೂ ಅವಕಾಶಗಳು ಧರ್ಮಣ್ಣ ಅವರನ್ನು ಹುಡುಕಿ ಬಂತು. ಈಗ ಧರ್ಮಣ್ಣ ತುಂಬಾ ಬ್ಯುಸಿಯಾಗಿರುವ ಹಾಸ್ಯ ಕಲಾವಿದ ಎನ್ನಲ್ಲಡ್ಡಿಯಿಲ್ಲ. ರಾಮಾ ರಾಮಾ ರೇ’ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರ ಕೇಳು ಕೃಷ್ಣ ಕೇಳು ಪಾರ್ಥ...' ಸಾಕಷ್ಟು ಹೆಸರು ಮಾಡಿ ಎಲ್ಲರ ಮೊಬೈಲ್ಗಳಲ್ಲಿ ಮೊಳಗಿತು. ಅದರ ಬೆನ್ನಲ್ಲೇ ಹಲವಾರು ಚಿತ್ರಗಳಿಗೆ ಅವಕಾಶವೂ ಸಿಕ್ತು ಖ್ಯಾತರೂ ಆದ್ರೂ, ಈಗ ಖ್ಯಾತ ಸಂಗೀತ ನಿರ್ದೇಶಕ, ಖ್ಯಾತ ಗಾಯಕ ಎಂದು ಹೆಸರಾಗಿದ್ದಾರೆ. ಈ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಲವಿತ್ ಕೂಡ ಖ್ಯಾತರಾದರು. ಈಗ ಹೆಚ್ಚು ಬ್ಯುಸಿಯಾಗಿರುವ ಸಿನಿಮಾಟೋಗ್ರಫರ್ ಪಟ್ಟಿಯಲ್ಲಿ ಲವಿತ್ ಕೂಡ ಒಬ್ಬರು. ಸತ್ಯ ಅವರಿಗೆಒಂದಲ್ಲಾ ಎರಡಲ್ಲಾ’ ಚಿತ್ರ ಮಾಡಲು ಅವಕಾಶವೂ ಸಿಕ್ತು. ಅದೂ ಯಶಸ್ಸನ್ನು ತಂದು ಕೊಡ್ತು.
ಹೀಗೆ ರಾಮಾ ರಾಮಾ ರೇ' ಒಂದು ಚಿತ್ರವು ಕನ್ನಡ ಚಿತ್ರರಂಗಕ್ಕೆ ಒಂದೇ ಬಾರಿಗೆ ಹೀರೋ, ಹಾಸ್ಯ ಕಲಾವಿದ, ಸಂಗೀತ ನಿರ್ದೇಶಕ, ಸಿನಿಮಾಟೋಗ್ರಫರ್ ಹಾಗೂ ನಿರ್ದೇಶಕ ಹೀಗೆ ಮತ್ತಷ್ಟು ಹೊಸ ತಂತ್ರಜ್ಞರ ಹಾಗೂ ಹೊಸ ನಟರ ಪರಿಚಯಕ್ಕೆ ಕಾರಣವಾಯ್ತು.ಕೇಳು ಕೃಷ್ಣ ಕೇಳು ಪಾರ್ಥ…’ ಚಿತ್ರದ ಪ್ರಮೋಶನ್ ಕೆಲಸವೂ ವಿಭಿನ್ನವಾಗಿದ್ದು ತಂತ್ರಜ್ಞರು, ಹೊಸ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು.
ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಹಾಗೂ ಈ ಮ್ಯಾನ್ ಆಫ಼್ ದ ಮ್ಯಾನ್ ಚಿತ್ರಗಳಲ್ಲಿ, ಧನಂಜಯ, ರಂಜನ್, ನಾಗೇಂದ್ರ ಎಚ್.ಎಸ್, ಪದ್ಮನಾಭ ಭಟ್ ಹಾಗೂ ಸುಂದರ್ ಅವರ ಬರವಣಿಗೆಯ ಸಹಾಯವಿದೆ. ಇವರೆಲ್ಲರೂ ಸತ್ಯ ತಂಡದ ಬರಹಗಾರರು.
ಸತ್ಯ ತಂಡದಲ್ಲಿ ಹಿರಿಯ ಸಂಕಲನಕಾರ ಬಿ ಎಸ್ ಕೆಂಪರಾಜ್ ಅವರಿದ್ದಾರೆ. ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಹಾಗೂ ಈ ‘ಮ್ಯಾನ್ ಆಪ್ ದಿ ಮ್ಯಾಚ್” ಮೂರು ಚಿತ್ರಗಳಿಗೂ ಸಂಕಲನಕಾರರಾಗಿ ದ್ದಾರೆ. ಸತ್ಯ ಅವರ ಉತ್ತಮ ಚಿತ್ರಗಳ ಕೊಡುಗೆಯಲ್ಲಿ ಸಂಕಲನಕಾರರಾಗಿ ಕೆಂಪರಾಜ್ ಕೊಡುಗೆಯೂ ಇದೆ ಎಂಬುದು ಸತ್ಯ, ಅದು ಅತಿಶಯೋಕ್ತಿ ಆಗಲಾರದು.
ಸತ್ಯ ಪಿಕ್ಚರ್ ತಂಡವು ಸತ್ಯ ಡಿಸ್ಟ್ರಿಬ್ಯೂಶನ್ ಅನ್ನೂ ಆರಂಭಿಸಿದ್ದಾರೆ. ಅಲ್ಲದೇ ಹಲವು ಹೊಸ ಪ್ರತಿಭೆಗಳ ಕಿರುಚಿತ್ರಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ರೂಪಿಸುವ ಪ್ರಯತ್ನದಲ್ಲಿದ್ದಾರೆ.
ತೆಲುಗಿಗೂ ಹೋದ ರಾಮಾ ರಾಮಾ ರೇ'! ಆಟಗದರಾ ಶಿವಾ’ ಎಂಬ ಹೆಸರಲ್ಲಿ ತೆಲುಗಲ್ಲೂ ರೀಮೇಕ್ ಆಯ್ತು. ರಾಕ್ಲೈನ್ ವೆಂಕಟೇಶ್ ಅವರ ನಿರ್ಮಾಣ. ಕನ್ನಡದ ದೊಡ್ಡಣ್ಣ ಅದರಲ್ಲಿ ಮುಖ್ಯ ಪಾತ್ರದಲ್ಲಿದ್ದ್ದಾರೆ. ಲವಿತ್ ಸಿನಿಮಾಟೋಗ್ರಫಿ ಮಾಡಿದ್ದಲ್ಲದೇ ವಾಸುಕಿ ವೈಭವ್ ಅದರಲ್ಲಿ ಹಾಡಿದ್ದಾರೆ. ಅಲ್ಲಿ ಕೂಡ ಈ ಚಿತ್ರವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯ್ತು ಎನ್ನುವುದು ಹೆಮ್ಮೆಯ ಸಂಗತಿ.
ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರುವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೈಫ್ ಇನ್ಷೂರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಸಂಸ್ಥೆಯು 1956 ರಿಂದಲೂ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ವಿಮಾ ಸಂಸ್ಥೆಯಾಗಿದೆ. ಜಾಗತೀಕರಣಕ್ಕೂ ಮುನ್ನಾ ದಿನಗಳಲ್ಲಿ ಎಲ್ ಐ ಸಿ ಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅದರ ಏಜೆಂಟರ ಪಾತ್ರ ಗಣನೀಯ ಮಟ್ಟದಲ್ಲಿತ್ತು. 1956 ರಲ್ಲಿ ಸುಮಾರು 245 ದೇಶೀಯ ಮತ್ತು ವಿದೇಶೀಯ ವಿತ್ತೀಯ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣದ ಮೂಲಕ ಸ್ವಾದೀನಪಡಿಸಿಕೊಂಡು ಎಲ್ ಐ ಸಿ ಆಕ್ಟ್ 1956 ಮೂಲಕ ಎಲ್ ಐ ಸಿ ಯನ್ನು ಸ್ಥಾಪಿಸಿತು. ಇದಕ್ಕೆ ರೂ.5 ಕೋಟಿ ರೂಪಾಯಿಗಳ ಬಂಡವಾಳವನ್ನೂ ಸಹ ಒದಗಿಸಿತು. ಸಧ್ಯ ಈ ಸಂಸ್ಥೆಯು ಐ ಡಿ ಬಿ ಐ ಬ್ಯಾಂಕ್, ಎಲ್ ಐ ಸಿ ಹೌಸಿಂಗ್ ಫೈನಾನ್ಸ್, ಎಲ್ ಐ ಸಿ ಮ್ಯುಚುಯಲ್ ಫಂಡ್, ಎಲ್ ಐ ಸಿ ಕಾರ್ಡ್ ಸರ್ವಿಸಸ್ ಮುಂತಾದವುಗಳು ಎಲ್ ಐ ಸಿ ಯ ಅಂಗ ಸಂಸ್ಥೆಗಳಾಗಿವೆ.
ದೇಶದ ಶೇ.61 ಕ್ಕೂ ಹೆಚ್ಚಿನ ವಿಮಾ ಸೇವೆಯು ಈ ಸಂಸ್ಥೆಯ ಕೊಡುಗೆಯಾಗಿದೆ. ಸುಮಾರು 39ಲಕ್ಷ ಕೋಟಿ ರೂಪಾಯಿಗಳ ಸ್ವತ್ತನ್ನು ನಿರ್ವಹಿಸುತ್ತಿರುವ, ಎರಡು ಸಾವಿರಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿರುವ, ವಿವಧ ವಿದೇಶಗಳಲ್ಲಿಯೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಹೆಮ್ಮೆಯ ಭಾರತೀಯ ಕಂಪನಿಯಾಗಿದೆ. ಹೊಸ ವಿಮಾ ಪಾಲಿಸಿ ವಿತರಣೆಯಲ್ಲಿ ಶೇ.61 % ರಷ್ಟರ ಪಾಲು ಎಲ್ ಐ ಸಿ ಹೊಂದಿದೆ. ದೇಶದ ವೈಯಕ್ತಿಕ ವಿಮಾ ಪಾಲಿಸಿಯಲ್ಲಿ ಶೇ.71 ರಷ್ಟರ ಪಾಲು ಎಲ್ ಐ ಸಿಯದಾಗಿದೆ. ಸಮೂಹ ವಿಮಾ ಪಾಲಿಸಿಗಳಲ್ಲಿ ಶೇ. 88 ಕ್ಕೂ ಹೆಚ್ಚಿನ ಪಾಲು ಎಲ್ ಐ ಸಿಯ ಕೊಡುಗೆಯಾಗಿದೆ. ಭಾರತದ ಶೇ.55 ರಷ್ಟು ವಿಮಾ ಏಜೆಂಟರು ಎಲ್ ಐ ಸಿಯ ಭಾಗವಾಗಿದ್ದಾರೆ, ಅಂದರೆ ಸುಮಾರು 13.50 ಲಕ್ಷ ಏಜೆಂಟರಿದ್ದಾರೆ. 2021 ರಲ್ಲಿ ಹೊಸ ಪಾಲಿಸಿಗಳನ್ನು ವಿತರಿಸಿದ ಭಾಗದಲ್ಲಿ ಶೇ.96.42 ರ ಪಾಲು ಏಜೆಂಟರ್ ಗಳದಾಗಿದೆ. 2021 ರಲ್ಲಿ ರೂ.22,358 ಕೋಟಿ ಹಣವನ್ನು ಏಜೆಂಟರ ಕಮೀಷನ್ ರೂಪದಲ್ಲಿ ವಿತರಿಸಿದೆ. ಸೆಪ್ಟೆಂಬರ್ 2021 ರ ಅಂತ್ಯದಲ್ಲಿ ರೂ.9,815 ಕೋಟಿಯನ್ನು ಏಜೆಂಟರ ಕಮೀಷನ್ ಆಗಿ ವಿತರಿಸಿದೆ.
ಇಂತಹ ಬೃಹತ್ ಸಂಸ್ಥೆಯು ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದು ಗಮನಿಸಲೇಬೇಕಾದ ಅಂಶ. ಕಾರಣ ಎಲ್ ಐ ಸಿ ಆಫ್ ಇಂಡಿಯಾವು ತನ್ನ ವೈವಿಧ್ಯಮಯ ಯೋಜೆನಗಳ ಮೂಲಕ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಬಳಸಿಕೊಂಡು ಅದರಿಂದ ಬಂದ ಇಳುವರಿಯನ್ನು ತನ್ನ ಪಾಲಿಸಿದಾರರಿಗೆ ಬೋನಸ್ ಮೂಲಕ ವಿತರಿಸುವುದಲ್ಲದೆ, ಪಾಲಿಸಿದಾರರಿಗೆ ಜೀವವಿಮೆಯನ್ನು ಒದಗಿಸಿ, ಕ್ಲೇಮ್ ಹಣವನ್ನು ವಾರಸುದಾರರಿಗೆ ತಲುಪಿಸುವ ಸಾಮಾಜಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದೆ. ಜಾಗತೀಕರಣಕ್ಕೂ ಮುಂಚಿನದಿನಗಳಲ್ಲಿ, ಉದ್ಯಮಿಗಳಿಗೆ, ಉದ್ಯಮಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎತ್ತಿಕೊಳ್ಳುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಎಲ್ ಐ ಸಿ ಆಫ್ ಇಂಡಿಯಾ ಒದಗಿಸುತ್ತಿದೆ.
ಎಲ್ ಐ ಸಿಯ ಹೂಡಿಕೆಯು ಯಾವ ರೀತಿ ಹಂಚಲ್ಪಟ್ಟಿದೆ ಎಂಬುದನ್ನು ತಿಳಿಯೋಣ.
ಶೇ.37.45% ರಷ್ಟು ಹೂಡಿಕೆಯು ಕೇಂದ್ರ ಸರ್ಕಾರದ ಸೆಕ್ಯುರಿಟೀಸ್ ಗಳಲ್ಲಿ ವಿನಿಯೋಗಿಸಲ್ಪಟ್ಟರೆ,
ಶೇ.24.62% ರಷ್ಟು ರಾಜ್ಯ ಸರ್ಕಾರಗಳ ಸೆಕ್ಯುರಿಟೀಸ್ ಗಳಲ್ಲಿ ಹೂಡಿಕೆ ಮಾಡಲಾಗಿದೆ.
ಶೇ.24.78% ರಷ್ಟು ಈಕ್ವಿಟಿ ಷೇರುಗಳಲ್ಲಿ
ಶೇ.8.06% ರಷ್ಟು ಡಿಬೆಂಚರ್ ಗಳು, ಬಾಂಡ್ ಗಳು,
ಶೇ.0.78 ರಷ್ಟು ಮ್ಯುಚುಯಲ್ ಫಂಡ್, ಇ ಟಿ ಎಫ್ ಗಳಲ್ಲಿದೆ.
ಹಣಕಾಸಿನ ಲೆಕ್ಕಾಚಾರ:
ಎಲ್ ಐ ಸಿಯು ಹಿಂದಿನ ಮೂರು ವರ್ಷಗಳಲ್ಲಿ ಉತ್ತಮವಾದ ಹಣಕಾಸಿನ ಹರಿವನ್ನು ಹೊಂದಿದ್ದು, ಪ್ರೀಮಿಯಂ ಸಂಗ್ರಹಣೆ ಉತ್ತಮವಾಗಿತ್ತು. 2021.22 ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯ ನಿರ್ವಹಣಾ ವೆಚ್ಚ, ಏಜೆಂಟರ ಕಮೀಷನ್ ಸೇರಿ ರೂ.18,906 ಕೋಟಿಯಾಗಿದೆ. ಆದರೆ ಅದರ ನಿರ್ವಹಣಾ ಸಂಗ್ರಹಣೆ ಮಾತ್ರ ರೂ.11,114.3 ಕೋಟಿ ಮಾತ್ರವಾಗಿದೆ. ಈ ಅಂಶವು ಸ್ವಲ್ಪಮಟ್ಟಿನ ನಕಾರಾತ್ಮಕತೆಯಿಂದ ಕೂಡಿದೆ. ವಿಮಾ ಕ್ಷೇತ್ರದ ಚಟುವಟಿಕೆಯಲ್ಲಿ ಇತರೆ ಕಂಪನಿಗಳಂತೆ ಮುಂಚಿತವಾಗಿ ಗಳಿಸಬಹುದಾದ ಲಾಭದ ಅವಕಾಶಗಳನ್ನು ಅಂದಾಜಿಸಲು ಸಾಧ್ಯವಿಲ್ಲ. ಮತ್ತು ಗೈಡನ್ಸ್ ನೀಡುವ ರೀತಿ ಇರುವುದಿಲ್ಲ.
ಆರಂಭದ ದಿನ ; 4ನೇ ಮೇ 2022 ಅಂತಿಮ ದಿನ : 9ನೇ ಮೇ 2022 ಷೇರಿನ ಮುಖಬೆಲೆ ರೂ.10 ವಿತರಣಾ ಬೆಲೆಯ ಅಂತರ: ರೂ.902 ರಿಂದ ರೂ.949 ಕನಿಷ್ಠ ಷೇರುಗಳು : 15 ವಿತರಣಾ ಷೇರುಗಳ ಸಂಖ್ಯೆ :22,13,74,920 ರೀಟೇಲ್ ರಿಯಾಯಿತಿ : ರೂ.45 ಪಾಲಿಸಿದಾರರಿಗೆ ರಿಯಾಯಿತಿ : ರೂ.60 ರೀಟೇಲ್ ಸಮೂಹಕ್ಕೆ ಮೀಸಲು : ಶೇ.35 ಪಾಲಿಸಿದಾರರಿಗೆ ಮೀಸಲು : ಶೇ.10 ಲೀಸ್ಟಿಂಗ್: ಬಿ ಎಸ್ ಇ ಮತ್ತು ಎನ್ ಎಸ್ ಇ ಅಲಾಟ್ ಮೆಂಟ್ ದಿನ : 12 ನೇ ಮೇ 2022 ರೀಫಂಡ್ ಮಾಹಿತಿ ದಿನ ; 13 ನೇ ಮೇ 2022 ಷೇರುಗಳನ್ನು ಡಿಮ್ಯಾಟ್ ಖಾತೆಗೆ ಜಮೆ ದಿನ : 16 ನೇ ಮೇ 2022 ಷೇರುಗಳ ಲೀಸ್ಟಿಂಗ್, ವಹಿವಾಟಿಗೆ : 17ನೇ ಮೇ 2022
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಎಲ್ ಐ ಸಿ ಆಫ್ ಇಂಡಿಯಾದ ರೂ.10 ರ ಮುಖಬೆಲೆಯ ಷೇರನ್ನು ರೂ.904 ರಂತೆ( ರೀಟೇಲ್ ರಿಯಾಯಿತಿಯ ನಂತರ ) ವಿತರಿಸಲಾಗುತ್ತಿದ್ದು, ಕಂಪನಿಯು ಉತ್ತಮ ಸಾಧನೆಯೊಂದಿಗೆ, ಜನಾನುರಾಗಿಯಾಗಿ, ನಿರಂತರವಾದ ಲಾಭ ಗಳಿಸುತ್ತಿರುವ, ನಂಬಿಕೆ ಗಳಿಸಿರುವ ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸ್ಥೆಯಾಗಿದೆ. ಅಲ್ಲದೆ ಹೆಚ್ಚಿನ ಕಾರ್ಪೊರೇಟ್ ವಲಯಕ್ಕೆ ಅವಶ್ಯವಿರುವ ಸಂಪನ್ಮೂಲ ಒದಗಿಸಿದ್ದಲ್ಲದೆ, ದೇಶದ ಮೂಲ ಸೌಕರ್ಯವಲಯಕ್ಕೆ ಮಹತ್ತರ ಕೊಡುಗೆ ನೀಡಿದೆ. ಆದರೆ ಈಚಿನ ವರ್ಷಗಳಲ್ಲಿ ಉಂಟಾಗಿರುವ ಕಠಿಣ ಸ್ಪರ್ಧೆಯು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುವುದೆಂಬುದು ಭವಿಷ್ಯವೇ ನಿರ್ಧರಿಸುತ್ತದೆ.
ಆದರೆ ಇತ್ತೀಚೆಗೆ ಐ ಪಿ ಒ ಮೂಲಕ ಪೇಟೆ ಪ್ರವೇಶೀಸಿದ ರೂ.1 ರ ಮುಖಬೆಲೆಯ ಪೇಟಿಎಂ, ಝಮೆಟೋ, ನೈಕಾ ಗಳಿಗಿಂತ ಉತ್ತಮವಾದ ಆಕರ್ಷಣೀಯ ಬೆಲೆಯಲ್ಲಿ ವಿತರಿಸಲಾಗುತ್ತಿದೆ ಎನ್ನಬಹುದು. ಷೇರುಪೇಟೆಯ ಹೂಡಿಕೆಯಲ್ಲಿ ಅಪಾಯದ ಅಂಶವಿದ್ದೇ ಇರುತ್ತದೆ. ಆದರೆ ಆ ಮಟ್ಟದ ಪ್ರಮಾಣವನ್ನು ಅಂದಾಜು ಮಾಪನ ಮಾಡಿ ನಿರ್ಧರಿಸಿದಲ್ಲಿ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ.
ಈ ವಿತರಣೆಯು ಗರಿಷ್ಠ ಗಾತ್ರದ ವಿತರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಗರಿಷ್ಠ ಗಾತ್ರದ ವಿತರಣೆ ಮಾಡಿದ ಕಂಪನಿಗಳ ವಿವರ ಇಂತಿದೆ.
ವಿತರಕ ಕಂಪನಿ ಹೆಸರು
ಮುಖಬೆಲೆ
ವಿತರಣೆ ಗಾತ್ರ
ವಿತರಣೆ ಬೆಲೆ
ವಿತರಣಾ ಆರಂಭದ ದಿನ
ಎಲ್ ಐ ಸಿ ಆಫ್ ಇಂಡಿಯಾ
ರೂ.10-20
557,23 ಕೋಟಿ
ರೂ.949.00
04/05/2022
ಒನ್ 9 ಕಮ್ಯುನಿಕೇಷನ್ ( ಪೇಟಿಎಂ)
ರೂ 1
ರೂ.18,300 ಕೋಟಿ
ರೂ.2,150.00
08/11/2021
ಕೋಲ್ ಇಂಡಿಯಾ
ರೂ 10
ರೂ.15,475 ಕೋಟಿ
ರೂ.245.00
18/10/2010
ರಿಲಯನ್ಸ್ ಪವರ್
ರೂ.10
ರೂ.11,563 ಕೋಟಿ
ರೂ.912.00
11/10/2017
ಎಸ್ ಬಿ ಐ ಕಾರ್ಡ್ಸ್ ಅಂಡ್ ಪೇಮೆಂಟ್ಸ್
ರೂ.10
ರೂ.10,354 ಕೋಟಿ
ರೂ. 755
02/03/2020
ಜಿ ಐ ಸಿ ಆಫ್ ಇಂಡಿಯಾ
ರೂ.5
ರೂ.11,372 ಕೋಟಿ
ರೂ.912.00
02/03/2020
Disclaimer: ಇದುಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ರಂಜಾನ್ ಹಬ್ಬಕ್ಕೆ ಮೇ 3ರಂದು ರಜೆ ನೀಡಲಾಗಿತ್ತು. ಆದರೆ ಇದೀಗ ಮೂನ್ ಕಮಿಟಿ ಮೇ 2ರಂದು ರಂಜಾನ್ ಆಚರಿಸಲು ತೀರ್ಮಾನಿಸಿದ್ದರಿಂದ ರಾಜ್ಯ ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ3ರ ಬದಲಿಗೆ ಮೇ 2ರಂದು ರಜೆ ಘೋಷಣೆ ಮಾಡಲಾಗಿದೆ. ನೆಗೋಷಿಯಬಲ್ ಇನ್ಸ್ಟ್ರಮೆಂಟ್ ಆಕ್ಟ್ ಪ್ರಕಾರವೂ ಈ ರಜೆ ಅನ್ವಯವಾಗಲಿದೆ.
ಕಾರ್ಮಿಕರ ದಿನವಾದ ಮೇ1, ರಂಜಾನ್ ಮೇ 2 ಹಾಗೂ ಬಸವಜಯಂತಿಗೆ ಮೇ 3ರಂದು ರಜೆ ಇರುವುದರಿಂದ ಸರಕಾರಿ ನೌಕರರಿಗೆ ಒಟ್ಟಿಗೆ ಮೂರು ದಿನ ರಜೆ ಸಿಗಲಿದೆ.
NEW DELHI APR 30 ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದೆ. ಈ ಮೂಲಕ ರಾಗಿ ಬೆಳೆಗಾರರ ದೊಡ್ಡ ಸಂಕಷ್ಟ ಬಗೆಹರಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಐದಾರು ಜಿಲ್ಲೆಗಳಲ್ಲಿ ರಾಗಿ ಬೆಳೆದ ರೈತರಿಗೆ ಬೆಲೆ ಸಿಗಬೇಕೆಂಬ ಕಾರಣದಿಂದ ಮೊದಲು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಯಿತು. ಪುನ: ಬೇಡಿಕೆ ಬಂದ ಹಿನ್ನೆಲೆಯಲ್ಲಿ 485 ಕೋಟಿ ರೂ.ಗಳನ್ನು ಮಂಜೂರು ಮಾಡಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಯಿತು. ರಾಗಿ ಹೆಚ್ಚು ಬೆಳೆದ್ದದ್ದರಿಂದ ಖರೀದಿಗೆ ರೈತರ ಒತ್ತಾಸೆಯ ಮೇರೆಗೆ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬಿರುಸಾಗಿ ಆಡಳಿತ ಮಾಡಿದರೆ ಡಿ.ಕೆ.ಶಿ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ:
“ನಾನು ಬಹಳ ಸರಳವಾಗಿ ಆಡಳಿತ ಮಾಡಿದಾಗಲೇ ಡಿ.ಕೆ ಶಿವಕುಮಾರ್ ಅವರಿಗೆ ಇಷ್ಟು ತೊಂದರೆಯಾಗಿದೆ. ಇನ್ನು ಬಿರುಸಾಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ನನ್ನ ಆಡಳಿತದಲ್ಲಿ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಏನೇನೂ ಪ್ರಯತ್ನಗಳನ್ನು ಮಾಡಿದರು. ಯಾವುದೂ ಯಶಸ್ವಿಯಾಗಲಿಲ್ಲ ಎಂದರು.
ಕಾಂಗ್ರೆಸ್ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ:
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ತನಿಖೆಗೆ ಒಂದು ವ್ಯವಸ್ಥೆ ಇದೆ. ಕಾನೂನಿನ ಪ್ರಕಾರವೇ ಆಗಬೇಕು. ನಿಮಗೆ ಅದನ್ನು ಎದುರಿಸಲು ತಾಕತ್ತು ಇಲ್ಲ ಎಂದರೆ ಈ ರೀತಿ ದಿಕ್ಕು ಬದಲಾಯಿಸಬಾರದು. ನೀವೇನೋ ಮಾಹಿತಿಯನ್ನು ಹೇಳಿದ್ದೀರಿ. ಅದರ ಪೂರ್ಣ ಮಾಹಿತಿಯನ್ನು ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕಾಗಿ ಇಷ್ಟು ವಾದವಿವಾದ ಮಾಡುವ ಅಗತ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬಂದರೂ ತನಿಖೆ ಮಾಡಬೇಕಾಗುತ್ತದೆ. ಹಿಂದೂ ಕೂಡ ಈ ರೀತಿಯಾಗಿದೆ. ಆದ್ದರಿಂದ ಕಾಂಗ್ರೆಸ್ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ ಎಂದರು.
ಬದಲಾವಣೆ ಹಾಗೂ ಸುಧಾರಣೆ ತರಬೇಕೆಂದು ಸೂಚನೆ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮ ಸರ್ಕಾರದ ವೈಫಲ್ಯ ಅಲ್ಲ. ಹಿಂದೂ ಕೂಡ ಯು.ಪಿ.ಎಸ್.ಸಿ ಮಾದರಿಯಲ್ಲೇ ನೇಮಕಾತಿ ಆಗುತ್ತಾ ಬಂದಿದೆ. ಮೊದಲ ಬಾರಿಗೆ ಬ್ಲೂಟೂತ್ ತಂತ್ರಜ್ಞಾನವನ್ನು ಈ ರೀತಿ ಕುಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ಆಗಿದೆ. ಚಾಪೆ ಕೆಳಗೆ ಹೋಗುವಂಥವರಿಗೆ ರಂಗೋಲಿ ಕೆಳಗೆ ಹೋಗುವ ಪರೀಕ್ಷಾ ವ್ಯವಸ್ಥೆಯನ್ನು ತರುವ ಅವಶ್ಯಕತೆ ಇದೆ. ಹಿಂದೂ ಕೂಡ ಬೇಕಾದಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪೊಲೀಸ್ ಆಯ್ಕೆಯಲ್ಲಿಯೂ ಎರಡು ಮೂರು ಬಾರಿ ಮುಂದೂಡಿರುವ ಪ್ರಕರಣಗಳೂ ಆಗಿವೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಬೇಕು ಎಂದು ಸೂಚನೆ ನೀಡಿದ್ದೇನೆ. ಯಾವುದೇ ಅಕ್ರಮಗಳು ನಡೆಯದಂತೆ ಮರುಪರೀಕ್ಷೆಯನ್ನು ಅತಿಶೀಘ್ರದಲ್ಲಿಯೇ ಮಾಡಬೇಕೆಂದು ಸೂಚಿಸಲಾಗಿದೆ.
ಆಧಾರರಹಿತ ಆರೋಪಗಳು
ವಿರೋಧಪಕ್ಷ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದು ಪೂರ್ಣ ಆಧಾರರಹಿತ. ಇಂಥ ಆಧಾರರಹಿತ ಆರೋಪಗಳನ್ನು ಮಾಡಿ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಂಪೂರ್ನವಾಗಿ ಎಫ್.ಎಸ್.ಎಲ್ ವರದಿ ಬಂದಿದೆ. ಅದರ ಆಧಾರದ ಮೇಲೆ ದಾಳಿಯಾಗಿದೆ. ಯಾವುದೇ ಪಕ್ಷವಿರಲಿ, ಯಾರೇ ಆಗಲಿ ನಿಷ್ಪಕ್ಷಪಾತ ತನಿಖೆಯಾಗುತ್ತಿದೆ. ಇದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬುಡಕ್ಕೆ ನಿರು ಬಂದಾಗ ಹೀಗೆಲ್ಲ ಮಾತನಾಡುತ್ತಾರೆ. ಪಿಯುಸಿ, ಎಸ್.ಎಸ್.ಎಲ್ ಸಿ ಅಥವಾ ಯಾವುದೇ ಪರೀಕ್ಷೆ ಇರಲಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಮರುಪರೀಕ್ಷೆ ಆಗಿದೆ. ಆ ನೀತಿ ಇಂದಿನದಲ್ಲ. 30-40 ವರ್ಷಗಳಿಂದ ಇದೆ. ಅದನ್ನೇ ಮಾಡಿದ್ದೇವೆ. ಹೊಸ ಪರೀಕ್ಷೆ ಅಂದರೆ ಅಧಿಸೂಚನೆ ರದ್ದು ಮಾಡಿಲ್ಲ. ಯಾರಿಗೆ ಅವಕಾಶ ಸಿಕ್ಕಿತ್ತೊ ಅವರಿಗಷ್ಟೇ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಷ್ಟೀಯ ಶಿಕ್ಷಣ ನೀತಿ- 2020 ಅನುಷ್ಠಾನದ ರಾಷ್ಟ್ರೀಯ ಸಮ್ಮೇಳನ
BELAGAAVI APR 30
ರಾಷ್ಟೀಯ ಶಿಕ್ಷಣ ನೀತಿಯಿಂದ ಭಾರತ ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವಾಗಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ, ಸಮತೆಯುಳ್ಳ ಮತ್ತು ಚಲನಶೀಲ ಜ್ಞಾನ ಸಮಾಜದ ಪರಿವರ್ತನೆಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಎನ್ಇಪಿ ಅವಶ್ಯಕ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ (ಏ.30) ನಡೆದ “ರಾಷ್ಟೀಯ ಶಿಕ್ಷಣ ನೀತಿ- 2020 ಅನುಷ್ಠಾನದ ರಾಷ್ಟ್ರೀಯ ಸಮ್ಮೇಳನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವದ ಅನೇಕ ದೇಶಗಳು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಿವೆ ಇದಕ್ಕೆ ಅನುಗುಣವಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಷ್ಯವಿದ್ದು, ದೇಶದಲ್ಲಿ 34 ವರ್ಷಗಳ ನಂತರ ಈ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ವೃತ್ತಿಪರ ಬೆಳವಣಿಗೆ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವುದು ಈ ಶೈಕ್ಷಣಿಕ ಪದ್ಧತಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನಂತರ ಸಲೀಸಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುಬಹುದು ಎಂದು ಹೇಳಿದರು.
ಮಾನವ ಸಂಪನ್ಮೂಲ ಶಕ್ತಿ ಸದ್ಬಳಕೆ:
ಸ್ವಾಂತಂತ್ರ್ಯ ನಂತರ ನೂತನ ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಈ ಶಿಕ್ಷಣ ನೀತಿ ದೇಶದ ಅಭಿೃದ್ಧಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಸಮಾಜ ಬದಲಾವಣೆಯ ಉತ್ತಮ ಶಿಕ್ಷಣ ನೀತಿ ಇದಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಯುವಕರು ಉದ್ಯೋಗ ಅರಸಿ ಹೋಗದೆ ಕೌಶಲ್ಯಾಭಿವೃದ್ಧಿಯಿಂದ ಸ್ವಯಂ ಉದ್ಯೋಗ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬೇಕು. ದೇಶದಲ್ಲಿನ ಮಾನವ ಸಂಪನ್ಮೂಲನ ಶಕ್ತಿ ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ಇಪಿ ಸಹಾಯ ಆಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲಿದೆ:
ಹೊಸ ರಾಷ್ಟೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಿ, ಕಲೆ, ವಾಣಿಜ್ಯ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಸುಧಾರಿಸಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲಿದೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಭಾರತದಲ್ಲಿ 34 ವರ್ಷಗಳ ನಂತರ, ಉತ್ತಮ ಮಾದರಿಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಶೈಕ್ಷಣಿಕ ಬೆಳವಣಿಯಿಂದ ಸಮಾಜದ ಅಭಿವೃದ್ಧಿ ಜೊತೆಗೆ ಬಲಿಷ್ಠ ಮಾನವ ಸಂಪನ್ಮೂಲ ಶಕ್ತಿ ನಿರ್ಮಾಣಕ್ಕೆ ಈ ಶಿಕ್ಷಣ ನೀತಿ ಸದ್ಬಳಕೆಯಾಗಲಿದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯಿಂದ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಆಗಲಿದೆ. ಸಮಾಜದ ಅಭಿವೃದ್ಧಿಗೆ ಬೇಕಾಗುವ ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಇದಾಗಿದ್ದು, ವಿದ್ಯಾರ್ಥಿಗಳು ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನ ಹೊಂದಬಹುದು ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಹೊಸ ಶಿಕ್ಷಣ ಪಠ್ಯಗಳ ಅನುಷ್ಠಾನದ ಕುರಿತು ವಾರ್ಷಿಕ ಕ್ರಮಗಳ ಕೈಪಿಡಿ ಹಾಗೂ ಕರ್ನಾಟಕ ಉತ್ತರ ಪ್ರಾಂತ್ಯದ ಸಮಷ್ಟಿ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಲಾಯಿತು.
ಡಾ. ಮನಮೋಹನ ವೈದ್ಯ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಅಧ್ಯಕ್ಷರಾದ ಪ್ರೊ. ಸಚ್ಚಿದಾನಂದ ಜೋಶಿ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ, ಉತ್ತರ ಕರ್ನಾಟಕ ಭಾಗದ ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾದ ಡಾ. ಸತೀಶ ಜಿಗಜಿನ್ನಿ, ವಿಟಿಯು ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
HUBBALLI APR 28 ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಬಂದಿಲ್ಲ. ಏಪ್ರಿಲ್ 9 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವದುದನ್ನು ಗಮನಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಯೂರೋಪ್ ಮತ್ತು ಇತರೆ ರಾಷ್ಟ್ರಗಳಲ್ಲಿ ಲಸಿಕೆ ಪಡೆಯದವರಿಂದ ಪುನಃ ಪ್ರಕರಣಗಳು ಉಲ್ಬಣವಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಎರಡೂ ಡೋಸ್ ಗಳನ್ನು 98% ರಷ್ಟು ಜನ ಲಸಿಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಡೋಸ್ ಗಳನ್ನು ಇನ್ನಷ್ಟು ಜನಕ್ಕೆ ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಲಸಿಕೆಗೆ ಮಹತ್ವ ಮೊನ್ನೆ ಕೇಂದ್ರ ಸರ್ಕಾರ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಅನುಮೋದನೆ ನೀಡಿದೆ. ಅದನ್ನು ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸುವ ತೀರ್ಮಾನ ಮಾಡಲಾಗಿದೆ. ಲಸಿಕೆ ಹಾಕಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕೋವಿಡ್ ಸೂಕ್ತ ನಡವಳಿಕೆ ಪಾಲಿಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ.
ವಿಶೇಷವಾಗಿ ಐ.ಎಲ್.ಐ ಮತ್ತು SARI ಪ್ರಕರಣಗಳು ಆಸ್ಪತ್ರೆಗಳಿಗೆ ದಾಖಲಾಗಿರುವವರ ಪರೀಕ್ಷೆ ಮಾಡಿ , ಅವರಲ್ಲಿ ಪಾಸಿಟಿವ್ ಬಂದರೆ, ಅದನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಇದನ್ನು ಮಾಡಿದರೆ ಬೇರೆ ಬೇರೆ ರೂಪಾಂತರ ತಳಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ 8500 ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. 4 ಸಾವಿರ ಬೆಂಗಳೂರಿನಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ 4 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಅಲ್ಪಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಅವರು ತಿಳಿಸಿದರು.
ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವೊಡ್ ಸ್ಥಿತಿಗತಿ ಬಗ್ಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರಿಗೆ ವಿವರಿಸಲಾಗುವುದು ಎಂದು ಅವರು ಹೇಳಿದರು.
ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗಗಳಲ್ಲಿ ತಪಾಸಣೆ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇತ್ತೀಚೆಗೆ ಎಂಡು ದೇಶಗಳಲ್ಲಿ ಕರೋನಾ ಸಾಂಕ್ರಾಮಿಕ ಉಲ್ಬಣವಾಗಿದೆ. ಭಾರತದ ನೆರೆಯ ದೇಶಗಳಾದ ಥೈಲ್ಯಾಂಡ್, ಇಂಡೋನೇಷ್ಯಾ, ಚೈನಾ ದೇಶಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲ್ಲಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಪ್ರಧಾನಮಂತ್ರಿಗಳು ಮುಂಜಾಗ್ರತೆ ವಹಿಸಿ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ನಿನ್ನೆ ನಡೆದಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಕೆಲವು ಕರೋನಾ ಸೂಕ್ತ ನಡವಳಿಕೆಗಳನ್ನು ಪುನ: ಜಾರಿಗೊಳಿಸಲು ಸೂಚಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ಉತ್ತಮ. ಇದುವರೆಗೂ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಆದರೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು.
ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿ ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು.
ಇನ್ನುಳಿದಂತೆ ೨೦೧೭ ನೇ ಸಾಲಿನ ಕನ್ಮಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆಯುಕ್ತ ಡಾ. ಪಿ ಎಸ್ ಹರ್ಷ, ಚಿನ್ನೇಗೌಡ ಮತ್ತು ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರನ್ನು ಇಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ BSY ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಮೊನ್ನೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಿಲ್ದಾಣಕ್ಕೆ ಬಿಎಸ್ ವೈ ಅವರ ಹೆಸರನ್ನು ಇಡುವ ಬಗ್ಗೆ ಸಚಿವ ಸಂಪುಟ ತೀರ್ಮಾನ ಮಾಡಿದೆ ಎಂದು ಹೇಳಿದ್ದರು.
ಈ ಬಗ್ಗೆ ಬಿಎಸ್ ವೈ ಬರೆದಿರುಪ ಪತ್ರದ ಪೂರ್ಣ ಪಾಠ ಇಲ್ಲಿದೆ.