25.5 C
Karnataka
Tuesday, April 22, 2025
    Home Blog Page 22

    Covid threat : ಅಲ್ಪ ಪ್ರಮಾಣದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಸೋಂಕು:ಸಿಎಂ ಗಳ ಜೊತೆ 27 ರಂದು ಪ್ರಧಾನಮಂತ್ರಿ ವಿಡಿಯೋ ಸಂವಾದ

    HUBBALLI APR 24

    ಏಪ್ರಿಲ್ 27 ರಂದು ಪ್ರಧಾನ ಮಂತ್ರಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಮೂರು ಅಲೆಗಳನ್ನು ನಿಭಾಯಿಸಿರುವ ಅನುಭವದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ಮಾತನ್ನು ಪರಿಣಿತರು ಹೇಳಿದ್ದಾರೆ. ಈಗಾಗಲೇ ಆರೋಗ್ಯ ಸಚಿವರೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಏಪ್ರಿಲ್ 27 ರಂದು ಪ್ರಧಾನ ಮಂತ್ರಿಗಳ ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇವೆ ಎಂದರು.

    ಜನ ಜಾಗೃತರಾಗಿರಬೇಕು
    ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್ 2 ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆ ಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಈಗಾಗಲೇ ವಿಜ್ಞಾನಿಗಳು ಯಾವ ಮಾದರಿಯಲ್ಲಿದೆ ಎಂದು ಪರೀಕ್ಷಿಸುತ್ತಿದ್ದಾರೆ ಎಂದರು.

    ಹುಟ್ಟು ಹಬ್ಬಕ್ಕೆ ಅಣ್ಣನಿಗೆ ನುಡಿ ಹರಕೆ

    ಎಸ್.ಜಗನ್ನಾಥರಾವ್ ಬಹುಳೆ

    ನಮ್ಮ ಅಣ್ಣಾವ್ರು ವರನಟ ಡಾ. ರಾಜ್ ಕುಮಾರ್ ಭೌತಿಕವಾಗಿ ನಮ್ಮಿಂದ ದೂರಾಗಿ ಏಪ್ರಿಲ್ 12 ಕ್ಕೆ ಹದಿನಾರು ವರ್ಷಗಳಾದರೆ ಈ ಬಾರಿಯ ಏಪ್ರಿಲ್ 24 ಕ್ಕೆ ಅವರ 93ನೇ ಜನ್ಮದಿನ. ಅಭಿಮಾನಿ ದೇವರುಗಳ ಹೃದಯಗಳಲ್ಲಿ, ನಾಡಿನ ಜನತೆಯ ಸ್ಮೃತಿಗಳಲ್ಲಿ ಮಾತ್ರ ನಿತ್ಯ ನಿರಂತರ ನಂದಾದೀಪವಾಗಿ ಬೆಳಗುತ್ತಿರುವ ಅಣ್ಣಾವ್ರು ಕಳೆದ ಶತಮಾನದಲ್ಲಿಅವತರಿಸಿದ ಕನ್ನಡದ ಅದ್ಭುತ ಚೇತನ ಎನ್ನಲು ಯಾವ ಅತಿಶಯವೂ ಇಲ್ಲ.

    ಚಿತ್ರ ಕೃಪೆ :ಭವಾನಿ ಲಕ್ಷ್ಮಿನಾರಾಯಣ/ CHITHRAPATHA.COM

    ಇದೀಗ ಸಾಮಾಜಿಕ ಜಾಲತಾಣಗಳ ಕ್ರಾಂತಿಯ ಕಾಲ. ತುಸು ಇತ್ತ ಗಮನಿಸಿದರೆ ಸಾಕು ಅಣ್ಣಾವ್ರ ಅಭಿಮಾನದ ಜ್ವಲಂತ ಸಾಕ್ಷಿಗಳು ನಮ್ಮ ಮುಂದೆ ಅಚ್ಚರಿಗಳನ್ನು ಮೂಡಿಸುತ್ತಾ ಹೋಗುತ್ತದೆ. ಒಂದೇ ಎರಡೇ ರಾಜ್ ಕುರಿತು ಹೊರಬಂದಿರುವ ನೂರಾರು ಕೃತಿಗಳಿಂದ, ಸಹಸ್ರಾರು ಲೇಖನಗಳಿಂದ, ಗಣ್ಯರ ಅನುಭವಗಳಿಂದ ಲಹರಿ ಲಹರಿಯಾಗಿ ಹೊರಬರುತ್ತಿರುವ ವಿಚಾರಧಾರೆಗಳು ಪ್ರವಾಹದ ರೀತಿಯಲ್ಲಿ ಉಕ್ಕಿ ಉಕ್ಕಿ ಭೋರ್ಗರೆಯುತ್ತಿದೆ. ರಾಜ್ ಕುರಿತು ಮಾತನಾಡುವವರದೇ ಬಳಗ ಸೃಷ್ಟಿಯಾಗಿಹೋಗಿದೆ. ಯೂಟ್ಯೂಬ್ ಚಾನೆಲ್‌ಗಳಂತೂ ರಾಜ್‌ಗಾಗಿಯೇ ತಮ್ಮ ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಎಲ್ಲಕ್ಕೂ ಲಕ್ಷ ಲಕ್ಷ ವೀಕ್ಷಣೆಗಳು, ಮೆಚ್ಚುಗೆಗಳು ಅಣ್ಣಾವ್ರ ಕುರಿತ ಕಳಕಳಿಯನ್ನು ಸಾರುತ್ತಲೇ ಬಂದಿವೆ.

    ರಾಜ್ ಕುರಿತು ಇದುವರೆಗೆ ಅಧಿಕೃತವಾಗಿ ಇನ್ನೂರರ ಗಡಿಯಲ್ಲಿ ಪುಸ್ತಕಗಳು ರಚನೆಯಾಗಿವೆಯಾದರೂ ಬರೆಯುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಭೂಗೋಳಕ್ಕೆ ಒಂದು ಎಲ್ಲೆ ಇರಬಹುದು. ರಾಜ್ ವಿಚಾರಗಳಿಗಂತೂ ಎಲ್ಲೆಯೂ ಇಲ್ಲ, ಗಡಿಯಂತೂ ಇಲ್ಲವೇ ಇಲ್ಲ. ಎಲ್ಲೆಡೆ ಹೊಸ ವಿಚಾರಗಳನ್ನು ರಾಜ್ ಕುರಿತು ಹೇಳಬೇಕೆಂಬ ಧಾವಂತ. ಅವರ ಶ್ರೇಷ್ಟತೆಯನ್ನು ದಾಖಲಿಸಬೇಕೆಂಬ ಆತುರ. ಅಬ್ಬಾ! ನಿಜಕ್ಕೂ ರಾಜ್ ಕುರಿತ ಈ ಅಭಿಮಾನ ನಭೂತೋ ನಭವಿಷ್ಯತಿ.

    ಅಚ್ಚರಿ ಎಂದರೆ, ಕರ್ನಾಟಕದಲ್ಲಿ ಅನೇಕ ಮಂದಿ ಗಣ್ಯಾತಿಗಣ್ಯ ಸಾಧಕರಿದ್ದಾಗ್ಯೂ ಜನತೆಯಿಂದ ಈವರೆಗೂ ಸರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕನ್ನಡ ಜನತೆ ಜನಪ್ರಿಯತೆ ಮತ್ತು ಪ್ರೀತಿಯನ್ನು ಡಾ|| ರಾಜ್‌ರಿಗೆ ಧಾರೆ ಎರೆದಿರುವ ಬಗೆ ನಿಜಕ್ಕೂ ಅದ್ವಿತೀಯ. ಇದು ಸಿನಿಮಾದಿಂದ ಮಾತ್ರ ಸಾಧ್ಯವಾಗಿದೆಯೇ ಎಂದರೆ ಆ ಮಾತನ್ನು ಪೂರ್ಣವಾಗಿ ಒಪ್ಪಲು ಆಗದು. ಆದರೆ, ರಾಜ್ ನಿರ್ವಹಿಸಿದ ಪಾತ್ರಗಳು ಬಹುಮಟ್ಟಿಗೆ ಜನಸಾಮಾನ್ಯರ ನಾಡಿ ಮಿಡಿತಕ್ಕೆ ತಕ್ಷಣ ಸ್ಪಂದಿಸುವ ಪಾತ್ರಗಳೇ ಆಗಿದ್ದರಿಂದ, ಆ ಪಾತ್ರಗಳಲ್ಲಿ ಅವರ ನಡೆ ನುಡಿಗಳಲ್ಲಿ ನಿಜ ಜೀವನಕ್ಕೆ ಅಪವಾದ ತರುವ ಯಾವೊಂದು ಅಂಶವೂ ಇಲ್ಲದ್ದರಿಂದ ರಾಜ್ ರಾಜ್ಯದ ಸಾಮಾನ್ಯ ಜನತೆಗೆ ಭಾವನಾತ್ಮಕವಾಗಿ ತೀರಾ ಹತ್ತಿರವಾದರು ಎಂಬ ವಿಶ್ಲೇಷಣೆ ಅವರ ಪ್ರಚಂಡ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ.

    ಭಾಷಾ ಶುದ್ಧತೆ

    ಡಾ|| ರಾಜ್ ಅವರ ಕನ್ನಡ ಭಾಷಾ ಶುದ್ಧತೆ ಅಪ್ಪಟ ದೇಶೀ ತುಪ್ಪದಂತೆ. ಪರಿಶುದ್ಧವಾಗಿ ನಾಡಭಾಷೆಯನ್ನು ಮಾತಾಡುವ ಯಾವುದೇ ಕಲಾವಿದ ಆ ಭಾಷೆಯ ಜನತೆಗೆ ತೀರಾ ಹತ್ತಿರವಾಗುತ್ತಾನೆ ಎನ್ನುವುದಕ್ಕೆ ಜೀವಂತ ಸಾಕ್ಷಿ ರಾಜ್. ಅವರ ಉಚ್ಚಾರಣೆಯಲ್ಲಿ ಅವರು ಸಂಭಾಷಣೆಯನ್ನು ಹೇಳುವ ಶೈಲಿಯಲ್ಲಿ ಆರ್ಭಟವಿಲ್ಲ. ಸಂಸ್ಕೃತಿ ಇದೆ, ಸಂಸ್ಕಾರವಿದೆ.
    ನಿಜ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿ, ಅವರ ಸೌಜನ್ಯ, ಅವರ ಸರಳತೆಗಳು ಅವರ ವ್ಯಕ್ತಿತ್ವವನ್ನು ನೂರು ಪಟ್ಟು ಹೆಚ್ಚಿಸಿರುವ ಗುಣಗಳು. ಅವರೆಂದೂ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮೆರೆದವರಲ್ಲ. ತಮ್ಮ ಕೂಲಿಂಗ್ ಗ್ಲಾಸ್ ಮೂಲಕ ಹೊರ ಜೀವನವನ್ನು ಬೇರೊಂದು ಬಣ್ಣದಿಂದ ನೋಡಲಿಲ್ಲ. ಜನತೆಯೊಂದಿಗೆ ನೇರವಾಗಿ ನಿರ್ವಂಚನೆಯಿಂದ ಬೆರೆತರು. ಅವರು ಪದೇ ಪದೇ ಹೇಳುವಂತೆ ಜನಸ್ತೋಮದ ಅಪಾರ ಅಭಿಮಾನ ಸೂಸುವ ಕಣ್ಣುಗಳಲ್ಲಿ ಭಗವಂತನನ್ನೇ ಕಂಡರು. ಜನತೆ ಬೇರೆಯಾಗಲಿಲ್ಲ, ಅವರು ಬೇರೆಯಾಗಲಿಲ್ಲ.

    ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅವರು ಹೇಳುವಂತೆ “ಡಾ|| ರಾಜ್ ವ್ಯಕ್ತಿತ್ವವೇ ಒಂದು ರೀತಿಯ ಅದ್ವೈತ! ಪ್ರಾಯಶಃ ಭಾರತದಲ್ಲಿ ಇನ್ಯಾವ ರಾಜ್ಯದಲ್ಲಿಯೂ ಇನ್ನಾವ ಊಬ್ಬ ವ್ಯಕ್ತಿಯೂ ಸಮಷ್ಠಿಯೊಂದಿಗೆ ತನ್ನ ವ್ಯಕ್ತಿತ್ವವನ್ನು ಈ ರೀತಿ ಲೀನವಾಗಿಸಿಕೊಂಡಿರಲಾರ.”

    ಇದೇ ವಿಚಾರವಾಗಿ ಒಮ್ಮೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತಾ “ಈ ರಾಜ್ ನಮ್ಮವನು ಅಂತಾರಲ್ಲ ಅದುವೇ ನಾನು ಜೀವನದಲ್ಲಿ ಮಾಡಿದ ‘ಸಂಪಾದನೆ’. ಅಭಿಮಾನಕ್ಕೆ ಪ್ರತಿಯಾಗಿ ಕೊಡುವುದಕ್ಕೆ ಇದ್ದದ್ದು ಒಂದೇ ಪದ. ಅದುವೇ ಅಭಿಮಾನಿ ದೇವರುಗಳೇ ಎಂಬುದು. ಕನ್ನಡದ ಕೋಟ್ಯಾನುಕೋಟಿ ದೇವರುಗಳ ಅಭಿಮಾನ ಪಡೆದ ನಾನು ಕೋಟ್ಯಧಿಪತಿಯೇ ಅಲ್ಲವೆ? ಎಂದಿದ್ದರು.

    ನೇರ ಮಾತು, ನೇರ ನಡೆ

    ರಾಜ್ ಎಂಥಹುದೇ ಸಂದರ್ಭದಲ್ಲಿ ಸಹ ತಮ್ಮ ಸಹಜಶೀಲತೆಯನ್ನು ತೋರುವಲ್ಲಿ ಸಂಕೋಚ ಪಡುತ್ತಿರಲಿಲ್ಲ. ನೇರ ಮಾತು, ನೇರ ನಡೆ, ಇದಕ್ಕೊಂದು ಪುಟ್ಟ ಉದಾಹರಣೆ. ಬೆಂಗಳೂರು-ಮೀರಜ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲು ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯ ಸರ್ಕಾರದ ಮಂತ್ರಿಗಳು, ಗಣ್ಯರು ಸೇರಿದ್ದ ಸಭೆ, ಸಾರ್ವಜನಿಕ ಬೃಹತ್ ಸಮಾರಂಭ. ರಾಜ್ಯದ ರೈಲ್ವೆ ಪ್ರಗತಿಯ ಬಗ್ಗೆ ಹಿರಿಯರು, ಗಣ್ಯರು, ಮಂತ್ರಿಗಳು ಮಾತಾಡಿದ ಮೇಲೆ, ಹಸಿರು ನಿಶಾನೆ ತೋರಿದ ಮುಖ್ಯ ಅತಿಥಿ ರಾಜ್ ಮಾತನಾಡಲು ಆರಂಭಿಸಿ ಔಪಾಚಾರಿಕ ಮಾತುಗಳಾದ ಬಳಿಕ ನೇರವಾಗಿ ನೆನಪಿನಾಳಕ್ಕೆ ಇಳಿದರು. ಅವರು ಹಿಂದೆ ನಾಟಕ ಕಂಪನಿಯಲಿದ್ದಾಗ ಮೀಟರ್‌ಗೇಜ್ ರೈಲಿನಲ್ಲಿ ಓಡಾಡಿದ್ದು. ಮದ್ರಾಸ್-ಬೆಂಗಳೂರು ನಡುವಿನ ಪ್ರಯಾಣದ ಸೊಗಸು. ಪ್ರಯಾಣಿಸಿ ಇಳಿದಾಗ ಮೈಯೆಲ್ಲಾ ಉಗಿಬಂಡಿ ಹೊಗೆಯಿಂದ ಕಪ್ಪಾಗಿ ಬಿಡುತ್ತಿದ್ದ ಪ್ರಸಂಗವನ್ನು ರಸವತ್ತಾಗಿ ವರ್ಣಿಸಿದರು. ತಮ್ಮ ಸ್ಥಾನಗಳ ಘನತೆಯನ್ನು, ತಮ್ಮ ಉಪಸ್ಥಿತಿಯ ಘನತೆಯನ್ನು ಕಾಪಾಡಿಕೊಂಡು ಎತ್ತರದ ಭಾಷಣಗಳನ್ನು ಮಾಡುವ ಮಂದಿಯ ಮಧ್ಯೆ, ಉಗಿಬಂಡಿಯ ಹೊಗೆಯಿಂದ ತಾವು ಕಪ್ಪಾಗಿದ್ದ ಸರಳಾತಿ ಸರಳ ಉದಾಹರಣೆಯನ್ನು ಜೀವನದ ಭಾಗವಾಗಿ ನೆನೆದ ರಾಜ ಪರಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

    ಇಂದಿನ ಸಂದರ್ಭಕ್ಕೆ ಮಾದರಿ ಎನಿಸುವ ಎರಡು ಪ್ರಸಂಗಗಳನ್ನು ರಾಜ್ ಕುರಿತು ಇಲ್ಲಿ ನೆನೆಯಲು ಇಚ್ಛಿಸುತ್ತೇನೆ. ಇತ್ತೀಚೆಗೆ ಕನ್ನಡ ಚಲನಚಿತ್ರಗಳಿಗೆ ಪ್ರಮುಖ ಪಾತ್ರಧಾರಿಗಳನ್ನಾಗಿ ನಮ್ಮ ದೊಡ್ಡ ದೊಡ್ಡ ಹೀರೋಗಳು ಪರಭಾಷೆಯ ಪ್ರಸಿದ್ಧರನ್ನು ಕರೆತರುವ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಡಾ. ರಾಜ್‌ರ ಎರಡು ಮಹೋನ್ನತ ಚಿತ್ರಗಳಾದ ಶಂಕರ್‌ಗುರು ಮತ್ತು ಬಬ್ರುವಾಹನ ಚಿತ್ರಗಳಿಗೂ ಇದೇ ಮಾತುಕತೆ ನಡೆದಿತ್ತು. ಶಂಕರ್‌ಗುರುವಿಗೆ ಇಮೇಜ್ ದೃಷ್ಟಿಯಿಂದ ಹಿಂದಿ ಭಾಷೆಯ ಖ್ಯಾತ ವಿಲನ್‌ಗಳನ್ನು ಕರೆಸುವ ಬಗ್ಗೆ ಚರ್ಚೆ ಆಗಿತ್ತು. ರಾಜ್ ಒಪ್ಪಲೇ ಇಲ್ಲ. ಅದೇ ಕಾಸ್ಟ್ಯೂಮ್‌ಗಳನ್ನು ನಮ್ಮವರಿಗೆ ಹಾಕಿ ಮಾಡಿಸಿ ಎಂದು ಪಟ್ಟು ಹಿಡಿದರು. ತೂಗುದೀಪ, ವಜ್ರಮುನಿ, ಶನಿಮಹಾದೇವಪ್ಪ ಚಿತ್ರದ ವಿಲನ್‌ಗಳಾಗಿ ಮಿಂಚಲು ಕಾರಣವಾಯಿತು. ಹಾಗೆಯೇ ಬಬ್ರುವಾಹನ ಚಿತ್ರದ ಕೃಷ್ಣನ ಪಾತ್ರಧಾರಿಯಾಗಿ ಪರಭಾಷೆಯ ಪ್ರಸಿದ್ಧ ನಟರನ್ನು ಕರೆಸಲು ತೀರ್ಮಾನವಾಗಿತ್ತು. ರಾಜ್ ನಮ್ಮ ಹುಡುಗ ರಾಮಕೃಷ್ಣನೇ ಕೃಷ್ಣನಾಗಲಿ ಎಂದು ಅಭಿಪ್ರಾಯ ನೀಡಿದರು. ಅದು ರಾಮಕೃಷ್ಣರ ಪ್ರವೇಶಕ್ಕೆ ಮಹತ್ವದ ಚಿತ್ರವಾಯಿತು. ನಮ್ಮವರ ಮೇಲಿದ್ದ ಅಣ್ಣಾವ್ರ ಅಭಿಮಾನವನ್ನು ಇದೇ ರೀತಿ ಇಂದಿನವರು ಮುಂದುವರೆಸಬಹುದಲ್ಲವೆ? ಇಂಥ ಅನೇಕ ದಾರಿಗಳನ್ನು ರಾಜ್ ಹಾಕಿಕೊಟ್ಟಿದ್ದಾರೆ.

    ಡಾ|| ರಾಜ್ ಗಾಯನವನ್ನು ಮಾನಸಿಕ ಉಲ್ಲಾಸತೆಗೆ, ಆಧ್ಯಾತ್ಮ ಭಾವನೆಗೆ, ಸಂಗೀತದ ಅನುಭೂತಿಗೆ ಸಾವಧಾನದಿಂದ, ಸಾವಕಾಶವಾಗಿ ಆಲಿಸುವ ಕೋಟ್ಯಂತರ ಮಂದಿ ಆಲಿಸುವವರಿದ್ದಾರೆ. ಅಷ್ಟೇಕೆ? ಸೂಪರ್‌ಸ್ಟಾರ್ ರಜನೀಕಾಂತ್ ಅವರೇ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿ ಎತ್ತರಕ್ಕೆ ಬೆಳೆದು ನಿಂತಿದ್ದರೂ ಸಹಿತ ಅವರು ನೆಮ್ಮದಿಯನ್ನು ಕಾಣುವ ಕೆಲವು ಸಾಧನಗಳಲ್ಲಿ ಡಾ|| ರಾಜ್ ಭಕ್ತಿಗಾಯನವೂ ಒಂದಾಗಿದೆ. ರಾಜ್ ಗಾಯನದ ಚಿತ್ರಗೀತೆ ಆನಂದವನ್ನು ನೀಡಿದರೆ, ಭಕ್ತಿಗೀತೆ ಪವಿತ್ರತೆಯ ಜಳಕ ಮಾಡಿಸುತ್ತದೆ. ಒಟ್ಟಾರೆ ಬದುಕಿನ ಜಂಜಡದಲ್ಲಿ ಮುಳುಗಿದವನಿಗೆ ರಾಜ್ ಪರೋಕ್ಷವಾಗಿ ನಿಜಾರ್ಥದಲ್ಲಿ ಡಾಕ್ಟರ್ ಆಗಿ ಉಳಿದಿದ್ದಾರೆ.

    ಎಸ್ ಜಗನ್ನಾಥ ರಾವ್ ಬಹುಳೆ

    ವೃತ್ತಿಯಿಂದ ಸರ್ಕಾರಿ ಸೇವೆ. ಪ್ರವೃತ್ತಿಯಿಂದ ಬರಹಗಾರರು. ಇದುವರೆಗೆ ಕಲೆ, ಸಂಸ್ಕೃತಿ, ಚಿತ್ರ ರಂಗ, ಇತಿಹಾಸ ಗಳಿಗೆ ಸಂಬಂಧಿಸಿದಂತೆ ಅಸಂಖ್ಯಾತ ಲೇಖನಗಳನ್ನು ಬರೆದಿದ್ದಾರೆ. ಮೂವತ್ತೊಂದು ಪುಸ್ತಕಗಳು ರಚಿಸಿದ್ದಾರೆ. ಅದರಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಕುರಿತು ವಿಶ್ಲೇಷಣಾತ್ಮಕ ಹದಿನಾಲ್ಕು ಉಪಯುಕ್ತ ಪುಸ್ತಕಗಳಿರುವುದು ವಿಶೇಷ. ಹಲವು ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. ಸ್ವಯಂ ಡಾ.ರಾಜ್ ಅವರಿಂದಲೇ ಸನ್ಮಾನಿತರಾಗಿರುವ ಭಾಗ್ಯವಂತರು. ಎರಡು ದಶಕಗಳಿಂದ ಡಾ.ರಾಜ್ ಜನ್ಮದಿನಕ್ಕೊಂದು ವಿಶೇಷ ಲೇಖನ ಬರೆಯುತ್ತ ಬಂದಿರುವ ವ್ರತಧಾರಿ.

    ವೈಯಾಲಿಕಾವಲ್ ನ ಚೌಡಯ್ಯ ಸ್ಮಾರಕ ಭವನಕ್ಕೆ ಬರುತಿದೆ ಗಾಂಧಿ ಬಜಾರಿನ ವಿದ್ಯಾರ್ಥಿ ಭವನ

    BENGALURU APR 22

    ಬೆಂಗಳೂರು ಗಾಂಧಿಬಜಾರ್ ನ ಜನಪ್ರಿಯ ವಿದ್ಯಾರ್ಥಿ ಭವನ ಮಲ್ಲೇಶ್ವರಕ್ಕೆ ಬರವುದಿಲ್ಲ ಎಂಬುದು ಇದೀಗ ಅಧಿಕೃತವಾಗಿ ಖಚಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದು ಈ ಐಕಾನಿಕ್ ದೋಸೆ ಹೋಟೆಲ್ ಮಲ್ಲೇಶ್ವರದಲ್ಲಿ ಶಾಖೆ ತೆರೆಯುವ ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಮಲ್ಲೇಶ್ವರದ ಪ್ರಖ್ಯಾತ ದೋಸೆ ಪಾಯಿಂಟ್ ಸಿಟಿಆರ್ ಗೆ ಪ್ರತಿಸ್ಪರ್ಧಿಯೊಂದು ಬರುತ್ತದೆ ಎಂದು ಈ ಭಾಗದ ದೋಸೆ ಪ್ರಿಯರು ನಿರೀಕ್ಷಿಸಿದ್ದರು. ಆದರೆ ಅದು ಸಧ್ಯಕ್ಕೆ ಸಾಕಾರವಾಗುತ್ತಿಲ್ಲ. ಅದರ ಬದಲು ವಿದ್ಯಾರ್ಥಿ ಭವನ ತನ್ನೊಂದಿಗೆ ಬೆರೆತಿರುವ ಜನರ ಭಾವನೆಗಳನ್ನು ನಾಟಕ ರೂಪದಲ್ಲಿ ಅಭಿವ್ಯಕ್ತಿಸುವ ಮೂಲಕ ಮಲ್ಲೇಶ್ವರಕ್ಕೆ ಪ್ರವೇಶ ನೀಡುತ್ತಿದೆ.

    ಬೆಂಗಳೂರು ಥಿಯೇಟರ್ ಫೌಂಡೇಶನ್ ಸಹಯೋಗದಲ್ಲಿ ತಮ್ಮ ಸಂಸ್ಥೆ ವಿದ್ಯಾರ್ಥಿ ಭವನದಲ್ಲಿ ಘಟಿಸಿದ ಬಸವನಗುಡಿಯ ಕಥೆಗಳನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದೆ ಎಂದು ವಿದ್ಯಾರ್ಥಿಭವನದ ಪಾಲುದಾರ ಅರುಣ್ ಅಡಿಗ ಶುಕ್ರವಾರ ವರದಿಗಾರರಿಗೆ ತಿಳಿಸಿದರು.

    ಅರುಣ್ ಅಡಿಗ

    90 ನಿಮಿಷಗಳ ಈ ನಾಟಕವನ್ನು ಅರ್ಜುನ ಕಬ್ಬಿನ ನಿರ್ದೇಶಿಸುತ್ತಿದ್ದಾರೆ. ರಾಜೇಂದ್ರ ಕಾರಂತ್ ರಚಿಸಿದ್ದಾರೆ. ಬಸವನಗುಡಿಯ ಸಾಂಸ್ಕೃತಿಕ ಜಗತ್ತನ್ನು ವಿದ್ಯಾರ್ಥಿಭವನದ ದೃಷ್ಟಿಕೋನದಲ್ಲಿ ಈ ನಾಟಕ ಅನಾವರಣ ಮಾಡುತ್ತದೆ.

    ಈ ತಲೆಮಾರಿನ ತರುಣರಿಗೆ ಬಸವನಗುಡಿಯ ಭವ್ಯ ಇತಿಹಾಸವನ್ನು ಹೇಳುವುದಲ್ಲದೆ ಆ ಮೂಲಕ ಈಗಿನ ಹುಡುಗ ಹುಡುಗಿಯರಲ್ಲಿ ರಂಗಪ್ರೀತಿಯನ್ನು ಹೆಚ್ಚಿಸುವ ಕೆಲಸವನ್ನು ಈ ನಾಟಕ ಮಾಡಲಿದೆ ಎಂದು ಅರುಣ್ ಅಡಿಗ ಹೇಳಿದರು.

    ವಿದ್ಯಾರ್ಥಿಭವನವೆಂದರ ಕೇವಲ ಅದೊಂದು ಉಪಹಾರ ಕೇಂದ್ರವಲ್ಲ. ಅದು ಅದನ್ನೂ ಮೀರಿದ ಭಾವನಾತ್ಮಕ ನಂಟಿನ ಕೇಂದ್ರ. ಈ ಏಳು ದಶಕಗಳಕಾಲ ನಾವು ದೋಸೆಯನ್ನು ಜನರಿಗೆ ಉಣಬಡಿಸಿದ್ದೇವೆ. ಈಗ ದೋಸೆ ಏಳು ದಶಕಗಳ ಭಾವನಾತ್ಮಕ ನಂಟನ್ನು ತೆರೆದಿಡಲಿದೆ ಎಂದು ಅಡಿಗ ವಿವರಿಸಿದರು. ಗಮ ಗಮ ಭವನದ ನಂತರ ಇದು ಎಂದು ನಮ್ಮ ಎರಡನೇ ರಂಗ ಪ್ರಯತ್ನ ಎಂದೂ ಅವರು ಹೇಳಿದರು.

    ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಮತ್ತೊಂದು ಶಾಖೆ ತೆರೆಯುವ ಉದ್ದೇಶ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

    ಅರ್ಜುನ ಕಬ್ಬಿನ

    ಗಾಂಧೀಬಜಾರಿನಲ್ಲೇ ಹುಟ್ಟಿ ಬೆಳೆದಿರುವ ನಿರ್ದೇಶಕ ಕಬ್ಬಿನ ಅವರು ಕೋರೋನಾ ಸಾಂಕ್ರಾಮಿಕ ಹರಡುವ ಮುನ್ನ ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಪೂರ್ಣಪ್ರಮಾಣದ ರಂಗಕರ್ಮಿಯಾದರು. ಸಾಂಕ್ರಾಮಿಕ ಕಾಲದಲ್ಲಿ ರಂಗಚಟುವಟಿಗಳು ಸ್ಥಗಿತಗೊಂಡು ಅನೇಕ ಕಲಾವಿದರಿಗೆ ಕೆಲಸವಿಲ್ಲದೆ ಹೋಗಿದ್ದು ಕಬ್ಬಿನ ಅವರು ರಂಗಭೂಮಿಯಲ್ಲೇ ಮುಂದುವರಿಯಲು ಪ್ರೇರೇಪಣೆಯಾಯಿತು. ಗಾಂಧೀಬಜಾರು ನನಗೆ ತಾಯಿಯಾದರೆ ವಿದ್ಯಾರ್ಥಿಭವನ ನನಗೆ ದೇವಸ್ಥಾನ ಎನ್ನುವ ಕಬ್ಬಿನ ಬಸವನಗುಡಿಯ ಕಥೆಯನ್ನು ನಾಟಕದ ಮೂಲಕ ಹೇಳಲು ಮುಂದಾಗಿದ್ದಾರೆ.

    ಕೆ ಎಸ್ ನಿಸ್ಸಾರ್ ಅಹಮದ್, ಸಿ ಅಶ್ವತ್ಧ ಹೀಗೆ ನೂರಾರು ಮಹನೀಯರ ನೆನಪುಗಳು ಈ ನಾಟಕದಲ್ಲಿ ಕಾಣಸಿಗಲಿದೆ. ಆರು ತಿಂಗಳ ಶ್ರಮ ಈ ನಾಟಕ ರಚನೆಯಲ್ಲಿದೆ. ಈ ನಾಟಕದ ಕಲಾವಿದರು ಬಸವನಗುಡಿಯ ಎಲ್ಲಾ ಸಾಂಸ್ಕೃತಿಕ ಕೇಂದ್ರಗಳಿಗೂ ಹೋಗಿ ಅಲ್ಲಿನ ಸಾಮಾಜಿಕ ಪ್ರಾಮುಖ್ಯವನ್ನು ಅರಿತು ಬಂದಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಿದ್ಯಾರ್ಥಿ ಭವನಕ್ಕೆ ಬಂದಾಗ ಇಂಥ ಸಾಂಸ್ಕೃತಿಕ ಸ್ಥಳಗಳನ್ನು ಜತನ ಮಾಡಬೇಕಾದ ಅಗತ್ಯವನ್ನು ಹೇಳಿದ್ದು, ಗೋಪಾಲಕೃಷ್ಣ ಅಡಿಗರ ವಿದ್ಯಾರ್ಥಿ ಭವನದ ಭೇಟಿ ಎಲ್ಲವೂ ಇಲ್ಲಿ ಕಾಣಸಿಗಲಿದೆ.

    ಸಿಹಿಕಹಿ ಚಂದ್ರು, ಸುಂದರ್ , ವೀಣಾ ಸುಂದರ್, ಪವನ್ ಕುಲಕರ್ಣಿ ಅಂಥ ಕಲಾವಿದರ ದಂಡೇ ಈ ನಾಟಕದಲ್ಲಿ ಕಾಣಿಸಿಕೊಳ್ಳಲಿದೆ. ಮೇ 6,7 ಮತ್ತು 8 ರಂದು ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ನಾಟಕ ಪ್ರದರ್ಶನವಾಗಲಿದೆ. bookmyshow ದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

    ಪೌರಾಣಿಕ ನಿರೂಪಣೆಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

    ಬಳಕೂರು ವಿ ಎಸ್ ನಾಯಕ

    ಕಲಾವಿದನಿಗೆ ಮುಖ್ಯವಾಗಿ ಕಲಾತ್ಮಕತೆಯನ್ನು ಯಾವ ರೀತಿಯಾಗಿ ಬಿಂಬಿಸಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅಂತಹ ವಿಭಿನ್ನ ಹುಡುಕಾಟದಲ್ಲಿ ಕಲಾವಿದ ತಲ್ಲೀನರಾಗಿರುತ್ತಾರೆ. ಹೊಸ ವಿಚಾರಗಳು ಹೊಸ ವಿಷಯಗಳು ಕಲಾ ವಸ್ತುವಾಗಿ ಕಲಾವಿದನ ಕಣ್ಣಿಗೆ ಗೋಚರವಾಗುತ್ತದೆ. ಅಂತಹ ಅದ್ಭುತ ಕಲಾಕೃತಿಗಳನ್ನು ತನ್ನ ಕೈಚಳಕದಿಂದ ಕಲಾಸಕ್ತರ ಮಡಲಿಗೆ ಅರ್ಪಿಸುತ್ತಿದ್ದಾರೆ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಎ . ಜಿ. ನೆಲ್ಲಗಿ.

    ಇವರು ರಚಿಸಿದ ಕಲಾಕೃತಿಗಳು ವಿವಿಧ ಆಯಾಮದ ಅಡಿಯಲ್ಲಿ ಮೂಡಿಬಂದಿವೆ.
    ಎ.ಜಿ. ನೆಲ್ಲಗಿ ಯವರು ಬಿಜಾಪುರದ ಸಿಂದಗಿ ತಾಲೂಕಿನವರು. ವೃತ್ತಿಪರ ಪ್ರಸಿದ್ಧ ಚಿತ್ರಕಲಾವಿದರು. ಇವರು ರಚಿಸಿರುವ ವಿಭಿನ್ನ ಕಲಾಕೃತಿಗಳು ಹಲವಾರು ಜನರ ಮನಸೂರೆಗೊಂಡರುವುದು ವಿಶೇಷ. ಇವರ ಕಲಾತ್ಮಕತೆ ವಿಶೇಷತೆ ವಿಭಿನ್ನತೆ ನಿಜಕ್ಕೂ ಕೂಡ ಕಲಾಸಕ್ತರ ಮನಸ್ಸಿಗೆ ರಸದೌತಣವನ್ನು ನೀಡುವಂತಿರುತ್ತದೆ.

    ಹೀಗೆ ಇವರು ರಚಿಸಿರುವ ಕಲಾಕೃತಿಗಳು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಗ್ಯಾಲರಿ ನಂಬರ್ ಮೂರರಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 30 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಇವರು ಹಸುಗಳು ಮತ್ತು ಎತ್ತುಗಳು ಕಥಾ ವಸ್ತುವನ್ನಾಗಿ ಮಾಡಿಕೊಂಡು ವಿಭಿನ್ನವಾಗಿ ಚಿತ್ರಿಸಿರುವುದು ವಿಶೇಷ.

    ನೀನಾರಿಗಾದೆಯೋ ಎಲೆ ಮಾನವ ಎಂಬ ಮಾತಿನಂತೆ ಹಸು ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಯಾಗಿ ಕೆಲಸವನ್ನು ಮಾಡುತ್ತದೆ ಅದರಲ್ಲಿ ನಿಸ್ವಾರ್ಥ ಸೇವೆ ಪ್ರತಿಯೊಬ್ಬರಿಗೂ ಅನುಕರಣೀಯ. ಆದರೆ ಮಾನವ ಬುದ್ಧಿಜೀವಿಯಾಗಿಯೂ ಕೂಡ ಸರಿ-ತಪ್ಪು ಇದರ ಬಗ್ಗೆ ಆಲೋಚನೆ ಇದ್ದರೂ ಕೂಡ ಬೇರೆಯವರನ್ನು ತೊಂದರೆಗೆ ಸಿಲುಕಿಸಿ ಸಂತೋಷಪಡುವ ಮನಸ್ಸಿನವನಾಗಿದ್ದಾನೆ. ಎಂಬ ವಿಷಯವನ್ನು ತಮ್ಮ ಕಲಾಕೃತಿಗಳ ಮೂಲಕ ಜನಮಾನಸಕ್ಕೆ ತಲುಪುವ ಹಾಗೆ ಚಿತ್ರಕಲಾವಿದ ವಿಭಿನ್ನ ಸಂದೇಶವನ್ನು ನೀಡಿದ್ದಾರೆ.

    ನಾವು ಕೂಡ ಪರೋಪಕಾರಿಯಾಗಿ ಜೀವನವನ್ನ ಸಾಗಿಸಬೇಕು. ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂಬ ಸಂದೇಶ ನಿಜಕ್ಕೂ ಮೆಚ್ಚತಕ್ಕದ್ದು. ಈ ಶ್ರೇಷ್ಠ ಕಲಾವಿದರ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳನ್ನು ಕಣ್ತುಂಬಿ ಕೊಳ್ಳಬೇಕಾದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಏಪ್ರಿಲ್ 22 ರಿಂದ 28ರವರೆಗೆ ಈ ಕಲಾಪ್ರದರ್ಶನ ನಡೆಯಲಿದೆ. ಕಲಾಕೃತಿಗಳನ್ನು ವೀಕ್ಷಿಸುವ ಅವಕಾಶ ನಿಮಗೆ ಒದಗಿ ಬಂದಿದೆ ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಈ ಚಿತ್ರಕಲಾ ಪ್ರದರ್ಶನಕ್ಕೆ ಬಂದು ಕಣ್ತುಂಬಿಕೊಳ್ಳಬಹುದು.ಎಪ್ರಿಲ್ 22ರಂದು ಸಂಜೆ 5 ಗಂಟೆಗೆ ಕಲಾಪ್ರದರ್ಶನ ಉದ್ಘಾಟನೆಯಾಗಲಿದೆ

    ಚಿತ್ರಕಲಾ ಪ್ರದರ್ಶನದ ಸ್ಥಳ
    ಕರ್ನಾಟಕ ಚಿತ್ರಕಲಾ ಪರಿಷತ್ತು
    ಗ್ಯಾಲರಿ ನಂಬರ್ 3
    ಕುಮಾರಕೃಪಾ ರಸ್ತೆ
    ಬೆಂಗಳೂರು560001

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    PSI ನೇಮಕಾತಿ ಪರೀಕ್ಷೆ ಅಕ್ರಮ:ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸಿಎಂ ಸೂಚನೆ

    KALABURGI APR 21

    ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್ ಪುರದ ಶಾಸಕ
    ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು ಕಲ್ಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಯುಪಿಎಸ್ಸಿ ಮಾದರಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಈ ಭದ್ರತೆಯ ವ್ಯವಸ್ಥೆ, ಪಾರದರ್ಶಕತೆಯ ನಡುವೆಯೂ ಲೋಪವೆಸಗಿ ವಾಮಮಾರ್ಗದಲ್ಲಿ ಅಕ್ರಮ ಕಾರ್ಯಾಚರಣೆ ಮಾಡಿರುವುದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಸರ್ಕಾರದ ಚಿಂತನೆಯಾಗಿದೆ ಎಂದು ಅವರು ತಿಳಿಸಿದರು.

    ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ದೂರು ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಕೂಲಂಕುಷವಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಉತ್ತರಪತ್ರಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಮೇಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಸಮಯ ವ್ಯರ್ಥವಾಗದೇ ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಕಲ್ಬುರ್ಗಿಯಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರು ತಲೆಮರೆಸಿಕೊಂಡಿದ್ದು, ಶೋಧನಾ ಕಾರ್ಯ ಮುಂದುವರೆದಿದೆ. ಈಗ ಕಾಂಗ್ರೆಸ್ ಪಕ್ಷದ ಶಾಸಕ ಎಂ ವೈ ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಅವರನ್ನು ಬಂಧಿಸಲಾಗಿದೆ. ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆಯೂ ನಡೆಸಿ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

    ದಿವ್ಯಾ ಹಾಗರಗಿಯವರು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಸಿಐಡಿ ತನಿಖೆಗೆ ಅನುಮತಿ ನೀಡಿದೆ. ತನಿಖೆ ಮುಕ್ತವಾಗಿ ನಡೆಸಲು ಸೂಚನೆ ನೀಡಿದೆ. ಬೇರೆ ಪಕ್ಷಗಳು ಈ ರೀತಿಯ ಪ್ರಕರಣವನ್ನೇ ಮುಚ್ಚಿಹಾಕಿರುವ ಇತಿಹಾಸ ಇದೆ. ಹಿಂದೆ ಪಿಎಸ್ಐ ಪರೀಕ್ಷೆಗಳು 3-4 ಬಾರಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಮಧ್ಯಂತರ ವರದಿ ಬಂದ ನಂತರ ಮರುಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.

    ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ಅಥವಾ ಸಿಬಿಐಗೆ ವಹಿಸಬೇಕೆಂದು ಬೇರೆ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ತನಿಖೆಯ ಮಧ್ಯಂತರ ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಎಲ್ಲ ಅಂಶಗಳು ತಿಳಿಯುತ್ತದೆ. ಎಲ್ಲ ಸಾಕ್ಷ್ಯಾಧಾರಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಸಮಗ್ರ ತನಿಖೆ ಆಗುತ್ತಿದೆ ಎಂದು ತಿಳಿಸಿದರು.

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು


    SHIVAMOGGA A

    ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಡಿಸೆಂಬರ್ ತಿಂಗಳಲ್ಲಿ ಈ ವಿಮಾನ ನಿಲ್ದಾನದ ಉದ್ಘಾಟನೆಗೆ ಸಜ್ಜಾಗಲಿದೆ. ಅದಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ಜೊತೆಯಾಗಿ ನಿರ್ವಹಿಸಿ ಜನರಿಗೆ ಲೋಕಾರ್ಪಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ. ಉಡಾನ್ ಯೋಜನೆಯಡಿ ಕಾಮಗಾರಿಯಲ್ಲಿ ಕೈಗೊಂಡಿದ್ದು, ವಿಮಾನನಿಲ್ದಾಣ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಲಾಗುವುದು. ಎಟಿಸಿ ಪರಿಕರಗಳನ್ನು ಅಳವಡಿಸಿ, ಸೌಲಭ್ಯಗಳನ್ನು ನಿರ್ಮಿಸಲಾಗುವುದು ತಿಳಿಸಿದರು.

    ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
    ಶಿವಮೊಗ್ಗದ ಕೈಗಾರಿಕೋದ್ಯಮ, ಶಿಕ್ಷಣ, ಆರೋಗ್ಯ ಎಲ್ಲ ಅಭಿವೃದ್ಧಿಗೆ ವಿಮಾನ ಸೌಲಭ್ಯ ಬಹಳ ಪ್ರಮುಖವಾಗಿದ್ದು, ಜನರ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಬೆಂಗಳೂರು ನಂತರ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಬಿಜಾಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಇಂಬು ನೀಡಲು ವಿಮಾನನಿಲ್ದಾಣದ ಅವಶ್ಯಕತೆ ಬಹಳ ವರ್ಷಗಳಿಂದ ಇದೆ.

    ನಮ್ಮ ನಾಯಕರಾದ ಯಡಿಯೂರಪ್ಪನವರು ಶಿವಮೊಗ್ಗ ಏರ್‍ಪೋರ್ಟ್ 2006-07 ರಿಂದ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ ಎಂದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.

    ರೈತರ ಸಹಕಾರ:
    ವಿಮಾನನಿಲ್ದಾಣಕ್ಕೆ ಜಿಲ್ಲೆಯ ಹಲವಾರು ರೈತರು ಈಗಾಗಲೇ ಸಹಕಾರ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಗಿದೆ. ಮುಂದೆ ಅವಶ್ಯಕತೆ ಇರುವ ಜಮೀನನ್ನು ನೀಡಲು ರೈತರು ಒಪ್ಪಿ ಸಹಕರಿಸಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
    ಹೆಚ್ಚುವರಿ ಅನುದಾನ ಬಿಡುಗಡೆ
    ವಿಮಾನನಿಲ್ದಾಣ ಕಾಂಪೌಂಡ್ ಸುತ್ತಲಿನ ಸರ್ವಿಸ್ ರಸ್ತೆಗೆ ಡಾಂಬರು ಹಾಕಬೇಕಾಗಿದೆ. ರಾತ್ರಿ ವೇಳೆಯಲ್ಲಿ ವಿಮಾನಗಳನ್ನು ಇಳಿಸಲು (ನೈಟ್ ಲ್ಯಾಂಡಿಂಗ್) ಸೌಲಭ್ಯ ಕಲ್ಪಿಸಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಸುಮಾರು 40-50 ಕೋಟಿ ರೂ.ಗಳ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರ ಅನುಮೋದನೆ ಮಾಡಿ ಬಿಡುಗಡೆ ಮಾಡಲಿದೆ. ಕಾಂಪೌಂಡಿನ ಹೊರಗೆ ರೈತರು ಹೊಲಗಳನ್ನು ಬಿಟ್ಟುಕೊಟ್ಟಿದ್ದು ಅವರು ಓಡಾಡಲು ತೊಂದರೆಯಾಗುತ್ತದೆ. ಅದಕ್ಕಾಗಿ ಕಾಂಪೌಂಡಿನ ಆಚೆಗೂ ಡಾಂಬರು ರಸ್ತೆ ನಿರ್ಮಿಸಲಾಗುವುದು. ಶಿವಮೊಗ್ಗದಿಂದ ವಿಮಾನ ನಿಲ್ದಾಣದ ರಸ್ತೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಟ್ಟಕ್ಕೆ ಅಬಿವೃದ್ಧಿ ಮಾಡಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೂ ಬಹಳ ದೊಡ್ಡ ಸಹಾಯಾಗಲಿದೆ.
    ಜೋಗದ ಅಭಿವೃದ್ಧಿಗೂ 300 ಕೊಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಕೇಬಲ್ ಕಾರ್, ಓಡಾಡಲು ವ್ಯವಸ್ಥೆ, ವೀಕ್ಷಣಾ ಪಾಯಿಂಟ್, ಹೋಟೇಲ್, ಡಾರ್ಮೆಟರಿಗಳನ್ನು ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಮಾತ್ರ ಪ್ರವಾಸಿಗರನ್ನು ಜೋಗ ಆಕರ್ಷಿಸುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವರ್ಷದಲ್ಲಿ 10 ತಿಂಗಳು ಜೋಗ ಜಲಪಾತವನ್ನು ಬಳಕೆ ಮಾಡಬಹುದಾಗಿದೆ ಎಂದರು.

    ಮೂಲಸೌಕರ್ಯ ಅಭಿವೃದ್ಧಿಯಿಂದ ಆರ್ಥಿಕ ಬೆಳವಣಿಗೆ :
    ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲು ಮೂಲಭೂತ ಸೌಕರ್ಯ ಅಭಿವೃದ್ಧಿ ಬಹಳ ಮುಖ್ಯ. ಇದರ ಮುಖಾಂತರ ಆರ್ಥಿಕ ಬೆಳವಣಿಗೆ ಸಾಧ್ಯ. ಈ ವರ್ಷ ಕೇಂದ್ರ ಸರ್ಕಾರ ಶಿವಮೊಗ್ಗ-ರಾಣಿಬೆನ್ನೂರು ಮಾರ್ಗ ಸೇರಿದಂತೆ 8 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡು, ಜಿಎಸ್‍ಟಿ ತೆರಿಗೆ, ಅಗ್ರಿಗೇಟರ್ಸ್ ರಾಯಲ್ಟಿಯನ್ನು ಬಿಟ್ಟುಕೊಡುವ ವಿಚಾರಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರಿಂದ ಭೂ ಸ್ವಾಧೀನ ದರ 50 ರಿಂದ 25% ಕ್ಕೆ ಇಳಿಯಲಿದೆ. ಇದರಿಂದಾಗಿ ಬಾಕಿಯಿರುವ ರಿಂಗ್ ರಸ್ತೆ ನಿರ್ಮಾಣವನ್ನು ಸಹ ಕೈಗೆತ್ತಿಕೊಳ್ಳಲಾಗುವುದು. ಮೇಲ್ಸೇತುವೆಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದರು.

    ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    VIJAYANAGARA APR 17

    ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ. ಕರ್ನಾಟಕ ರಾಜ್ಯ ಇದನ್ನು ಸಹಿಸುವುದಿಲ್ಲ. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಎಲ್ಲಾ ಸಂಘಟನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

    ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಗೆ ಸಂಬಂಧಿಸಿದಂತೆ ನಡೆದಿರುವ ಗಲಾಟೆ ಕುರಿತು ಅವರು ಇಂದು ಭಾ.ಜ.ಪ.ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗುಳ್ಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಂಡರೂ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೆ ಮುಂದೆ ನೋಡುವುದಿಲ್ಲ. ಇದಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ರಾಜಕೀಯ ಬಣ್ಣ ನೀಡುವುದು ಬೇಡ . ಈ ಘಟನೆಯನ್ನು ಕಾನೂನಾತ್ಮಕ ಘಟನೆ ಎಂತಲೇ ಕಾಣಬೇಕು. ಅಂದಾಗ ಮಾತ್ರ ಇಂಥವು ನಿಲ್ಲುತ್ತದೆ ಎಂದರು.

    ಹುಬ್ಬಳ್ಳಿಯಲ್ಲಿ ನಿನ್ನೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸವಾಗಿದೆ. ಪೊಲೀಸರು ವಾಟ್ಸಾಪ್ ಪೋಸ್ಟ್ ಒಂದರ ಮೇಲೆ ಕ್ರಮ ತೆಗೆದುಕೊಂಡು ಬಂಧಿಸಿ ಎಲ್ಲಾ ಕ್ರಮ ತೆಗೆದುಕೊಂಡರೂ ಕೂಡ ಪ್ರಚೋದನಕಾರಿಯಾಗಿ ಪೊಲೀಸ್ ಠಾಣೆ ಎದುರಿಗೆ ಬಂದು ಗಲಾಟೆ ಮಾಡಿ ಪೊಲೀಸರಿಗೂ ಏಟು ಬೀಳುವಂತೆ ಮಾಡಿದ್ದಾರೆ. ತದನಂತರ ಹಳೆ ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಕಲ್ಲು ತೂರಾಟ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.

    JDS:ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

    BENGALURU APR 17
    ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.

    ಹಾಗೆಯೇ, ಹಿರಿಯ ಶಾಸಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

    ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಈ ಇಬ್ರಾಹಿಂ ಅವರು ಪಕ್ಷದ ಚುಕ್ಕಾಣಿ ಹಿಡಿದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದರು. ಅವರು ಹೇಳಿದ್ದಿಷ್ಟು;

    ನಾನು ದೇವರನ್ನು ನಂಬುತ್ತೇನೆ. ಅದಕ್ಕೆ ‌‌ಇವತ್ತು ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಅವರಿಗೆ ನೀಡಿದ್ದೇವೆ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಅವರು ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಎಂದು ಹೇಳಿದ ಕೂಡಲೇ ಒಪ್ಪಿಕೊಂಡರು.

    ನನಗೆ ಈಗ 90 ವರ್ಷ ವಯಸ್ಸು. ಕುಮಾರಸ್ವಾಮಿ ಅನೇಕ ಯೋಜನೆ ಮಾಡಿದ್ದಾರೆ. ಬಡವರಿಗೆ ಅನ್ಯಾಯ ಆಗಬಾರದು ಅಂತ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಈಗ ಜಲಧಾರೆ ಕಾರ್ಯಕ್ರಮ ಪ್ರಾರಂಭ ಮಾಡಿದ್ದಾರೆ.

    ಜಲಧಾರೆ ಕಾರ್ಯಕ್ರಮ ಕುಮಾರಸ್ವಾಮಿ ಅವರ ಕಲ್ಪನೆ ಕೂಸು. ಇದೊಂದು ಶ್ರೇಷ್ಠ ಕಾರ್ಯಕ್ರಮ. ಇಬ್ರಾಹಿಂ ಈ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದರ ನಡುವೆ ದೇವೇಗೌಡರ ಕುಟುಂಬದವರೇ ಎಲ್ಲಾ ಇದ್ದಾರೆ ಅಂತ ಅಪಪ್ರಚಾರ ಮಾಡಬಹುದು.

    ಇದು ಒಕ್ಕಲಿಗರ ಪಾರ್ಟಿ ಅಂತ ಹೇಳಿದರು. ಬರೀ ಸುಳ್ಳು ಹೇಳುತ್ತಾರೆ. ಅಪಪ್ರಚಾರ ಮಾಡಿದರು. ನಾನು ಮಂತ್ರಿ ಮಂಡಲ ರಚನೆ ಮಾಡಿದಾಗ ಒಕ್ಕಲಿಗರು ಇದ್ದದ್ದು 4 ಜನ ಮಾತ್ರ. ಓಬಿಸಿ, ಎಸ್ಸಿ, ಎಸ್ಟಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೆ. ಎಲ್ಲಾ ವರ್ಗದವರನ್ನು ಗುರುತಿಸಿ ನಾನು ‌ಮಂತ್ರಿಮಂಡಲ ಮಾಡಿದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನು.

    ಮಿಷನ್ 123 ಸಾಕಾರ ಆಗುತ್ತದೆ. ಭಗವಂತನ ಅನುಗ್ರಹದಿಂದ ಈ ಪಕ್ಷ ಉಳಿಯುತ್ತದೆ. ಈ‌ ಪಕ್ಷವನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ. ಅಂದು ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಅವತ್ತು 16 ಎಂಪಿ ಸ್ಥಾನ ಗೆದ್ದೆವು. ಇನ್ನು ಮುಂದೆ ಜೆಡಿಎಸ್ ಅನ್ನು ಒಕ್ಕಲಿಗರ ಪಕ್ಷ ಅಂತ ಯಾರೂ ಹೇಳಬಾರದು. ಅಂತಹ ಮಾತುಗಳಿಗೆ ಇಬ್ರಾಹಿಂ ತಕ್ಕ ಉತ್ತರ ನೀಡುತ್ತಾರೆ. ನಾನು ‌‌ ಕುಳಿತುಕೊಳ್ಳೊಲ್ಲ. ಪಕ್ಷದ ಪರವಾಗಿ ನಾನು ದುಡಿಮೆ ಮಾಡ್ತೀನಿ.

    ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಹೇಳಿದ್ದು:

    ಎರಡು ವರ್ಷಗಳ ಕಾಲ ಕಷ್ಟದ ಕಾಲದಲ್ಲೂ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ್ದರು ಎಚ್.ಕೆ.ಕುಮಾರಸ್ವಾಮಿ ಅವರು. ಇಬ್ರಾಹಿಂ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಮತ್ತೆ ಮರಳಿ ಮನೆಗೆ ಬಂದಿದ್ದಾರೆ.

    ರಾಜ್ಯದಲ್ಲಿ ಜಲಧಾರೆ ಕಾರ್ಯಕ್ರಮ ಆರಂಭವಾಗಿದೆ. 15 ಕಡೆ ಒಂದೇ ಬಾರಿಗೆ ನೀರು ತುಂಬುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇಬ್ರಾಹಿಂ ಅವರ ಸೇರ್ಪಡೆ ಒಂದು ಸಮಾಜವನ್ನು ಓಲೈಕೆ ಮಾಡಲು ಅಲ್ಲ. ನಾನು ಸ್ಪಷ್ಟವಾಗಿ ಹೇಳ್ತಿನಿ ನಾನು ಓಲೈಸಲು ಈ ಕೆಲಸ ಮಾಡ್ತಾ ಇಲ್ಲ. ಒಂದು ಸಮಾಜದ ಪರವಾಗಿ ನಾನು ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಹೇಳಿದ್ದಾರೆ. ಇದನ್ನು ಉಳಿಸಲು ಹೋರಾಟ ಮಾಡಬೇಕಿದೆ.

    ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್, ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ದಾಸರಹಳ್ಳಿ ಮಂಜುನಾಥ್, ಮುಖಂಡರಾದ ನಬಿ, ಟಿ.ಎ.ಶರವಣ, ಜಪ್ರುಲ್ಲಾ ಖಾನ್, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

    Indian Stock Market: ಇಂದಿನ ಪೇಟೆಗೆ ಬೇಕು REAL TIME MARKET STRATEGY !

    ಆರ್ಥಿಕ ಸಾಕ್ಷರತೆ ಎಂದರೆ ಕೈ ತುಂಬಾ ಹಣ ಸಂಪಾದನೆ ಮಾಡಿ ಬ್ಯಾಂಕ್‌ ಖಾತೆಯಲ್ಲಿ ತುಂಬಿಸಿ, ಐಶಾರಾಮಿ ಬಂಗಲೆ, ಕಾರುಗಳನ್ನು ಹೊಂದಿ ಹಣವನ್ನು ನೀರಿನಂತೆ ವೆಚ್ಚ ಮಾಡುವುದರೊಂದಿಗೆ, ಅವಶ್ಯವೋ, ಅನಾವಶ್ಯವೋ ನೋಡಿದ್ದನ್ನೆಲ್ಲಾ ಖರೀದಿಸುತ್ತಾ, ಕ್ರೆಡಿಟ್‌ ಕಾರ್ಡ್‌ ಗಳನ್ನು ಉಜ್ಜುತ್ತಾ, ಮಾಸಾರಂಭದಿಂದ ಅಂತ್ಯದವರೆಗೂ ತೆರಬೇಕಾದ ಇ ಎಂ ಐ ಗಳ ಕೊರತೆಯನ್ನು ಸರಿಪಡಿಸಿಕೊಳ್ಳುವುದಲ್ಲ. ಲಭ್ಯವಿರುವ ಹಣವನ್ನು ಸದ್ವಿನಿಯೋಗ ಮಾಡುವುದರೊಂದಿಗೆ, ಸರಿಯಾಗಿ ನಿರ್ವಹಿಸುವುದರೊಂದಿಗೆ, ನೆಮ್ಮದಿ, ಶಾಂತಿ, ಸಂತೋಷಗಳನ್ನು ಪಡೆದುಕೊಳ್ಳುವುದಾಗಿದೆ.

    ಈ ಹಿಂದೆ ಉಳಿತಾಯ ಎಂಬುದು ಗಳಿಸಿದ ಹಣದಲ್ಲಿನ ಪ್ರಕ್ರಿಯೆಯಾಗಿದ್ದರೆ, ಈಗ ವೆಚ್ಚ ಮಾಡುವ ಹಣದ ಪ್ರಕ್ರಿಯೆಯಾಗಿದೆ. ಗಳಿಸಿದ ಹಣದಿಂದ ಉಳಿತಾಯ ಮಾಡಿದಲ್ಲಿ, ಉಳಿಸಿದ ಹಣವು ಬೆಳೆಸಲೂ ಸಹ ಅವಕಾಶವಿದ್ದು, ಅವಶ್ಯವಿರುವ ಸಮಯದಲ್ಲಿ ಬಳಕೆಮಾಡಿಕೊಳ್ಳಲು ಲಭ್ಯವಿರುವುದರಿಂದ ಹೊರಗಿನ ಸಾಲಗಳಿಗೆ ಮೊರೆಹೋಗುವ ಅವಶ್ಯಕತೆ ಇರುವುದಿಲ್ಲ. ಆದರೆ ವೆಚ್ಚ ಮಾಡುವ ಹಣದಲ್ಲಿ ಉಳಿತಾಯ ಎಂದರೆ ಅದು ಲಭ್ಯತೆಗಿಂತ ಸ್ವಲ್ಪಮಟ್ಟಿನ ಬಾಧ್ಯತೆಯನ್ನು, ಇ ಎಂ ಐ ಮೊಟಕುಗೊಳಿಸುವ ಮೂಲಕ ಸಹಕಾರಿಯಾಗಬಹುದಷ್ಠೆ. ಅವಶ್ಯಕತೆ ಎನಿಸಿದಾಗ ಲಭ್ಯವಿರುವುದಿಲ್ಲ.

    ಇಂದಿನ ದಿನಗಳಲ್ಲಿ ಹೂಡಿಕೆದಾರರು ಹೂಡಿಕೆಯ ಮೂಲ ಉದ್ದೇಶಗಳನ್ನೇ ಮರೆತು ಕೇವಲ ಭಾವನಾತ್ಮಕ, ಕಾಲ್ಪನಿಕ, ವರ್ಣನಾತ್ಮಕ, ಚಿಂತಾಜನಕಾತ್ಮಕ ಶೈಲಿಗಳಿಗೆ ಮಾರು ಹೋಗಿ ತಮ್ಮ ಹೂಡಿಕೆಯ ಹಣವನ್ನುತಳ್ಳುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಹೂಡಿಕೆಯ ಮೂಲ ಉದ್ದೇಶ ಎಂದರೆ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತಗೊಳಿಸಿ ಅದನ್ನು ಬೆಳೆಯುವಂತೆ ಮಾಡುವುದರೊಂದಿಗೆ ಹೆಚ್ಚಿನ ನಿಯತಕಾಲಿಕ ಆದಾಯವನ್ನೂ ಸಹ ಒದಗಿಸುತ್ತದೆಯೇ ಎಂಬುದಾಗಿರಬೇಕು. ಷೇರುಪೇಟೆಯೊಂದೇ ಈ ರೀತಿಯ ಸವಲತ್ತುಗಳನ್ನು ಒದಗಿಸಲು ಸಾಧ್ಯ. ಆದರೆ ನಾವುಗಳು ನಮ್ಮ ತಪ್ಪು ಕಲ್ಪನೆಗಳಿಗೊಳಗಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ಹಾನಿಗೊಳಗಾಗುತ್ತೇವೆ. ಕೆಲವೊಮ್ಮೆ ಉತ್ತಮ ಅವಕಾಶ ಕಂಡರೂ ಮತ್ತಷ್ಠು ಹೆಚ್ಚಿನ ಆದಾಯದ ಆಸೆಯಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಅದು ಇಂದಿನ ಪೇಟೆಯಲ್ಲಿ ಹೆಚ್ಚಿನ ಸಣ್ಣ ಹೂಡಿಕೆದಾರರ ಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ.

    ಪರಿಸ್ಥಿತಿ ಪರಿವರ್ತನೆ:

    ಹೆಚ್ಚಿನ ಹೊಸ ಹೂಡಿಕೆದಾರರು ಷೇರುಪೇಟೆಯ ಹಿಂದಿನ ವರ್ಷಗಳ ಫಲಾಫಲಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇನ್ಫೋಸಿಸ್‌ ನ ಐ ಪಿ ಒ ನಲ್ಲಿ ಷೇರು ಅಲಾಟ್ ಆದವರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ. ಅದೇ ತರಹ ಈಗಲೂ ನಾವು ಹೂಡಿಕೆಯನ್ನು ಐ ಪಿ ಒ ಗಳಲ್ಲಿ ತೊಡಗಿಸಿದಲ್ಲಿ ಹಣ ಗಳಿಸಬಹುದೆಂಬ ಭ್ರಮೆಯಿಂದ ಹೂಡಿಕೆಗೆ ಮುಂದಾಗುತ್ತಾರೆ. ಆದರೆ ಬದಲಾದ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದಿನ ಚಿಂತನೆಗಳನ್ನೇ ಅಳವಡಿಸಿಕೊಂಡಲ್ಲಿ ಬಂಡವಾಳಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

    ಇನ್ಫೋಸಿಸ್‌ ಐ ಪಿ ಒ ಬಂದ ಸಮಯದಲ್ಲಿ ಆ ಕಂಪನಿಗೆ ತಮ್ಮ ಚಟುವಟಿಕೆಯನ್ನು ಅಭಿವೃದ್ಧಿಪಡಿಸಿ, ವಿಸ್ತರಿಸಿ, ಉದ್ದೇಶ ಸಾಫಲ್ಯತೆಗೆ ಸಂಪನ್ಮೂಲದ ಅವಶ್ಯಕತೆ ಇತ್ತು. ಆ ಕಾರಣದಿಂದಾಗಿ ಐ ಪಿ ಒ ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆ ಮಾಡಿ ತಮ್ಮೊಂದಿಗೆ ಷೇರುದಾರರನ್ನೂ ಸಹ ಹರ್ಷಿತಗೊಂಡು, ಭಾವನಾತ್ಮಕ ಬಾಂಧವ್ಯಕ್ಕೆ ನಾಂದಿ ಹಾಡಿತು.

    ಆದರೆ ಈಗಿನ ಐ ಪಿ ಒ ಗಳ ಉದ್ದೇಶವೇ ಬೇರೆ. ಆ ಕಂಪನಿಗಳು ಸದೃಢವಾಗಿದ್ದು, ಸಂಪನ್ಮೂಲದ ಅಗತ್ಯತೆ ಇರುವುದಿಲ್ಲ, ಆದರೆ ಕಂಪನಿಯ ಪ್ರವರ್ತಕರು, ಖಾಸಗಿ ಹೂಡಿಕೆದಾರರು ಪೇಟೆಯು ಉತ್ತುಂಗದಲ್ಲಿರುವಾಗ, ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಲಾಭ ಪಡೆವ ದೃಷ್ಠಿಯಿಂದ ಐ ಪಿ ಒ ಗಳನ್ನು ತೇಲಿಬಿಡುತ್ತಾರೆ ಇದರೊಂದಿಗೆ ಆಫರ್‌ ಫಾರ ಸೇಲ್‌ ನ್ನು ಲಗತ್ತಿಸುತ್ತಾರೆ. ಇವೆರಡಕ್ಕೂ ವಿತರಣೆ ಬೆಲೆ ಒಂದೇ ಇರುತ್ತದೆ. ಇಲ್ಲಿ ನಿಗದಿಪಡಿಸುವ ಪ್ರೀಮಿಯಂ ಇತ್ತೀಚಿನ ದಿನಗಳಲ್ಲಿ ಅತ್ಯಧಿಕಾವಾಗಿರುತ್ತದೆ. ಇನ್ಫೋಸಿಸ್‌ ಷೇರು ವಿತರಣೆಯಾದ ಮೇಲೆ ಬಂದಂತಹ ಅನೇಕ ಕಂಪನಿಗಳು ಹೇಳ ಹೆಸರಿಲ್ಲದೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿ ಮಾಯವಾಗಿರುವ ಅನೇಕ ನಿದರ್ಶಗಳಿವೆ.

    ಒಂದು ಸಮಯದಲ್ಲಿ ರೂ.3 ಸಾವಿರದ ಗಡಿ ದಾಟಿದ್ದ ಡಿ ಎಸ್‌ ಕ್ಯು ಸಾಫ್ಟ್‌ ವೇರ್‌, ಒಂದು ಸಾವಿರ ರೂಪಾಯಿಗಳ ದಾಟಿದ್ದ ಸಿಲ್ವರ್‌ ಲೈನ್‌, ಸಮೀಪವಿದ್ದ ರೋಲ್ಟಾ ಇಂಡಿಯಾ, ರೂ. 3,000 ಕ್ಕೂ ಹೆಚ್ಚಿನ ಬೆಲೆಯಲ್ಲಿದ್ದ ಹಿಮಾಚಲ್‌ ಫ್ಯೂಚರಿಸ್ಟಿಕ್‌ ಈಗ ಎರಡಂಕಿಗಳಲ್ಲಿದೆ, ಪೆಟಾಮೀಡಿಯಾ ಗ್ರಾಫಿಕ್ಸ್‌ ಏಕ ಅಂಕಿಯಲ್ಲಿದೆ. ಆಲ್ಪ್ಸ್‌ ಇನ್ಫೋಸಿಸ್, ಕಂಪ್ಯೂಡೈನ್‌ ವಿನ್ ಫೊಸಿಸ್‌, ಐ ಸಿ ಇ ಎಸ್‌ ಸಾಫ್ಟ್‌ ವೇರ್‌, ಇನ್ಫರ್ಮೇಷನ್‌ ಟೆಕ್ನಾಲಜೀಸ್‌ ಇಂಡಿಯಾ, ನೆಕ್ಸಸ್‌ ಸಾಫ್ಟ್ವೇರ್‌, ಪದ್ಮಿನಿ ಟೆಕ್ನಾಲಜೀಸ್‌, ಶಾಲಿಭದ್ರ ಇನ್ಫೋಸೆಕ್‌, ಸಾಫ್ಟ್‌ ಟ್ರಾಕ್‌ ಟೆಕ್ನಾಲಜೀಸ್‌ ಗಳಲ್ಲಿ ಹೂಡಿಕೆ ಮಾಡಿದವರು ಶಾಶ್ವತ ಹೂಡಿಕೆದಾರರಾಗಿ ಪರಿವರ್ತಿತಗೊಂಡಿದ್ದಾರೆ. ಕಾರಣ ಈ ಕಂಪನಿಗಳು ವಹಿವಾಟಿನಿಂದ ಡೀಲೀಸ್ಟ್‌ ಆಗಿವೆ.

    ಹೊಸ ಷೇರು ಮತ್ತು ಆಫರ್‌ ಫಾರ್‌ ಸೇಲ್:

    ಐ ಪಿ ಒ ನಲ್ಲಿ ಹೊಸ ಷೇರುಗಳು ಬಿಡುಗಡೆಯಾದಲ್ಲಿ ಆ ಹಣವು ನೇರವಾಗಿ ಕಂಪನಿಯ ಖಜಾನೆಗೆ ಸೇರಿಕೊಳ್ಳುತ್ತದೆ. ಆದರೆ ಆಫರ್‌ ಫಾರ್‌ ಸೇಲ್‌ ನಲ್ಲಿ ವಿತರಣೆಯಾಗುವ ಷೇರುಗಳ ಮೊತ್ತವು ಮಾರಾಟಮಾಡುತ್ತಿರುವ ಪ್ರವರ್ತಕರು ಮತ್ತು / ಅಥವಾ ಖಾಸಗಿ ವಿತರಕರ ಕಿಸೆ ಸೇರಿ ಕಂಪನಿಗೆ ಯಾವುದೇ ಅನುಕೂಲ ಕಲ್ಪಿಸುವುದಿಲ್ಲ. ಕೆಲವು ಬಾರಿ ವಿತರಣೆಗೊಳ್ಳುತ್ತಿರುವ ಐಪಿಒ ಗಳು ಕೇವಲ ಆಫರ್‌ ಫಾರ್‌ ಸೇಲ್‌ ಮಾತ್ರವಿದ್ದು, ಹೊಸ ಷೇರು ವಿತರಣೆ ಇರುವುದಿಲ್ಲ. ಅಂತಹ ಕಂಪನಿಗಳು ಸಂಗ್ರಹಿಸಿದ ಹಣವು ನೇರವಾಗಿ ಕಂಪನಿಗೆ ಸೇರದೆ ಮಾರಾಟಮಾಡುವವರ ಖಜಾನೆಗೆ ಸೇರುವುದು.

    ಹಿಂದೆ ಇನ್ಫೋಸಿಸ್‌ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು ಆದರೆ ಈಗ ಹೂಡಿಕೆದಾರರಿಂದ ಸಂಗ್ರಹಿಸಿ ಪ್ರವರ್ತಕರು, ಮತ್ತು ಫಂಡಿಂಗ್‌ ಮಾಡಿರುವವರ ಹಿತದಿಂದ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಇದು ಸ್ವಹಿತಾಸಕ್ತ ಚಟುವಟಿಕೆಯಂತಾಗಿದೆ. ಅಂದರೆ ಐ ಪಿ ಒ ಗಳು ಪ್ರಾಫಿಟಬಲ್‌ ಅನ್ನುವುದಕ್ಕಿಂತ ಚಾರಿಟಬಲ್‌ ರೀತಿಯಾಗುತ್ತಿದೆ. ಐಪಿಒ ಗಳಲ್ಲಿ ಅಲಾಟ್ಮೆಂಟ್‌ ಆದಲ್ಲಿ ಬರಬಹುದಾದ ಲಾಭದ ಹೆಚ್ಚಿನ ಪ್ರಮಾಣವನ್ನು ವಿತರಕರೇ ಸೆಳೆದುಕೊಳ್ಳುವುದರಿಂದ ಆ ಹೂಡಿಕೆ ಹೇಗೆ ಲಾಭದಾಯಕವಾಗುವುದು?

    ಹೂಡಿಕೆ ಹೇಗಿರಬೇಕು?

    ಷೇರುಪೇಟೆಯಲ್ಲಿ ನಡೆಸುವ ಚಟುವಟಿಕೆ ಹೂಡಿಕೆಯಾಗಲಿ ಅಥವಾ ವ್ಯವಹಾರಿಕತೆಯಿಂದಾಗಲಿ ಯಶಸ್ಸು ಕಂಡು ಫಲಪ್ರದವಾಗಲು ಅನುಸರಿಸಬೇಕಾದ ರೀತಿ ಹೇಗಿರಬೇಕೆಂದರೆ ಹೂಡಿಕೆ ಮಾಡಿದ ಷೇರಿನ ಬೆಲೆಯಲ್ಲೂ ಏರಿಕೆ ಕಾಣುವುದರೊಂದಿಗೆ ಆಕರ್ಷಕ ಡಿವಿಡೆಂಡ್‌ ನೀಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಂಪನಿಯು ತನ್ನ ಫಲಿತಾಂಶ ಪ್ರಕಟಿಸಿದಾಗ, ಕಾರ್ಪೊರೇಟ್‌ ಫಲಗಳಾದ ಲಾಭಾಂಶ, ಬೋನಸ್‌ ಗಳನ್ನು ಪ್ರಕಟಿಸಿದಾಗ, ಅಥವಾ ಇತರೆ ಬೆಳವಣಿಗೆಗಳು ಎಂದರೆ, ವಿಲೀನ, ಸಮ್ಮಿಲನ, ಮಿಲನ, ಇತರೆ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಮುಂತಾದವುಗಳನ್ನು ಪ್ರಕಟಿಸಿದಾಕ್ಷಣ ಕಂಡ ಬೆಲೆ ಏರಿಕೆಗೆ ಹೊಸ ಹೂಡಿಕೆಗೆ ಸ್ಪಂದಿಸದೆ, ಸ್ವಲ್ಪ ಸಮಯದ ನಂತರ ಷೇರಿನ ಬೆಲೆ ಕುಸಿತ ಕಂಡಾಗ ಅದನ್ನು ವ್ಯಾಲ್ಯು ಪಿಕ್‌ ಎಂದು ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ.

    ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು. ಆದರೆ ಷೇರಿನ ಬೆಲೆಯೇ ಗರಿಷ್ಠದಲ್ಲಿದ್ದಾಗ ಖರೀದಿ ಮಾಡಿದಲ್ಲಿ ಆ ಹೂಡಿಕೆಯು ಚಾರಿಟಬಲ್‌ ಶೈಲಿಯಾಗುತ್ತದೆಯೇ ಹೊರತು, ಲಾಭ ಗಳಿಕೆಯ ದೃಷ್ಠಿಯಿಂದ ಸರಿಯಲ್ಲ. ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಮಾರಾಟಮಾಡಿ ಹೊರಬಂದು, ಮತ್ತೊಮ್ಮೆ ಕುಸಿದಾಗ ಅದನ್ನೇ ಮರುಖರೀದಿ ಮಾಡಿದಲ್ಲಿ ಹೂಡಿಕೆಯ ಹೊರೆಯನ್ನು ತಗ್ಗಿಸಿಕೊಂಡಂತಾಗಿ ಹೂಡಿಕೆ ಫಲಪ್ರದವಾಗುತ್ತದೆ. ಉತ್ತಮ ಸಾಧನೆಯ ಅಗ್ರಮಾನ್ಯ ಕಂಪನಿಗಳೂ ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ಕಾರಣಗಳಿಂದ ಭಾರಿ ಏರಿಳಿತ ಪ್ರದರ್ಶಿಸುವ ಕಾರಣ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದ ಅವಕಾಶ ವಂಚಿತರಾಗುವಂತೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ಯಾಂಕ್‌ ಗಳ RTGS ಶೈಲಿಯಂತೆ ಷೇರುಪೇಟೆಯ ಚಟುವಟಿಕೆಯಲ್ಲಿ RTMS ( REAL TIME MARKET STRATEGY) ನಿಯಮ ಅಳವಡಿಸಿಕೊಂಡು ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಸುವ ಪ್ರಯತ್ನವು ಒಳಿತಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    JIVA at Home : UVನೀರೇ ಆಗಲಿ ROನೀರೇ ಆಗಲಿ ಅದು JIVA ಮೂಲಕವೇ ಹಾದು ಬರಲಿ

    ಡಾ. ಕೃಷ್ಣ ಮಾದಪ್ಪ

    ವಿಶ್ವಾದಾದ್ಯಂತ ಈಗಲೂ ಕೋಟ್ಯಂತರ ಜನರು ಕುಡಿಯಲು ಶುದ್ಧ ನೀರು ಸಿಗದೆ ಪರದಾಡುತ್ತಿದ್ದಾರೆ.  ಸರಕಾರಗಳು ಹಲವು ಹತ್ತು ಯೋಜನೆಗಳನ್ನು ರೂಪಿಸಿದ್ದರೂ  ಅವುಗಳ ಪ್ರಯೋಜನ ಎಲ್ಲರಿಗೂ ಸಿಗುತ್ತಿಲ್ಲ.

    ನೀರಿನಿಂದಲೇ ಜೀವನ. ನೀರು ಇಲ್ಲದಿದ್ದರೆ ಜೀವನವಿಲ್ಲ ಎಂದು ಹೇಳುವಷ್ಟು ನೀರಿನ ಅಗತ್ಯ ಸರ್ವ ಜೀವಿಗಳಿಗೂ ಇದೆ. ಮನುಷ್ಯನ ದೇಹದಲ್ಲಿ ಶೇ 65 ಭಾಗ ನೀರಾದರೆ, ಅಂಬಲಿ ಮೀನಿನ ದೇಹದಲ್ಲಿ ಶೇ 95 ಭಾಗ ನೀರು ಇದೆ. ಅದೇ ರೀತಿ ಜಲವಾಸದ ಸಸ್ಯಗಳಲ್ಲಿ ಶೇಕಡಾ 70 ರಿಂದ 80 ಭಾಗ ನೀರು ಇದ್ದರೆ, ಶುಷ್ಕಪ್ರದೇಶದ ಕೆಲವು ಸಸ್ಯಗಳು ಕೇವಲ ಪ್ರತಿಶತ 4 ರಿಂದ 5 ರಷ್ಟು ಮಾತ್ರ ನೀರನ್ನು ಉಳಿಸಿಕೊಂಡು ಬದುಕುತ್ತವೆ.

    ಭೂಮಿಯ ಸುಮಾರು ಶೇ 70 ಭಾಗ ನೀರಿನಿಂದ ಆವರಿಸಿಕೊಂಡಿದೆ. ಈ 70 ಶೇಕಡ ನೀರಿನಲ್ಲಿ ಶೇಕಡ 97.5ರಷ್ಟು ಭಾಗ ಸಮುದ್ರದ ಉಪ್ಪುನೀರಿನ ರೂಪದಲ್ಲಿದೆ. ಉಳಿದ ಶೇಕಡ 2.5ರಷ್ಟು ನೀರಿನಲ್ಲಿ ಶೇಕಡ 90 ರಷ್ಟು ನೀರಿನ ಪ್ರಮಾಣ ಮಂಜುಗಡ್ಡೆಯ ರೂಪದಲ್ಲಿದೆ. ಇನ್ನುಳಿದ ಶೇಕಡ 0.26 ಭಾಗ ನೀರು ಮಾತ್ರ ಭೂಚರ ಜೀವಿಗಳಿಗೆ ಬಳಸಲು ಯೋಗ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ನೀರು ಭೂಮಿಯಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಇರುವ ಪ್ರಮಾಣದ ಎಲ್ಲಾ ನೀರು ಬಳಸಲು ಯೋಗ್ಯವೂ ಅಲ್ಲ .

    ಇನ್ನು ಕೆಲವರಿಗೆ ಸುರಕ್ಷಿತ ನೀರು ಮರೀಚಿಕೆ

    ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ  ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇಕಡ 75 ರಷ್ಟು ಮಂದಿಗೆ (5.8 ಬಿಲಿಯನ್) ಮಾತ್ರ ಸುರಕ್ಷಿತವಾದ ನೀರು ಬಳಸಲು ಸಿಗುತ್ತಿದೆ.  ಇನ್ನುಳಿದವರು  ಕಲುಷಿತ ನೀರನ್ನೇ ಸೇವಿಸಬೇಕಾದ ಸ್ಥಿತಿ ಇದೆ. ವಿಶ್ವದಲ್ಲಿ 2 ಬಿಲಿಯನ್ ಮಂದಿ ಈಗಲೂ ಅಸುರಕ್ಷಿತ ನೀರನ್ನೇ ಬಳುಸುತ್ತಿದ್ಗಾರೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ 4 85 000  ಮಂದಿ ಜಲ ಸಂಬಂಧೀ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

    ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೋದಿ ಸರಕಾರ ಬಂದ ನಂತರ ಜಲಶಕ್ತಿ ಮಿಷನ್  ಮೂಲಕ ಗ್ರಾಮೀಣ ನೀರು ಪೂರೈಕೆಗೆ ಆದ್ಯತೆ ನೀಲಾಗಿದೆಯಾದರು ಇನ್ನು  ಗುರಿ ತಲುಪಲು ಸಾಧ್ಯವಾಗಿಲ್ಲ. 2015ರ ವೇಳೆಗೆ ಭಾರತದಲ್ಲಿ ವ್ವವಸ್ಥಿತ ನೀರು ಸರಬರಾಜಿನಲ್ಲಿ ಶೇಕಡ  92 ರಷ್ಟು ಪ್ರಗತಿ ಸಾಧಿಸಲಾಗಿದೆ.  ಆದರೆ ಸುರಕ್ಷಿತ ನೀರಿನ ಬಳಕೆ  ಜನಸಂಖ್ಯೆಯ ಶೇಕಡ 50ನ್ನು ದಾಟಿಲ್ಲ.  ರಾಸಾಯನಿಕ ಯುಕ್ತ, ಫ್ಲೋರೈಡ್ ಯುಕ್ತ ನೀರಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ.

    ಜನಶಕ್ತಿ ಮಿಷನ್ ಕೊಳವೆ ಮೂಲಕ ಮನೆಗಳಿಗೆ ತಲುಪುಸುತ್ತಿರುವ ನೀರಿನ ಚಿತ್ರಣ ಗಮನಿಸಿ.

    ಸುರಕ್ಷತೆಯ ಹೆಸರಲ್ಲಿ ರಸಾಯಿನಿಕ ಬಳಕೆ

    ಮನೆ ಮನೆಗೆ ನೀರನ್ನೇನೋ ನಾವು ತಲುಪಿಸುತ್ತಿದ್ದೇವೆ.ಆದರೆ ನೀರನ್ನು ಸುರಕ್ಷಿತ ಗೊಳಿಸುವ ನಿಟ್ಟಿನಲ್ಲಿ ಅನೇಕ ರಸಾಯಿನಿಕಗಳನ್ನು ಬಳಸುವ ನಾವು ಒಂದು ಪ್ರಮುಖ ಅಂಶವನ್ನು ಮರೆತು ಬಿಡುತ್ತೇವೆ.  ಪರಿಶುದ್ಧವಾದ ನೀರಿಗೆ ವಾಸನೆ , ಬಣ್ಣ ಮತ್ತು ಆಕಾರವಿಲ್ಲವೆಂದು    ವಿಜ್ಞಾನ ಹೇಳುತ್ತದೆ.  ಅದರ ಜೊತೆಗೆ ಅದರಲ್ಲಿ ಶಕ್ತಿಯೂ ಇರುತ್ತದೆ. ಆದರೆ ನಾವು ಸುರಕ್ಷತೆಯ ಹೆಸರಲ್ಲಿ ನೀರಿನ ಅಸಲಿ ಗುಣವನ್ನೇ ಕೊಲ್ಲುತ್ತಿದ್ದೇವೆ.   ಶಕ್ತಿ ಇಲ್ಲದ ನೀರು ಅನೇಕ  ರೋಗಗಳಿಗೆ ಕಾರಣವಾಗುತ್ತಿದೆ.

    ನೀರಿನ ಸುರಕ್ಷಿತ ಗೊಳಿಸುಸ ನಿಟ್ಟಿನಲ್ಲಿ ನಾವು ಅದಕ್ಕೆ ಸಾಮಾನ್ಯವಾಗಿ ಇಂದು  Reverse Osmosis ಟ್ರೀಟ್ ಮೆಂಟ್ ಕೊಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಅನೇಕ ಕಡೆ ಸುರಕ್ಷಿತ ನೀರಿಗಾಗಿ RO ಪ್ಲಾಂಟ್ ಗಳನ್ನು ನಿರ್ಮಿಸಿರುವುದನ್ನು ಕಾಣುತ್ತಿದ್ದೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬ ಅಧ್ಯಯನ ನಡೆದಿರಲಿಲ್ಲ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಇಂಥ ನೀರು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಲ್ಲ ಎಂದು ಹೇಳಿರುವುದು ಅನೇಕ ಪ್ರಶ್ನೆಗಳನ್ನು ಎತ್ತಿದೆ.

    The presence of minimum/optimum concentration of calcium and magnesium in drinking water signify “energy content”. RO machines are very effective in cleaning water, but they remove calcium and magnesium, the elements responsible for producing energy….ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಂದರೆ RO ಯಂತ್ರಗಳು ನೀರನ್ನು ಶುದ್ಧ ಮಾಡುತ್ತವೆ. ಇವು ಎಷ್ಟರ ಮಟ್ಟಿಗೆ ಶುದ್ಧ ಮಾಡುತ್ತವೆ ಎಂದರೆ ನೀರಿನಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನೇ ನಾಶ ಮಾಡಿಬಿಡುತ್ತವೆ.

    ಏನಿದು RO  ಟ್ರೀಟ್ ಮೆಂಟ್?

    RO  ಟ್ರೀಟ್ ಮೆಂಟ್ ನ ವಿಸ್ತ್ರೃತ ರೂಪ Reverse Osmosis. ಅಂದರೆ ನೀರನ್ನು  semipermeable membrane ಮೂಲಕ  ಒಂದು ನಿಗದಿತ ಒತ್ತಡದಲ್ಲಿ ಹಾಯಿಸಿದಾಗ ನೀರಿನಲ್ಲಿರುವ ಬ್ಯಾಕ್ಟೀರಿಯಾ ಸಹಿತ ಲವಣಾಂಶಗನ್ನು ಅದು ಬೇರ್ಪಡಿಸಿ ಶುದ್ಧ ನೀರನ್ನು ನೀಡುತ್ತದೆ. ಇದುವರೆವಿಗೂ ಈ ನೀರು ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿತ್ತು. ಆದರೆ ಕಳೆದ  ಜೂನ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮೇಲಿನ ಎಚ್ಚರಿಕೆ ಈ ನಂಬಿಕೆಯನ್ನು ಬುಡ ಮೇಲು ಮಾಡಿದೆ.  ಫಿಲ್ಟರ್ ಗಳು  ನೀರಿನ  ಕ್ಯಾಲ್ಯಿಯಮ್ ಮತ್ತು ಮ್ಯಾಗ್ನೇಷಿಯಂಗಳನ್ನು ಸಹ ನಾಶ ಮಾಡುವುದರಿಂದ  ನೀರಿನಿಂದ ದೇಹಕ್ಕೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳು ಸಿಗುವುದೇ ಇಲ್ಲ.  ಇದು ದೀರ್ಘಕಾಲದಲ್ಲಿ ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

     ಅಮೆರಿಕ, ಜರ್ಮನಿ ಮತ್ತು ರಷ್ಯಾಗಳು  ಈಗಾಗಲೇ   RO ನೀರಿಗೆ ಗುಡ್ ಬೈ ಹೇಳಿವೆ. ಅವು ಈಗ ನೀರಿನ ಶುದ್ದತಗೆ ಆಕ್ಟಿವೇಟಡ್ ಕಾರ್ಬನ್ ಬಳಸುತ್ತಿವೆ. ಆದರೆ ಭಾರತದಂಥ ದೇಶದಲ್ಲಿ ಇನ್ನೂ ಕೈಗಾರಿಕೆ ಮತ್ತುಬಳಕೆಗ  RO  ನೀರನ್ನೇ ಬಳಸುತ್ತಿವೆ.

    ಈಗ ನಮ್ಮ ನಗರಗಳನ್ನು ನೋಡಿ ನಲ್ಲಿಯಲ್ಲಿ ಬರುವ ನೀರು ಮನೆಯ ಮೇಲಿನ ಟ್ಯಾಂಕ್ ನಲ್ಲಿ ಸಂಗ್ರಹವಾಗುತ್ತದೆ.  ಅದನ್ನು ಕುಡಿಯಲು ಯೋಗ್ಯವಾಗಬೇಗಾಕದರೆ ಅದು RO ಫಿಲ್ಟರ್ ನಿಂದಲೇ ಹಾದು ಬರಬೇಕಾದ ಸ್ಥಿತಿ ಇದೆ.  ಶೇಖರಿಸಿ ಇಟ್ಟ ನೀರು ಸಹಜವಾಗಿ ಶಕ್ತಿ ಹೀನವಾಗಿರುತ್ತದೆ. ಇನ್ನು ಇದು RO ಟ್ರೀಟ್ ಗೆ ಒಳಗಾದಗ ಇದ್ದ ಬದ್ದ ಶಕ್ತಿಯೆಲ್ಲಾ ಕಳೆದು ಹೋಗುತ್ತದೆ.   ಹುಟ್ಟಿದಾಗಿನಿಂದ ಇಂಥ  ನೀರನ್ನೇ ಕುಡಿದ ಮಕ್ಕಳ ಆರೋಗ್ಯ ಮೇಲೆ ಇದು ಖಂಡಿತವಾಗಿಯೂ  ಪರಿಣಾಮ ಬೀರುತ್ತದೆ ಎಂದು  ವೈದ್ಯರೊಬ್ಬರ ಹೇಳಿಕೆಯನ್ನು ದಿ ಟೈಮ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

    RO ನೀರಿನ ಬಗ್ಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಕೂಡ ದನಿ ಎತ್ತಿದೆ.ಪ್ರತಿ ಒಂದು ಲೀಟರ್ ನೀರಿನಲ್ಲಿ  ಟೋಟಲ್ ಡಿಸ್ಲಾವಡ್ ಸಾಲಿಡ್ 500 ಮಿಲಿಗ್ರಾಂ ಗಿಂತ ಕಡಿಮೆ ಇರುವೆಡೆ ನೀರಿಗೆ  RO ಟ್ರೀಟ್ ಮೆಂಟ್ ಅಗತ್ಯ ಇಲ್ಲ ಎಂದಿದೆ. 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್ ಇರುವ ಕಡೆ  RO ವಾಟರ್ ಫ್ಯೂರಿಫೈಯರ್ ಗಳ ಬಳಕೆ ನಿಷೇಧಿಸಿ ಆದೇಶ ಹೊರಡಿಸುವಂತೆ ಕೇಂದ್ರ ಪರಿಸರ  ನಿಯಂತ್ರಣ ಮಂಡಳಿಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ಸೂಚನೆಗೆ ತಡೆಯಾಜ್ಳೆ ನೀಡಿದೆ.

    ಕಾನೂನು ಸಮರಗಳು ಒತ್ತಟ್ಟಗಿರಲಿ. ಹಾಗಾದರೆ ಶುದ್ಧ  ಸುರಕ್ಷಿತ ನೀರು ಪಡೆಯುವುದು ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ.  ಹಾಗೆಂದು ನಾವು  ನಲ್ಲಿಯಲ್ಲಿ ಬರುವ ನೀರನ್ನೇ ನೇರವಾಗಿ  ಸೇವಿಸಲು ಆಗುತ್ತದೆಯೇ ? ಅದು ಇನ್ನೊಂದು ರೀತಿಯ ತೊಂದರೆಯನ್ನು ಆಹ್ವಾನಿಸಿದಂತೆ ಆಗುತ್ತದೆ.  ನಗರಪಾಲಿಕೆಗಳು ಸರಬರಾಜು ಮಾಡುವ ನೀರಿನ ಕೊಳುವೆಗಳು ಸುರಕ್ಷಿತ ಎಂದು ನಾವು ಎಷ್ಟರ ಮಟ್ಟಗೆ ಭಾವಿಸಬಹುದು. ಹಲವೆಡೆ  ಡ್ರೈನೇಜ್ ಪೈಪ್ ಹಾಗೂ ನೀರು ಸರಬರಾಜು ಪೈಪ್ ಬೆಸೆದು ಕೊಂಡಿರುವುದು ಭಾರತದಂಥ ದೇಶದಲ್ಲಿ ಅಪರೂಪವೇನು ಅಲ್ಲ.  ಇಂಥ ನೀರಿನಲ್ಲಿ ಶಕ್ತಿ ಇರಬಹುದು . ಆದರೆ ಶಕ್ತಿಯ ಜೊತಗೆ ರೋಗಾಣುಗಳು ಇರುತ್ತವಲ್ಲ. ಹೀಗಾಗಿ ಇಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ.

    1. ನೀರು ಶುದ್ಧವಾಗಿರಬೇಕು. ಅದರಲ್ಲಿ  ರೋಗಾಣುಗಳು ಇರಬಾರದು.
    2. ರೋಗಾಣು ಮುಕ್ತ ನೀರು  ನೀರಿನ ಸಹಜ ಗುಣಗಳನ್ನು ಕಳದುಕೊಳ್ಳಬಾರದು .

    ಈ ಎರಡು ಪ್ರಶ್ನೆಗಳಿಗೆ ನಮ್ಮಲ್ಲಿರುವ ಉತ್ತರ ಒಂದೇ ಅದು ಹೊಸ ಸಂಶೋಧನೆ ಜೀವ. (JIVA WATER) ಈ ಶತಮಾನದ ಕ್ರಾಂತಿಕಾರಿ ಆಿವಿಷ್ಕಾರ ವಾದ ಜೀವನನ್ನು ಬಳಸುವುದರಿಂದ ಶುದ್ಧ ಹಾಗೂ ನೀರಿನ ಎಲ್ಲಾ ಸಹಜ ಗುಣಗಳನ್ನು ಹೊಂದಿದ ಶಕ್ತಿ ತುಂಬಿದ ನೀರನ್ನು ನಾವು ಪಡೆಯಬಹುದು. ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿದ ಚಮತ್ಕಾರಿ ಸಾಧನ. ನಮ್ಮ ವೇದಗಳಲ್ಲಿ ಅಡಗಿರುವ ಸೂತ್ರದ ಮೇಲೆ ಸಿದ್ಧಗೊಂಡ ಸಾಧನ. ( ಜೀವ ಬಗ್ಗೆ ಅರಿಯಲು ಈ ಲೇಖನವನ್ನು ಓದಿ: JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ )

    ಆರೋಗ್ಯದ ಸಮಸ್ಯೆಗಳಿಗೆ ಯಾಮಿ ಪರಿಹಾರ

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ ಈ ನಾಲ್ಕು ಮಾದರಿಯಲ್ಲಿ ಸಿದ್ಧಗೊಂಡ ಜೀವ ಸಾಧನದಲ್ಲಿ ಯಾಮಿ ನಮ್ಮ ಆರೋಗ್ಯದ ಸಮಸ್ಯೆಗಳಿಗೆ ಉತ್ತರ ಹೇಳಬಲ್ಲದು. ಜೀವದಿಂದಲೇ ಸಾಗಿ ಬಂದ ನೀರಿಗೆ ಶಕ್ತಿ ಸಂಚಯವಾಗುವುದರಿಂದ ಸಹಜವಾಗಿಯೇ ಈ ನೀರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

    ಯಾಮಿ

    ಬೆಂಗಳೂರಿನಂಥ ನಗರದಲ್ಲಿ ನಲ್ಲಿಯ ನೀರಿಗೆ RO ಟ್ರೀಟ್ ಮೆಂಟ್ ಅಗತ್ಯ ಇರುವುದಿಲ್ಲ. ಇಲ್ಲಿನ ನೀರಿಗೆ UV ಟ್ರೀಟ್ ಮೆಂಟ್ ಸಾಕಾಗುತ್ತದೆ. ಆದರೆ ಈ ನೀರು ಜೀವ-JIVA- ಸಾಧನದ ಮೂಲಕ ಹಾದು ಬಂದರೆ ಅದು ನೀರಿನ ಸಹಜ ಶಕ್ತಿಯನ್ನು ಸಂಪಾದಿಸುತ್ತದೆ. ಒಂದೆಡೆ UV ಟ್ರೀಟ್ ಮೆಂಟ್ ಮೂಲಕ ನೀರು ಬ್ಯಾಕ್ಟೀರಿಯಾ ಮುಕ್ತವಾಗಿದೆ. ಆದರೆ ಅದರಲ್ಲಿ ಜೀವ ಇರುವುದಿಲ್ಲ. ಆ ನೀರು ಜೀವ ಸಾಧನದ ಮೂಲಕ ಸಾಗಿದಾಗ ನೀರಿನ ಎಲ್ಲಾ ಸಹಜ ಗುಣಗಳು ಮರಳಿ ಸಂಚಯವಾಗುತ್ತದೆ. ಅಂದರೆ ಸೇವಿಸಲು ಈ ನೀರು ಫರ್ಫೆಕ್ಟ್. ಮಂಗಳೂರಿನಂಥ ಸಮುದ್ರ ತೀರದಲ್ಲಿ ನೀರಿಗೆ RO ಟ್ರೀಟ್ ಮೆಂಟ್ ಅಧಿಕವಾಗಿರುತ್ತದೆ. ಇಂಥ ನೀರನ್ನು ಎರೆಡೆರಡು ಬಾರಿ ಜೀವ ಮಾಡಿದಾಗ ನೀರಿನ ಸಹಜ ಶಕ್ತಿ ಮರುಕಳಿಸುತ್ತದೆ. ನಿಮ್ಮ ಯಾವುದೇ ನೀರಿನ ಫಿಲ್ಟರ್ ಗೆ ಯಾಮಿ ಸಾಧನ ಅಳವಡಿಸಿಕೊಳ್ಳಿ .

    ಬೆಂಗಳೂರಿನಂಥ ಊರಿನಲ್ಲಿ ಜೀವ ನೀರಿನಿಂದ ಆರೋಗ್ಯ ಸುಧಾರಿಸಿದ, ಕೂದಲು ಉದುರುವುದು ಕಡಿಮೆಯಾದ ಅನೇಕ ಉದಾಹರಣೆಗಳು ಸಿಗುತ್ತಿವೆ. ಹೀಗಾಗಿ ಜೀವ ನೀರು ಪರಿಶುದ್ಧ, ಆರೋಗ್ಯಕರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

    ನಾವು ಕುಡಿಯುವ ನೀರು ಶುದ್ಧವಾಗಿರಲಿ, ಶಕ್ತಿಯುತ್ತವಾಗಿರಲಿ ಎಲ್ಲಕಿಂತ ಹೆಚ್ಚಾಗಿ ಅದರಲ್ಲಿ ಜೀವ ಇರಲಿ. ವಿಶ್ವ ಜಲದಿನದಂದು ಇದೇ ನಮ್ಮ ಸಂಕಲ್ಪವಾಗಲಿ.


    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು


    ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ. ನೀರಿಗೆ ಜೀವ ತುಂಬುವ ಜೀವ ಸಾಧನ ಇವರದೇ ಸಂಶೋಧನೆ.

    error: Content is protected !!