37 C
Karnataka
Tuesday, April 22, 2025
    Home Blog Page 25

    ಏಪ್ರಿಲ್ 1 ರಿಂದ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಹೊರಡಿಸಲು ಮುಖ್ಯಮಂತ್ರಿ ಸೂಚನೆ

    BENGALURU MAR 17
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

    2022-23 ನೇ ಸಾಲಿನ ಆರ್ಥಿಕ ವರ್ಷ ಆರಂಭದ ಮೊದಲ ದಿನವಾಗಿರುವ ಏಪ್ರಿಲ್ 1 ರಿಂದಲೇ ಬಜೆಟ್ ಘೋಷಿತ ಯೋಜನೆಗಳ ಜಾರಿಗೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಖುದ್ದು ಎಲ್ಲ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಯವರು, ಆಯವ್ಯಯ ದಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಉಲ್ಲೇಖಿಸಿ, ಈ ಕುರಿತು ಇಲಾಖೆಯಿಂದ ಯೋಜನೆಯ ರೂಪುರೇಷೆಗಳ ಕುರಿತು ಪ್ರಸ್ತಾವನೆ ಸಿದ್ಧ ಪಡಿಸಿ, ಆರ್ಥಿಕ ಇಲಾಖೆಯ ಆಯವ್ಯಯ ಸಲಹೆಯಂತೆ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸೂಚಿಸಿದ್ದಾರೆ.ಅಲ್ಲದೆ, ಈ ಯೋಜನೆಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸುವಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ.

    ಪದವಿ, ನರ್ಸಿಂಗ್, ಪಿ.ಜಿ. ವಿದ್ಯಾರ್ಥಿಗಳಿಗೂ ಟ್ವಿನ್ನಿಂಗ್ ಯೋಜನೆ ವಿಸ್ತರಣೆ

    BENGALURU MAR 17

    ಸದ್ಯಕ್ಕೆ ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದರು.

    ವಿಕಾಸಸೌಧದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ರಾಯಭಾರಿ ಕನ್ನಿಕಾ ಚೌಧರಿ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.

    ‘ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳು ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಓದುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಇದನ್ನು ವಿಸ್ತರಿಸಬೇಕಾದ ಅಗತ್ಯವಿದ್ದು, ಇದು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಪೂರಕವಾಗಿರಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

    ಉದ್ದೇಶಿತ ಗುರಿಯನ್ನು ಸಾಧಿಸಬೇಕೆಂದರೆ ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜ್, ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಇಂಡಿಯಾನಾ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ಹ್ಯೂಸನ್ ಯೂನಿವರ್ಸಿಟಿ, ಥಿಯಲ್ ಕಾಲೇಜು ಮತ್ತು ಅಲ್ವರ್ನಿಯಾ ಹಾಗೂ ಮಿಸರಿಕಾರ್ಡಿಯಾ ವಿ.ವಿ.ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಕನ್ನಿಕಾ ಅವರು ಸಭೆಗೆ ತಿಳಿಸಿದರು.

    ಟ್ವಿನ್ನಿಂಗ್ ಕಾರ್ಯಕ್ರಮದಡಿ ನಮ್ಮ ವಿದ್ಯಾರ್ಥಿಗಳನ್ನು ಪದವಿ/ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿ.ವಿ.ಗಳಿಗೇ ನೇರವಾಗಿ ಕಳುಹಿಸಿ ಕೊಡಲಾಗುವುದು. ವೇತನಸಹಿತ ಇಂಟರ್ನ್-ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಅಲ್ಲದೆ, ಇಷ್ಟವಿರುವವರು ಅಮೆರಿಕದಲ್ಲೇ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶವಿರಲಿದೆ ಎಂದು ಸಚಿವರು ವಿವರಿಸಿದರು.

    ಒಡಂಬಡಿಕೆಗಳು ಜಾರಿಗೆ ಬಂದರೆ 6 ವರ್ಷಗಳ ಟ್ವಿನ್ನಿಂಗ್ ಡಿಗ್ರಿ, 5 ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, 4 ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ (ಇಂಟಿಗ್ರೇಟೆಡ್) ಮತ್ತು ಎಂ.ಎಸ್.ಬಯೋಕೆಮಿಸ್ಟ್ರಿ (ಇಂಟಿಗ್ರೇಟೆಡ್) ಪದವಿ ಹೊಂದಲು ಅವಕಾಶ ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.

    ಅಲ್ಲದೆ, `ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಮತ್ತು ಆರೋಗ್ಯ ವ್ಯವಸ್ಥಾಪನಾ ಪದವಿಗಳಿಗೆ ತುಂಬಾ ಬೇಡಿಕೆ ಇದೆ. ಇದನ್ನು ಗುಣಮಟ್ಟದೊಂದಿಗೆ ಕಲಿಸಬೇಕಾದ್ದು ಅಗತ್ಯವಿದೆ. ಇಂತಹ ಕೋರ್ಸುಗಳಿಗೆ ಆಗುವ ವೆಚ್ಚ ಮತ್ತು ಅದರ ಸ್ವರೂಪ ಹೇಗಿರಬೇಕು, ಇದನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದನ್ನು ಅಧಿಕಾರಿಗಳು ಕೆಲವೇ ದಿನಗಳಲ್ಲಿ ಆಖೈರುಗೊಳಿಸಬೇಕು ಎಂದು ಅವರು ಹೇಳಿದರು.

    ಇಂತಹ ಒಡಂಬಡಿಕೆಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಆಯ್ಕೆಯಾಗುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಗುಲುವ ವೆಚ್ಚವನ್ನು ಸರಕಾರವೇ ಸಂಪೂರ್ಣವಾಗಿ ಭರಿಸಲು ಅವಕಾಶ ಇದೆ. ಅಗತ್ಯ ಬಿದ್ದರೆ ಬ್ಯಾಂಕ್ ಸಾಲಕ್ಕೆ ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ಅವರು ನುಡಿದರು.

    ಹ್ಯಾರಿಸ್ಬರ್ಗ್ ವಿವಿ ಜತೆ ಒಡಂಬಡಿಕೆಗೆ ಬೆಂಗಳೂರು ನಗರ ವಿವಿ ಆಸಕ್ತಿ
    ಇಂಗ್ಲಿಷ್ ಕಲಿಕೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಇಂಟಿಗ್ರೇಟೆಡ್ ಪದವಿಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯುಳ್ಳ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಪರಸ್ಪರ ಪತ್ರ ಮತ್ತು ದಾಖಲಾತಿಗಳನ್ನು ಬುಧವಾರ ವಿನಿಮಯ ಮಾಡಿಕೊಂಡಿವೆ.

    ಬೆಂಗಳೂರು ನಗರ ವಿವಿ ಪರವಾಗಿ ಕುಲಪತಿ ಡಾ.ಲಿಂಗರಾಜ ಗಾಂಧಿ ಮತ್ತು ಹ್ಯಾರಿಸ್ಬರ್ಗ್ ವಿ.ವಿ ಪರವಾಗಿ ಕನ್ನಿಕಾ ಚೌಧರಿ ಆವರು ಈ ದಾಖಲಾತಿಗಳನ್ನು ಪರಸ್ಪರ ಹಸ್ತಾಂತರಿಸಿಕೊಂಡರು.

    ಈ ಒಪ್ಪಂದ ಅಂತಿಮರೂಪ ಪಡೆದುಕೊಂಡ ನಂತರ ಬೆಂಗಳೂರು ನಗರ ವಿ.ವಿ. ವಿದ್ಯಾರ್ಥಿಗಳು ಹ್ಯಾರಿಸ್ಬರ್ಗ್ ವಿ.ವಿ.ಯಲ್ಲಿ ನಡೆಯುವ ಇಂಗ್ಲಿಷ್ ಕಲಿಕಾ ಕಾರ್ಯಕ್ರಮಗಳ ಲಾಭವನ್ನು ಪಡೆಯಬಹುದು. ಜತೆಗೆ, ಅಮೆರಿಕದ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಬಹುದು ಅಥವಾ ಅವುಗಳಿಗೆ ಹಾಜರಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಅಲ್ಲದೆ, ವಿದ್ಯಾರ್ಥಿ ವಿನಿಮಯ ಉಪಕ್ರಮದಡಿ ಇಲ್ಲಿನ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಇಂಟಿಗ್ರೇಟೆಡ್ ಡಿಗ್ರಿ ಅಧ್ಯಯನ ಮಾಡಬಹುದು ಎಂದು ಹೇಳಲಾಗಿದೆ.

    ಡಿ.ವಿ.ಜಿಯವರ ಅಂತಃಪುರಗೀತೆಗಳಲ್ಲಿ ಬೇಲೂರು ಮದನಿಕೆಯರು

    ಸುಮಾ ವೀಣಾ

    ವಿಶ್ವಚೇತನದ ಸ್ಪಂದನವೇ ಸೌಂದರ್ಯಂ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು- ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ  ಸೃಷ್ಠಿ ಹಾಗು ದೃಷ್ಠಿಯ ಶುಭ ಹೊನಲು. ಸೌಂದರ್ಯವನ್ನು ಹಿಗ್ಗಿಸುವ ಸಾಧನ ಶೃಂಗಾರ. ಆಧುನಿಕ ಸರ್ವಜ್ಞ ಎಂದು ಕರೆಸಿಕೊಂಡಿರುವ ಡಿ.ವಿ.ಜಿ. ಇಲ್ಲಿ ಜಗತ್ತಿನ ರಸಿಕನೇ ಆಗಿ ‘ಆಂತ:ಪುರಗೀತೆ’ ಎಂಬ ಕೃತಿಯನ್ನು  ರಚಿಸಿ ರಸಿಕರ ಕೈಗಿತ್ತಿದ್ದಾರೆ. ಕೇಶವ ಅಂತಃಪುರದ ನಾಯಕನಾದರೆ ಶಿಲಾಬಾಲಿಕೆಯರು ಆತನ ಮನದನ್ನೆಯರು. ನಾಟ್ಯ, ಸಂಗೀತ, ಕಾವ್ಯಗಳ ರಸಾಯನವೇ ಅಂತಃಪುರಗೀತೆಗಳು ಕೃತಿ. ದೇವಾಲಯವನ್ನು ಆಶ್ರಯಿಸಿ ಅದಕ್ಕೆಂದೇ ಪ್ರತ್ಯೇಕ ಕೃತಿ ರಚನೆಯಾದ ಉದಾಹರಣೆ ನಮ್ಮಲಿಲ್ಲ. ಅದಕ್ಕೆ ಅಪವಾದವೆಂಬಂತೆ ನಾಯಕ, ನಾಯಕಿಯರ ಹಾವ, ಭಾವ, ನೃತ್ಯ ವಿಲಾಸಕ್ಕೆ ಪೂರಕವಾಗಿ ಶಿಲ್ಪವನ್ನು ಆಧರಿಸಿದ ವಿಶಿಷ್ಠ ಕೃತಿ ಅಂತಃಪುರಗೀತೆಗಳು. ಕ್ರಿ.ಶ.1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಈತ ಕನ್ನಡದ ಅರಸ, ಈತನ ಪತ್ನಿ ನಾಟ್ಯರಾಣಿ ಶಾಂತಲೆ ಕನ್ನಡದವಳು, ದೇವಾಲಯ ಕನ್ನಡ ನೆಲದ್ದು, ಕವಿ ಕನ್ನಡಿಗ ಕನ್ನಡಿಗರಿಗೆ ಇದಕ್ಕಿಂತ ಹೆಮ್ಮೆ ಬೇಕೇ?.

    ಕೇಶವ ದೇವಾಲಯವೆಂದರೆ ಮದನಿಕೆಯರ ಕಿನ್ನರಲೋಕ, ಕಲ್ಲಲ್ಲಿ ಅರಳಿದ ಸುಂದರ ಶಿಲ್ಪಗಳ ತವನಿಧಿ, ಸೃಷ್ಠಿಯ ಸಚರಾಚರ ವಸ್ತುಗಳು ಇಲ್ಲಿ ಅಸ್ತಿತ್ವವನ್ನು ಪಡೆದುಕೊಂಡಿವೆ. ಕುವೆಂಪು ಅವರು ಹೇಳುವಂತೆ ಇದು ಕೇವಲ “ಶಿಲೆಯಲ್ಲ ಕಲೆಯ ಬಲೆ, ದಿವ್ಯ ಕಲೆಯ ಭವ್ಯಲೋಕ”. ಚನ್ನಕೇಶವನ ಅಂತರಂಗದ ನಾಯಕಿಯ ವಿವಿಧ ಶೃಂಗಾರ ಭಾವಗಳೇ ಈ ಕೃತಿಯ ಹೂರಣ. ಭೂಮಟ್ಟದಿಂದ 12-15 ಅಡಿಗಳ ಎತ್ತರದಲ್ಲಿ ಸುಮಾರು 300 ಕೋನದಲ್ಲಿ ಮುಂಬಾಗಿ ನಿಂತಿರುವ ಈ ವಿಗ್ರಹಗಳನ್ನು ನೋಟಕರ ದೃಷ್ಠಿಕೋನದಿಂದ ಅವುಗಳ ಸೌಂದರ್ಯ ಸಹಜವಾಗಿ ಕಾಣುವಂತೆ ಪ್ರದರ್ಶಿಸಲಾಗಿದೆ. ಮದನಿಕೆಯರ ಮುಖಮುದ್ರೆ ಹಾವ ಭಾವ-ವಿಲಾಸಗಳೆ ಎರಕವಾಗಿರುವ ಇಲ್ಲಿನ ಶಿಲ್ಪಿಗಳು ಪ್ರಮಾಣಬದ್ದ ಸ್ಫುರದ್ರೂಪಿಗಳು, ಅಡಿಯಿಂದ ಮುಡಿಯವರೆಗೆ ಶಿಲಾ ಆಭರಣಗಳನ್ನೇ ತೊಟ್ಟು ಮೆರೆಯುತ್ತಿರುವ ಈ ಶಿಲ್ಪಗಳಿಗೆ ಮುಕರಮಗ್ಧೆ, ಶುಕಭಾಷಣಿ, ಮುರಳೀಧರೆ, ವೀಣಾಪಾಣಿ, ಮುರಜಾಮೋದೆ, ನಾಗವೈಣಿಕೆ, ವಿಕಟನರ್ತಿನಿ, ನೀಲಾಂಬರೆ, ವೀಟೀಧರೆ, ಜಯನಿಷಾದಿ ತಾಂಡವೇಶ್ವರಿ ಎಂದು ಕರೆದಿರುವದು ಉಚಿತವಾಗಿದೆ. ಚನ್ನಕೇಶವನ ಆಸ್ಥಾನದ ನಿತ್ಯ ನರ್ತಕಿಯರ ನಿತ್ಯೋತ್ಸವವೇ ರಸಿಕರನ್ನು ಕೇಶವನ ದಿವ್ಯಸಾನ್ನಿಧ್ಯಕ್ಕೆ ಸೆಳೆಯುತ್ತದೆ.

    ‘ಅಂತಃಪುರ ಗೀತೆ’ಗಳು ಬಿಡಿಕವಿತೆಗಳ ಸಂಗ್ರಹ ಕೃತಿ ಜೀವಂತ ಜವ್ವನೆಯರ ಅನುಪಮ ಪ್ರತಿಕೃತಿಗಳೆಂತೆ ಇರುವ ಇವರುಗಳು ವೇದಾಂತ ರಾಜಕಾರಣಕ್ಕೆ  ಇಲ್ಲಿ  ನಾಂದಿ ಹಾಡಿದ್ದಾರೆ. ಇಡೀ ವಿಶ್ವವನ್ನು ಅಂತಃಪುರವನ್ನಾಗಿಸಿ ಭಕ್ತರನ್ನು ಪ್ರೇಮಿಗಳಾಗಿಸಿಕೊಂಡಿರುವ ಕೇಶವನ ಈ ಧೀಃಶಕ್ತಿಗೆ ನಾವು ಮೌನಿಗಳಾಗಲೇಬೇಕು. ಬೇರೆ ಕಾವ್ಯಗಳಲ್ಲಿರುವಂತೆ ನಾಂದಿ ಮುಕ್ತಾಯ, ದೇವೀಸ್ತುತಿ ಮಂಗಳ ಪದ್ಯ ಅವುಗಳ ನಡುವೆ ಕಾವ್ಯ ವಸ್ತು ಹೂರಣವಾಗಿದೆ. ಸ್ವತಃ ಸಂಗೀತ ವಿದ್ವಾಂಸ ಡಿ.ವಿ.ಜಿ ತಾಳ, ರಾಗ, ಪಲ್ಲವಿ ಅನುಪಲ್ಲವಿಗಳೊಂದಿಗೆ ಸ್ಥಿತವಾಗಿರುವ ಈ ಕೃತಿ ಪ್ರಸ್ತಾವನೆಯಲ್ಲಿ ಮದನಿಕೆಯರನ್ನು ಕೇಶವನ ರಾಣಿಯರ್, ಶುಕವಾಣಿಯರ್, ಫಣಿವೇಣಿಯರ್, ಹಾಸ್ಯ ಸಂಜ್ಞೆಯ ನೀರೆಯರ್, ಸುಶರೀರೆಯರ್ ಸಲೆ  ಪಾಡುವರ್, ಕುಣಿದಾಡುವರ್ ಎಂಬ ವಿಶೇಷಣಗಳೊಂದಿಗೆ ವರ್ಣಿಸಿದ್ದಾರೆ. “ಮನುಷ್ಯ ತಾನೇ ತನ್ನ ಆತ್ಮಶಿಲ್ಪ” ಎಂಬ ಮಾತಿನಂತೆ ಚನ್ನಕೇಶವ ಡಿ.ವಿ.ಜಿಯವರ ಪ್ರಕಾರ  ರಸಿಕಾಗ್ರಗಣ್ಯ. ತನ್ನ ಮನದನ್ನೆಯವರ ಸನ್ನೆಯನರಿತು ಸ್ಪಂದಿಸುವ ಲಾವಣ್ಯಮೂರ್ತಿಯಾಗಿದ್ದಾನೆ. ಅಂದರೆ ಕೇಶವ ಲೋಕದ ಜನರ ಮನೋವಾಂಛೆಯನರಿತು ಸಕಲ ಇಷ್ಟಾರ್ಥ ಕರುಣಿಸುವವನಾಗಿದ್ದಾನೆ.

    ಕೃತಿಯ ಪ್ರಾರಂಭಕ್ಕೆ ಪ್ರಸ್ತಾವನೆ ಎಂಬ ಶೀರ್ಷಿಕೆಯಡಿ 25 ಕಂದ ಪದ್ಯಗಳ ಮೂಲಕ ಕೃತಿಗೆ ಮುಂದಡಿಯಿಡುತ್ತಾರೆ. ಬೇಲೂರ ಶಿಲಾಬಾಲಾಮಣಿಯರ್, ಮದನಿಕೆಯರ್, ಸ್ಮರಗುಣನಿಕೆಯರ್ ಮಧುಕರಣಿಕೆಯರ್, ವಿರಾಡ್ರಾಸಾವೇಶಿತಸತ್ವಶೀಲೆಯರ್ ಸಿರಿಕೇಶವನ ರಸವೈಭವಕ್ಕೆ ಒತ್ತಾಸೆಯಾಗಿದ್ದಾರೆ ಎಂದು ಹೇಳಿದ್ದಾರೆ.ನಿಜಕಾವ್ಯಕನ್ನಿಕೆಯ  ನರ್ತನ ಸೌಂದರ್ಯ  ರಸಿಕರಿಗೆ ಲಭಿಸುವುದು ‘ಮುಕುರದ ಮುಗ್ಧೆ’ ಎಂಬ ಕವಿತೆಯ ಮೂಲಕ  ಅರ್ಥಾತ್ ಅದೇ ಹೆಸರಿನ ಶಿಲ್ಪದಿಂದ “ಮುಗುಧೆಯಾದೆಯಾ ಕನ್ನೇ ಮುಕುರದ ಚೆನ್ನೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಕನ್ನಡಿಯಲ್ಲಿ ತನ್ನ ಸೌಂದರ್ಯ ಸವಿಯುತ್ತಾ ತಿಲಕಧಾರಣೆ ಮಾಡಿಕೊಳ್ಳುವ ಸಲುವಾಗಿ ನಿಂತಿರುವ ಸುರಸುಂದರಿ. ಈಕೆಯೇ ನಾವು ಕರೆಯುವ ದರ್ಪಣಸುಂದರಿ. ತನ್ನ ರೂಪವನ್ನು ಕಂಡು ತಾನೇ ಸೋಲುವ ನೀರೇ, ಪ್ರೇಮಿ ಕೇಶವನಿಗೆ ಕಾಯುತ್ತಾಳೆ. ಆತನ ಆಗಮನ ತುಸು ತಡವಾದರೂ ಈಕೆಗೆ ಭಯವಂತೆ, ದುಃಖವಂತೆ, ಸುಂದರಿಯಾದ ನನ್ನನ್ನು ಬಿಟ್ಟು ಅವನೆಲ್ಲಿಹನೋ? ಎಂದು ಹುಸಿಕೋಪವನ್ನು ತೋರಿಸುತ್ತಾಳೆ. ಹೆಣ್ಣಿನ ಪೂರ್ವಾರ್ಜಿತ ಆಭರಣ ಲಜ್ಜೆ, ಸೃಷ್ಠಿಯ ಈ ಚೆಲುವಿನಲ್ಲಿ ಹೆಣ್ಣಿನ ಸೌಂದರ್ಯ ಇಮ್ಮಡಿಯಾಗುವುದು ಈಕೆಯ ಲಾವಣ್ಯದಿಂದಲೇ. ಅಂತಹ ಸೌಂದರ್ಯ ಭಂಗಿಯಿಂದಲೇ ಕೇಶವನನ್ನು ಕಣ್ಣಲ್ಲೇ ಹುಡುಕುವ ನಿರೀಕ್ಷಿಸುವ ಪ್ರತಿ ಇಲ್ಲಿ ಜೀವಂತವಾಗಿದೆ.

    “ಏನೆ ಶುಕಭಾಷಿಣಿ ಸುದ್ದಿಯೇನೇ ಮನೋಲ್ಲಾಸಿನೀ”  ಎಂದು ಕೇಳುವ ಶಿಲ್ಪವನ್ನು ನಾವು ಮುಂದೆ ಎದುರಾಗುತ್ತೇವೆ. ಈಕೆ ಗಿಳಿಯೊಂದಿಗೆ ಮಾತನಾಡುವ ನರ್ತಕಿ. ತನ್ನ ನಲ್ಲನಿಗೆ ಆ ಕೇಶವನಿಗೆ ಆ ಮುದ್ದುಗಿಳಿಯ ಮೂಲಕ ಸಂದೇಶವನ್ನು ಕಳುಹಿಸುತ್ತಾಳೆ. ಇಲ್ಲೀಕೆಯ ತಳುಕು ಬಳುಕನ್ನು ಬಾಯಲ್ಲೇ ಹೇಳಬೇಕೆ? ಕಿವಿಯಲ್ಲ ಕೇಳಬೇಕೇ? ಇಲ್ಲ ಕಣ್ಣಲ್ಲೇ ನೋಡಿ ತಣಿಯಲಿ ಎಂದೇ ನಿಂತಿದ್ದಾಳೆ ಈಕೆ. ಈ ಬಾಲೆಯ ಸೌಂದರ್ಯಕ್ಕೆ  ಪ್ರಭಾವಳಿಯಾಗಿರುವ ಬಳ್ಳಿಯ ಕೆತ್ತನೆಗೆ, ಸಖಿಯರ ಭಂಗಿಗಳಿಗೆ ಒಂದೆರಡು ಉಳಿ ಪೆಟ್ಟನ್ನು ಹೆಚ್ಚೇ ಕೊಟ್ಟಂತಿದೆ. ಕವಿ ಮಂತ್ರಮುಗ್ಧನಾಗಿ ಆ ಶಿಲ್ಪಕ್ಕೆ ‘ಶುಕಭಾಷಿಣಿ’ ಎಂದು ಕರೆದರೂ “ಗಿಳಿ ಬಿಟ್ಟು ಸೌಂದರ್ಯ  ವರ್ಣಿಸಲು ಇನ್ಯಾರೂ ಸಿಗಲಿಲ್ಲವೇ ?”ಎಂದು ಪ್ರಶ್ನಿಸಿದ್ದಾರೆ.

    ಜೀವನ ಪ್ರೇಮಿಗೆ ಯಾವಾಗಲೂ ವಸಂತೋತ್ಸವವೇ, ವಸಂತೋತ್ಸವ, ವಸಂತಕಾಲ ಎಂದರೆ ಎಲ್ಲರಿಗೂ ಬೇಕಾದುದೇ ಅಂತ ಜೀವನ ಪ್ರೀತಿಯನ್ನು ಸ್ಫುಟಗೊಳಿಸುವ ಶಿಲ್ಪ ಎಂದರೆ ‘ವಾಸಂತೀ’ ಎಂಬ ಶಿಲ್ಪ.  ಎಡಗೈಯ್ಯಲ್ಲಿ ವೀಳ್ಯವನ್ನು, ಬಲಗೈಯಲ್ಲಿ ಜೀರ್ಕೊಳವೆಯನ್ನು ಹಿಡಿದು ಪ್ರಿಯಕರನ ನಿರೀಕ್ಷೇಯಲ್ಲಿದ್ದಾಳೆ ರಾಕೇಂದುಮುಖಿ. ಅವಳಲ್ಲಿ ವಿರಹವೇದನೆ ಮಡುಗಟ್ಟಿದೆ. ಅಂತಹ ಭಗ್ನಹೃದಯಿಗೆ ಸಖಿಯರು ಅರ್ಥಾತ್ ಸಹಶಿಲ್ಪಗಳು, ಸಂತೋಷ ಸಂಜೀವಿನಿ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಕೆಯನ್ನು ಸುತ್ತುವರಿದಿರುವ ಶಿಲ್ಪಗಳೆ ಅವಳನ್ನು ವಸಂತೋತ್ಸವಕ್ಕೆ ಆಹ್ವಾನಿಸುವ ಪರಿ ಎಂಥವರನ್ನು ಬೆರಗು ಗೊಳಿಸುವಂತಹದು.

    ಮುಂದಿನ ಶಿಲ್ಪಿ ‘ಕಪಿಕುಪಿತೆ’ ಈಕೆ ಸುಂದರಿ ಅಷ್ಟೇ ಕೋಪಿಷ್ಠೆಯೂ ಆಕೆಯ ಸೌಂದರ್ಯಕ್ಕೆ ಉನ್ಮಾದಕ್ಕೇರಿದ ತುಂಟಕಪಿ ತರುಣಿಯ ಸೀರೆಯನ್ನು ಎಳೆದುಹಾಕಲು ಪ್ರಯತ್ನಿಸುತ್ತಿದೆ. ಅದರೆ ಈ ತರುಣಿ ಮರದ ರೆಂಬೆಯ ತುಂಡೊಂದರಿಂದ ಮಂಗನನ್ನು ಹೊಡೆದು ಓಡಿಸಲು ಯತ್ನಿಸುವ ಪ್ರಸಂಗ ಬಿಂಬಿಸುವಂಥ ಕಪಿಕುಪಿತೆ  ಎಂಬ ಶಿಲ್ಪ ಆ ಸುಂದರಿ ಕವಿಯ ಪ್ರಕಾರ ಮಾನಭಿಮಾನಿ, ಚೆನ್ನಕೇಶವನ ಜಾಣೆ.

    ನಂತರ ನಮಗೆ ಸಿಗುವ ಶಿಲ್ಪ ‘ಲೀಲಾಕಿರಾತಿ’ ಕೋಪಗೊಂಡ ತರುಣಿ ಚಾಪಹಸ್ತಯಾಗಿ ಪಕ್ಷಿಯುಗಳದ ಚಾಪಲ್ಯ ತಪ್ಪಿಸಲು ಹೊರಟಿರುವಳು. ಆಕರ್ಣಾಂತವಾಗಿ ಬಾಣವನ್ನೆಳೆದು ಲತಾತೋರಣದಲ್ಲಿ ಕುಳಿತ ಪಕ್ಷಿದ್ವಯದತ್ತ ಬಿಡುತ್ತಿರುವ ರಮ್ಯಶಿಲ್ಪ. ಅವುಗಳ ಚಾಪಲ್ಯ ವೀಕ್ಷಣೆಯಿಂದ ತಾಪಕ್ಕೊಳಗಾದ ಈಕೆಯ ದೇಹ ಬಿಲ್ಲಿನಂತೆ ಸೆಟೆದಿರುವುದು, ಮುಖದ ತೋರಿಕೆಯ ರೌದ್ರತೆ ಮನುಷ್ಯ ಸಹಜ  ಈರ್ಷೆಯನ್ನು ಬಿಂಬಿಸುತ್ತದೆ.

    ನಂತರ ರಸಿಕರ ಕಣ್ಣೋಟ ಸೆಳೆಯುವ ಶಿಲ್ಪವೆಂದರೆ ‘ಮಂಜುಕಬರಿ’ ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವುದು ಕೇಶರಾಶಿ ಅಂತಹ ನೀಳಕೇಶರಾಶಿಯನ್ನು ಹೊಂದಿದ ಶಿಲ್ಪ ಇದು. ಕಾಶ್ಮೀರಾಗರು ತೈಲ ವಾಸನೆಗಳನ್ನು ಹೊಂದಿ, ಕೇಶರಾಶಿಯ ನಾಗಾಪಾಶವ ಸುತ್ತಿ ದೋಷವಿಲ್ಲದೆ ಚನ್ನಕೇಶವನನ್ನು ಅದರಲ್ಲಿ ಬಂಧಿಸಿಡುವ ಪ್ರಯತ್ನ ಮಾಡಿದ್ದಾಳೆ. ಅಂತಹ ಕೇಶಕ್ಕೆ ಕಾಳಿರುಳಿನ ಕಪ್ಪು ಇದೆಯಂತೆ. “ನೋಳ್ಪರ ಕಣ್ಮನಕಹುದು ಮೋಹದ ಕಪ್ಪು” ಎಂದು ಕೇಶವನಡಿಗಳನು  ನೀನಪ್ಪು ಎಂದು ಕವಿ ವರ್ಣಿಸಿದ್ದಾನೆ.

    ಮಂಜುಕಬರಿಯ ನಂತರ “ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದಂದವೇ ಬಲ್ಚಂದವೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಢಕ್ಕೆ ಹಿಡಿದುಕೊಂಡು ನರ್ತನ ಮಾಡುತ್ತಿರುವ  ಉನ್ಮತ್ತ ನರ್ತಕಿಯನ್ನು ಕಾಣಬಹುದು ಇವಳೇ ‘ಮುರಜಾಮೋದೆ.’ ಢಕ್ಕೆ ಹಿಡಿದುಕೊಂಡು ಆನಂದ ಪರವಶಳಾಗಿ ಅಂತಃಪುರದ ಒಡೆಯನೂ, ಗೆಳೆಯನೂ ಆಗಿರುವ ಕೇಶವನಿಗೆ ತನ್ನ ಚೆಲುವನ್ನು ಅರ್ಪಿಸುತ್ತಿದ್ದಾಳೆ ಇಲ್ಲಿ ಕೇಶವನೇ ಕೇಂದ್ರ ಬಿಂದು.

    ನಂತರದ ಶಿಲ್ಪ ‘ಕಪಟಭೈರವಿ’, ನಿಜ ಭೈರವಿಯಲ್ಲ ಕಪಟಭೈರವಿಯಾಗಿ ಕೇಶವನನ್ನೆ ಹೆದರಿಸಲು ನಿಂತ ದಿಟ್ಟೆ. ಕವಿ “ಭೈರವ ವೇಷದಿಂದ ಯಾರನ್ನು ನೀನು ಅಂಜಿಪೆ, ಶೂಲರುಂಡವನ್ನು ಕಪಾಲ, ಪಾತ್ರೆಯಾಗಿ ಹಿಡಿದು ನಿಂತಿರುವ ನಿನ್ನನ್ನು ಯಾರು ಕಂಡು ಭಯಬೀಳುತ್ತಾರೆ?” ಎಂದು ಪ್ರಶ್ನಿಸುತ್ತಾರೆ.

    “ಓ ಯವತಿ ನಿನ್ನಿಂಚರದೊಳಗೇನಿಟ್ಟಿರುವೆ….” ಎಂದು  ನರ್ತನ ಮಾಡುತ್ತಿರುವ ಶಿಲ್ಪತಾಂಡವೆ ಈಶ್ವರಿಯನ್ನು ಪ್ರಶ್ನಿಸುತ್ತಾರೆ. ಚನ್ನಕೇಶವನನ್ನು ಜಾಗೃತಗೊಳಿಸಲು ಈ ನೃತ್ಯವೇ “ಡಂಗುರ ಪೊಯ್ವುದದೇನೇ ಜನ ಜಂಗುಳಿಗೆಲ್ಲ ನೀ ಸಾರ್ವುದದೇನೆ?” ಎಂದು ಕವಿ ತಾಂಡವೇಶ್ವರಿಯನ್ನು ಪ್ರಶ್ನಿಸುತ್ತಾರೆ. ಮುಂದಿನ ಶಿಲ್ಪ ‘ಮುರಳೀಧರೆ” ಭಾವಜೀವಿಗೆ ಮನವೆ ಮಂಗಳದ ನಂದಗೋಕುಲ ಇಲ್ಲಿ ಬಾಲಿಕೆ ಕೃಷ್ಣನ ವೇಷಧಾರಿ. ಗೋಪಿಕೆಯರಲ್ಲಿ ತಾನೇ ಗೋಪಿಕೆಯಾಗಿ ನರ್ತಿಸಿದ ಚಾಪಲೆ. ಯದುವಂಶ ಕುಲತಿಲಕ ವೇಷಧಾರಣೆ ಮಾಡಿ ಮುರಳೀಗಾನ ಹೊರಡಿಸುತ್ತಿದ್ದಾಳೆ.

    ಈ ಅಂತಃಪುರದ ನಲ್ಲೆಯರಲ್ಲಿ ಮುಂದೆ ಎದುರಾಗುವವಳೇ ‘ಗಾನಜೀವನೆ’. ಮನಕ್ಕೆ ಮನವೇ ನೆಲೆ ಅದು ತನ್ನಲ್ಲಿಯೇ ನರಕದಿಂದ ನಾಕವನ್ನು ನಾಶದಿಂದ ನರಕವನ್ನು ನಿರ್ಮಿಸಿವೆ ಎಂಬ ಅಭಿಪ್ರಾಯವನ್ನು ಕವಿ ಹೊಂದಿದ್ದಾರೆ. ತನ್ನ ಜೀವನದ ಎಲ್ಲಾ ಘಟ್ಟಗಳನ್ನು ಗಾನದಲ್ಲಿಯೇ ಕಳೆಯುವ ಈಕೆ ಕಲಹಂಸೆ ಲಲಿತಸ್ವರೇ. ಹಾಲಹಲವನ್ನು ಕುಡಿದ ಶಿವನನ್ನೇ ಸೋಲಿಸಿದ ಶಿಲ್ಪ ‘ಜಗನ್ಮೋಹಿನಿ’, ಈ ಶಿಲ್ಪ ಅತ್ಯಂತ ರಮಣೀಯವಾಗಿದೆ. “ಭೂಲೋಕದ ಮಾಯಾಬ್ಧಿ ಜಗನ್ಮೋಹಿನಿ”. ಶಿಲ್ಪಿಗಳು ಕೆತ್ತಿರುವುದಕ್ಕು ಕವಿ ವಿವರಣೆ ನೀಡಿರುವುದಕ್ಕೂ ಇಲ್ಲಿ ಹಾಲು ಜೇನಿನ ಮಿಳಿತವಿದೆ. ನೃತ್ಯದಲ್ಲಿ ತೊಡಗಿರುವ ಸುಂದರಿಯ ಶರೀರ ಲತೆಯಂತೆ ಇಲ್ಲಿ ನಾಲ್ಕೈದು ಬಾಗು ಬಳಕುಗಳಿಂದ ಕೂಡಿದೆ. ನಾಟ್ಯ ಭಂಗಿಯನ್ನು ತೋರುತ್ತಿರುವ ಬಲಗೈ ತಲೆಯ ಮೇಲೆ ಬರುತ್ತದೆ. ಎಡಗೈ ಹೊರಕ್ಕೆ ತೋರುತ್ತಿದೆ. ಬಲಗಾಲಿನ ಸ್ನಾಯುಗಳು ಬಹಳ ನೈಜವಾಗಿ ಕೆತ್ತಲ್ಪಟ್ಟಿವೆ. ಅವಳ ಜಗನ್ಮೋಹಿನಿ ಅವತಾರಕ್ಕೆ ಸಹ ಶಿಲ್ಪಗಳು ರವಷ್ಟು ಹೆದರಿ ದೂರಸರಿದಂತೆ ಚಿಕ್ಕವಾಗಿ ಕೆತ್ತಲ್ಪಟ್ಟಿವೆ.

    ಕೇಶವನ ಅಂತಃಪುರದ ರಾಣಿಯರ ಮಾಯೆ ಇಲ್ಲಿಗೇ ಮುಗಿಯದು ನಂತರ ನಮಗೆ ದರ್ಶನ ನೀಡುವವಳೇ ವೀಣಾಪಾಣಿ.  ನಾವೆಲ್ಲಾ ಕೇಳಿರುವ ಬಹಳ ಪ್ರಖ್ಯಾತ ಗೀತೆ “ವೀಣಾಪಾಣಿ ವಿಶ್ವಕಲ್ಯಾಣಿ”, ಕಲ್ಯಾಣಿರಾಗ ಆದಿತಾಳದಲ್ಲಿ ಸಂಯೋಜನೆಗೊಂಡಿರುವ ಗೀತೆ. ಸಂಗೀತವನ್ನು ವಿಶ್ವದ ಮಧುರರಮ್ಯ ಭಾಷೆ ಎಂದು ಕರೆಯಬಹುದು. ಅಂತೇಯೇ ಇಲ್ಲಿ ಸ್ವರಸ್ವತಿಯ ಸ್ವರೂಪ ಹೊತ್ತ ಈಕೆ ಸಂಗಿತ ಪಾರಮ್ಯ ಮೆರೆಯುತ್ತಿದ್ದಾಳೆ. ಎಡಗೈಯಲ್ಲಿ ವೀಣೆ ಬಲಗೈಯ್ಯಲ್ಲಿ ಸಂಗೀತದ ಆಲಾಪ ಎತ್ತುತ್ತಿದ್ದಾಳೆ.

    ಕೆದರಿದ ಕೂದಲನ್ನು ದರ್ಪಣ ಹಿಡಿದುಕೊಂಡು ಮತ್ತಮತ್ತೆ ಮುಂಗುರಳನ್ನು ಸಖಿಯರ ಸಲಹೆಯೊಂದಿಗೆ ಸರಿಮಾಡಿಕೊಳ್ಳುತ್ತಿರುವ ಶಿಲ್ಪವೆಂದರೆ ಕುಟಿಲಕುಂತಲೆ. ಪ್ರಿಯಕರ ಚನ್ನಕೇಶವನಿಗೆ ತನ್ನ ಅಲಂಕಾರದಲ್ಲಾಗಲೀ ಕೇಶವಿನ್ಯಾಸದಲ್ಲಾಗಲೀ ಎಳ್ಳಷ್ಟು ದೋಷ ಸಿಗಬಾದೆಂಬುದೇ ಈಕೆಯ ಬಯಕೆ. ಈ ಮನೋಚಾಪಲೆ ರಸಿಕ ಚನ್ನಕೇಶವನಿಗೆ  ಪ್ರೀತಿಯ ರಸಧಾರೆ ಎರೆಯಲು ಸಜ್ಜಾಗುತ್ತಿದ್ದಾಳೆ. ಕವಿ ಈಕೆಯನ್ನು ಕಂಡು “ಇನಿಯನ ನೆನೆದಾರಿವಳೆ ಮಣಿಮುಕುರದಿ ನೋಡುವಳ್ ಪಣೆಯ ತಿಲಕವ ತಿದ್ದುವಳ್ ಮನವನೆ ಸೂರೆಗೊಳ್ಳುವಳ್” ಎಂದಿದ್ದಾರೆ.

    ರಾಮನಿಗೋಸ್ಕರ ಕಾದಂತಹ ಶಬರಿಯ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಅದೇ ರಾಮ ಕೇಶವನಾಗಿ ಅವತಾರ ಎತ್ತಿರುವನು ಅವನಿಗಾಗಿ ಮತ್ತೆ ಶಬರಿ ‘ರಸಿಕ ಶಬರಿ’ಯಾಗಿ ಬಂದಿದ್ದಾಳೆ. ಶುದ್ಧ ಸಾವೇರಿ ರಾಗದಲ್ಲಿ ರೂಪಕ ತಾಳದಲ್ಲಿ ರಚನೆಯಾಗಿರುವ ಈ ಗೀತೆ ಕವಿಯ ಪ್ರಭುದ್ಧತೆಗೆ ಕೈಗನ್ನಡಿ ಹಿಡಿದಂತಿದೆ. ಈ ಲೋಕದಲ್ಲಿ ರಸಿಕ ಶಬರಿಯಾಗಿ ಅವತಾರ ಎತ್ತಿರುವ ಈಕೆ ಚನ್ನಕೇಶವನ ಒಲವನ್ನು ಸ್ವೀಕರಿಸಲು ಕೈಯ್ಯಲ್ಲಿ ರಸರಸಾಲಫಲಗಳನ್ನು ಹಿಡಿದುಕೊಂಡು ಕೇಶವನೆ ರಾಮ, ರಸಿಕನೆಂದು ಬಗೆದು ಮತ್ತೊಮ್ಮೆ ಅಭಿನವಾತಾರಿಯಾಗಿ ಬಂದಿದ್ದಾಳೆ.

    ರೋಷಾವೇಷಕ್ಕೆ ಸಾಕ್ಷಿಣಿಯಾಗಿರುವ ಮುಂದಿನ ಶಿಲ್ಪ ‘ವೀರಯೋಷಿತೆ’ ಇವಳನ್ನು ಕಂಡು ಪ್ರಾಣಿ ಸಂಕುಲ ಸಹಶಿಲ್ಪಗಳು ನಿಬ್ಬೆರಗಾದಂತಿವೆ “ಕ್ಲೇಶವೇನಾಯಿತೇ ಈ ಅವತಾರ ತಳೆದಿದ್ದೀಯಲ್ಲ’ ಹಾಸ್ಯವನಾಡಿದನಾರೇ? ಆಶೆಯ ತೋರಿ ನಿರಾಶೆಯನಾರಾದರೂ ಮಾಡಿದರೆ? ಆ ಕೇಶವನೊಳ್ ಮುನಿದು ಆಕಾಶವನ್ನೇ ಇರಿಯಲು ಹೊರಟಿರುವೆಯಲ್ಲಾ” ಎಂದು ಕವಿ ನೇರ ಸಂಭಾಷಣೆಗೇ ಇಲ್ಲಿ ಇಳಿದಿದ್ದಾರೆ. ಉಗ್ರರೂಪದ ಸೌಮ್ಯನಾಯಕಿಯಾಗಿ ಈ ಶಿಲ್ಪ ಕಡೆಯಲ್ಪಟ್ಟಿದೆ.

    ‘ಪುಂವಿಡಂಬಿನಿ’  ಕೇಶವನನ್ನು ಪರೀಕ್ಷಿಸಲು ಹೊರಟ ಶಿಲ್ಪ, ರಾಗಯೋಗಿ, ನಾಟ್ಯನಿಪುಣೆ, ಸ್ವರ್ಗಹಸ್ತೆ ಕೃತಕ ಶೂಲ, ನಾಟ್ಯಸುಂದರಿ  ಮುಂತಾದ ಅದ್ಭುತ ರಮ್ಯ ಶಿಲ್ಪಗಳು ನೋಡುಗರ ಮನಸೂರೆಗೊಳ್ಳುತ್ತವೆ. ಇವೆಲ್ಲವೂ ತಮ್ಮೊಳಗೆ ತಾ ಮುಂದು ನಾ ಮುಂದು ಎಂಬ ಸೌಂದರ್ಯ, ಶೃಂಗಾರ ಪೈಪೋಟಿ ನಡೆಸುವಂತೆ ಹಿಂದಕ್ಕೂ ಮುಂದಕ್ಕೂ ಓಡಾಡಿಸುತ್ತವೆ.

    ‘ಜಯನಿಷಾದಿ’  ಎಂಬ ಹೆಸರಿನಿಂದ ಕಂಗೊಳಿಸುವ ಸುಂದರಿ ‘ಲೀಲಾನಿಷಾದಿ’, ಸಾಂಗತ್ಯ ಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಈ ಗೀತೆಯಲ್ಲಿ ಕಾಳಿ ದುರ್ಗೆಯರ ರೂಪ ಚೆಲುವೆತ್ತಂತಿದೆ. “ಕರಾಳಸಾಹಸಿಕವ ಪೋಲುತ  ನಿಂದಿಹೆ ಏಕೆ?” ಎಂಬ ಪ್ರಶ್ನೆಯನ್ನು ಇಲ್ಲಿ ಎತ್ತಿದ್ದಾರೆ. ಇಡೀ ಜಗತ್ತು ನಿನ್ನ ಒಂದು ಓರೆನೋಟಕ್ಕೆ ಸೋತು ಶರಣಾಗುವಾಗ ಈ ಹೋರಾಟ ತೋರಿಸುವ ಅಗತ್ಯ ನಿನಗೆ ಅನಗತ್ಯ ಎಂದು ಆಕೆಯನ್ನು ಕವಿ ಸಂತೈಸುವಂತೆ ಈ ಬಿಡಿ ಕವಿತೆ ಇದೆ.

    ಕಾವ್ಯದ ಮುಖ್ಯಭೂಮಿಕೆ ಇಡೀ ಬೇಲೂರಿನ ಚನ್ನಕೇಶವನ ಅಸ್ತಿತ್ವವನ್ನು ವೇದ್ಯಗೊಳಿಸಿರುವ ಭಾಗವೆಂದೆ ‘ಭಸ್ಮಮೋಹಿನಿ’, ರೂಪಕ ಕೃತಿಯೊಳಗೆ ರೂಪಕವಾಗಿದೆ. ರಾಗಮಾಲಿಕೆಯಲ್ಲಿ ಮೋಹನ, ತೋಡಿ ಮುಂತಾದ ರಾಗಗಳಿಂದ ಸಂಯೋಜನೆಗೊಂಡಿರುವ ಇದು ಚನ್ನಕೇಶವನ ಅಂತರಾಳ ತೆರೆವಲ್ಲಿ ಯಶಸ್ವಿಯಾಗಿದೆ.

    ವಿಷ್ಣು ಮೋಹಿನಿಯ ಅವತಾರ ತಳೆಯುವುದೇ ಭಸ್ಮಾಸುರನನ್ನು ಸಂಹಾರ ಮಾಡಲು. ಬೇಲೂರಿನ    ಶ್ರೀ ಚನ್ನಕೇಶವನ ದೇವಾಲಯದ ಪ್ರವೇಶದ್ವಾರದ ಎಡಕ್ಕೆ ಅಂದರೆ ಆನೆಬಾಗಿಲಿನ ಪಕ್ಕಕ್ಕೆ ಇರುವ ಮೂಲೆಯನ್ನು ಭಸ್ಮಾಸುರ ಮೂಲೆ ಎಂದು ಕರೆಯುವುದಿದೆ. ರಥೋತ್ಸವದ ಸಂದರ್ಭದಲ್ಲಿ ಇಂದಿಗೂ ಗಳಿಗೆತೇರು, ಮಡಿತೇರು ಎಂದು ಕರೆಯಲ್ಪಡುವ ರಥವನ್ನು ಭಸ್ಮಾಸುರ ಮೂಲೆಗೆ ತಂದು ನಿಲ್ಲಿಸಲಾಗುತ್ತದೆ. ಒಂದು ಇರುಳು, ರಥ ಅಲ್ಲಿದ್ದ ಬಳಿಕ ಮರುದಿನ ನಾಡರಥ ಅಥವಾ ದೊಡ್ಡರಥ ಎಳೆಯಲ್ಪಡುತ್ತದೆ. ಈ ಚನ್ನಕೇಶವನ ಅಲಂಕಾರದ ವಿಶೇಷತೆ ಎಂದರೆ ಮುಖಭಾಗ ಹೆಣ್ಣಿನ ಅಲಂಕಾರ ಶರೀರ ಭಾಗ ಗಂಡಿನ ಅಲಂಕಾರ. ಸುರಸುಂದರ ವಿಷ್ಣು ಅನ್ನುವ ಕಾರಣಕ್ಕೆ ಚನ್ನಕೇಶವ ಎಂಬ ಹೆಸರು ಬಂದಿರುವುದು. ‘ಭಸ್ಮಮೋಹಿನಿ’ ಎಂದು ಕರೆಯುವ ಅಂತಃಪುರಗೀತೆಯಲ್ಲಿ ಉಕ್ತವಾಗಿರುವ ಕವಿತೆಯಲ್ಲಿ ನಾಟ್ಯಕಲಿಸುವ ವಿಷ್ಣವನ್ನು ವರ್ಣಿಸುತ್ತದೆ. ಹಾಗೆ ಶಿಲ್ಪದರಲ್ಲಿ ತಲೆಯ ಮೇಲಿರುವ ಬಲಗೈ  ತುದಿ ಮೂಗಿನ ನೇರಕ್ಕೆ ಬಂದಿದೆ. ಎಡಗೈ ಹೆಬ್ಬೆರಳು ಮತ್ತು ನಾಟ್ಯಭಂಗಿಯಲ್ಲಿ ಮೇಲೆದ್ದಿರುವ ಎಡಗಾಲಿನ ಹೆಬ್ಬೆರಳುಗಳು ಇವೆಲ್ಲ ಒಂದೇ ಊರ್ಧ್ವರೇಖೆಯಲ್ಲಿವೆ  ಅರ್ಥಾತ್ ಭಸ್ಮಾಸುರನಿಗೆ ನರ್ತನ ಹೇಳಿಕೊಡುತ್ತಿರುವುದು. ಶಿಲಾಬಾಲಿಕೆಯರು ಅಂದಕೂಡಲೆ ನಮ್ಮ ನೆನಪಿಗೆ ಬರುವ ಶಿಲ್ಪ ಇದು. ಕೇಳುಗರು ಕೇಳಿಸಿಕೊಳ್ಳುವುದಲ್ಲ, ಓದುಗರು ಓದುವುದಲ್ಲ ಈ ನೃತ್ಯ ಚಾಪಲೆಯರನ್ನು ಕೇಶವನ ಸಖಿಯರನ್ನು ಮತ್ತೊಮ್ಮೆ ನೋಡಿ ಕೈಕುಲುಕಿ ಬರಲೇಬೇಕು. ಮೋಹಿನಿ ಮತ್ತು ಭಸ್ಮಾಸುರರ ನಡುವಿನ ಸಂಭಾಷಣೆ ಇಲ್ಲಿದೆ.

    ನಲಿವಿನ ಸುಂದರಿಯರ ವಿಚಾರ ಇಲ್ಲಿಗೇ ಮುಗಿಯದು. ಇನ್ನೂ ಮದನಿಕೆಯರು ಅವರವರ ಹಾವಭಾವ ಭಂಗಿಗಳಲ್ಲಿ ನಮ್ಮನ್ನು ರಂಜಿಸಲು ಯಾವಗಲೂ ಸಿದ್ಧರಿದ್ದಾರೆ. ಇಂತಹ ಕಿನ್ನರಲೋಕ ಹಾಸನ ಜಿಲ್ಲೆಯಲ್ಲಿದೆ. ನೋಡುಗರ ನಿರಂತರ ನೋಟಕ್ಕೆ ಮತ್ತೆ ಸಿಗುವವಳೇ  ‘ನೀಲಾಂಬರಿ’. ‘ನೀಲಾಂಬರಿ’ ರಾಗದಲ್ಲಿಯೇ ರಚಿತವಾಗಿ ಮಿಶ್ರಛಾಪು ತಾಳದಲ್ಲಿರುವ ಈ ಕೃತಿ ಚೇಳಿಗೆ ಹೆದರಿ ಭಯಕ್ಕೊಳಗಾಗಿರುವ ಬಾಲಿಕೆಯನ್ನು ಕುರಿತು ಇದೆ. ಕವಿ ಇವಳನ್ನು ಎದುರಿಸಲಾಗದೆ “ನೀಲಾಂಬರೆ ಏನಂಗ ವಿಭ್ರಾಂತಿಯೇ ಅಶಾಂತಿಯೇ” ಎಂದಿದ್ದಾರೆ. ಬಾಲಿಕೆಯೊಬ್ಬಳು ಧರಿಸುತ್ತಿರುವ ಸೀರೆಯಲ್ಲಿ ಚೇಳನ್ನು ಕಂಡು ಬೆಚ್ಚಿ ನೆಲಕ್ಕೊರಲಿದ  ಅ ಚೇಳನ್ನು ಭಯದಿಂದ ನೋಡುತ್ತಿರುವ ಶಿಲ್ಪ “ಹೆದರಬೇಡ ಕೇಶವನಿದ್ದಾನೆ” ಎಂದು ಕವಿ ಸಮಾಧಾನಿಸುತ್ತಾರೆ ತನ್ನ ಕವಿತೆಯ ಮೂಲಕ.

    ‘ಹಾವಸುಂದರಿ’ಯೂ  ಉತ್ತಮ ಶಿಲ್ಪಗಳಲ್ಲೊಂದಾಗಿದ್ದು  ‘ಶಕುನಶಾರದೆ’  ಎಂಬ ಶಿಲ್ಪದೆಡೆಗೆ ನಮಗೆ ದಾರಿ ತೋರಿಸುತ್ತದೆ. ಶಕುನದ ಮೂಲಕ ಲೋಕದ ವ್ಯಾಪಾರವನ್ನು ತಾಳೆಗರಿಗಳ ಮೂಲಕ ಹೇಳುವ ಸುಂದರಿ ಕೇಶವನ ಉಜ್ವಲ ಸಾಮ್ರಾಜ್ಯದ ಉಜ್ವಲ ಭವಿಷ್ಯ ಹೇಲುವಂತಿದೆ.

    ನಂತರದವಳೆ  ‘ವೀಟೀಧರೆ’  ಶಿಲಾಬಾಲಿಕೆಯರು ಎಂದರೆ ನಟನೆಗೆ ಹೆಸರಾದವರು. ವೀಟೀಧರೆಯಾಗಿ ಚನ್ನಕೇಶವನಿಗೆ ತಾಂಬೂಲ ನೀಡ ಬಯಸುವ ಈಕೆ ಉತ್ಸಾಹದಿಂದ ಚಿಗುರಲೆ ಹಿಡಿದುಕೊಂಡು ಸಖ ಕೇಶವನಿಗಾಗಿ ನಿರೀಕ್ಷಿಸುವಂತಿದೆ.

    ನಾಗವೀಣೆಯನ್ನು ನುಡಿಸುತ್ತ ಎದುರಾಗುವ ಶಿಲ್ಪ  ‘ನಾಗವೈಣಿಕೆ’.  ಈ ತರುಣಿ ನರನಾರಿ ಹೃದಯಂಗಳ ಸುರ ನರ್ತಕಿಯಾಗಿದ್ದಾಳೆ. ಆಸ್ತಿಕ, ನಾಸ್ತಿಕ, ಅನ್ಯಮತೀಯರನ್ನೂ ಬೆಂಬಿಡದೆ ಕಲಾಲೋಕ್ಕೆ ಸೆಳೆಯುವ ಮಿಂಚಿನ ಶಿಲ್ಪ ಭೂಷಣ ಹೆಣ್ಣು ಮಕ್ಕಳ ಸ್ವತ್ತೇ, ಸೌಂದರ್ಯ ವಿಶ್ತತತ್ವ ಆ  ಪರತತ್ವ ಭಾಸವೇ ಸೌಂದರ್ಯಂ ಅದನ್ನು ಹೆಚ್ಚಿಸುವುದ ಆಕೆಯ ಅಭರಣಗಳು ತನ್ನ  ಕೈಗಳಿಗೆ ತೊಡಲು ಹಿಡಿದ ಬಳೆ ಆಕೆಯ ಅತೀ ಸಹಜ ಭಂಗಿ ರಸಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವಳೇ ‘ಭೂಷಣಪ್ರಿಯೆ’  “ತರಣಿಗೇ ದೀಪೋತ್ಸವವೇ?” ಎಂದು  ವಿಮರ್ಶಕರು ಹೇಳಿದ್ದಾರೆ. ನನ್ನನಗಲಿ ಒಂದಿಂಚೂ ದೂರ ಸರಿಯಬೇಡ ಎಂದು ಹಾಡಿನ ಮೂಲಕ ಕೇಳುವ ಶಿಲ್ಪ  ‘ಕೇಳೀನೀರತೆ’.  ಕೇಶವನ ದಾಸಿ ಕೊರವಂಜಿ.  ಕೊರವಂಜಿ  ವೇಷವನ್ನು ಹಾಕಿ ಪದ್ಮಾವತಿಯನ್ನು ವರಿಸಲು ಬಂದವನು ಶ್ರೀನಿವಾಸ ಅಂತಹ ಕೊರವಂಜಿ ವೇಷಧಾರಿಯನ್ನು ಕವಿ “ನಟನವಾಡಿದಳ್ ತರುಣಿ ನಟನವಾಡಿದಳ್”  ಎಂದು ಪರಿಚಯಿಸಿದ್ದಾರೆ. “ಕೊರವಂಜಿ ವೇಷದಿ ಬಂದೊಡೆಂ ಶರದೈಂದಹಾಸವ ಮುಚ್ಚಿಹಿಯೇಂ” ಎಂದಿದ್ದಾಳೆ. ಆಕೆಯ ಕೈಯ ಹೇಳಿಗೆ, ಕೋಲು, ಸೊಂಟವನ್ನು ತುಸುತಗ್ಗಿಸಿ ನಿಂತಿರುವುದನ್ನು ನೋಡಿದವರು ಭಲೇ!ಬೇಷ್!  ಅನ್ನದೆ ಇರಲಾರರು. ಮುಂದಿನ ಶಿಲ್ಪ “ಕೇಶರುಷ್ಠೆ ರೋಷವಿದೇನೇ ಸಖಿ ಓ ಸುಮುಖೀ”  ಎಂದು ಕವಿತೆಯ ಸಾಲುಗಳಿವೆ. ಕೇಶವನ ಮೇಲೆ ಹುಸಿಕೋಪವ ತೋರಿಸುವ ಹುಡುಗಿ.

    ಗಂ‍ಧರ್ವ ಕನ್ನಿಕೆಯರು ಎನ್ನುವ ಇಲ್ಲಿನ ತರುಣಿಯರಲ್ಲಿ ನಮಗೆ ಮುಂದೆ ದರ್ಶನ ನೀಡುವವಳು  ‘ಪಾದಾಂಗುಳಿಯೇ’  ಕಾಲುಂಗರವನ್ನು ಹಾಕಹೋಗಿ ತುಸು ಎಡವಿದಂತಾಗಿ ಬೀಳುವ ಭಯದಿಂದ ಲತಾಂಗಿಯಾದರೂ ಲತಾಶ್ರಯಿಯಾಗುವ ಪರಿ ಎಲ್ಲರಲ್ಲೂ ಬೆರಗು ತರಿಸುವುದು. ಕೇಶವನ ಕೃಪೆಯೆ ಸಾದಾಕಾಂಕ್ಷಿಯಾದ ಈಕೆಗೆ ಸುಂದರ ಸಹಶಿಲ್ಪಗಳ ಬೆಂಗಾವಲೂ ಇದೆ. ಎಂತಹ ನರ್ತನ ಪ್ರದರ್ಶನ ಮಾಡಿದರೂ ನನ್ನ ಬಳಿ ಕೇಶವ ಸುಳಿಯುತ್ತಿಲ್ಲವೇಕೇ? ಎಂದು ವಿರಹಕ್ಕೆ ಸಿಕ್ಕಿದ ಪಾತ್ರವೇ ವಿರಹಾರ್ತೆ ನನ್ನಿಂದ ಏನಾದರೂ ದೋಷವಾಗಿದ್ದರೆ ಮನ್ನಿಸು ಓ ಪ್ರಾಣನಾಥ “ಅನುರಾಗಾಕಾಂಕ್ಷೆಯಂ ನೀಂ ಕನಲಿರ್ಪುದೆಂತು” ಎಂದು ಕವಿ ಆಕೆಯ ಮನದ ಇಂಗಿತವನ್ನು ಕೇಳಿಸಿಕೊಂಡು ಓದುಗರಿಗೆ ಹೆಳುತ್ತಿದ್ದಾರೆ. ಈ ಕಿನ್ನರಿಯ ಮನದ ಇಂಗಿತವನ್ನು ಕಂಡುಬಂದ ಕೇಶವನ್ನು ಕಂಡ ಕೂಡಲೆ ಈ ಚಾಪಲೆ ಚಿಗರೆಯಂತೆ ಸಿಗಿಯುತ್ತಾಳೆ. ತಾನೊಬ್ಬಳೆ ‘ವಿಶ್ವಸುಂದರಿ’ ಎಂದು ಕೇಶವನನ್ನು ಸಂಧಿಸುವಂತೆ ಕಡೆದಿರುವ ಶಿಲ್ಪ ‘ಚಾರುಹಾಸಿನಿ’. ಮಧ್ಯಮಾವತಿ ರಾಗದಲ್ಲಿ ರಚನೆಯಾಗಿರುವ ಕೃತಿಯ ಹೆಸರು ವಿಕಟರ‍್ತಿನಿ.  ಜಾನಪದ ಶೈಲಿಯಿಂದ ಕೂಡಿದೆ. ಗಂಡಿನ ವೇಷಧಾರಿಯಾಗಿ ನೃತ್ಯೋನ್ಮತ್ತೆಯಾಗಿ ನರ್ತಿಸುತ್ತಿರುವ ಕವಿ ಈಕೆಯನ್ನು ಮದ್ದನು ಸೇವಿಸಿ ಹುಚ್ಚಾದಳೇನೋ ಎಂದು ಕವಿ ಈಕೆಯನ್ನು ರೇಗಿಸುತ್ತಾರೆ. ಹಾಗೆಯೇ ಗಾಂಧರ್ವದೇವಿ, ಲಾಸ್ಯಸುಂದರಿಯರು ನಾಟ್ಯವ ಮೂಲಕ ಸುಂದರ, ಸಂತೃಪ್ತ ಮುಖಮುದ್ರೆಯ ಶಿಲ್ಪಗಳು ನೋಡುಗರನ್ನು ಕಿನ್ನರ ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತವೆ.

    ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯಕಂಬದವಳೇ   ‘ಶುಖಸಖಿ’  ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು. ಇವಳ ಬಲಗೈ ಬಳೆ ಹಿಂದೆ-ಮುಂದೆ ಸರಿಸಬಹುದಾಗಿದೆ. ಹೆಣ್ಣಿನ ಮನದಾಸೆಯ ಸ್ಪಷ್ಟತೆಯನ್ನು ಮಂಗಳಕರ ಒಳೆಯ ಮೂಲಕ ತಣಿಸುವಂತಿದೆ.

    ನೈರುತ್ಯ ಕಂಬದ ಮೇಲಿನ ‘ಉಲ್ಲಾಸಿನಿ’ ಹಾವಭಾವ, ಪ್ರಭಾವದಿನಾಳುವ ಸೈನಾಧಿಕಾರಿಯಾಗಿದ್ದರೆ, ‘ಭಾವದೇವಿ’  ಎಂಬ ಶಿಲ್ಪ ಚೈತನ್ಯಕ್ಕೆ ಅಧಿಪತ್ಯೆಯಾಗಿದ್ದಾಳೆ. ದ್ರೌಪದಿಯು ಅವಮಾನಕ್ಕೆ ಸೇಡುತೀರಿಸಿಕೊಳ್ಳಲೇ ಇರುವಂತೆ ಕಡೆದಿರುವ  ಶಿಲ್ಪ  ‘ವೇಣಿ ಸಂಹಾರೆ’.  ಸಖ ಕೇಶವನಿಗೆ ತನ್ನ ಒಡಲಾಳದ ನೋವನ್ನು ನಿವೇದನೆ ಮಾಡಿಕೊಂಡು ಧರೆಯ ಜನರಿಗೆ ಇಂತಹ ಅವಮಾನ, ಕಷ್ಟ, ಚಿಗುಪ್ಸೆ ಕೊಡಲುಬೇಡ ಎಂದು ನಿವೇದಿಸಿಕೊಳ್ಳುವಂತಿದೆ.

    ವಾಯುವ್ಯ ಮೂಲೆಯಲ್ಲಿ ಕಿರೀಟಧಾರಣೆ ಮಾಡಿಕೊಂಡು ನೃತ್ಯಸರಸ್ವತಿಯಾಗಿರುವ ಈ ಶಿಲ್ಪ ಮುಕ್ತಿಗೆ ಸಂಕೇತವೆಂಬಂತೆ ಇದೆ. ಕೇಶವನ ಪ್ರೀತಿಯನ್ನು ಕಾಣದೆ ಕಂಗಾಲಾಗಿ ಹೂವಿನ ಎಸಳುಗಳನ್ನು ಕಲ್ಲಮೇಲೆಸೆದು ಚಿಂತಿಸುವ ಭಾವದ ಶಿಲ್ಪಿ ಪ್ರಣಯ ವಂಚಿತೆಯದ್ದು. ಪ್ರಣಯದ ಹಸಿವಿನಿಂದ ಸಖನನ್ನು ಸಂತೃಪ್ತಗೊಳಿಸಲೆಂದು ಕಡೆದಿರುವ ಶಿಲ್ಪಿ  ‘ಕಲಹಾಂತರಿತೆ’  ರಾಜೇಂದ್ರನರಮನೆಯ ಎಲ್ಲಾ ವಿಲಾಸ ಪಡೆದುಕೊಂಡು ಸಂತೃಪ್ತಳಾಗಿರುವಂತೆ ಕಾಣುವ ಶಿಲ್ಪಿ  ವಿಲಾಸಿಕೆ.

    “ನೃತ್ತಹಾಸಿನೀ ಮತ್ತಕಾಶಿನೀ ಚಿತ್ತಜೋತ್ಸವೆ ಪ್ರತ್ಯವೇಕ್ಷಣಿ”  ಎಂದು ಕವಿಯಿಂದ ಕರೆಸಿಕೊಂಡಿರುವ ಶಿಲ್ಪ  ನೃತ್ಯಹಾಸನಿ.  ಚನ್ನಕೇಶವನಿಗೆ ಪೂರ್ಣ ನೃತ್ಯಸುಖವನ್ನು ಕೊಡುವ ಶಿಲ್ಪ. ಪೂರ್ಣಸಖನಾಗಿ ತೂರ್ಣಕರುಣೆಯಿಂದ ಚನ್ನಕೇಶವನನ್ನು ವರಿಸುತ್ತಾನೆ ಎಂಬ ಆತ್ಮವಿಶ್ವಾಸ ತೋರುವ ಶಿಲ್ಪ. ಚಕ್ರವಾಕಿ  ಎಂಬ ಶಿಲ್ಪ ಪ್ರಣಯ ಕಲ್ಪಿತೆಯಾಗಿ “ನನ್ನಿಂದಾದ ಪ್ರಮಾದವಾದರು ಏನು?” ಎಂದು  ಕೇಶವನ್ನು ಕೇಳುವಂತಿದೆ.

    ‘ಲತಾಂಗಿ’  ಶ್ರೀಲಲಿತೆಯ ಅಂತರಂಗ ಸಾಮ್ರಾಜ್ಯದ ಮಧುರಗಾನ ಎಂಬ ಅಮೃತ ತುಂಬಿ ಕೇಶವನೆ ಅಂತಃಪುರವಾಸಿನಿ ಎಂದು ಬಹುವಿಧವಾಗಿ ಹೆಮ್ಮೆ ಪಡುವ ಶಿಲ್ಪ ‘ಲತಾಂಗಿ’  ಸೌಂದರ್ಯದ ಖನಿಯಂತಿದೆ. ಡಿ.ವಿ.ಜಿ.ಯವರ ಅಂತಃಪುರಗೀತೆಗಳು ಕೃತಿಯ ಮುಂದುವರೆದ ಭಾಗ ಉಪಸಂಹಾರ. ಇಲ್ಲಿ ಪದ್ಯಗಳು ಸೌಂದರ್ಯ  ಎಂಬ ಶೀರ್ಷಿಕೆಯಲ್ಲಿವೆ. ಚಕ್ರವರ್ತಿಯ ಕಣ್ಣು ನಾಡನ್ನು, ಮಂದಿರವನ್ನು ಒಂದುಗೂಡಿಸಿ ನಾಡಗಡಿಯನ್ನು ಹಸನುಮಾಡಿ ಅದರಿಂದ ಪೂರ್ಣದ ಬೆಳೆಯನ್ನು ತೆಗೆಯುವಂತೆ ಕವಿ ತನ್ನ ಕಣ್ಣ ಅನುಭವವನ್ನು ಮಣ್ಣಕಣದಲ್ಲಿ ಹೊನ್ನನಾರಿಸುವಂತೆ ಆತ್ಮಸಂತೋಷ ಎಂಬ ವಜ್ರವನ್ನು ಸೌಂದರ್ಯ ಎಂಬ ಸರದಲ್ಲಿ ಹಿಡಿದಿಟ್ಟಿದ್ದಾರೆ. ಕಲಾಜೀವಿಗಳಿಗೆ ಕೇಳಿದ್ದನ್ನು ಕೊಡುವಂತೆ ಈ ಶಿಲ್ಪಗಳು ಇದೆ ಎಂಬುದನ್ನು ಜಯವಿಶ್ವಮೋಹನ ಎಂಬ ಕೃತಿಯಲ್ಲಿ ವಿವರಿಸಿ ಈ ಕೃತಿಯ ಓದುಗರಿಗೆ ಕೇಶವ ಆಶೀರ್ವದಿಸಲಿ ಎಂದು ಕವಿ ಕಲಾರಧಕರಾಗಿ ಇಲ್ಲಿ ಕೇಳಿಕೊಳ್ಳುತ್ತಾರೆ.

    ಬೇಲೂರಿನ ಚನ್ನಕೇಶವ ದೇವಾಲಯದ ಸುಂದರ ವರ್ಣನೆಗಳುಳ್ಳ ಬಿಡಿಕವಿತೆಗಳ ಸಂಗ್ರಹ ‘ಅಂತಃಪುರಗೀತೆ’ ಶಿಲ್ಪಕನ್ನಿಕೆಯರ ಸೌಂದರ್ಯದ ಆಧಾರದ ಮೇಲೆ ಪಡೆದ ಅಮೃತ ಕೃತಿ ‘ಅಂತಃಪುರಗೀತೆ’ ಸಂಗೀತದ ರಸಪಾಕವನ್ನು ಹದವಾಗಿ ಬೇಯಿಸಿ, ತಣಿಸಿ ಓದುಗರ ಕೈಗಿತ್ತಿದ್ದಾರೆ. ಇಲ್ಲಿ ವೈಷ್ಟವ, ಶೈವ ಎಂಬ ಮಡಿವಂತಿಕೆಯಿಲ್ಲ ಹೊಯ್ಸಳರ ಧರ್ಮಸಮನ್ವಯತೆಗೆ ಇದೊಂದು ಸಾಕ್ಷಿ. ಪ್ರತಿ ಶಿಲ್ಪದ ಪ್ರಭಾವಳಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಹೂವಿನಿಂದ ನಾರು ಸ್ವರ್ಗಕ್ಕೆ ಎಂಬ ಗಾದೆಗೆ ಆಪವಾದವೆಂಬಂತೆ ಸಹಶಿಲ್ಪಗಳಿಂದ ಮುಖ್ಯಶಿಲ್ಪಗಳ ಗಾಂಭೀರ್ಯ ಮತ್ತಷ್ಟು ಕಳೆಗಟ್ಟಿದೆ. ಜಕಣಾಚಾರ್ಯ, ಚಿಕ್ಕಹಂಪ, ಬಳ್ಳಿಗಾವೆಯ ದಾಸೋಜ, ಚಾವಣ ಇಲ್ಲಿಯ ಪ್ರಮುಖ ಶಿಲ್ಪಿಗಳು ತಮ್ಮ ಕಾರ್ಯದಲ್ಲಿ ಭೇದತೋರದೆ ಮುಖ್ಯ ಶಿಲ್ಪಗಳಂತೆ ಸಹಶಿಲ್ಪಗಳಿಗೂ ಸಮಾನ ಅಸ್ತೆ ತೋರಿಸಿದ್ದಾರೆ.

    “ಇಂಪಿಲ್ಲದೆ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧು ಒಪ್ಪಗುವೇಂ”? ಎಂಬ ರನ್ನನ ಮಾತಿನಂತೆ ಈ ಎಲ್ಲಾ ಪರಿಭಾಷೆ ಶಿಲಾಕನ್ನಿಕೆಯರಲ್ಲಿದೆ. ಪ್ರಪಂಚದ ಪಾಪ ವಿಮೋಚನೆಗೆ ಸೌಂದರ್ಯ ಸಿದ್ಧ ಔಷಧ ಎನ್ನುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ ‘ಹಲವು ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಲ್ಲಿ ಪಾಂಡಿತ್ಯ ಹೊಂದಿದ ಕವಿ’ ಹಾಗೆ ನಮ್ಮ ದೃಷ್ಠಿಯ ಕಲ್ಮಷವನ್ನು ತೊಡೆದುಹಾಲು ಹೃದಯಂತರಾಳದಿಂದ ವೀಕ್ಷಿಸಿ ಪಾವಿತ್ರತೆ ಪಡೆಯ ಬಹುದಾಗಿದೆ. ತನ್ನ ರಾಣಿಯರ ಮೂಲಕ ಜಗತ್ತಿನ ವಿಹಾರಕ ಎಷ್ಟು ಸೌಂದರ್ಯಸಾಗರವನ್ನು ಬೇಲೂರಿನಲ್ಲಿ ತಂದಿರಿಸಿಕೊಂಡಿದ್ದಾನೆ. ದಿವ್ಯ ಕಲೆಯ ಭವ್ಯತೆಯನ್ನು ರಸಿಕರಾಗಿ ನೋಡುಗರು ಆಸ್ವಾದಿಸಬೇಕು. ಡಿ.ವಿ.ಜಿ. ಯವರ ಪ್ರಕಾರ ನೋಡುಗರೂ ಕೂಡ ಅಂತಃಪುರವಾಸಿಗಳೇ ಆಗಿರುವವರು.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Bengaluru  Satellite Town Ring Road : ದೇವನಹಳ್ಳಿಯಿಂದ ಮೈಸೂರಿನವರೆಗೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ

    BENGALURU MAR 11:

    ದೇವನಹಳ್ಳಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಆಯೋಜಿಸಿದ್ದ ‘ ಶೃಂಗಸಭೆ’ ಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿವಾರಿಸಲು ಫೆರಿಫೆರಲ್ ರಿಂಗ್ ರಸ್ತೆಯ ಕಾಮಗಾರಿಗೆ ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಹೆಬ್ಬಾಳದಿಂದ ಮೈಸೂರು ರಸ್ತೆ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಅದರ ಮುಂದುವರಿದ ಭಾಗವಾಗಿ ಸೆಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಬೆಂಗಳೂರು ನಗರದಲ್ಲಿ ಉತ್ತಮ ರಸ್ತೆಗಳು, ಡ್ರೈನೇಜ್ ವ್ಯವಸ್ಥೆ, 12 ಅತಿ ಸಾಂದ್ರತೆಯಿರುವ ಕಾರಿಡಾರ್ ಗಳನ್ನು ಸರ್ಕಾರ ಅಭಿವೃದ್ಧಿಗೊಳಿಸುತ್ತಿದೆ. ಈ ಕಾರಿಡಾರ್ ಗಳಿಂದಾಗಿ ನಗರದ ಪ್ರಮುಖ ನಗರಗಳಿಗೆ ಸಿಗ್ನಲ್ ರಹಿತ ರಸ್ತೆ ಸಂಪರ್ಕ ದೊರೆಯಲಿದೆ. ಆಯಾ ವಾಹನಗಳ ಓಡಾಟಕ್ಕೆ ಆಯಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ವಾಹನ ದಟ್ಟಣೆಯನ್ನು ನಿವಾರಿಸಲು ಯೋಜಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು ನಗರಕ್ಕೆ ಟ್ರಾಫಿಕ್ ಪ್ಲಾನ್ನ್ನು ರೂಪಿಸಲಾಗುತ್ತಿದೆ‌ ಎಂದು ಸಿಎಂ ಹೇಳಿದರು.

    ಮಳೆನೀರು ಸರಾಗವಾಗಿ ಹರಿದುಹೋಗಲು ರಾಜಕಾಲುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈ ವರ್ಷ ಇದಕ್ಕಾಗಿ 1500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

    ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳ :ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳವಾಗಿದೆ. ನಗರದ ಜನರ ಸಮಸ್ಯೆಗಳ ಬಗ್ಗೆ ಅರಿತು , ಪರಿಣಾಮಕಾರಿ ಪರಿಹಾರವನ್ನು ಸೂಚಿಸುವ ಉತ್ತಮ ಹಾಗೂ ಬಲಿಷ್ಟ ನಾಗರಿಕ ಸಮಾಜದ ಅವಶ್ಯಕತೆ ಇದೆ. ನಾಗರಿಕ ಸಮಾಜಗಳು ಸರ್ಕಾರದೊಂದಿಗೆ ಚರ್ಚಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು. ಈ ಸಮಾಜಗಳಿಂದ ವಿವಿಧ ಸ್ಥರದ ಜನರೊಂದಿಗಿನ ಸಂಪರ್ಕದಿಂದಾಗಿ ಕೆಳವರ್ಗದ ಜನರ ಜೀವನವನ್ನು ಸುಗಮಗೊಳಿಸಿದಂತಾಗುತ್ತದೆ ಎಂದರು .

    ಬೆಂಗಳೂರು ನಗರ ಅಭಿವೃದ್ಧಿ:ಭವಿಷ್ಯದ ಬೆಂಗಳೂರನ್ನು ರೂಪಿಸುವವರಿಗೆ ಬೆಂಗಳೂರಿನ ಇತಿಹಾಸದ ಜ್ಞಾನವಿರಬೇಕಾಗುತ್ತದೆ. ಮೂಲ ಬೆಂಗಳೂರಿಗೆ 8 ಪುರಸಭೆ , 110 ಗ್ರಾಮಗಳು ಸೇರಿ ಈಗ ನವೀಕೃತ ಬೆಂಗಳೂರು ಆಗಿದೆ. ಇಂತಹ ಬೆಂಗಳೂರಿಗೆ ಅಭಿವೃದ್ಧಿ, ರಸ್ತೆ, ನೀರು ಸೇರಿದಂತೆ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ನಗರದಲ್ಲಿ ರಸ್ತೆ ಅಭಿವೃದ್ಧಿ, ನೀರು ಸರಬರಾಜುಗಳಿಗೆ ಒಂದು ನಿರ್ದಿಷ್ಟ ಪ್ಲಾನ್ ಇಲ್ಲವಾಗಿದೆ. ಆದ್ದರಿಂದ ಬೆಂಗಳೂರು ನಗರ ಯೋಜನೆಯನ್ನು ಸರಿದಾರಿಗೆ ತರಬೇಕಿದೆ ಎಂದರು.

    ಬೆಂಗಳೂರು ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ :ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ದೇಶದ ಉಳಿದ ಮೆಟ್ರೋಪಾಲಿಟನ್ ನಗರಗಳಿಗಿಂತ ಬೆಂಗಳೂರು ಉತ್ತಮವಾಗಿದೆ ಎಂದು ಹಲವು ಜನರು, ಖಾಸಗಿ ಕಂಪನಿಗಳು ನಗರಕ್ಕೆ ಬರುತ್ತಿವೆ. ಮೊದಲು ಬೆಂಗಳೂರು ಐಟಿ ಬಿಟಿ ರಾಜಧಾನಿ ಎಂದು ಗುರುತಿಸಲಾಗುತ್ತಿತ್ತು. ಆದರೆ ನಿಧಾನವಾಗಿ ಬೆಂಗಳೂರು ನಗರ ಈಗ ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ. ಪರಿಹಾರ ಮಾರ್ಗವನ್ನು ಹುಡುಕದೇ ಕೇವಲ ಸಮಸ್ಯೆಗಳ ಬಗೆಗಿನ ಚರ್ಚೆಯಿಂದ ಪ್ರಯೋಜನವಿಲ್ಲ. ನಗರ ಯೋಜನೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಅದನ್ನು ವಾಸ್ತವತೆಗೆ ತರುವವನು ನಿಜವಾದ ನಗರ ಯೋಜನೆಕಾರ ಮತ್ತು ಉತ್ತಮ ಆಡಳಿತಗಾರ ಎಂದೆನಿಸುತ್ತಾನೆ. ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನ್ನು ವಾಸ್ತವಿಕತೆಗೆ ತರಲು ಸಾರ್ವಜನಿಕರ ಸಹಯೋಗ , ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.

    ತ್ಯಾಜ್ಯ ನಿರ್ವಹಣೆ:ಬೆಂಗಳೂರಿನಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನಿಯಂತ್ರಣ, ನಿರ್ವಹಣೆ ಮಾಡಲು ಚಿಂತಿಸಬೇಕು. ದೊಡ್ಡ ಹೊಟೆಲ್ ಗಳು, ಕಲ್ಯಾಣಮಂಟಪಗಳು, ಆಸ್ಪತ್ರೆಗಳು, ಮಾಲ್ ಗಳು ಈಗ ಆಧುನಿಕ ತಂತ್ರಜ್ಞಾನದ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತ್ಯಾಜ್ಯ ಸಂಸ್ಕರಣೆಯನ್ನು ಮಾಡಬಹುದಾಗಿದೆ. ಇದರಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಇಂದು ವಿಶ್ವ ಕಿಡ್ನಿ ದಿನ- ಮೂತ್ರಪಿಂಡದ ಕಾಳಜಿ ಹೇಗೆ? ಖ್ಯಾತ ವೈದ್ಯರಾದ ಡಾ. ಸಂದೀಪ ಹುಯಿಲಗೋಳ ನೀಡಿದ ಸಲಹೆಗಳನ್ನು ತಪ್ಪದೇ ಓದಿ

    ಕಿಡ್ನಿ ಫೇಲ್ ಕುರಿತು ಜನರು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ ಎಂದು ಮೂತ್ರಪಿಂಡ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ. ಇವರು ಬಾಗಲಕೋಟೆಯ ಜನಪ್ರಿಯ ವೈದ್ಯರು ಮತ್ತು Prepare Edutech ಎಂಬ ದೇಶದ ಮೊದಲ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಲಿಕಾ ತಾಣವಾದ preped.in ನ ಸಿಇಒ ಮತ್ತು ಸಹ-ಸ್ಥಾಪಕರು. ವಿಶ್ವ ಮೂತ್ರಪಿಂಡ ದಿನಾಚರಣೆ ಪ್ರಯುಕ್ತ (World Kidney Day ) ನಮ್ಮ ವೆಬ್ ತಾಣದ ಓದುಗರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, ಕಿಡ್ನಿ ತೊಂದರೆಗಳ ಕುರಿತು ಜನರಲ್ಲಿರುವ ಸಾಕಷ್ಟು ತಪ್ಪುಕಲ್ಪನೆಗಳನ್ನೂ ಈ ಲೇಖನದಲ್ಲಿ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ.

    ಕಿಡ್ನಿ ಅಥವಾ ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗ. ಶರೀರದೊಳಗಿನ ಕಲ್ಮಶಗಳನ್ನು ಬೇರ್ಪಡಿಸಿ ಹೊರಗೆ ಹಾಕುವುದು ಇದರ ಕೆಲಸ. ಸಾಮಾನ್ಯವಾಗಿ ಕಿಡ್ನಿ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿವಳಿಕೆಗಿಂತ ತಪ್ಪು ತಿಳಿವಳಿಕೆಯೇ ಹೆಚ್ಚಾಗಿವೆ. ಒಮ್ಮೆ ಕಿಡ್ನಿ ಸಮಸ್ಯೆ ಬಂದರೆ ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಡಯಾಲಿಸಿಸ್ ಚಿಕಿತ್ಸೆ ಶುರುವಾದರೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದು ಭಯಕ್ಕೂ ಕಾರಣವಾಗಿದೆ. ಆದರೆ, ಕಿಡ್ನಿ ಸಮಸ್ಯೆಯ ಕುರಿತು ಇಂತಹ ತಪ್ಪು ಕಲ್ಪನೆಯ ಅಗತ್ಯವಿಲ್ಲ ಎಂದು ಕನ್ನಡದ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷ್ ಮತ್ತು ಕನ್ನಡ ಮಿಶ್ರಿತ ಪಾಠದ ಮೂಲಕ ಸರಳವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹ ವಿನೂತನ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ಸೈಟ್ ನೀಡಿದ ಡಾ. ಸಂದೀಪ ಹುಯಿಲಗೋಳ ಅಭಿಪ್ರಾಯಪಟ್ಟಿದ್ದಾರೆ.

    Study paramedical and nursing subjects in kannada with PrepEd app ಕನ್ನಡದಲ್ಲಿ ಪ್ಯಾರಾಮೆಡಿಕಲ್‌ ಮತ್ತು ನರ್ಸಿಂಗ್‌ ವಿಷಯಗಳನ್ನು ಅಧ್ಯಯನ ಮಾಡಲು ಪ್ರಿಪೆಡ್‌ ಎಜುಟೆಕ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

    ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಇದೆ, ಭಯ ಬೇಡ

    “ಕಿಡ್ನಿ ಸಮಸ್ಯೆ ಉಂಟಾಗುವ ಎಲ್ಲರೂ ಅನಗತ್ಯ ಭಯಪಡಬೇಕಾಗಿಲ್ಲ. ಕಿಡ್ನಿಗೆ ಸಂಬಂಧಿಸಿದ ಶೇಕಡ 90-95 ಸಮಸ್ಯೆಗಳು ತಾತ್ಕಾಲಿಕವಾಗಿರುತ್ತವೆ. ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಕೊಮಡು ಚಿಕಿತ್ಸೆ ಪಡೆದರೆ ಎಲ್ಲವೂ ಸರಿಯಾಗಿ ಮತ್ತೆ ಮೊದಲಿನಂತೆ ಆರೋಗ್ಯಕರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ಸಂದೀಪ್ ಹೇಳಿದ್ದಾರೆ.

    ಕಿಡ್ನಿ ಸಮಸ್ಯೆ ತಿಳಿದುಕೊಳ್ಳುವುದು ಹೇಗೆ?

    “ಕಿಡ್ನಿ ತೊಂದರೆಗಳ ಬಗ್ಗೆ ಏಕೆ ತಿಳಿದುಕೊಳ್ಳಬೇಕು? ಸಮಸ್ಯೆ ಬಂದಾಗ ನೋಡೋಣ ಎಂಬ ಭಾವನೆ ಕೆಲವರಲ್ಲಿದೆ. ಇದು ದೊಡ್ಡ ತಪ್ಪು. ಏಕೆಂದರೆ, ಈ ಸಮಸ್ಯೆ ವ್ಯಕ್ತಿಗೆ ಅರ್ಥವಾಗುವುದೇ ತುಂಬಾ ತಡವಾಗಿ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮೊದಮೊದಲು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ತುಂಬಾ ತಡವಾದಗ ಕಿಡ್ನಿ ಸಮಸ್ಯೆಯ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಕೈಕಾಲು ಮುಖ ಊದಿಕೊಂಡಿವೆ, ಸುಸ್ತಾಗುತ್ತಿದೆ, ಕಿಡ್ನಿ ಸಮಸ್ಯೆ ಉಂಟಾಗಿರಬಹುದು ಎಂದು ವೈದ್ಯರ ಬಳಿಗೆ ಹೋಗುವ ಹೊತ್ತಿಗೆ ಸಮಸ್ಯೆ ಸಾಕಷ್ಟು ಉಲ್ಬಣವಾಗಿರುತ್ತದೆ. ಮೊದಲೇ ತಿಳಿದಿದ್ದರೆ ಚಿಕಿತ್ಸೆ ಪಡೆಯುತ್ತಿದ್ದೇವು ಎಂದು ನಂತರ ಕೊರಗುತ್ತಾರೆ. ರೋಗ ಕೊನೆಯ ಹಂತ ತಲುಪಿದ ನಂತರ ಚಿಂತಿಸುವ ಬದಲು ಮೊದಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ರಾಜ್ಯದ ಪ್ರಮುಖ ಕಿಡ್ನಿ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಸಲಹೆ ನೀಡಿದ್ದಾರೆ.

    India’s 1st study app for Paramedical & Nursing students in Kannada

    World Kidney Day- ತಪಾಸಣೆ ಮಾಡಿಸಿಕೊಳ್ಳುವುದು ಯಾಕೆ ಅಗತ್ಯ?


    ಸುಮ್ಮನೆ ಏಕೆ ತಪಾಸಣೆ ಮಾಡಿಸಿಕೊಳ್ಳಬೇಕು ಅಥವಾ ಯಾರು ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೂ ಉತ್ತರವಿದೆ. ಅನುವಂಶಕವಾಗಿ ಮಧುಮೇಹ ಅಥವಾ ಕಿಡ್ನಿ ಸಮಸ್ಯೆಗಳು ಇದ್ದವರು, ಅಧಿಕ ರಕ್ತದೊತ್ತಡ ಇರುವವರು, ಹರೆಯದಲ್ಲೇ ಅತ್ಯಂತ ರಕ್ತದೊತ್ತಡದಿಂದ ಬಳಲುತ್ತಿರುವವರು ಹಾಗೂ ಕೈ ಕಾಲು ಮುಖದಲ್ಲಿ ಬಾವು ಕಾಣಿಸಿಕೊಂಡವರು ಕೂಡಲೇ, ತಡಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ನಲವತ್ತು ವರ್ಷ ಮೇಲ್ಪಟ್ಟವರೂ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇನ್ನು ಸಣ್ಣಪುಟ್ಟ ಕಾರಣಗಳಿಗೆ ಮೇಲಿಂದ ಮೇಲೆ ನೋವು ನಿವಾರಕ ಮಾತ್ರೆ ನುಂಗುವವರು, ಧೂಮಪಾನ ಮಾಡುವವರು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ.

    World Kidney Day- ತಪಾಸಣೆ ದುಬಾರಿಯಲ್ಲ


    ರಕ್ತ, ಮೂತ್ರ ಅಥವಾ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡರೆ ಸಾಕು. ಇದಕ್ಕೆ ತಗಲುವ ವೆಚ್ಚ ೩೦೦ರಿಂದ ೫೦೦ ರೂ. ಅಷ್ಟೇ. ಇಷ್ಟು ಹಣವನ್ನು ಏಕೆ ಖರ್ಚು ಮಾಡುವುದು ಎಂದು ಕೆಲವರು ಅಂದುಕೊಳ್ಳಬಹುದು. ಪ್ರತಿದಿನ ನಾವು ಇದಕ್ಕಿಂತ ಹೆಚ್ಚು ಖರ್ಚು ಮಾಡುವಾಗ ನಮ್ಮ ಬದುಕಿನ ಪ್ರಶ್ನೆಯಾಗಿರುವ ಕಿಡ್ನಿ ತಪಾಸಣೆ ಅತ್ಯಂತ ಅಗತ್ಯ. ತಪಾಸಣೆ ನಂತರ ಸಮಸ್ಯೆ ಇಲ್ಲದಿದ್ದರೆ ನಿಶ್ಚಿಂತೆಯಿಂದ ಮನೆಗೆ ಮರಳಬಹುದು. ಅಕಸ್ಮಾತ್ ಸಮಸ್ಯೆ ಇದ್ದರೆ ಮೊದಲ ಹಂತದಲ್ಲೇ ತಿಳಿಯಿತು ಎಂದುಕೊಂಡು ಸಕಾಲದಲ್ಲೇ ಅಗತ್ಯ ಚಿಕಿತ್ಸೆ ಪಡೆಯಬಹುದು. ಇದರಿಂದ ಕಡಿಮೆ ಸಮಯದಲ್ಲಿ ಮೊದಲಿನಂತೆ ಆರೋಗ್ಯಕರ ಬದುಕು ಸಾಧಿಸುವ ಅವಕಾಶ ಹೆಚ್ಚಿರುತ್ತದೆ. ಆರ್ಥಿಕ ಹೊರೆಯೂ ತಪ್ಪುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಲ್ಟ್ರಾ ಸೌಂಡ್ ಅಥವಾ ಕಿಡ್ನಿ ಬಯಾಪ್ಸಿ ಎಂಬ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಇವು ಎಲ್ಲರಿಗೂ ಅಗತ್ಯವಿರುವುದಿಲ್ಲ.

    World Kidney Day- ಕಿಡ್ನಿ ಸಮಸ್ಯೆಗೆ ಕಾರಣವೇನು?

    ದೀರ್ಘಕಾಲಿಕ ಕಿಡ್ನಿ ಸಮಸ್ಯೆಗಳು ಉಂಟಾಗಲು ಶೇ. ೩೦ರಿಂದ ಶೇ. ೪೦ರಷ್ಟು ಮಧುಮೇಹವೇ ಕಾರಣ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡವು ಕಿಡ್ನಿ ಸಮಸ್ಯೆಗೆ ಶೇ. ೫೦ರಷ್ಟು ಕಾರಣವಾಗುತ್ತದೆ ಅಧಿಕ ರಕ್ತದೊತ್ತಡವೇ ಕಿಡ್ನಿ ಸಮಸ್ಯೆಗಳಿಗೆ ಕಾರಣ ಎಂಬುದು ಜಾಗತಿಕವಾಗಿ ಸಾಬೀತಾಗಿದೆ. ಆದರೆ, ಭಾರತದಲ್ಲಿ ಮಾತ್ರ ಸಮಸ್ಯೆಗಳಿಗೆ ನಿಖರ ಕಾರಣ ತಿಳಿದಿಲ್ಲ. ಏಕೆಂದರೆ ವೈದ್ಯರ ಸಲಹೆ ಇಲ್ಲದೆ ಅನವಶ್ಯಕವಾಗಿ ಔಷಧ ಸೇವಿಸುವ ರೂಢಿ ಭಾರತದಲ್ಲಿ ಹೆಚ್ಚಾಗಿದೆ. ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಮತ್ತೊಂದು ಪ್ರಮುಖ ಕಾರಣ. ಇನ್ನು ಸೋಂಕು ಹಾಗೂ ರಕ್ತದೊತ್ತಡಗಳಿಂದ ತಾತ್ಕಾಲಿಕವಾಗಿ ಕಿಡ್ನಿ ವೈಫಲ್ಯ ಆಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಕೊರೊನಾ ಭಯದಿಂದ ಎಲ್ಲರೂ ಸ್ವಯಂ ಚಿಕಿತ್ಸೆ ಮಾಡುತ್ತಿದ್ದು, ಅತಿಯಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಇದರಿಂದಲೂ ತೊಂದರೆ ಉಂಟಾಗಬಹುದು.

    ಸಮಸ್ಯೆಯ ಲಕ್ಷಣ

    ವಿಪರೀತ ದಣಿವು, ಮೂತ್ರ ವಿಸರ್ಜನೆ ಸಂದರ್ಭದಲ್ಲಿ ಸಹಿಸಲು ಸಾಧ್ಯವಾಗದಷ್ಟು ನೋವು, ಮೂತ್ರದಲ್ಲಿ ರಕ್ತ ಬರುವುದು, ಅತಿ ಕಡಿಮೆ ಅಥವಾರ್ಝನಿ ವೈಫಲ್ಯದ ಲ ಅತಿ ಹೆಚ್ಚು ಮೂತ್ರ ವಿಸರ್ಜನೆ, ಮೂತ್ರದಲ್ಲಿ ನೊರೆ ಬರುವುದು, ಕೈಕಾಲು ಮುಖ ಕಣ್ಣು ಊದಿಕೊಳ್ಳುವುದು, ಊಟ ರುಚಿಸದೆ ಇರುವುದು ಹಾಗೂ ಅಧಿಕ ರಕ್ತದೊತ್ತಡವು ಕಿಡ್ನಿ ವೈಫಲ್ಯದ ಲಕ್ಷಣಗಳಾಗಿವೆ.

    ಕಿಡ್ನಿ ಕಾರ್ಯವೇನು? ಕಿಡ್ನಿ ಹೇಗಿರುತ್ತದೆ?


    ನಮ್ಮ ದೇಹದೊಳಗಿನ ನೀರಿನ ಅಂಶದಲ್ಲಿ ಸಮತೋಲನ ಕಾಯ್ದುಕೊಳ್ಳುವುದು, ಕಲ್ಮಶಗಳನ್ನು ಹೊರಗೆ ಹಾಕುವುದು ಹಾಗೂ ರಕ್ತದೊತ್ತಡ ನಿಯಂತ್ರಿಸುವುದು ಕಿಡ್ನಿಯ ಪ್ರಮುಖ ಕಾರ್ಯಗಳಾಗಿವೆ. ಇದರ ಜೊತೆಗೆ ರಕ್ತ ಉತ್ಪಾದನೆಗೂ ಕಿಡ್ನಿ ಕಾರಣವಾಗುತ್ತದೆ. ಏಕೆಂದರೆ, ರಕ್ತ ಉತ್ಪಾದನೆಯಾಗುವುದು ಎಲುಬಿನಲ್ಲ. ಅದಕ್ಕೆ ಬೇಕಾದ ಎರಿಥ್ರೋಪಾಯೊಟಿನ್ ಎಂಬ ಹಾರ್ಮೋನ್ ಕಿಡ್ನಿಯಿಂದ ಉತ್ಪಾದನೆಯಾಗುತ್ತದೆ. ಇನ್ನು ಎಲುಬುಗಳು ಮತ್ತು ಹಲ್ಲುಗಳಿಗೆ ಅಗತ್ಯವಿರುವ ಕಾಲ್ಷಿಯಂ ಹಾಗೂ ಪಾಸ್ಪರಸ್ ಕೂಡ ದೇಹದಲ್ಲಿ ಸಮತೋಲವಾಗಿದೆ ಎಂದರೆ ಅದಕ್ಕೆ ಕಿಡ್ನಿಯೇ ಕಾರಣವಾಗಿದೆ.
    ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಒಂದು ಕಿಡ್ನಿಯು ಹತ್ತರಿಂದ ಹನ್ನೆರಡು ಸೆಂ.ಮೀ. ಉದ್ದ ಹಾಗೂ ನಾಲ್ಕರಿಂದ ಐದು ಸೆಂ.ಮೀ. ಅಗಲವಿರುತ್ತದೆ. ಇದರ ತೂಕ 150-200 ಗ್ರಾಂ ಇರುತ್ತವೆ. ಇವುಗಳಿಂದ ಕಲ್ಮಶ ಹೊರಗೆ ಹಾಕುವ ಕೆಲಸ ನಡೆಯುತ್ತದೆ.

    ಕಿಡ್ನಿಗಳ ಮುಖ್ಯ ಕೆಲಸವೇನು?

    ಕಿಡ್ನಿ (ಸಂಖ್ಯೆಯಲ್ಲಿ ಎರಡು ಇರುತ್ತದೆ) ದೇಹದ ಬಹುಮುಖ್ಯ ಅಂಗಗಳು. ಇವು ಮುಖ್ಯವಾಗಿ ನಾಲ್ಕು ಮುಖ್ಯ ಕೆಲಸಗಳನ್ನು ನಿರ್ವಹಿಸುತ್ತವೆ.
    • ದೇಹದಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳುವಿಕೆ ಹಾಗೂ ದೇಹದ ಚಯಾಪಚಯ ಕ್ರಿಯೆಯ ಕಲ್ಮಶಗಳನ್ನು ಹೊರಹಾಕುವಿಕೆ (ಮೂತ್ರ ಉತ್ಪತ್ತಿ ಮಾಡುವುದು).
    • ರಕ್ತ ಶುದ್ಧೀಕರಣ
    • ಮೂಳೆಗಳಿಗೆ ಕ್ಯಾಲ್ಸಿಯಂ ಸಮತೋಲನ
    • ಹಿಮಗ್ಲೋಬಿನ್ ಉತ್ಪತ್ತಿ, ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು.
    ಕಿಡ್ನಿ ಫೈಲೂರ್ ಎಂದರೇನು?
    ಮೇಲೆ ತಿಳಿಸಿದ ನಾಲ್ಕು ಕೆಲಸಗಳಲ್ಲಿ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಇವುಗಳಲ್ಲಿ ಯಾವುದಾದರೊಂದು ಕೆಲಸಗಳಲ್ಲಿ ಏರುಪೇರಾದರೆ ಅದು ಮೂತ್ರಪಿಂಡ ವೈಫಲ್ಯ ಎನಿಸುವುದು.

    2022 World Kidney Day Theme- ೨೦೨೨ರ ಕಿಡ್ನಿ ದಿನದ ಘೋಷವಾಕ್ಯ


    ಪ್ರತಿವರ್ಷ ಕಿಡ್ನಿದಿನಕ್ಕೆ ವಿಶೇಷ ಥೀಮ್ ಅಥವಾ ಘೋಷವಾಕ್ಯ ಇರುತ್ತದೆ. ಈ ವರ್ಷ Bridge the knowledge gap to better kidney care ಎನ್ನುವುದು ಘೋಷವಾಕ್ಯವಾಗಿದೆ. ಅಂದರೆ, ಅತ್ಯುತ್ತಮ ಕಿಡ್ನಿ ಕಾಳಜಿಗಾಗಿ ಜ್ಞಾನದ ಕೊರತೆಯನ್ನು ನಿವಾರಿಸುವ ಉದ್ದೇಶವನ್ನು ಈ ವರ್ಷ ಹೊಂದಲಾಗಿದೆ.

    ಪ್ರಿಪೇರ್‌ ಎಜುಟೆಕ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ. ಪ್ರಿಪೇರ್‌ ಎಜುಟೆಕ್‌ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

    Bengaluru India Nano;ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆ ಹೃದ್ರೋಗಿಗಳಿಗೆ ವರದಾನ: ಸ್ವಾಮಿನಾಥನ್

    BENGALURU MAR 8

    ಭಾರತದಲ್ಲಿ 45ರಿಂದ 69 ವರ್ಷದೊಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇಂಥವರಿಗೆ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುತ್ತಿರುವ ಚಿಕಿತ್ಸಾ ವಿಧಾನಗಳು ವರದಾನವಾಗಲಿವೆ ಎಂದು ತಂಜಾವೂರಿನ `ಶಾಸ್ತ್ರ ನ್ಯಾನೋ ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನಾ ಕೇಂದ್ರ’ದ ಹಿರಿಯ ನ್ಯಾನೋ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅಭಿಪ್ರಾಯಪಟ್ಟರು.

    12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ದ ಎರಡನೇ ದಿನವಾದ ಮಂಗಳವಾರ ವರ್ಚುಯಲ್ ಉಪನ್ಯಾಸ ನೀಡಿದ ಅವರು, ದೇಶದಲ್ಲಿ ಶೇಕಡ 63ರಷ್ಟು ಸಾವುಗಳಿಗೆ ಹೃದಯಾಘಾತವೇ ಕಾರಣವಾಗುತ್ತಿದೆ. 2021ರಲ್ಲಿ ಜಗತ್ತಿನಲ್ಲಿ ಹೃದಯಾಘಾತದಿಂದ 17.90 ದಶಲಕ್ಷ ಜನ ಮೃತಪಟ್ಟಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದರು.

    ನ್ಯಾನೋ ತಂತ್ರಜ್ಞಾನ ಆಧಾರಿತವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿರುವ ಕಾರ್ಡಿಯಾಕ್ ಪಟ್ಟಿಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತಕ್ಕೆ ಸಮರ್ಥವಾಗಿ ಚಿಕಿತ್ಸೆ ನೀಡಬಹುದು. ಇದರ ಜತೆಗೆ, ಈ ಚಿಕಿತ್ಸೆಯಲ್ಲಿ ನ್ಯಾನೋ ಫೈಬರ್ ಗಳು ಕೂಡ ಉಪಯುಕ್ತ ಪಾತ್ರ ವಹಿಸಲಿವೆ ಎಂದು ಅವರು ವಿವರಿಸಿದರು.

    ಈ ಚಿಕಿತ್ಸಾ ವಿಧಾನವನ್ನು ಪ್ರಾಣಿಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದು, ಸಕಾರಾತ್ಮಕ ಫಲಿತಾಂಶ ಬಂದಿದೆ. ಈ ಅಧ್ಯಯನವು ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ನಿಧಾನಗೊಂಡಿದೆ. ವಿಸ್ತೃತ ಅಧ್ಯಯನಕ್ಕೆ ವೈದ್ಯಕೀಯ ಸಂಸ್ಥೆಗಳು ನೆರವು ನೀಡಲು ಮುಂದೆಬಂದಿವೆ. ಇನ್ನು ಕೆಲವೇ ವರ್ಷಗಳಲ್ಲಿ ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆಗಳು ಜನಪ್ರಿಯವಾಗಲಿವೆ ಎಂದು ಸ್ವಾಮಿನಾಥನ್ ಹೇಳಿದರು.
    ಅಪಘಾತ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಆಗುವ ಆಳವಾದ ಗಾಯಗಳನ್ನು ವಾಸಿ ಮಾಡಲು ಚರ್ಮ ಅಂಗಾಂಶ ಕಸಿ ವಿಧಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಚರ್ಮರಚನಾ ಶಾಸ್ತ್ರದ ವ್ಯಾಪಕ ಅಧ್ಯಯನ ನಡೆಸಲಾಗುತ್ತಿದ್ದು, ಆಂಟೋಗ್ರಾಫ್ಟ್ ಮತ್ತು ಆಲೋಗ್ರಾಫ್ಟ್ ವಿಧಾನಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಆದರೆ, ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳು ದುಬಾರಿಯಾಗಿವೆ ಎಂದು ಅವರು ನುಡಿದರು.

    ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು 3ಡಿ ಪ್ರಿಂಟಿಂಗ್, 3ಡಿ ಲೇಸರ್ ಪ್ರಿಂಟಿಂಗ್ ಮುಂತಾದ ಸೌಲಭ್ಯಗಳನ್ನು ಅಂತಿಮಗೊಳಿಸಲಾಗಿದೆ. ಇವು ವ್ಯಾಪಕವಾಗಿ ಬಳಕಗೆ ಬಂದರೆ, ಆರೋಗ್ಯ ಸೇವೆಗಳೆಲ್ಲವೂ ಜನರ ಕೈಗೆಟುಕುವ ದರದಲ್ಲಿ ಸಿಕ್ಕಲಿದ್ದು, ಚಿಕಿತ್ಸೆಗಳು ಕೂಡ ನಿಖರವಾಗಲಿವೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

    ಡಾ.ಅನಿಲ್ ಕುಮಾರ್ ಅವರು ವಿಚಾರಗೋಷ್ಠಿಯನ್ನು ನಿರ್ವಹಿಸಿದರು.

    Recruitment of Asst Professor :ಸಹಾಯಕ ಪ್ರಾಧ್ಯಾಪಕರ ನೇಮಕ: ಅಕ್ರಮಕ್ಕೆ ಕಡಿವಾಣ ಹಾಕಲು ಸಹಾಯವಾಣಿ

    BENGALURU MAR 8

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯು ಯಾವುದೇ ಅಕ್ರಮಗಳಿಲ್ಲದೆ, ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ, ಈ ಬಗ್ಗೆ ಹರಿದಾಡುತ್ತಿರುವ ಅನಪೇಕ್ಷಿತ ವದಂತಿಗಳಿಗೆ ಕಡಿವಾಣ ಹಾಕಿ, ಕಠಿಣ ಕ್ರಮ ಜರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯವಾಣಿಯನ್ನು ಆರಂಭಿಸಿದೆ.

    ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ, ಅಭ್ಯರ್ಥಿಗಳಿಗೆ ಯಾವುದಾದರೂ ಆಮಿಷ ಒಡ್ಡಲು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅಥವಾ ವದಂತಿಗಳನ್ನು ಹರಡುತ್ತಿರುವವರು ಕಂಡುಬಂದರೆ ಮೊಬೈಲ್ ಸಂಖ್ಯೆ 99015- 81708ಕ್ಕೆ ನೇರವಾಗಿ ಕಚೇರಿ ಸಮಯದಲ್ಲಿ ಕರೆ ಮಾಡಬಹುದು ಇಲ್ಲವೇ ವಾಟ್ಸ್ ಅಪ್ ಮೂಲಕ ತಿಳಿಸಬಹುದು. ಈ ಮಾಹಿತಿಯನ್ನು ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಸರಕಾರಿ ನಿಯಮಗಳಿಗೆ ಅನುಗುಣವಾಗಿ, ಪ್ರತಿಭೆಯನ್ನು ಆಧರಿಸಿ ನಡೆಯುತ್ತಿದೆ. ಈ ಬಗ್ಗೆ ಅಭ್ಯರ್ಥಿಗಳು ವದಂತಿಗಳನ್ನು ನಂಬಿ, ಮೋಸ ಹೋಗಬಾರದು. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕಾಗಲಿ, ಅವ್ಯವಹಾರಕ್ಕಾಗಲಿ ಕಿಂಚಿತ್ತೂ ಆಸ್ಪದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಲಿಖಿತ ಪರೀಕೆಯಲ್ಲಿ‌ ತೆಗೆದುಕೊಂಡ ಒಟ್ಟು ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಪಾರರ್ದಶಕವಾಗಿ ನಡೆಸಬೇಕು ‌ಎನ್ನುವ ಕಾರಣಕ್ಕೆ ಸಂದರ್ಶನ ಕೂಡ ಇಟ್ಟಿಲ್ಲ ಎಂದು ಅವರು ಹೇಳಿದರು.

    ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಈಗಾಗಲೇ ಘೋಷಿಸಿರುವಂತೆ ಮಾರ್ಚ್ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬರಲಿರುವವರು ಸೂಚಿತ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದುವರೆಗೂ ಪ್ರವೇಶ ಪತ್ರವನ್ನು ಡೌನ್-ಲೋಡ್ ಮಾಡಿಕೊಳ್ಳದೆ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣದ ಮೂಲಕ ಪ್ರವೇಶಪತ್ರವನ್ನು ತೆಗೆದುಕೊಳ್ಳಬೇಕು.

    ಪರೀಕ್ಷೆಯು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನಡೆಯಲಿದೆ. ಎಂದು ಅವರು ತಿಳಿಸಿದ್ದಾರೆ.

    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ ಉಂಡಮೇಲೂ ಅವಳದ್ದು ಅರೆಹೊಟ್ಟೆ

    ಕುಳಿತಿದ್ದ ತನ್ನಿಡೀ ದೇಹಭಂಗಿಗೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಒಗ್ಗಿಸಿಕೊಂಡು ಅವರು ಅವನ ಮುಂದೆ ಕೂತಿದ್ದರು. ಆಫೀಸ್ ಬಾಗಿಲು ತೆರೆದೇ ಇತ್ತು.
    ಅವನು ಒಂದಾನೊಂದು ಕಾಲದ ಅವಳ ‘ಅವನೂ’ ಆಗಿದ್ದಿದ್ದರಿಂದಲೂ ಈಗೊಂದು ಉತ್ತಮ ವರ್ಕಿಂಗ್ ರಿಲೇಶನ್ಷಿಪ್ ಉಳಿದಿದ್ದರಿಂದಲೂ ನೇರ ಒಳಹೋದವಳಿಗೆ ಒಳಗಿನ ಬೆಚ್ಚಗಿನ ವಾತಾವರಣಕ್ಕೆ ಸಣ್ಣ ಗೊಂದಲವಾಯಿತು. ಅವನೆದಿರು ಕುಳಿತ ಅರವತ್ತು ಪ್ಲಸ್ ರ ಆ ಮಹಿಳೆ ಕಣ್ಣ ತುಂಬ ಬೆಳಕನ್ನೂ ದೇಹದಲ್ಲಿ ಕಂಡೂ ಕಾಣದಂತ ತಳಮಳವನ್ನೂ ಹೊದ್ದು ಹೇಗಾದರೂ ನನ್ನ ವ್ಯಾಖ್ಯಾನಿಸು ಎನ್ನುತ್ತಿರುವಂತೆ ಕಾಣ್ತಿದೆ.ತೀರ ಸಣ್ಣ ಫಾರ್ಮಾಲಿಟಿಯೂ ಇಲ್ಲದೇ ಒಳನುಗ್ಗಿದ್ದಕ್ಕೆ ಮತ್ತು ಆ ಹೆಣ್ಣು ತನಗಾಗಿಯೇ ನಿರ್ಮಿಸಿಕೊಂಡಿದ್ದ ಆ ಇಂಟಿಮೇಟ್ ಕ್ಷಣಗಳಿಗೆ ಭಂಗ ತಂದಿದ್ದಕ್ಕೆ ಅವಳಿಗೀಗ ಬೇಸರ.
    ಅದೂ ಅಲ್ಲದೇ ಆ ಒಂದು ಕಾಲದ ತನ್ನ ‘ಅವನಿಗೂ’ ಇನ್ನೊಂದು ಹೆಣ್ಣಿಗೂ ಚೇಂಬರಿನ ಮಧ್ಯಮ ಉಷ್ಣಾಂಶದಲ್ಲಿ ನಡೆಯುತ್ತಿದ್ದ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಧಾತು ಉಪಧಾತು ಯಾವುದೆಂಬುದು ಯಾರಿಗಾದರೂ ತಿಳಿಯುವಷ್ಟು ಸ್ಪಷ್ಟವಿರುವುದು ಸರಿಯಲ್ಲವೆನಿಸಿ ಬಾಗಿಲಲ್ಲೇ ನಿಂತು ಸಾವರಿಸಿಕೊಂಡು ಎಕ್ಸಕ್ಯೂಸ್ ಮೀ ಎಂದಳು.…

    ಇಬ್ಬರೂ ಬಾಗಿಲೆಡೆಗೆ ಒಂದೇ ಸರ್ತಿ ನೋಡಿದರು.

    ಅವರು ಅದೇ ವಾತ್ಸಲ್ಯದ ಧ್ವನಿಯಲ್ಲಿ ‘ಬಾಮ್ಮ’ ಎಂದರೆ ಅವನು ಯಾವತ್ತಿನಂತೆ ‘ಬಾರೋ’ಎನ್ನದೇ ಬನ್ನಿ ಬನ್ನಿ ಅಂತ ಗಾಂಭೀರ್ಯ ತೋರಿದ. ತನ್ನ ಟೈಮ್ ನಾನಸೆನ್ಸ್ ಬಗ್ಗೆ ಕೆಡುಕೆನಿಸಿತಾದರೂ ಹತ್ತು ನಿಮಿಷದ ಲೋಕಾಭಿರಾಮದ ಮಾತು ಪರಿಸ್ಥಿತಿ ಪರಿಸರ ಹದಕ್ಕೆ ತರುವುದರಲ್ಲಿ ಯಶಸ್ವಿಯಾಗಿ ಅವರಿಬ್ಬರೂ ತಮ್ಮ ಸ್ಥಿತಿಯಿಂದ ಹೊರ ಬಂದಿದ್ದರು.

    ಆದರೆ

    ಆ ಹಿರಿಯ ಹೆಣ್ಣಿಗೆ ಒದಗಿದ್ದ ಅಪರೂಪದ ಕ್ಷಣವನ್ನು ಕಿತ್ತುಕೊಂಡ ವೇದನೆ ಅಲ್ಲಿಂದ ಬಂದ ನಂತರವೂ ಅವಳಲ್ಲಿ ಮುಂದುವರೆದೇ ಇತ್ತು.

    ಮೇಲಿನ ಘಟನೆ ಓದಿದವರು ಅವರವರ ಭಾವಕ್ಕೆ ಭಕ್ತಿಗೆ ಯುಕ್ತಿಗೆ ಆಸಕ್ತಿಗೆ ತಕ್ಕಂತೆ ಪ್ರತಿಕ್ರಿಯೆ ಕೊಡಬಹುದು.ಯಾರೂ ಗ್ರಹಿಸದ,ಗ್ರಹಿಸಿದರೂ ಅದಕ್ಕಿಷ್ಟು ಮಸಾಲೆ ಹಚ್ಚಿ ಒಗ್ಗರಣೆ ಕೊಟ್ಟು ಚಪ್ಪರಿಸುವ,ಸೂಕ್ಷ್ಮ ಮನಸ್ಸಿಗಳಿಗೆ ಮಾತ್ರ ಆ ಕ್ಷಣಗಳ ಮಹತ್ತು ತಿಳಿಯುವ ಸಂಗತಿ ಇದು.

    ಯಾರಿಗೂ ಕೇಡಿಲ್ಲದ ಒಂದು ನಿರುಪದ್ರವಿ ಪ್ಲೆಷರ್.ಆ ಕ್ಷಣದ ಅಮೃತ ಘಳಿಗೆ.
    ಆ ಹಿರಿಯ ಮಹಿಳೆಯ ಬಳಿ ಎಲ್ಲವೂ ಇದೆ. ದೊಡ್ಡ ವಿದ್ಯೆ, ಹುದ್ದೆ,ಹಣ,ಜಮೀನು, ಗಂಡ,ಮಕ್ಕಳು, ಸ್ಥಾನಮಾನ ಆರೋಗ್ಯ ಎಲ್ಲವೂ. ಇಂತಹ ಪ್ರಬುದ್ದ ಹೆಣ್ಣಮಗಳೊಬ್ಬರು ‘ಹೆಣ್ಣಿರುವುದೇ ತನ್ನ ಜಾಣ್ಮೆಯ ಹೊಂಡಕ್ಕೆ ಬೀಳಲು’ ಅಂತ ತಿಳಿದಿರುವ ಆ ಅವನೆದಿರು ಯಾಚಿತರಾಗಿ ನಿಂತಿದ್ದಾರೆ.

    ಯಾಕೆ?

    ಉಹು..ಉತ್ತರವಿಲ್ಲದ ಪ್ರಶ್ನೆ ಇದು.

    ಯಾವ ವಯಸ್ಸಿಗೆ ಯಾವ ಹೊತ್ತಿಗೆ ಯಾವ ಘಳಿಗೆಗೆ ಹೆಣ್ಣಿನ ಅವಶ್ಯಕತೆ ಅನಿವಾರ್ಯತೆ ಗಳೇನು ಎನ್ನುವುದು ಸಾವಿರ ಸಂಶೋಧನೆಗಳ ನಂತರವೂ ನಿಗೂಢವಾಗಿಯೆ ಉಳಿಯುವ ಸಂಗತಿ!!

    ಅಲ್ಲಿಂದ ಹಿಂದಿರುಗಿ ಮನಸ್ಸು ಸಮವಾದ ಮೇಲೆ ಕಾಲದೊಡನೆ ಒಂದೇ ಕೋರಿಕೆ ಇಟ್ಟಳು ಅವಳು.

    ‘ಅವನ ಸೆರಗಿನ ಹಪಹಪಿ ಅವರಿಗೆ ಎಂದೂ ತಿಳಿಯದಿರಲಿ.
    ಆಗಾಗ ಖುಷಿಯ ಕ್ಷಣಗಳು ಅವರ ಹುಡುಕಿ ಬರಲಿ.’
    …..
    ಎಫ್ ಬಿ ಸ್ಟೇಟಸ್ ನಲ್ಲಿ ಹಾಕಿದ್ದ ಪ್ರೇಮದ ತೀವ್ರತೆ ಹೇಳುವ ನಾಲ್ಕು ಸಾಲುಗಳ ಹನಿಗವಿತೆಗೆ ಆರೇಳು ಮಂದಿ ಹೂವು ಹಣ್ಣು ಹೃದಯ ಕೊಡ್ತಿದ್ರು.ಪದ್ಯ ಹುಟ್ಟುವ ಘಳಿಗೆಯ ಪುಳಕದ ಕುರಿತೇ ಹೆಚ್ಚು ಬೆರಗಾಗುವ ನಾನು ಪ್ರಕಟಿಸಿದ ನಂತರ ‘ಅಯ್ಯೋ ಇನ್ನೇನೋ ಆಗಬೇಕಿತ್ತು’ ಅಂತ ಅನ್ನಿಸಿ ಪ್ರತಿಕ್ರಿಯೆಯ ಸಂಭ್ರಮವನ್ನು ಕಳೆದುಕೊಳ್ತೀನಿ.

    ಈ ನಡುವೆ ತರುಣ ಅಂತಲೋ ಹರೆಯ ಅಂತಲೋ ಹೆಸರಿಟ್ಟುಕೊಂಡ ಹುಡುಗನೊಬ್ಬ’ಈ ವಯಸ್ಸಿನಲ್ಲೂ ಇಷ್ಟು ರೋಮ್ಯಾಂಟಿಕ್ ಆಗಿ ಹೇಗೆ ಬರೀತೀರಾ ಆಂಟಿ’
    ಅಂತ ಪ್ರತಿಕ್ರಿಯಿಸಿದ.

    ಅಚ್ಚರಿಯ ಜೊತೆಗೆ ಅವನ ಬಾಲವೃದ್ದಾಪ್ಯಕ್ಕೆ ಮರುಕವೆನಿಸಿತು.

    ಈ ವಯಸ್ಸೂ ಅಂತಂದ್ರೆ ಯಾವ ವಯಸ್ಸು ಮಗುವೇ?

    ಹೆಣ್ಣು ಈ ವಯಸ್ಸಿನಲ್ಲಿ ‌ಮಾತ್ರ ಪ್ರೇಮಕವಿತೆಗಳನ್ನು ಬರೆಯಬಹುದು ಎನ್ನುವ ನಿಯಮ ಮಾಡಿದವರ್ಯಾರೊ?

    ಬಾಯಲ್ಲಿ ಒಂದೆರಡು ಹಲ್ಲು ಉಳಿದ. ,ಪಂಚೇಂದ್ರಿಯಗಳು ಪೂರ್ಣ ಕೆಲಸ ನಿಲ್ಲಿಸಿದ ಕವಿಯೊಬ್ಬರು ಈಗಲೂ ಹೆಣ್ಣಿನ ಕಟಿತುಟಿಗಳನ್ನು ಬಿಡಿಬಿಡಿಯಾಗಿ ವರ್ಣಿಸುವ ಕವಿತೆ ಬರೆದಾಗ ‘ಮನಸ್ಸಿಂದ ಇವರಿನ್ನೂ ಎಷ್ಟು ಯಂಗ್ ಇದಾರೆ’ಅಂತ ಮೆಚ್ಚಿಕೊಂಡವರ ಸಂಖ್ಯೆಯಲ್ಲಿ ಹೆಣ್ಣುಗಳದ್ದೇ ದೊಡ್ಡ ಪಾಲು.

    ನಮಗೆ ಹಾಗನಿಸುವುದು ಇವರಿಗ್ಯಾಕೆ ಹೀಗನಿಸುವುದಿಲ್ಲ.
    ಮುಕ್ತವಾಗಿ ಬರೆದರೆ ಬೋಲ್ಡ್ ಬರೆಯುತ್ತಾಳೆ ಎನ್ನುವ ಹಣೆಪಟ್ಟಿ ಯಾಕೆ?
    ಇದು ಮ್ಯಾನುಪ್ಯಾಕ್ಚರಿಂಗ್ ಡಿಫೆಕ್ಟಾ?

    ಹೊಸ ತಲೆಮಾರಿನವರು ಹೆಚ್ಚು ಮುಕ್ತ ಮನಸ್ಕರಾಗಿದ್ದಾರೆ.
    ಹೆಣ್ಣಿನ ಭಾವನಾತ್ಮಕ ಅವಲಂಬನೆ ದೈಹಿಕ ಅನಿವಾರ್ಯತೆ ಗಳನ್ನು ಅರ್ಥೈಸಿಕೊಳ್ಳಬಲ್ಲವರಾಗಿದ್ದಾರೆ. ಪುಲ್ಲಿಂಗವೇ ಬರೆದಿಟ್ಟ ‘ಹೆಣ್ಣೆಂದರೆ ಹೀಗಿರಬೇಕು’ ಎನ್ನುವ ಮಾದರಿ ಇನ್ನಾದರೂ ಬದಲಾಗಬಹುದು ಎಂದುಕೊಂಡಿದ್ದು ಸುಳ್ಳಾ?

    ಉಹು..

    ಇವನೊಬ್ಬನಿಂದಾಗಿ ಹೊಸ ತಲೆಮಾರನ್ನು ಹೀಗೇ ಅಂತ ನಿರ್ಧರಿಸಲಾರೆ ಎನ್ನುತ್ತಿದೆ ನನ್ನ ಆಶಾವಾದಿ ಮನಸ್ಸು.

    ಇದಾಗಿ ಎರಡನೇ ದಿನಕ್ಕೆ ಮತ್ತೆ

    ‘ಆಂಟಿ..ಪದ್ಯ ಫುಲ್ ಪ್ರೋವೊಕಿಂಗು’ಎಂದ. ಅವನ ಆ ಆಂಟಿ ಎನ್ನುವ ಸಂಭೋಧನೆಯೇ ಅಸಭ್ಯವೆನಿಸಿ ಆ ವೃದ್ದ ತರುಣನನ್ನು ಮುಲಾಜಿಲ್ಲದೆ ಬ್ಲಾಕಿಸಿ ಅಯ್ಯೋ ಜೀವಿಯೇ ಅಂದುಕೊಂಡು ಸುಮ್ಮನಾದೆ.

    ಈ ವೈರುಧ್ಯ ಯಾಕೆ?

    ಯಾವ ತೋರುಗಾರಿಕೆಗೆ ಮಹಿಳಾ ದಿನ..?
    ಗಂಡು ಮಕ್ಕಳನ್ನು ಬೆಳೆಸುವಲ್ಲಿ ಮತ್ತುಮತ್ತೂ ತಪ್ಪುತ್ತಿದ್ದೀವಾ ನಾವು?

    ಇವಳ ಧಾರಣ ಪ್ರತಿಭೆ ಮತ್ತು ಹಡೆಯುವ ಶಕ್ತಿ ಯಿಂದಾಗಿ ಹೆಣ್ಣನ್ನು ಒಂದು ಮುಟಿಗೆ ಮಿಗಿಲೇ ಎತ್ತರದಲ್ಲಿಡಬೇಕಾದ ಮನುಕುಲ ಪ್ರಾಣಿಗಳಿಗಿಂತಲೂ ಕೀಳಾಗಿ ಯಾಕೆ ವರ್ತಿಸುತ್ತದೆ.


    ಒಂದು ಅಚ್ಚರಿಯ ಸಂಗತಿಯನ್ನು ಈ ಒಂದು ದಶಕದೀಚೆಗೆ ಗಮನಿಸುತ್ತಿದ್ದೇನೆ.
    ವಿದೇಶದಿಂದ ಬಂದಂತಹ ದಂಪತಿಗಳಲ್ಲಿ ಗಂಡು ಹೆಚ್ಚು ಪ್ರಜ್ಞಾವಂತನಾಗಿ ವರ್ತಿಸುವುದು, ತನ್ನ ಹೆಣ್ಣಿನ ಆತ್ಮ ಗೌರವದ ರಕ್ಷಣೆ ಮತ್ತು ಅವಳ ಸ್ವಂತದ ಸ್ವಾತಂತ್ರ್ಯ ಕ್ಕೆ ಗೌರವ ಕೊಡುವುದು ಕಾಣಿಸುತ್ತಿದೆ.

    ಇದು ಹೇಗೆ ಸಾಧ್ಯವಾಯಿತು..?

    ”ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ”
    ಎನ್ನುವ ಸಾಲನ್ನೇ ಗಿಳಿಪಾಠದಂತೆ ಒಪ್ಪಿಸುತ್ತಿರುವ ನಮ್ಮವರದ್ದು ತೋರಿಕೆಯ ಪೂಜೆಯಾ?
    ಪಾಶ್ಚಿಮಾತ್ಯ ಸಂಸ್ಕ್ರತಿ ಅಂತ ಮಾತುಮಾತಿಗೂ ಹೀಗಳೆಯುತ್ತಿದ್ದ ಮಂದಿ ಅಲ್ಲಿಂದ ಬಂದವರಿಂದ ಕಿಂಚಿತ್‌ ಕಲಿತರೂ ಇಲ್ಲಿನ ತರತಮ ದೂರವಾಗಬಹುದಾ?

    ಹೆಣ್ಣನ್ನು ದೇವಿ ಎಂದು ಭಾಷಣ ಹೇಳುತ್ತಲೇ ಅವಳ ದೇಹಭಾಷೆಯನ್ನು ಹಡೆಯುವುದಕ್ಕೂ ಹಾದರಕ್ಕೂ ಮಾತ್ರ ಎನ್ನುವಂತೆ ನೋಡುವ ಪ್ರಜ್ಞಾವಂತರು ವಿದ್ಯಾವಂತರು ಎಷ್ಟಿಲ್ಲ‌ ನಮ್ಮ ನಡುವೆ?

    ತತ್ರ ದೇವತಾ ಎನ್ನುವಲ್ಲಿ ತತ್ತರ ದೇವತಾ ಎನ್ನುವಂತ ಪರಿಸರ ಬೆಳೆದಿದ್ದು ಯಾವಾಗ?
    ಅದಕ್ಕೆ ತಕ್ಕಂತೆ ಹೆಣ್ಣಿನ ಮಾನದ ಕುರಿತೇ ಇರುವ ಕೊಳಕು ಬೈಗುಳಗಳ ಪದಗಳು ಇಲ್ಲಿ ಇನ್ನೂ ಅತೀ ಸಹಜವೆನ್ನುವಂತೆ ಬಳಕೆಯಾಗುತ್ತಿವೆ ಎಂದರೆ ಮಹಿಳಾ ದಿನದ ಅರ್ಥವೇನು?
    …..
    ಮೊನ್ನೆ ಅಂತರರಾಷ್ಟ್ರೀಯ ಆಹಾರ ತಜ್ಞೆ ರುಜುತಾ ದಿವಾಕರ್ ಒಂದು ಮಾತನ್ನು ಹೇಳಿದರು.

    ಮೆನೋಫಾಸ್ ಸಮಯದ ಹಾಟ್ ಫ್ಲಷಸ್ ಕಳೆಯುವವರಿಗೂ ‘ಡೋಂಟ್ ಸ್ಲೀಪ್ ವಿತ್ ಯುವರ್ ಹಸ್ಬೆಂಡ್!’

    ಅದಕ್ಕೆ ಅವರು ಕೊಡುವ ಕಾರಣ ಕೇಳಿ ದಿಗ್ಭ್ರಮೆ ಆಯಿತು.

    ಹೆಣ್ಣಿಗೆ ಈ ಸಮಯದಲ್ಲಾಗುವ ಶೆಕೆ,ಥಂಡಿ, ಪದೇಪದೆ ಮೂತ್ರದ ಅವಸರಗಳಿಂದ ಗಂಡಿಗೆ ಕಿರಿಕಿರಿ ಆಗ್ತದಂತೆ.ಅವನ ನಿದ್ದೆ ಹಾಳಾಗಿದ್ದಕ್ಕೆ ಸಂಸಾರ ಏರುಪೇರಾಗಬಹುದಂತೆ.
    ಅದೇ ಗಂಡಿಗೆ ಅರವತ್ತು ಸುಮಾರಿಗೆ ತೀವ್ರವಾಗುವ ಅ್ಯಂಡ್ರೋಪಾಸ್ ನಲ್ಲಿ ಅವರಲ್ಲಾಗುವ ಅನಾರೋಗ್ಯದ ಲಕ್ಷಣಗಳನ್ನು ಹೆಣ್ಣು ಮಮತೆಯಿಂದಲೂ ಪ್ರೇಮದಿಂದಲೂ ಆಲಿಸುವುದನ್ನು ಆರೈಕೆ ಮಾಡುವುದನ್ನೂ ಸಂಭ್ರಮಿಸುತ್ತಾಳಂತೆ!
    ಹಾಗಿದ್ದರೆ ಇದು ನಿಜಕ್ಕೂ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟೇ ಅಂತ ನಮ್ಮ ಪಾಡಿಗೆ ನಾವು ಮಹಿಳಾ ದಿನವನ್ನು ಆಚರಿಸಿ ಸಂಭ್ರಮಿಸೋಣವಾ?
    ….
    ಈಚೆಗೆ ಒಂದು ಘಟನೆ ನಡೆಯಿತು.
    ಎಪ್ಪತ್ತರ ಸುಮಾರಿನ ಅವರೊಂದಿಗೆ ನನಗೆ ಬಹುಕಾಲದ ಆತ್ಮಿಯತೆ.
    ಬಹಳ ಪ್ರಜ್ಞಾವಂತರಾದ ಅವರೊಂದಿಗೆ ಯಾವುದೇ ಸಂಗತಿಗಳನ್ನೂ ಹೇಳಿಕೇಳಿ ಸಂವಾದಿಸುವುದು ,ಅರಿವಿನ ಪರಿಧಿ ಹಿರಿದಾಗಿಸಿಕೊಳ್ಳುವುದು ನನಗಿಷ್ಟ.
    ಮೊನ್ನೆ ಇಂಥದ್ದೇ ವಿಚಾರ.

    ಪ್ರಾಸಂಗಿಕವಾಗಿ ಮಾತು ಶೃಂಗಾರದ ಕವಿಸಮಯದ ಕಡೆಗೆ ತಿರುಗಿತು.ಕೆಲವು ಸಾಲುಗಳನ್ನು ಉಲ್ಲೇಖಿಸಿ ಎಷ್ಟು ಸಹಜವಾದ ಭಾವವಿದೆ ಇಲ್ಲಿ ಎಂದೆ.ಎಷ್ಟೋ ವರ್ಷದ ಪರಿಚಯದ ಅವರಲ್ಲಿ ಒಂದು ಕ್ಷಣ ಮನೋವಿಕಾರವಾಯಿತು ಕಾಣುತ್ತೆ.

    ‘ಈಗ ನೀವು ಹೇಳಿದ ಸಾಲುಗಳನ್ನು ವಿವರಿಸಬಹುದಾ, ಕೇಳಲು ಉತ್ಸುಕನಾಗಿರುವೆ’
    ಎಂದರು.

    ಎಂದೂ ತನ್ನ ಮಿತಿ ದಾಟದ ಮನುಷ್ಯನಲ್ಲಾಗುತ್ತಿರುವ ವಿಕೃತಿ ಆ ಕ್ಷಣಕ್ಕೆ ಅರಿವಿಗೆ ಬಂದಿತ್ತು‌ ನನಗೆ.

    ಮುಂದಿನ ಮೂರುನಿಮಿಷವನ್ನು ಎಷ್ಟು ಘನತೆಯಿಂದ ನಿಭಾಯಿಸುತ್ತೇನೆ ಎನ್ನುವುದರ ಮೇಲೆ ಬದುಕಿನ ಉಳಿದ ನನ್ನ ಅವರ ಬಾಂಧವ್ಯ ನಿರ್ಧರಿತವಾಗ್ತದೆ ಎನ್ನುವ ಸಂಗತಿ ಮಿಂಚಿನಂತೆ ಹೊಳೆಯಿತು.

    ಕೆಲವು ಪ್ರೇಮದ ಸಾಲುಗಳನ್ನು ಉಲ್ಲೇಖಿಸಿ ಪ್ರೇಮವನ್ನು ಕಾಮವನ್ನೂ ಆಧ್ಯಾತ್ಮದ ಎತ್ತರಕ್ಕೆ ಒಯ್ದಿರುವ ಈ ಶ್ರೇಷ್ಟತೆ ನೋಡಿ ಎಂದೆ.

    ಬಹುಶಃ ಅವರ ಆ ಡಿಸ್ಟಾರ್ಷನ್ ಒಂದೂವರೆ ನಿಮಿಷದ್ದಿರಬೇಕು.

    ತಕ್ಷಣವೇ ವಾಸ್ತವಕ್ಕೆ ಬಂದು ‘ನಿಜ..ಇದಕ್ಕಾಗಿಯೇ ನನಗೆ ನಿನ್ನೊಂದಿಗೆ ಮಾತುಕತೆ ಇಷ್ಟ’
    ಎನ್ನುತ್ತಾ ಎಂದಿನ‌ ಮಮತೆಯ ಮಾತು ಮುಂದುವರೆಸಿದರು. ಆ ಕ್ಷಣದಲ್ಲಿ ನಾನು ಅವರೊಳಗಾದ ಆ ಬದಲಾವಣೆ ನನಗೆ ತಿಳಿದು ಅಸಹ್ಯವಾಯಿತು ಎನ್ನುವುದನ್ನು ತೋರಿಸಿಕೊಂಡಿದ್ದರೆ ಬಹುಶಃ ನನ್ನನ್ನು ಎದುರಾದಾಗಲೆಲ್ಲ ಅವರು ಕೀಳರಿಮೆಯಿಂದ ನರಳುತ್ತಿದ್ದರು. ನಮ್ಮ ಆತ್ಮೀಯ ಬಾಂಧವ್ಯ ಮುಗಿದೇ ಹೋಗುತ್ತಿತ್ತು.
    …..
    ಇಲ್ಲೊಬ್ಬಳು ಹೆಣ್ಣು ಗಂಡನ ಎರಡೆರಡು ಮದುವೆ ,ಮೂರ್ನಾಲ್ಕು ಹೊರಸಂಬಂಧಗಳಿಂದ ಬೇಸತ್ತು ಪ್ರತೀಕಾರಕ್ಕಾಗಿಯೇ ತನ್ನ ಉದ್ದ ನಿಲುವಂಗಿಯ ಹೊರತಾಗಿ ಇಣುಕುವ ತನ್ನ ಕಾಡಿಗೆ ಹಚ್ಚಿದ ಕಣ್ಣಿನಿಂದಲೇ ಕರೆ ನೀಡಿ ಸರಿಸಮಾನ ಪುರುಷನನ್ನು ಕೂಡಿ ಒಂದು ಬಗೆಯ ನಿರಾಳ ಅನುಭವಿಸಿದ್ದಳು.
    ….

    ಹೆಣ್ಣಿನ ಸ್ವಾತಂತ್ರ್ಯಕ್ಕೆ ಸದಾ ಮಿತಿ ಹೇರುವ ಕುರಿತು ಪುಂಖಾನುಪುಂಖವಾಗಿ ಬರೆಯುವ ಈ ಇವಳ ಬದುಕು ಬರೀ ಮುಳ್ಳಿನ ಹಾಸಿಗೆ.ಇವಳ ಮಾತು ಕೃತಿಗೆ ಸಮಾಜದಲ್ಲಿ ದೊರಕಿರುವ ಮನ್ನಣೆಗೆ ಸದಾ ಕುಹಕವಾಡುವುದನ್ನೇ ರೂಢಿಸಿಕೊಂಡಿದ್ದಾನೆ ಆಕೆಯ ಗಂಡ. ಮಾತಿಗೂ ಮೊದಲೂ ಅವನಾಡುವ ಅxxx ಅxxx ಎನ್ನುವ ಹೊಲಸು ಪದಗಳಿಗೆ ಪ್ರತಿಯಾಗಿ ಅವಳು ನಗುನಗುತ್ತ ಸಂಸಾರ ತೂಗಿಸಬೇಕು ಅಂತ ನಿರೀಕ್ಷೆ ಮಾಡ್ತಾನೆ.

    ವಿರೋಧಿಸಿದರೆ ಅಥವಾ ಅವನಿಗೆ ಅರಿವಾಗಲಿ ಅಂತ ತಿರುಗಿಬಿದ್ದರೆ ಅವನದ್ದು‌ ಮಾಮೂಲಿ ಡೈಲಾಗು..’ನಾನು ಗಂಡಸು..ಏನ್ ಬೇಕಾದರೂ ಆಡ್ತೀನಿ ಮಾಡ್ತೀನಿ..ಹೆಣ್ಣಿಗೆ ಅಂಕೆಶಂಕೆ ಇರಬೇಕು’ ಅವನ ಕೊಳಕು ಮನಸ್ಥಿತಿ ಗೆ ಮತ್ತಷ್ಟು ಕುಮ್ಮಕ್ಕು ಕೊಡುವ ಆತನ ತಾಯಿ.
    ಹೊರಗಿನ ಸಮಾಜಕ್ಕೆ ಆಕೆ ಎಷ್ಟು ಜೀವನ್ಮುಖಿಯಾಗಿದ್ದಾಳೋ ಒಳಗೆ ನಿತ್ಯವೋ ಬತ್ತಿ ಬರಡಾಗುತ್ತಿದ್ದಾಳೆ.ಆ ಧರ್ಮದ ಮಿತಿಯ ಬಗ್ಗೆ ಬರೆದದ್ದು ನಗೆಪಾಟಲಿನ ಸಂಗತಿ ಎನಿಸುತ್ತದೆ ಅವಳಿಗೆ.
    ಕಾರಣ…
    ಇವಳ ಆ ಧರ್ಮದ ಒಬ್ಬ ಆತ್ಮೀಯ ಗೆಳೆಯ ತನ್ನ ಸಣ್ಣ ಓದಿನ ಹೆಂಡತಿಯನ್ನು ಅಕ್ಷರಶಃ ಕಣ್ಣ ರೆಪ್ಪೆಯೊಳಗಿಟ್ಟು ಪ್ರೀತಿಸುತ್ತಾನೆ.ತನ್ನ ಹೆಂಡತಿಯನ್ನು ಹೊಗಳುವ ಯಾವ ಅವಕಾಶವನ್ನೂ ಅವನು ತಪ್ಪಿಸಿಕೊಂಡಿದ್ದು ಕಂಡಿಲ್ಲ.
    …..

    ಮಹಿಳಾ ದಿನಕ್ಕೆ ಇಂಥದ್ದೇ ಹೇಳಬೇಕು ಅಂತ ತಿಳಿಯದ ಹೊತ್ತಿನಲ್ಲಿ ಸುತ್ತೂ ಕಂಡ ಸಂಗತಿಗಳ ಕೊಲ್ಯಾಜ್ ಎದುರಿಗಿಟ್ಟಿದ್ದೇನೆ.ಒಂದು ಹೆಣ್ಣಿನ ಸಾಧನೆ ಮತ್ತು ಯಶಸ್ಸನ್ನು ಅವಳ ಸಂಗಾತಿ ಅವಳಿಗೆ ಕೊಡುವ ಗೌರವ ಪ್ರೀತಿಯ ಆಧಾರದ ಮೇಲೇ ಅಳೆಯಬೇಕೆನಿಸುತ್ತಿರುವುದು ನನ್ನ ತಿಳಿವಳಿಕೆಯ ಮಿತಿಯೂ ಇರಬಹುದು.
    ಒಂದು ಅದ್ಭುತವಾದ ಸಂಶೋಧನ ತಂಡದ ಜೊತೆಗೆ ಭಾಗವಹಿಸುವ ಗೌರವ ಪಡೆದು ಯಶಸ್ಸಿನೊಂದಿಗೆ ಹಿಂದಿರುಗಿದ ‌ಹೆಣ್ಣಿಗೆ ತನ್ನ ಸಂಗಾತಿಯಿಂದ ಸಂದೇಹದ ಉಡುಗೊರೆ ಸಿಕ್ಕರೆ ಅವಳು ನೆಮ್ಮದಿಯಾಗಿರಬಲ್ಲಳೆ?

    ಅಥವಾ ಮನೆ ಗೆದ್ದು ಮಾರು ಗೆದ್ದರೆ ಮಾತ್ರ ಅದು ನಿಜವಾದ ಯಶಸ್ಸು ಅಂತ ಕಟಕಿಯಾಡಿದರೆ ಅವಳ ಸಂತೋಷ ಉಳಿಯಬಹುದೇ?

    ಇಲ್ಲಿ ಯಾವುದು ಸ್ವಾತಂತ್ರ್ಯ…
    ಮಿತಿಯೆನ್ನುವುದರ ವ್ಯಾಖ್ಯಾನ ಏನು..
    ಕೋಟೆ ದಾಟಿ ಹೋಗು ಅಂತ ದಿಡ್ಡಿ ಬಾಗಿಲು ತಾವೇ ತೆಗೆದು ಹಿಂದಿನಿಂದ ತಲವಾರು ಇರಿಯುವ ಗಂಡಸರು ಶೇಕಡವಾರು ಎಷ್ಟಿರಬಹುದು.
    ಸರಿ ಎಂದರೇನು?
    ಇದು ತಪ್ಪೆನ್ನುವುದಕ್ಕೆ ಪುರಾವೆ ಯಾರು?
    ….
    ಹೆಣ್ಣು ತನ್ನ ಅತ್ಯುನ್ನತ ಸಾಧನೆಯ ಹೊಸಿಲಿನಲ್ಲಿ ನಿಂತಾಗಲೂ ಅವಳಿಂದ ಬರುವ ಮೊದಲ ಮಾತು’ನನ್ನ ಕುಟುಂಬದ ಸಹಕಾರ ಇಲ್ಲಿ ಬಹಳ ದೊಡ್ಡದು’.

    ಬಹಳ ಸಲೀಸಾಗಿ ಪ್ರತಿ ಯಶಸ್ವಿ ಗಂಡಿನ ಹಿಂದೆ ಹೆಣ್ಣಿದ್ದಾಳೆ ಎನ್ನುವ ತಂಗಳು ಮಾತು ಬಳಸುತ್ತದೆ ನಮ್ಮ ಸಮಾಜ. ಅದೇ ಬಗೆಯಲ್ಲಿ ಹೆಣ್ಣು ಸಾಧಿಸಲು ಕೂಡ ಕುಟುಂಬದ ಸಹಕಾರ ಮುಖ್ಯ ಎನ್ನುವುದನ್ನು ಅರಿಯುವ ಕಾಲ ಯಾವಾಗ ಬರಬಹುದು?
    ಅಥವಾ ಯಾರ ಸಹಕಾರವಿಲ್ಲದೆಯೂ ಸಾಧಿಸಿದ,ಯಶಸ್ವಿಯಾದ ಹೆಣ್ಣಿನ ಕಣ್ಣು ಹೊಮ್ಮಿಸುವ ಒಂಟಿತನದ ಅಸಹಾಯಕತೆಗೆ ಉತ್ತರ ಏನು?

    ಯಾವುದೇ ಮಹಿಳೆಯ ದೃಷ್ಟಿಕೋನವೆಂಬುದು ಅವಳು ಸದ್ಯ ಸಲ್ಲುತ್ತಿರುವ ಸಂಸಾರದ ಪರಿಸರ ಮತ್ತು ಅವಳ ಬಾಳಿನಲ್ಲಿ ಸಂಭವಿಸಿದ ಘಟನಾವಳಿಗಳಿಂದ ರೂಪುಗೊಂಡಿರುತ್ತದೆ.
    ಇದು ಬಹುಶಃ ನನ್ನ ಪರಿಸರದಲ್ಲಿ ‌ನಾನು ಕಂಡ ಸಂಗತಿಗಳು. ಇದಮಿತ್ಥಂ ಎನ್ನುವ ತೀರ್ಮಾನ ಹೇಳಲು ನನ್ನ ಎಟುಕಿಗೆ ಸಿಗುವ ಪ್ರಪಂಚ ಚಿಕ್ಕದು.
    ಅಥವಾ ಹೇಳುವುದಕ್ಕೂ ಮುನ್ನ ನಾನೇ ಗೊಂದಲ ವೈರುಧ್ಯಗಳ ಮೂಟೆ ಎನಿಸುತ್ತದೆ.

    ಮೇಲೆ ಹೇಳಿದ ಯಾವ ತೊಂದರೆಯೂ ಇಲ್ಲದ ಸುಖಿ ದಂಪತಿಗಳ ಸಂತತಿಯೂ ನಮ್ಮ ನಡುವೆ ಬೇಕಾಷ್ಟಿದೆ.ಅಂತಹವರ ಸಂಖ್ಯೆ ಅನಂತವಾಗಲಿ ಅನ್ನುವ ಆಶಯದೊಂದಿಗೇ ಹೀಗೂ ಇದ್ದಾರೆ ಎನ್ನುವುದೂ ತಿಳಿದಿದ್ದರೆ ಆ ಅವರ ದೃಷ್ಟಿಗೆ ಇನ್ನಷ್ಟು ಮೆರುಗು ಸಿಗುತ್ತದೆ ಎನ್ನುವ ಸಣ್ಣ ಸ್ವಾರ್ಥ ನನಗೆ.

    ನನ್ನದೇ ಕವಿತೆಯ ಒಂದು ಸಾಲಿದೆ.

    ‘ಗಂಡೇ..
    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ.
    ಉಂಡಮೇಲೂ ಅವಳದ್ದು ಅರೆಹೊಟ್ಟೆ.
    ಅದ ತುಂಬಿಸುವುದರೆಡೆಗಷ್ಟೆ
    ಇರಲಿ
    ನಿಮ್ಮ ನಿಷ್ಠೆ’

    ಮಹಿಳಾ ದಿನ ಸಾರ್ಥಕ್ಯವೆನಿಸುವುದು ಈ ಕವಿತೆಗೊಂದು ಅರ್ಥ ದೊರೆತಾಗ ಎನ್ನುವುದನ್ನು ‌ಮಾತ್ರ ಈ ಹೊತ್ತಿಗೆ ಹೇಳಬಲ್ಲೆ.

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156



    ಅಳಿದವರನ್ನು ಮತ್ತೆ ತರುತ್ತೇವೆಯೇ?

    ಅನಿವರಂ ತಂದಪೆವೇ( ಅಳಿದವರನ್ನು ಮತ್ತೆ ತರುತ್ತೇವೆಯೇ?)– ಜಗತ್ತು ಇಂದಿಗೆ  ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ . ರಷ್ಯಾ ಮತ್ತು ಉಕ್ರೇನಿಗೆ ಇಂದು ಯುದ್ಧಕಾಲವಾಗಿದೆ.  ನಿಜ ಅರ್ಥದಲ್ಲಿ ಅವರೆ ಕಷ್ಟಕ್ಕೆ  ನೇರ ಭಾಗಿಗಳು.

    ಬೆಂಕಿ  ದೂರವಿದ್ದರೂ ಆದರ ಕರಿನೆರಳು  ಬಹುದೂರದವರೆಗೂ ಆವರಿಸುವಂತೆ  ಪರೋಕ್ಷವಾಗಿ ನಾವೂ ಕೂಡ ಭಾಗಿಗಳಾಗುತ್ತಿದ್ದೇವೆ  (ಪೆಟ್ರೋಲ್,ಚಿನ್ನದ ದರದ  ಏರಿಕೆ ಇತ್ಯಾದಿಗಳನ್ನು ಗಮನಿಸಿ) ಅನ್ನಿಸುತ್ತಿದೆ. 

    ಯುದ್ಧಗಳು ಮಾನವ ಲೋಕದ ಮಾಯದ ಗಾಯಗಳು.  ಅಹಮಿಕೆಯ ಕಾರಣಕ್ಕೆ ನಡೆದ ಒಂದೊಂದು ಯುದ್ಧಗಳೂ ಒಂದೊಂದು ಬೃಹತ್ ವೃಣವೇ.  ಪ್ರಸ್ತುತ  ಮಹಾಭಾರತ ಯುದ್ಧದ  ಸಂದರ್ಭದಲ್ಲಿ ತೊಂಬತ್ತೊಂಬತ್ತು ಮಕ್ಕಳನ್ನು ಕಳೆದುಕೊಂಡು ಉಳಿದ ಒಬ್ಬ ಮಗ  ದುರ್ಯೋಧನನ್ನು ನಮ್ಮ ಪಾಲಿಗೆ   ನೀನಾದರೂ ಉಳಿದುಕೋ ಎನ್ನುವ  ಗಾಂಧಾರಿ  ಇಂದಿಗೆ ಅತ್ಯಂತ ಪ್ರಸ್ತುತ.

     ‘ಸತ್ತ ಮಗಂದಿರ್  ಸತ್ತರ್ ನೀನೆಮಗುಳ್ಳೊಡೆ ಸಾಲ್ವುದವರನಿಂ ತಂದಪೆವೇ’   ‘ಶಕ್ತಿಕವಿ’ ರನ್ನನ ‘ಸಾಹಸ ಭೀಮ ವಿಜಯಂ’ ನ ‘ಧೃತರಾಷ್ಟ್ರ ವಚನಂ’ ನಲ್ಲಿ ಗಾಂಧಾರಿ ಹೇಳುವ  ಮಾತುಗಳಿವು.  ಸತ್ತ ಮಕ್ಕಳು ಸತ್ತರು!  ಹೋಗಲಿ ಬಿಡು! ನೀನೊಬ್ಬ ನಮ್ಮ ಪಾಲಿಗೆ ಉಳಿದರೆ ಅಷ್ಟು ಮಕ್ಕಳ ದುಃಖವನ್ನು  ನಿನ್ನನ್ನು ನೋಡಿಯೇ ಮರೆಯುವೆ ಎನ್ನುವ ತಾಯಿಯ ಮಾತು  ಎಂಥವರ ಮನಸ್ಸನ್ನೂ ಕಲಕುತ್ತದೆ.   ಹೆತ್ತೊಡಲಿನ ಸಂಕಟವನ್ನು ವಿವರಿಸಲು ಪದಗಳಿಲ್ಲ.  ಇಂಥ  ಎಷ್ಟು ತಾಯಿಹೃದಯಗಳು  ರಷ್ಯಾ- ಉಕ್ರೇನ್  ಯುದ್ಧದಲ್ಲಿ ಕಳೆದುಕೊಂಡ ಜೀವಗಳಿಗಾಗಿ ಪರತಪಿಸುತ್ತಿವೆಯೋ  ತಿಳಿದಿಲ್ಲ. ಈ  ಯುದ್ಧ ಇಲ್ಲಿಗೆ  ಸಾಕು  ಅನ್ನಿಸುತ್ತಿದೆ.

     ಯುದ್ಧದ ಪರಿಣಾಮ ಇದು.  ಯುದ್ಧಗಳು  ಪ್ರಚೋದನೆಗಾಗಿ,  ಪ್ರತಿಷ್ಟೆಗಾಗಿ, ಸೇಡಿಗಾಗಿ.  ಮಣ್ಣು-ಹೊನ್ನಿಗಾಗಿ ನಡೆದಿರಬಹುದು ಆದರೆ   ಅದರ ಕೆಡುಕು  ಮನುಕುಲವನ್ನೇ ಕಾಡುತ್ತದೆ. ಅಣುಬಾಂಬ್ ಸ್ಫೋಟದಿಂದಾದ ದುಷ್ಪರಿಣಾಮ  ಇನ್ನೂ  ಜೀವಂತವಾಗಿರುವಾಗಲೆ  ಇಂಥ  ಯುದ್ಧಗಳು ಬೇಕೇ ಎನ್ನಿಸುತ್ತದೆ. ಇಂದಿಗೆ ರಷ್ಯಾ -ಉಕ್ರೇನ್  ಯುದ್ಧ ಪ್ರಾರಂಭವಾಗಿ 11 ದಿನಗಳು. ಯಾರದು ಮೇಲುಗೈ?  ಯಾರಿಗೆ ಹಿನ್ನಡೆ? ನಮಗದು ಅನವಶ್ಯಕ. ಸದ್ಯ ಆಗಿರುವ ಹಾನಿಯನ್ನು   ಭರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ ? ತಿಳಿದಿಲ್ಲ .  ಇನ್ನು ಜೀವಹಾನಿ ತರಿಸುವ  ನೋವು ಸಂಕಟ ಯಾವುದರಿಂದಲೂ ಭರಿಸಲಾಗದ್ದು  ಈ ಕ್ಷಣಕ್ಕಾದರೂ ಯುದ್ಧ ಕೊನೆಗೊಂಡು ಉಭಯರಾಷ್ಟ್ರಗಳಲ್ಲಿ ಶಾಂತಿ ನೆಲಸಲಿ ಎಂಬ ಸದಾಶಯ  ಅಷ್ಟೇ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ

    ಷೇರುಪೇಟೆಯಲ್ಲಿ ಉಂಟಾಗುತ್ತಿರುವ ಅತೀವ ಪ್ರಮಾಣದ, ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಮುಖ್ಯ ಕಾರಣ ಪ್ರಮುಖ ಸೂಚ್ಯಂಕಗಳು ಮತ್ತು ಹೆಚ್ಚಿನ ಷೇರುಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿರುವುದೇ ಅಗಿದೆ. ಬೆಳವಣಿಗೆ ಎಷ್ಠರಮಟ್ಟಿಗೆ ಆಗಿದೆ ಎಂದರೆ ಷೇರುಗಳ ಬೇಡಿಕೆಯ ಪ್ರಮಾಣ ಅತಿ ಹೆಚ್ಚಾಗಿದ್ದು, ಲಭ್ಯತೆ, ವಿಶೇಷವಾಗಿ ಅಗ್ರಮಾನ್ಯ ಕಂಪನಿಗಳ ಲಭ್ಯತೆಯ ಕೊರತೆಯುಂಟಾಗಿದ್ದು, ಇಂತಹ ಷೇರುಗಳಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡಲ್ಲಿ ಅದು ಪುಟಿದೇಳುವ ವೇಗವೂ ಅತಿ ಹೆಚ್ಚಾಗಿರುತ್ತದೆ.

    ಮಾರ್ಚ್‌ 5,2021 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.207.33 ಲಕ್ಷ ಕೋಟಿಯಲ್ಲಿದ್ದು, ಅಂದು ನೋಂದಾವಣೆ ಮಾಡಿಕೊಂಡಿದ್ದ ಗ್ರಾಹಕರ ಸಂಖ್ಯೆಯು 6,27,85,031 ರಲ್ಲಿತ್ತು. ಅದು ಒಂದು ವರ್ಷದ ನಂತರ ಅಂದರೆ ಮಾರ್ಚ್‌ 4, 2022 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.246.79 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ನೋಂದಾಯಿತ ಗ್ರಾಹಕರ ಸಂಖ್ಯೆಯು 9,88,98,797 ಕ್ಕೆ ಏರಿಕೆ ಕಂಡಿದೆ. ಅಂದರೆ ಸುಮಾರು ಮೂರೂವರೆ ಕೋಟಿಗೂ ಹೆಚ್ಚಿನ ಹೂಡಿಕೆದಾರರ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ಅದಕ್ಕನುಗುಣವಾದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದು ಇನ್ನೂ ಹೆಚ್ಚಿನ ಏರಿಕೆ ಕಂಡಿದ್ದು, ಸಧ್ಯ ರಷ್ಯ ಮತ್ತು ಯುಕ್ರೇನ್‌ ಸಂಘರ್ಷದ ಕಾರಣ ಪೇಟೆಯು ಇಳಿಕೆ ಕಂಡಿರುವ ಕಾರಣ ಇದೂ ಸಹ ಕುಸಿತಕ್ಕೊಳಗಾಗಿದೆ.

    04.03.2022 Pre-opening sensex

    ಇತ್ತೀಚಿನ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ ವಿವಿಧ ರಾಜ್ಯಗಳಲ್ಲುಂಟಾದ ಹೂಡಿಕೆದಾರರ ವಾರ್ಷಿಕ ಹೆಚ್ಚಳದ, 26 ನೇ ಫೆಬ್ರವರಿ 2022 ರಂದು, ಪ್ರಮಾಣವು ಈ ಕೆಳಗಿನಂತಿದೆ. ಶೇ.90 ಕ್ಕೂ ಹೆಚ್ಚಿನ ಏರಿಕೆ ಕಂಡಂತಹ ರಾಜ್ಯಗಳ ವಿವರ:

    ಅಸ್ಸಾಂ: ಶೇ.308.16,ಲಕ್ಷದ್ವೀಪ: ಶೇ.109.40,ಅರುಣಾಚಲ ಪ್ರದೇಶ: ಶೇ.124.56,ಬಿಹಾರ: ಶೇ.116.15,ಮಧ್ಯಪ್ರದೇಶ: ಶೇ.109.40,ಒರಿಸ್ಸಾ: ಶೇ.106.16, ಮಿಜೋರಾಂ: ಶೇ.96.55,ಹಿಮಾಚಲ್‌ ಪ್ರದೇಶ: ಶೇ.95.35,ಮಣಿಪುರ: ಶೇ.95.31,ತ್ರಿಪುರಾ: ಶೇ.93.11,ಅಂಡಮಾನ್‌ ಅಂಡ್‌ ನಿಕೋಬಾರ್‌: ಶೇ.92.49,ನಾಗಾಲ್ಯಾಂಡ್‌: ಶೇ.91.79,ಮೇಘಾಲಯ: ಶೇ.90.87

    ಈ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಸಾಕ್ಷರತೆಯ ಮಟ್ಟ ಯಾವ ಹಂತದಲ್ಲಿದೆ ಎಂಬುದು ತಿಳಿಯದಿದ್ದರೂ ಅವರ ಆಸಕ್ತಿ ಮೆಚ್ಚುವಂತಹುದಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಹೊಸದಾಗಿ ಪೇಟೆ ಪ್ರವೇಶಿಸಿದವರ ಸಂಖ್ಯೆಯು ಶೇ.52.12 ರಷ್ಟಿದ್ದರೆ, ಗೋವಾದಲ್ಲಿ ಶೇ.44.21 ರಷ್ಟಿದೆ. ಗುಜರಾತ್‌ ನಲ್ಲಿ ಶೇ.32.33 ರಷ್ಟಿದೆ. ತಮಿಳುನಾಡಿನಲ್ಲಿ ಶೇ.35.51 ರಷ್ಟಿದೆ.

    ಇತ್ತೀಚೆಗೆ ಅಂದರೆ ಫೆಬ್ರವರಿ 14 ರಂದು ಸೆನ್ಸೆಕ್ಸ್‌ 1,747 ಪಾಯಿಂಟುಗಳ ಕುಸಿತ ಕಂಡು, 15 ರಂದು 1,736 ಪಾಯಿಂಟುಗಳ ಚೇತರಿಕೆ ಕಂಡ ವೇಗ ಮತ್ತು 24 ರಂದು ಕಂಡ ಭಾರಿ ಕುಸಿತ ಅಂದರೆ 2,702 ಪಾಯಿಂಟುಗಳ ಭರ್ಜರಿ ಕುಸಿತ ಮತ್ತು 25 ರಂದು ಕಂಡು ಬಂದ 1,328 ಪಾಯಿಂಟುಗಳ ಪುಟಿದೇಳುವ ರೀತಿಗಳು, ನಂತರದಲ್ಲಿ ಒಂದೇ ದಿನದಲ್ಲಿ ಪ್ರದರ್ಶಿತವಾಗುತ್ತಿರುವ ಏರಿಳಿತಗಳ ಶೈಲಿ ಹೂಡಿಕೆದಾರರನ್ನು ಅವಕಾಶವಾದಿಗಳನ್ನಾಗಿಸಿ, ದೀರ್ಘಕಾಲೀನ ಹೂಡಿಕೆಯನ್ನು ಅರ್ಥಹೀನವಾಗಿಸಿದೆ.

    ಸುಮಾರು ಶೇ.58 ರಷ್ಟು ಹೂಡಿಕೆದಾರರು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅದಕ್ಕನುಗುಣವಾಗಿ ಲಭ್ಯವಾಗುವ ಲೀಸ್ಟೆಡ್‌ ಕಂಪನಿಗಳಲ್ಲಿ ಹೆಚ್ಚಿನ
    ಬದಲಾವಣೆಗಳಿಲ್ಲವಾದ್ದರಿಂದ ಉತ್ತಮ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿ ಅವು ಏರಿಕೆ ಕಂಡರೆ, ಉಳಿದ ಕಂಪನಿಗಳೂ ಏರಿಕೆ ಕಾಣಬಹುದೆಂಬ ನಿರೀಕ್ಷೆಯಿಂದ ಖರೀದಿಗೆ ಮುಂದಾಗುವವರಲ್ಲಿ ಹೊಸ ಹೂಡಿಕೆದಾರರೇ ಹೆಚ್ಚಾಗಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನಿಸಲೇಬೇಕಾದ ಕೆಲವು ಅಂಶಗಳು, ಇತರೆ ಮೂಲಭೂತ ಅಂಶಗಳೊಂದಿಗೆ, ಹೂಡಿಕೆಯನ್ನು ಸುರಕ್ಷಿತಗೊಳಿಸಬಹುದು.

    ಆರಂಭಿಕ ಷೇರು ವಿತರಣೆಗಳು ( I P Os)

    1. ವಿತರಣೆ ಮಾಡುತ್ತಿರುವ ಷೇರಿನ ಮುಖಬೆಲೆ
    2. ಷೇರಿನ ವಿತರಣಾ ಬೆಲೆ ( ಪ್ರೀಮಿಯಂನೊಂದಿಗೆ)
    3. ವಿತರಣೆ ಮಾಡುತ್ತಿರುವ ಕಂಪನಿಯ ವಲಯ ಮತ್ತು ಆ ಕಂಪನಿಯ ಉತ್ಪನ್ನಗಳಿಗಿರುವ ಭವಿಷ್ಯ
    4. ವಿತರಣೆಗೂ ಮುನ್ನ ದಿನಗಳಲ್ಲಿ ಕಂಪನಿಯು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಲಾಗಿದೆಯೇ ?
    5. ವಿತರಣೆಯಲ್ಲಿ ಹೊಸ ಷೇರುಗಳಿವೆಯೇ ಅಥವಾ ಸಂಪೂರ್ಣವಾಗಿ ಅವು ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡುತ್ತಿರುವರೇ ? ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮಾರಾಟವಾದಲ್ಲಿ ಸಂಗ್ರಹಣೆ ಪೂರ್ತಿ ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರಿಗೆ ಸೇರುತ್ತದೆ. ಕಂಪನಿಗೆ ಯಾವ ರೀತಿಯ ಅನುಕೂಲವೂ ಇರುವುದಿಲ್ಲ.
    6. ವಿತರಣೆಗೂ ಮುನ್ನ ಕಂಪನಿಯ ಪ್ರವರ್ತಕರು ಷೇರಿನ ಮುಖಬೆಲೆ ಸೀಳಿಕೆ ಮಾಡಿರುವರೇ ?
    7. ಪ್ರವರ್ತಕರು ಷೇರುಗಳನ್ನು ಪಡೆದುಕೊಂಡಿರುವ ಬೆಲೆ ಮತ್ತು ಅವರು ಮಾರಾಟಮಾಡುತ್ತಿರುವ ಬೆಲೆಗಳಲಿರುವ ವ್ಯತ್ಯಾಸ
    8. ವಿತರಣೆಗೂ ಮುನ್ನ ಆ ಕಂಪನಿಯು ಭಾರಿ ಪ್ರಮಾಣದ ಲಾಭಾಂಶವನ್ನಾಗಲಿ, ಬೋನಸ್‌ ಷೇರುಗಳನ್ನಾಗಲಿ ವಿತರಿಸಿ ತನ್ನಲ್ಲಿರುವ ಮೀಸಲು ನಿಧಿಯ ಹುಂಡಿಯನ್ನು ಬರಿದಾಗಿಸಿದೆಯೇ ? ಕಂಪನಿ ಹಾನಿಗೊಳಗಾಗಿದ್ದರೂ ಬೋನಸ್‌ ಷೇರು ವಿತರಣೆ ಮಾಡಿಕೊಳ್ಳಲು ಮೀಸಲು ನಿಧಿಯನ್ನು ಬಳಸಿಕೊಳ್ಳಬಹುದು.
    9. ಕಂಪನಿಯು ನಿಗದಿಪಡಿಸಿರುವ ಪ್ರೀಮಿಯಂ ಬೆಲೆಯು ಕಂಪನಿಯ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿದೆಯೇ. ಅಂದರೆ ಕಂಪನಿಯು ಸ್ಥಿರ ಆಸ್ತಿಯನ್ನು ಹೊಂದಿದ್ದರೆ ಉತ್ತಮ.

    ಸೆಕಂಡರಿ ಮಾರ್ಕೆಟ್‌ ವ್ಯವಹಾರಗಳು (SECONDARY MARKET)

    1. ಖರೀದಿಸುತ್ತಿರುವ ಕಂಪನಿಯು ಯಾವ ಗುಂಪು/ಸಮೂಹದಲ್ಲಿದೆ.
    2. ಖರೀದಿಸುತ್ತಿರುವ ಕಂಪನಿಯು ಲಾಭಗಳಿಸುತ್ತಿದೆಯೇ? ಲಾಭ ಗಳಿಕೆಯು ಕಂಪನಿಯ ವಹಿವಾಟಿನ ಗಾತ್ರಕ್ಕನುಗುಣವಾಗಿದೆಯೇ?
    3. ಆ ಕಂಪನಿಯ ಆಡಳಿತ ಮಂಡಳಿಯ ಚಿಂತನೆ ಹೂಡಿಕೆದಾರರ ಸ್ನೇಹಿಯಾಗಿದ್ದು ಗಳಿಸಿದ ಲಾಭದಲ್ಲಿ ಆಕರ್ಷಕ ಮಟ್ಟದ ಲಾಭಾಂಶ, ಬೋನಸ್‌ ಷೇರುಗಳ ವಿತರಣೆ ಮಾಡಿದೆಯೇ
    4. ಕಂಪನಿಯಲ್ಲಿ ಪ್ರವರ್ತಕರ ಭಾಗಿತ್ವ, ರೀಟೇಲ್‌ ಹೂಡಿಕೆದಾರರ ಭಾಗಿತ್ವ ಮತ್ತು ಇತರೆ ಹೂಡಿಕೆದಾರರ ಭಾಗಿತ್ವದ ಪ್ರಮಾಣ
    5. ಪ್ರವರ್ತಕರ ಭಾಗಿತ್ವದಲ್ಲಿ ಅಡವಿಟ್ಟ ಪ್ರಮಾಣ ಎಷ್ಟಿರಬಹುದು ಎಂಬುದು ಮುಖ್ಯ
    6. ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಸ್ಥಿರಾಸ್ತಿಯನ್ನು ಹೊಂದಿದ್ದರೆ ಉತ್ತಮ. ಕೇವಲ ಬ್ರಾಂಡ್‌ ವ್ಯಾಲ್ಯು ಹೊಂದಿದ್ದರೆ ಸುರಕ್ಷತೆಯ ಮಟ್ಟ ವಿರಳ.
    7. ಕಂಪನಿ ಷೇರಿನ ಮುಖಬೆಲೆ ಎಷ್ಟಿದೆ ಇದು ಲಾಭಾಂಶದ ಶೇಕಡಾವಾರು ಪ್ರಮಾಣದ ಲೆಕ್ಕಾಚಾರಕ್ಕೆ ಅವಶ್ಯ.
    8. ಕಂಪನಿಯೇನಾದರೂ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತಿದೆಯೇ?
    9. ಕಂಪನಿಯ ನೀತಿಪಾಲನಾ ಮಟ್ಟವು ಹೇಗಿದೆ, ಅದರ ಮೇಲೇನಾದರೂ ಗುರುತರವಾದ ಅರೋಪಗಳು, ಕಾನೂನಿನ ಕ್ರಮಗಳಿವೆಯೇ?
    10. ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
    11. ಕಂಪನಿಗಳ ಬ್ರಾಂಡ್‌ ವ್ಯಾಮೋಹದಿಂದ ಹೊರಬಂದು ಸಹಜ ನಿರ್ಧಾರಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ: ಶುಕ್ರವಾರದಂದು ಸೆನ್ಸೆಕ್ಸ್‌ ತನ್ನ ಕುಸಿತದ ಹಾದಿಯಲ್ಲಿ ಸಾಗಿತ್ತು. ಅದಕ್ಕನುಗುಣವಾಗಿ ಸೆನ್ಸೆಕ್ಸ್‌ ನ 23 ಕಂಪನಿಗಳು ಹಾನಿಗೊಳಗಾದವು. ಅವುಗಳಲ್ಲಿ ಶೇ.5 ಕ್ಕೂ ಹೆಚ್ಚಿನ ಇಳಿಕೆ ಕಂಡದ್ದು ಟೈಟಾನ್‌ ಕಂಪನಿ. ಈ ಕಂಪನಿ ಶ್ರೇಷ್ಠವಾದುದೇನೋ ಸರಿ. ಆದರೆ ಹೂಡಿಕೆ ಮಾಡುವವರು, ಖರೀದಿಸುವ ಮುನ್ನ ಆ ಕಂಪನಿಯಲ್ಲಿ ಹೂಡಿಕೆ ಮಾಡಿದಲ್ಲಿ ಬಂಡವಾಳ ವೃದ್ಧಿಯಾಗಲು ಅವಕಾಶವಿದೆಯೇ ಎಂಬುದನ್ನು ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಬೇಕು. ಅಂದರೆ ಸುಮಾರು ರೂ.130 ರಷ್ಟು ಒಂದೇ ದಿನ ಕರಗಿಸಿದ ಈ ಕಂಪನಿಯ ಷೇರಿನ ಮುಖಬೆಲೆ ರೂ.1. ಅಂದೇ ಬಿ ಎಸ್‌ ಇ ಐಪಿಒ ಸೂಚ್ಯಕದಲ್ಲಿರುವ ಕಲ್ಯಾಣ್‌ ಜ್ಯುವೆಲ್ಲರ್ಸ್‌ ದಿನದ ಮದ್ಯಂತರದಲ್ಲಿ, ಸುಮಾರು ರೂ.3 ರಷ್ಟು ಏರಿಕೆಯನ್ನು ಪಡೆದುಕೊಂಡಿತ್ತು. ಈ ಷೇರಿನ ಮುಖಬೆಲೆ ರೂ.10. ಅಂದರೆ ಒಂದೇ ದಿನ ರೂ.130 ನ್ನು ಕಳೆದುಕೊಂಡ ಷೇರಿನಲ್ಲಿ ಅಡಕವಾಗಿರುವ ಅಪಾಯದ ಮಟ್ಟಕ್ಕೆ ಎರಡು ಕಲ್ಯಾಣ್‌ ಜುವೆಲ್ಲರ್ಸ್‌ ಷೇರನ್ನು ಖರೀದಿಸಬಹುದಾಗಿದೆ. ಅಂದರೆ ಇಂತಹ ನಿರ್ಧಾರವನ್ನು ಕೈಗೊಳ್ಳುವ ಮುನ್ನ ತುಲನಾತ್ಮಕ ಚಿಂತನೆ ಅಗತ್ಯ. Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಪ್ರತಿ ದಿನವೂ, ಪ್ರತಿಗಳಿಗೆಯೂ ಪೇಟೆಯಲ್ಲಿ ಲಾಭಗಳಿಸುವ ಬಗ್ಗೆ ಹೊಸ ಹೊಸ ಮಾದರಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!